July 1, 2024

ಶೃಂಗೇರಿ

 ಮದುವೆಯಾಗಿ ಮುಂಬೈನಿಂದ ಕೊಪ್ಪಕ್ಕೆ. ಅಲ್ಲಿ 5 ವರ್ಷ ಇದ್ವಿ. ಮನೆಗೆ ಬಂದ ನೆಂಟರಿಗೆಲ್ಲ ಒಂದು ಟ್ರಿಪ್ ಬಸ್ ನಲ್ಲಿ ಶೃಂಗೇರಿಗೆ ಕರೆದು ಕೊಂಡು ಹೋಗುವುದು ನನ್ನ department. 

ನನಗೋ motion sickness. ಶ್ರ0ಗೇರಿಯ ರಸ್ತೆ ಹಾಗೆ ಹಾವಿನ ತರಹ. ಅಲ್ಲಿ ತಲುಪುವಷ್ಟರಲ್ಲಿ ನನ್ನ intestine ಎಲ್ಲ ಗಂಟು ಬಿದ್ದ ಹಾಗೆ.  ಶಾರದಾಂಬೆಯ ದರುಶನ ಪಡೆದು ಅಲ್ಲೇ ಮಧ್ಯಾನ್ಹ ಊಟ ಮಾಡಿ ಮನೆಗೆ ವಾಪಸ್.

ವಾಂತಿ ಆಗುತ್ತೆ ಅಂತ ಏನೂ ತಿನ್ನದೆ ಹೋಗ್ತಿವಲ್ಲ ಅದೇ ದೊಡ್ಡ ತಪ್ಪು. ಹೊಟ್ಟೆ ತುಂಬ ತಿಂದು ಒಂದು ಹತ್ತು ನಿಮಿಷ ಬ್ರೇಕ್ ತೆಗೊಂಡು ಪಯಣ ಮಾಡಿದರೆ ವಾಂತಿ ಆಗಲ್ಲ ಅಂತ ನಾನು ಕಂಡುಕೊಂಡ ವಿಷಯ. ಹಾಗಾಗಿ ಈಗ motion sickness ಇಲ್ಲ ಅಂತಲೇ ಅನ್ನಬಹುದು.

ಮೊನ್ನೆ ತೀರ್ಥಹಳ್ಳಿಗೆ ಹೋಗುವುದಂತ ಸಡನ್ ಆಗಿ ಪ್ಲ್ಯಾನ್ ಮಾಡಿಕೊಂಡ್ವಿ. ಹೇಗೂ ನಮ್ಮದೇ ಗಾಡಿ. ಶೃಂಗೇರಿಗೆ ಹೋಗುವ ಮನಸ್ಸು ಮಾಡಿದೆ. ನನ್ನ ಮುದ್ದು ಸೊಸೆಗೆ ಕರೆದೆ. ಖುಷಿಯಿಂದ ಒಪ್ಪಿಕೊ0ಡಳು. ಬೆಳಿಗ್ಗೆ ಬೇಗ ಹೊರಟೆವು. ಟಿ ಮಾತ್ರ ಕುಡಿದಿದ್ದು. ಹಸಿವೆಯಾಗಿತ್ತು. ಆದರೆ ತಿಂಡಿಗಳೆಲ್ಲ 7.30 ನಂತರ ಅಂದ್ರು ನಮ್ಮ ಪುಂಡಲೀಕ ಪೈ ಹೋಮ್ ಸ್ಟೇ ನವರು. 

ಶೃಂಗೇರಿಗೆ ತಲುಪುವಷ್ಟರಲ್ಲಿ ವಾಂತಿ ಆಗದಿದ್ದರೂ ಸುಸ್ತಾಯಿತು...ದಾರಿ ಉದ್ದಕ್ಕೂ ಮಳೆ. ಹಾಗಾಗಿ ಕಿಟಕಿ ಬಾಗಿಲು ತೆಗಿಲಿಲ್ಲ. ಕಿಟಕಿ ತೆರೆದರೆ ಗಾಳಿಗೆ ಸ್ವಲ್ಪ ಆರಾಮ್ ಎನಿಸುತ್ತದೆ. 

ಚೆಂದದ ಹಸಿರಿನ ದಾರಿ. ತಲುಪಿದ ಕೂಡಲೇ ಮೊದಲು ಬೆಳಗಿನ ತಿಂಡಿ. ಮಯೂರ ಟಿಫಿನ್ ನಲ್ಲಿ. ಇಡ್ಲಿ, ಬಿಸ್ಕೂಟ್ ಅಂಬೋಡೆ, ಪೂರಿ ಪಲ್ಯ..bhramin ಸ್ಟೈಲ್. ಬಡಿಸುವವ ಸ್ವಲ್ಪ rude ಆಗಿದ್ದ.

30 ವರ್ಷಗಳ ನಂತರ ಭೇಟಿ ನೀಡಿದ್ದು. ಸುಮಾರೆಲ್ಲ ಬದಲಾವಣೆ ಆಗಿದೆ. ಶಾರದೆಯ ಮೂರ್ತಿ ಚೆನ್ನಾಗಿದೆ. ನಾನು ನೋಡಿದ ದೇವರ ಮೂರ್ತಿಗಳಲ್ಲಿ ಈ ಶಾರದೆ ನನಗೆ ಅಚ್ಚುಮೆಚ್ಚು.

ನದಿಯಲ್ಲಿ ತುಂಬಾ ನೀರಿರಲಿಲ್ಲ. ಮೀನಿಗೆ ಚುರುಮುರಿ ಹಾಕಿ, ಪ್ಲ್ಯಾಸ್ಟಿಕ್ ಕವರ್ ಕೂಡ ನೀರಿಗೆ ಹಾಕುವುದನ್ನು ನೋಡಿ ಸಿಟ್ಟು/ಬೇಜಾರು ಒಟ್ಟಿಗೆ ಆಯಿತು.

ಮರಳಿ ತೀರ್ಥಹಳ್ಳಿಗೆ ಬರುವಾಗ ತುಂಬಾ ಎಂಜಾಯ್ ಮಾಡಿದೆ 😁😁

ಹಾಗೆ ಕೊಪ್ಪದಲ್ಲಿ ಕಳೆದ ಸಮಯ ನೆನಪಿಸಿಕೊಂಡೇ. ಮೊದಲೆರಡು ವರುಷ ಪದವಿ ಪರೀಕ್ಷೆಯ ಓದು, ಸಂಜೆ ಶ್ರೀಕಾಂತ್ colleagues, ಕಾಲೇಜಿನ ಗೆಳೆಯರು..ಎಲ್ಲಾ bachelor ಗಳು , ಅವರಿಗೆ ಮುಂಬೈ spl ಅಡುಗೆಗಳು ...ಇತ್ಯಾದಿ...ಆಮೇಲೆ ಮಾಲವಿಕಾಳ ಆಗಮನ, ಮನೆಯಲ್ಲಿ ಆರಾಮಾಗಿ ಓಡಾಡುವ ಹಾವುಗಳನ್ನು ಓಡಿಸುವುದು...ಹುಷಾರಿಲ್ಲದ ಅಜ್ಜನನ್ನು ನೋಡಿಕೊಂಡಿದ್ದು, ಸೊಸೆಯನಿರ ಜತೆ ವಾಕ್, ಹತ್ತಿರದ ಊರಿನ ಓಡಾಟ, ಕಮಂಡಲು ಗಣಪತಿ, ಇವೆಲ್ಲ ನೆನಸುತ್ತ ತೀರ್ಥಹಳ್ಳಿ ತಲುಪಿದ್ದು ಗೊತ್ತಾಗಲೇ ಇಲ್ಲ. 5 best years of.my life 😁

ಕೆಲ ಚಿತ್ರಗಳು.










                    ನನ್ನ ಮುದ್ದು ಸೊಸೆ





No comments: