November 1, 2021

ಆಘಾತ

 ಯಾವತ್ತಿನ ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ  ಎದ್ದು ಪ್ರಾತರ್ವಿಧಿಗಳನ್ನು. ಮುಗಿಸಿ ಚಹಾ ಮಾಡಿದೆ. ಅಕ್ಕನ ರೂಮ್ ನ ಬಾಲ್ಕನಿಯಲ್ಲಿ ನಾ ಕೂರೋದು ಚಹಾ ಕುಡಿಯಲು. ಆ ದಿನ ಬಾಗಿಲಿನ ಹಿಡಿ ಎಷ್ಟು ತಿರುವಿದ್ರು ಬಾಗಿಲು ತೆರೆಯಲಿಲ್ಲ. ಚಿಲಕ ಹಾಕಿತ್ತು. ಕೈ ಕಾಲಲ್ಲಿ ನಡುಕ, ಕಣ್ಣಲ್ಲಿ.ನೀರು...ಇದೇನಾಗಿ ಹೋಯ್ತಪ್ಪ? ಇನ್ನೂ ಕತ್ತಲೆ. ಗದ್ದಲ ಮಾಡೋದು ಬೇಡ ಅನ್ನಿಸ್ತು. ಶ್ರೀಕಾಂತ ತಡ ರಾತ್ರಿ ಸಿನಿಮಾ ನೋಡಿ, ಹಾಲ್ ನಲ್ಲೇ ಮಲಗಿದ್ರು ಗೊರಕೆ ಹೊಡೀತಾ. ಹಾಗೆ ಸಾವರಿಸಿಕೊಂಡು ಕತ್ತಲೇಯಲ್ಲೇ ಮಂಚದ ಮೇಲೆ ಕೂತು ಚಹಾ ಕುಡಿದೆ. 

ಹಿಂದಿನ ದಿನ ಸಂಜೆ ನಾವು, ಸ್ನೇಹಿತರು ಸೇರಿ, ನಮ್ಮ ಆನೆಕಲ್ಲು ಸೈಟ್ ಕಡೆ ಹೋಗಿದ್ವಿ. ಮಳೆಯಲ್ಲಿ ಸಿಕ್ಕಿ ಹಾಕಿ ಕೊಂಡು ಬರುವಾಗ ತಡ ಆಗಿತ್ತು. ಅಕ್ಕ ಬಿಸಿ ಬಿಸಿ ಬ್ರೆಡ್ ಬೋಂಡ ಮಾಡಿ ಕೊಟ್ಟಿದ್ದಳು. ತುಂಬಾ ಸುಸ್ತಾಗಿದ್ದರಿಂದ. ಯಾಕೋ ಬೆನ್ನು ನೋಯುತ್ತಿದ್ದರಿಂದ ರಾತ್ರಿಯ ಪಾತ್ರೆ ಗಳನ್ನು ಬೆಳಿಗ್ಗೆ ತೊಳೆಯುವ ಅಂತ ಇಟ್ಟಿದ್ದೆ.

ಇದ್ದಕ್ಕಿದ್ದಂತೆ ಏನು ಮಾಡಿಕೊಂಡಳು? 'ಅಮ್ಮ ನಾಳೆ ದೊಡ್ಡ ಕೇಕ್ , ನಾನು ಡೆಲಿವರಿ ಮಾಡಿ ಹಾಗೆ ವ್ಯಾಕ್ಸಿನ್ ಎರಡನೇ ಡೋಸ್ ತೆಗೊಂಡು ಬರ್ತೀನಿ ಅಂದವಳು...ಅಮ್ಮ ಈ ವೀಕ್ ಎಂಡ್ healthy ಬ್ರೆಡ್, ಬರ್ಗರ್ ಮತ್ತು ಪಿಝ್ಆ ದ ದೊಡ್ಡ ಆರ್ಡರ್ ಇದೆ ಕಣೆ ಅಂದವಳು...

 ಪಾತ್ರೆ ತೊಳೆಯುತ್ತ ನಿನ್ನೆ ಏನಾದ್ರೂ ಹೆಚ್ಚು ಕಡಿಮೆ ಮಾತಾಡಿಡ್ನಾ? ಸಿಟ್ಟಾಗಿದ್ದೆನಾ? ಅಂತ ಯೋಚನೆ ಮಾಡಿದೆ. ಬಂದವರಿಗೆಲ್ಲ ಏನು ಹೇಳೋದು? FB ನಲ್ಲಿ ಹೇಗೆ ಈ ಸುದ್ದಿ ಶೇರ್ ಮಾಡಲಿ? ಎಲ್ಲರಿಗೂ counselling ಮಾಡುವವಳ ಮನೆಯಲ್ಲೇ ಈ ಕಥೆನಾ? ಬಾಗಿಲು ಮುರಿಬೇಕಾದ್ರೆ ಪೊಲೀಸರು ಬರ್ಬೇಕಾ...ಮುಂತಾದ ಯೋಚನೆ. ಪಾತ್ರೆ ಎಲ್ಲ ತೊಳೆದಿಟ್ಟು... ಅಡಿಗೆ ಮನೆ ಕ್ಲೀನ್ ಮಾಡಿಟ್ಟು, ಸಮಯ ನೋಡಿದ್ರೆ ಇನ್ನೂ 4.45...ಕತ್ತಲೆಯಲ್ಲೇ ಹಾಲ್ ಅನ್ನು ಸ್ವಲ್ಪ ಒಪ್ಪ ಒರಣ ಮಾಡಿದೆ.. ಬಂದ ಜನ ಏನು ಅನ್ನುತ್ತಾರೋ??..

ಬೆಳಕಾಗುವ ತನಕ ಸ್ವಲ್ಪ ಬೆನ್ನು ಒರಗಿಸಿ ಮಂಚದ ಮೇಲೆ ಆನಿಸುವ ಅಂತ ಹೋದೆ...ಕಣ್ಣಲ್ಲಿ ನೀರು ಮಾತ್ರ ಒಂದೇ ಸಮನೆ ಜಾರುತ್ತಲಿತ್ತು. ಅದು ಯಾವಾಗಲೋ ನಿದ್ದೆಗೆ ಜಾರಿದೆ. ಯಾರೋ 'ಮಾಲ್ತಿ ಮಾಲ್ತಿ' ಅಂದ ಹಾಗೆ....ಕಣ್ಣು ತೆರೆದ್ರೆ ಅಕ್ಕ ನಗುತ್ತ 'ಏನೇ breakfast ಗೆ ಅರ್ಧಂಬರ್ಧ ರೆಡಿ ಮಾಡಿಟ್ಟಿದ್ದಿಯಾ...ಏನು ಅಂತ ಹೇಳಿದ್ರೆ ನಾನು ತಯಾರಿಸ್ತೀನಿ..ನೀನು ಮಲಗು ಅಂದ್ಲು...ಮೈ ಮನಸ್ಸು , ದುಗೂಡವನ್ನು ಜಾಡಿಸಿ ಎದ್ದೆ...

ಆದದ್ದು ಇಷ್ಟು ವಾರದ ಹಿಂದೆ ಇವರ ತಂಗಿ ಮಗ..ಅಕ್ಕನಿಗಿಂತ ಕೆಲ ತಿಂಗಳು ದೊಡ್ಡವನು...ಆರಾಮಾಗಿದ್ದವನು..ಏಕಾಏಕಿ ಸಂಜೆ ಹೊತ್ತು suicide ಮಾಡಿಕೊಂಡಿದ್ದ...ಆ ನೋವು ಇತ್ತು..ಇಲ್ಲಿ ಜೋರು ಮಳೆ...ಕೆಲ ಒದ್ದೆ ಬಟ್ಟೆ ಬಾಗಿಲಿನ ಮೇಲೆ ಒಣ ಹಾಕಿದ್ದೆ, ಅದು ಬಾಗಿಲು ಹಾಕುವಾಗ ಸಿಕ್ಕಿ ಹಾಕಿ ಕೊಂಡು ಬಾಗಿಲು ತೆಗಿಲಿಕ್ಕೆ ಬಂದಿರಲಿಲ್ಲ...ಇಲ್ಲದಿದ್ದರೆ ಬಾಗಿಲು ಹಾಕುತ್ತೇವೆಯೇ ಹೊರತು ಚಿಲಕ ಹಾಕಿ ಮಲಗುವ ಅಭ್ಯಾಸ ಇಲ್ಲ..ಮನಸ್ಸಲ್ಲಿ ಕೆಟ್ಟ ಆಲೋಚನೆ..

ಕಾಲ್ಪನಿಕ/ಕನಸಿನಲ್ಲಿಯೇ ಆದ ಈ ಅನುಭವದಿಂದ ಚೇತರಿಸಿಕೊಳ್ಳಲು ಎರಡು ದಿನ ಬೇಕಾಯ್ತು ನನಗೆ...ನಿಜವಾಗಿ ಇದೆಲ್ಲ ನಡೆದಿರುವ ಮನೆಯವರ ಗತಿ ಏನು??? 😢😢

ಆತ್ಮಹತ್ಯೆ ಮಾಡಿಕೊಂಡ ಹುಡುಗನಿಗೆ ಇಬ್ಬರು ಪುಟ್ಟ ಮಕ್ಕಳು. ಈಗಲೂ ಗೇಟ್ ಬಳಿ ಅಪ್ಪ ಬರುವುದನ್ನು ಕಾಯುತ್ತಾರಂತೆ. ಹೊಟ್ಟೆಯಲ್ಲಿ ಚೂರಿ ಹಾಕಿ ತಿರುವಿದ ಅನುಭವ..ಯಾಕೋ ಮನಸ್ಸನ್ನು ಹಿಡಿದುಕೊಂಡು ಬಿಟ್ಟಿದೆ 😭😭

ಕೆಲವೊಮ್ಮೆ ಅವನ ಮೇಲೆ ಅಸಾಧ್ಯ ಸಿಟ್ಟು ಬರುತ್ತೆ..ಆಮೇಲೆ ಛೆ ಏನಾಗಿಹೋಯ್ತು ಅನ್ನಿಸುತ್ತೆ....

ಹೋದವರು ಹೋಗಿ ಬಿಡುತ್ತಾರೆ..ಇದ್ದವರಿಗೆ ನೋವು..

No comments: