December 28, 2015

ಹಠ ( ಸಂಚಿಯಿಂದ ತೆಗೆದ ನೆನಪು - 13)

ಮೂರು ನಾಲ್ಕು ವರ್ಷ ಹಿಂದೆ ನಡೆದದ್ದು. 
ಶ್ರೀಕಾಂತ ಗೆ ಆಗಾಗ ಮಧ್ಯಪ್ರದೇಶದ ಪ್ರಯಾಣ ಇರುತ್ತಿತ್ತು, consultation ದ್ದು. 
ಹದಿನೈದು ದಿನದ ಪ್ರವಾಸ. ಹಾಗಾಗಿ ಅಮ್ಮನನ್ನು ನಮ್ಮ ಜತೆ ಬಂದು  ಇರಲಿಕ್ಕೆ ಹೇಳಿದ್ದೆ, ನಾನೇ ಹೋಗಿ ಕರೆದುಕೊಂಡು ಬಂದೆ ಸಹ. ಶ್ರೀಕಾಂತ , ಮೊದಲು ಫ್ಲೈಟ್ ನಲ್ಲಿ  ಕೋಲ್ಕತಾ, ಆಮೇಲೆ ಟ್ರೈನ್ ನಲ್ಲಿ, ನಂತರ   ಕೊನೆಯ ಪ್ರಯಾಣ ಆ ಕಂಪೆನಿ ಕಳುಹಿಸಿ ಕೊಡುವ ಕಾರ್ ನಲ್ಲಿ. 
ಇಲ್ಲ್ಲಿಂದ ಹೊರಡಬೇಕಾದ್ರೆ, ಎಲ್ಲಾ ಸಾಮಾನುಗಳು ಪ್ಯಾಕ್ ಆದವು. ನನಗೆ ತಂಗಿ ಮಗಳು ಯು ಎಸ ನಿಂದ ಬರುವಾಗ ಒಂದು ಪುಟ್ಟ ಸೋಲಾರ್- ಸೌರ ಟಾರ್ಚ್ ತಂದು ಕೊಟ್ಟಿದ್ದಳು. ಅದನ್ನು ತುಂಬಾ ಸುಲಭವಾಗಿ ಬ್ಯಾಗ್  ಹ್ಯಾಂಡಲ್  ಗೆ ಲಗತ್ತಿಸಬಹುದಿತ್ತು. ಮತ್ತು ಸ್ವಲ್ಪ ಬೆಳಕಿದ್ದರೂ ಅದು ಚಾರ್ಜ್ ಆಗುತ್ತಾ ಹೋಗುತ್ತೆ.  ಶ್ರೀಕಾಂತ ಗೆ ಅದನ್ನು ತೆಗೆದುಕೊಂಡು ಹೋಗಲಿಕ್ಕೆ ಹೇಳಿದೆ. ಅವರು ಛೆ ಮೊಬೈಲ್ ನಲ್ಲೇ ಬೆಳಕು ಇರುತ್ತೆ, ಆ ಟಾರ್ಚ್ ನಾನು ತೆಗೆದುಕೊಂಡು ಹೋಗಲ್ಲ ಅಂದ್ರೆ ನನ್ನದು ಒಂದೆ ಹಠ- ಅದನ್ನು ಒಯ್ಯಲೇಬೇಕೆಂದು. ಎಷ್ಟು ಹೊತ್ತು ಕಿರಿ ಕಿರಿ ಮಾಡಿದೆ   ಅಂದ್ರೆ ಕೊನೆಗೆ ಅವರು ನಿರುಪಾಯರಾಗಿ, ಹಾಗೂ ಅವರನ್ನು airport ಗೆ ಒಯ್ಯುವ ಟ್ಯಾಕ್ಸಿ ಕೂಡ ಬಂದಿದ್ದರಿಂದ , ಅದನ್ನು ಒಯ್ದರು. 
ಶ್ರೀಕಾಂತ ಐಯರ್ ಪೋರ್ಟ್ ಗೆ ಹೊರಟ  ಮೇಲೆ ಅಮ್ಮ, 'ಛೀ ಎಂತದೆ ಅದು ನಿನ್ನ ಹಠ? ನನಗೆ ನಾಚಿಕೆ ಆಯ್ತು. ಟಾರ್ಚ್ ಬೇಡದಿದ್ರೆ ಬೇಡ . ಅದಕ್ಕೆ ಯಾಕಿಷ್ಟು ಫಸ್ ಅಂತ ಗೊತ್ತಾಗ್ಲಿಲ್ಲ' ಅಂದ್ರು. ನನಗೂ ತಕ್ಷಣ ಕ್ಕೆ ಹೌದಲ್ಲ ಅನ್ನಿಸಿತು. ಸಾರಿ ಅಮ್ಮ ಹಾಗೇಕೆ ಮಾಡಿದೆ ನನಗೂ ಗೊತ್ತಿಲ್ಲ ಅಂತ, ಶ್ರೀಕಾಂತ ಗೆ ಸಾರಿ ಕೇಳಿ ಒಂದು ಸ್ಯಾಡ್ ಫೇಸ್ ಟೆಕ್ಸ್ಟ್ ಮಡಿದೆ. ಅವರು 'it's allright' ಅಂತ ಸ್ಮೈಲಿ ಕಳುಹಿಸಿದ್ರು. 
ಮರು ದಿನ ತಲುಪಿದ ನಂತರ ಶ್ರೀಕಾಂತ ನನಗೆ   ಫೋನ್ ಮಾಡಿ, ಬೇಗ ಸ್ಪೀಕರ್ ಫೋನ್ ನಲ್ಲಿ ಹಾಕು ಅಂದ್ರು. ಹಾಗೇ ಮಾಡಿದೆ. ....... 
ಮುಂದೆ:
ಫ್ಲೈಟ್ ನಲ್ಲಿ ಕೋಲ್ಕತ್ತಾ, ಆಮೇಲೆ ಟ್ರೈನ್ ನಲ್ಲಿ ಝಾರ್ಸ್ಗುಡಾ. ಅಲ್ಲಿ ತಲುಪುವಾಗ ರಾತ್ರಿ ಮೂರು ಗಂಟೆ. ಟ್ರೈನ್ ನಿಂದ ಇಳಿದ ಮೇಲೆ , ಟ್ರೈನ್ ಅಲ್ಲಿಂದ ಹೊರಟ ಮೇಲೆ ಶ್ರೀಕಾಂತ ಗೆ ಪ್ಲ್ಯಾಟ್ಫೋರ್ಮ್ ಕತ್ತಲಿದ್ದದ್ದು ಅರಿವಾಯ್ತು. ಒಂದು ನಾರಾ ಮನುಷ್ಯ ಕೂಡ ಕಾಣಲಿಲ್ಲ. . ಏನೇನೂ ಕಾಣ್ತಿರಲಿಲ್ಲ. ಮೊಬೊಲ್ ತೆಗೆದರೆ ಲೋ ಬ್ಯಾಟರಿ. ಸ್ವಲ್ಪ ಹೊತ್ತು ಕಣ್ಣು ಎಡ್ಜಸ್ಟ್ ಆದಮೇಲೆ ಮನುಷ್ಯ ತರಹ ಆಕೃತಿಗಳು ಮಲಗಿದ್ದು, ಅಡ್ಡಾ ತಿದ್ದಿ ಇದ್ದದ್ದು ಕಾಣಿಸ್ತು. . ನಿಧಾನಕ್ಕೆ ಅಂದಾಜಲ್ಲಿ ಹೊರಗಡೆ ಬಂದು ನೋಡಿದ್ರೆ ನನಗೆ  ಬೆಲ್ಪಾರ್ ಗೆ  ಕರೆದೊಯ್ಯುವ ಕಾರ್ ಕೂಡ ಕಾಣಲಿಲ್ಲ.' ಆಗ ಅವರಿಗೆ ನನ್ನ ಟಾರ್ಚ್ ನೆನಪಾಗಿ, ಅದರ ಮೂಲಕ ಸ್ಟೇಷನ್ ನಲ್ಲಿ ಬೆಳಕು ಚೆಲ್ಲಿದಾಗ, ಅಲ್ಲಿ ಅಡ್ಡಾದಿಡ್ಡಿ, ಗೋಡೆಗಾನಿಸಿ,  ನೆಲದ ಮೇಲೆ ಪೇರಿಸಿದ್ದು  ಗೋಣಿ ಚೀಲಗಳಂತೆ, ಅನತಿ ದೂರದಲ್ಲಿ ಪೇ ಫೋನ್ ಕಾಣಿಸ್ತಂತೆ.( ಎಷ್ಟೆ ಟೆಕ್ನಾಲಜಿ ಮುಂದುವರೆದಿದ್ದು ನಾನು ತುರ್ತು ಫೋನ್ ನಂಬರ್ ಗಳನ್ನು ಸ್ಪೈರಲ್ ಬೊಉಂಡ್ ಪುಟ್ಟ ಪಾಕೆಟ್ ಬುಕ್ ನಲ್ಲಿ ಎಲ್ಲರಿಗೂ ಬರೆದು ಕೊಡುತ್ತೇನೆ.     ಹಾಗೇ ಶ್ರೀಕಾಂತ್ ಹತ್ತಿರ ಕೂಡ  ಇದೆ. ಅದರಲ್ಲಿ ಆ ಕಂಪೆನಿ ಕಾರ್ ನವನ ಸೆಲ್ ನಂಬರ್ ಕೂಡ ಇತ್ತು. ಅದರ ಸಹಾಯ ದಿಂದ ಪೇ ಫೋನ್ ನಿಂದ ಅವನಿಗೆ ಫೋನ್ ಮಾಡಿದರಂತೆ. ಅವನು ಇಲ್ಲೇ ಇದ್ದೀನಿ ಸಾಬ್ ಈಗ ಬಂದೆ ಅಂದನಂತೆ.... 
ಅವನ ಕತೆ ಹೀಗಿತ್ತು:
ನಾನು ಆವಾಗಲೇ ಬಂದೆ. ಇವತ್ತು ಅಮವಾಸ್ಯೆ. ಕತ್ತಲು  ಬೇರೆ. ಸ್ಟೇಶನ್ ನಲ್ಲಿ ಬೆಳಕಿರಲಿಲ್ಲ. ನನಗೆ ಇಲ್ಲಿ  ಹೆದರಿಕೆ ಆಯ್ತು. ಅದಕ್ಕೆ ಬೀದಿ ದೀಪ ಇದ್ದ ಕಡೆ  ಕಾರ್   ಪಾರ್ಕ್ ಮಾಡಿದ್ದೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ನಾನು ಮನೆಗೆ ಹೋಗ್ತಿದ್ದೆ ಸಾಬ್ ' ಅಂದನಂತೆ. 
ನನ್ನ ಟಾರ್ಚ್ ಬಗ್ಗೆ ನನಗೆ ಖುಷಿ ಯಾಯ್ತು. 
:-)
ಈಗ ನಾನು ಎಲ್ಲಾದರೂ ಹೋಗುವಾಗ ಇದನ್ನು ತೆಗೆದುಕೊಂಡು ಹೋಗಿ ಅಂದರೆ, ಸುಮ್ಮನೆ ತೆಗೆದುಕೊಂಡು ಹೋಗ್ತಾರೆ ಶ್ರೀಕಾಂತ 

December 1, 2015

where the mind is without fear

ಪ್ರತೀ ದಿನ, ಕಸ ಗುಡಿಸುವಾಗ, ನೆಲ ಒರೆಸುವಾಗ, ಬಾಗಿಲು ತೆರೆಯಲು ಹೋದಾಗ, ಈ desk top ಕೆಲೆಂಡರ್ ನೋಡುತ್ತಿರುವಾಗಲೆಲ್ಲ ಇದನ್ನು ಕನ್ನಡೀಕರಿಸಬೇಕೆಂದು ಆಲೋಚಿಸುತ್ತಿದ್ದೆ. ಇವತ್ತು ಮಾಡಿದೆ. ಬಹುಶಃ ಸಾವಿರಾರು ಜನರು ಇದನ್ನು ತರ್ಜುಮೇ ಮಾಡಿರಬಹುದು. ಅದರಲ್ಲಿ ನನ್ನದೊಂದು... ನಮ್ಮ ಗೃಹಪ್ರವೇಶ ದ ಆಮಂತ್ರಣ ಪತ್ರಿಯೊಂದಿಗೆ ಶ್ರೀಕಾಂತ ಇದನ್ನು ಎಲ್ಲರಿಗೂ ಕಳುಹಿಸಿದ್ದರು. ಹಲವಾರು ಜನರು ತಮ್ಮ ಮನೆಯಲ್ಲಿ ಇದನ್ನು  ನೀಟಾಗಿ ಕಣ್ಣಿಗೆ ಕಾಣುವಂತೆ ಇಟ್ಟಿದ್ದಾರೆ. ನಾವು ಅವರಲ್ಲಿ  ಹೋದಾಗಲೆಲ್ಲ ಅದನ್ನು ತೋರಿಸುತ್ತಾರೆ... :-)

ಚಿಕ್ಕಂದಿನಿಂದಲೂ ನನಗೆ ಈ ಪದ್ಯ ಇಷ್ಟ . ಈಗಲೂ ಬಾಯಿಪಾಠ ಇದೆ.



ಎಲ್ಲಿ ಮನಸ್ಸಿನಲ್ಲಿ ಭಯವಿಲ್ಲವೋ, ತಲೆಯನ್ನು ಗರ್ವದಿಂದ  ಎತ್ತಿ ಹಿಡಿದಿರುವರೋ
ಎಲ್ಲಿ ಜ್ಞಾನ ಉಚಿತವಾಗಿ ಲಭ್ಯವೋ 
ಎಲ್ಲಿ ಜಗತ್ತನ್ನು ಸಂಕುಚಿತ ಮನೋಭಾವಗಳು ಚಿಕ್ಕ ಚಿಕ್ಕ ಹೋಳುಗಳಾಗಿ ತುಂಡರಿಸಿಲ್ಲವೋ 
ಎಲಿ ಶಬ್ದಗಳು ಸತ್ಯದ ಆಳದಿಂದ ಹೊರಹೊಮ್ಮುವವೋ
ಎಲ್ಲಿ ನಿರಂತರ  ದಣಿವಿಲ್ಲದ  ತೊಡಗುವಿಕೆ  ತನ್ನ ಬಾಹುಗಳನ್ನು ಪರಿಪೂರ್ಣತೆಯತ್ತ ಚಾಚಿರುವುದೋ 
ಎಲ್ಲಿ ಸ್ವಚ್ಚಂದ ಆಲೋಚನೆಗಳು ಮರಳಿಗಾಡಿನ ನಿರ್ಜಿವ  ಮರಳಲ್ಲಿ  ದಾರಿ ತಪ್ಪಿಲ್ಲವೋ
ಎಲ್ಲಿ ಮನಸ್ಸುಗಳನ್ನು  ನೀನು ವಿಸ್ತೃತ  ಆಲೋಚನೆ ಹಾಗೂ ಕ್ರಿಯೆಗಳತ್ತ ಒಯ್ಯುವೆಯೋ 
ಅಂತಹ ಒಂದು ಸ್ವಚ್ಚಂದ ಸ್ವರ್ಗದಲ್ಲಿ ಓ ತಂದೆಯೇ
ನನ್ನ ಜಗತ್ತು ಕಣ್ಣು ತೆರೆಯಲಿ

ಗುರುದೇವ ರವೀಂದ್ರನಾಥ ಟಾಗೋರ


November 27, 2015

The Open Road- Short film shot on i pad mini

(This post is for the reader from Novi, Michigan who faithfully visits my blog, (sometimes twice in a day) everyday :-))

My daughter Niharika Shenoy's attmept at making a short film on the i pad.

I knew she was tinkering with the i pad when we travelling to Belgavi from Bengaluru. But i had no idea that she was filming me. The AC compartment of the train (even ac bus and cars) always has a claustrophobic effect on me. i am used to open spaces/windows with the wind blowing on my face where i can breathe freely. So on that particular trip i was up most of the night, much to the tension of the TC who occupied the berth below me. He asked me repeatedly if i wanted to shift to some place else so that i would be comfortable. I said No,  i had trouble sleeping and told him not to worry. He was a nice chap. he did not forget to say good bye to me when he alighted at hubbali. :-)

Early the morning, (in benglauru we had gone for almost a week without a glimpse of the sun) it was a glorious sunshine on the stretch from Dharwad to belgavi. Suddenly in front of me was a field where the harvesting was done and the dry hay laid in a dome like fashion. next to it was a white pea hen and her pea chicks feeding near by a make shift machaan,  all suffused with a golden glow.I t was indeed a divine moment. Wanted to capture that moment on the i pad but i realised it was with Niha and and that scene had already passed on. All the while Niha was filming me. As the sun light grew stronger i fell into a deep slumber for a while....so that is the real story behind the film :-)

Story, choice of music and voice over is Niharikas. me and my niece Sammy, feature as mother and daughter. :-)

So watch and enjoy this short film


thank you

:-)




November 24, 2015

ಪಂಢರಾಪುರ

ಎರಡು ತಿಂಗಳಿಗೊಮ್ಮೆ ಎಲ್ಲಾದರೂ ಎರಡು ದಿನ ಹೋಗಿ ಬರುವ ನಮ್ಮ ಪ್ಲಾನ್ ನಡೀತಿದೆ ಎನ್ನುವ ಖುಶಿ. ನನ್ನ ತಮ್ಮ ನ ಮನೆ ಗೃಹ ಪ್ರವೇಶ ದೀಪಾವಳಿ ಟೈಮ್ ನಲ್ಲೇ ಇಟ್ಟು ಕೊಂಡಿದ್ದ. ಹಾಗಾಗಿ ನಾವು ನಾಲ್ಕು ದಿನ ರಜೆ ಹಾಕಲು ಸಾಧ್ಯವಾಯಿತು. ಗೃಹ ಪವೇಶ ಆದ ದಿನ ಸಂಜೆ ನಮಗೆ ಮರಾಠಿ ಸಿನಿಮಾ -ಕಟ್ಯಾರ್ ಕಾಳ್ಜಾತ್ ಘುಸ್ಲಿ’ ನೋಡುವ ಟ್ರೀಟ್ ನನ್ನ ತಮ್ಮನ ಪ್ರೆಂಡ್ ನಿಂದ. ಅದು ಮೊದಲು ರಂಗ ಸಂಗೀತ ಮಾದರಿಯಲ್ಲಿ ಎರಡು ವರ್ಷದ ಹಿಂದೆ ರಂಗ ಶಂಕರದ್ಅಲ್ಲಿ ನೋಡಿ ಮೈ ಮನಸ್ಸು ಝುಮ್ ಎಂದಿತ್ತು. ಸಿನಿಮಾ ಕೂಡಾ ಚೆನ್ನಾಗಿದೆ.
ಪಂಢರಾಪುರಕ್ಕೆ ನಾನು ಚಿಕ್ಕವಳಿದ್ದಾಗ ಹಲವಾರು ಬಾರಿ ಹೋಗಿದ್ದೇನೆ. ಅಷ್ಟ್ಯಾಕೆ ನನ್ನ ತಮ್ಮ ಪಂಢರಾಪುರಕ್ಕೆ ಹೋದ ನಂತರ ಹುಟ್ಟಿದ್ದರಿಂದ ಅವನಿಗೆ ’ಪಾಂಡುರಂಗ’ ಅಂತ ಹೆಸರು ಬೇರೆ ಇಟ್ಟಿದ್ರು. ತುಂಬ ಚೆಂದ ನನ್ನ ಆ ತಮ್ಮ. ಚಿಕ್ಕವನಿದ್ದಾಗ ಹೆಲ್ತಿ ಬೇಬಿ ಕಂಟೆಸ್ತ್ ನಲ್ಲೆಲ್ಲ ಪ್ರೈಜ್ ಬರೋದು. ಆಮೇಲೆ ಎಂಟನೆ ಕ್ಲಾಸ್ ನಲ್ಲಿದ್ದಾಗ ಅವನಿಗೆ ಅಡ್ವರ್ ಟೈಸ್ ಮೆಂಟ್, ಫಿಲ್ಮ್ ಗಳಿಗೆಲ್ಲ ಆಫರ್ ಬಂದಿತ್ತು. ಅವನಿಗೆ ಮಾತ್ರ ಅವನ ಹೆಸರ ಮೇಲೆ ಸಿಟ್ಟು. ನಿನ್ನ ಫ್ರೆಂಡ್ಸ್ ಮುಂದೆ ನನಗೆ ಪಾಂಡು ಅಂತ ಕರೀಬೇಡ. ವಿಕ್ಕಿ ಅಂತ ಕರೀ ಅಂತಿದ್ದ. ಮುಂಬೈ ನ ಅವನ ಕ್ಲಾಸ್ ಮೇಟ್ಸ್ ಎಲ್ಲ ಅವನಿಗೆ ಪಾಂಡು ಹವಾಲ್ದಾರ್ ಅಂತ ತಮಾಷೆ ಮಾಡ್ತಿದ್ದಕ್ಕೆ, ’ಯಾಕಾದ್ರೂ ಈ ಹೆಸರು ಇಟ್ರೋ’ ಅಂತ ಸಿಡಿ ಮಿಡಿ ಅಂತಿದ್ದ. :-) ಮರಾಠಿ ಸಿನಿಮಾ ದಲ್ಲಿ ಒಂದು ಪಾಂಡು ಹವಾಲ್ದಾರ ಪಾತ್ರ  ಇದ್ದೆ ಇರುತ್ತಿತ್ತು. ಅವನನ್ನು dumb ತರಹಾ ನೇ ತೋರಿಸೋದು.ಅದಕ್ಕೆ ಇವನಿಗೆ ಆ ಹೆಸರೆಂದರೆ ಉರಿ.
ನಾನು ನಿಹಾ ಮಾತ್ರ ಹೋಗುವ ಪ್ಲಾನ್ ಇತ್ತು. ಮಾಲವಿಕ, ಕೈಯಲ್ಲಿದ್ದ ಆರ್ಡರ್ಸ್ ಗಳನ್ನೆಲ್ಲ ಮುಗಿಸಿ, ಸಧ್ಯಕ್ಕೆ ಬಿಸ್ಕೂಟ್ ಫ್ಯಾಕ್ಟರಿ’ ಮೇಜರ್ ಆರ್ಡರ್ ಯಾವುದೂ ಇಲ್ಲ ನಾನು ಬರ್ತೀನಿ ಅಂದ್ಲು. ಶ್ರೀಕಾಂತ ’ಮತ್ತೇ ನನಗೂ ಪಂಡರಪುರ ನೋಡಬೇಕಿತ್ತು, ನಾನು ಬರಲಾ’ ಅಂತ ಕೇಳಿದ್ರು. ನಮ್ಮ ಅಮ್ಮ ಕೂಡ ’ಹೇ ನಾನು ಬರ್ತೀನಿ, ನನಗೂ ಪಂಡರಪುರಕ್ಕೆ ಹೋಗುವ ಆಸೆಯಾಗಿದೆ ಅಂದ್ರು. ಅಣ್ವೇಕರ್ ಮಾಮಾ ಈ ಸಲ ಫ್ರೀ ಇದ್ರು. 
ಸರಿ ಬೆಳಿಗ್ಗೆ 7 ಬೆಳಗಾವಿಯಿಂದ ಹೊರಟ್ವಿ. ಮಧ್ಯಾಹ್ನ 1.30 ಗೆ ಅಲ್ಲಿದ್ವಿ. ಶೋಲಾಪುರ್ ಮಾರ್ಗ ವಾಗಿ ಹೋಗಿದ್ದ್ದು. ದಾರಿಯುದ್ದಕ್ಕೂ ದ್ರಾಕ್ಷಿ, ದಾಳಿಂಬೆ, ಪಪಾಯಾ ಗಳನ್ನು ಗದ್ದೆಯಲ್ಲಿ ಬೆಳೆಸಿದ್ದು ಕಾಣಿಸುತ್ತಿತ್ತು. ಕೆಲವು ಕಡೆ ರೈತರು, ತೋಟದ ಬದಿಯಲ್ಲೇ , ಅವರು ಬೆಳೆದಿದ್ದ ಹಣ್ಣುಗಳನ್ನು ಮಾರುತ್ತಲಿದ್ದರು. ನನ್ನ ಅಮ್ಮ , ಶ್ರೀಕಾಂತ ಗೆ ಇವೆಲ್ಲ ಸಂತಸದ ಸಂಗತಿ. ಮಾರುವರ ಜತೆ ಕುಶಲೋಪರಿ, ಅವರ ಕಷ್ಟ ಕಾರ್ಪಣ್ಯ ಇವೆಲ್ಲ ಮಾತಾಡಿ, ಚೌಕಾಸಿ ಮಾಡದೆ ಹಣ್ಣು ಹಂಪಲುಗಳನ್ನು ಖರೀದಿಸುವುದು ಮುಂತಾದ್ದು. ನಿಹಾ ಫೋಟೊ ತೆಗಿತಿದ್ಲು. ನಾನು ಕೊಟ್ಟಿದ್ದು ತಿನ್ನೋದು ಮಾಡ್ತಾ ಇದ್ದೆ. ಅಲ್ಲೆಲ್ಲ ಎಷ್ಟು ಡ್ರೈ ಇತ್ತು ಹವಾಮಾನ. ಅದೇ ಬೆಂಗಳೂರಿನಲ್ಲಿ ಎಡಬಿಡದ ತುಂತುರು ಮಳೆ. ಈ ಮಳೆ ಶುರುವಾಗಿ ವಾರವಾದ ಮೇಲೆ ನಾವು ಟ್ರಿಪ್ ಹೊರಟಿದ್ದು. ನನಗೇ ಒಂತರ ಖುಶಿ ಹಾಗೂ ಆಸೆ. ಈ ಮಳೆ ನಾವು ಬರುವ ತನಕ ಬರಲಿ. ಕ್ಯೋಂಕೀ ನನ್ನ ಗಿಡಗಳೆಲ್ಲ ಬಾಲ್ಕನಿ ಮೇಲೆ. ಹಿಂದಿನ ಸಲ ಟ್ರಿಪ್ ಹೋದಾಗ ನೀರು ಹಾಕುವವರಿಲ್ಲದೇ ನನ್ನ ಗಿಡಗಳೆಲ್ಲ ಮುರುಟಿ ಹೋಗಿದ್ದವು. ಈಗ ಪುನ: ಸ್ವಲ್ಪ ಜೀವ ಬಂದಿತ್ತು, ಮತ್ತು ನಾವು ರೈಲ್ವೇ ಸ್ಟೇಶನ್ ತಲುಪಿ, ಟ್ರೈನ್ ಹತ್ತಿದ ಮೇಲೆ ಬೇಕಾದ್ರೆ ಮಳೆ ಬರಲಿ ಅಂತಹುದೆಲ್ಲ ವಿಚಾರಗಳು. anyways ಹಾಗೆಯೇ ಆಯ್ತು. ಖುಶಿ ಆಯ್ತು.

ಇನ್ನು ಪಂಡರಪುರದಲ್ಲಿ ಪಾಂಡುರಂಗ ಬಂದ ವಿಷಯ. ಇದು ನನಗೆ ಅಜ್ಜ ಹೇಳಿದ್ದು, ಚಿಕ್ಕವಳಿದ್ದಾಗ. ಪುಂಡರೀಕ ಅನ್ನುವ ಹುಡುಗ. ಯಾವಾಗಲೂ ಅಪ್ಪ ಅಮ್ಮನ ಸೇವೆ. ಅದು ಮುಗಿದ ಮೇಲೆ ಉಳಿದ ಕೆಲಸಗಳು. ಅವನ ನಿಷ್ಠೆ ಊರೆಲ್ಲ ಮಾತಾಗಿದಲ್ಲದೇ ದೇವರು ಕೂಡ ಅವನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ವಿಷ್ನು ಒಬ್ಬ ಬ್ರಾಹ್ಮಣನ ವೇಷದಲ್ಲಿ ಅವನನ್ನು ಪರೀಕ್ಷಿಸಲು ಅವನ ಮನೆಗೆ ಬಂದ. ಹೊರಗಿನಿಂದ ’ನಾನು ಭ್ರಾಹ್ಮಣ ನನಗೆ ಭಿಕ್ಷೆ’ ನೀಡಿ ಅಂತ ಕರೆ ಹಾಕಿದನು. ಸ್ವಲ್ಪ ನಿಲ್ಲು ನಾನು ಅಪ್ಪ ಅಮ್ಮನ ಸೇವೆ ಮಾಡ್ತಿದ್ದೇನೆ’ ಆಮೇಲೆ ಬರುತ್ತೇನೆ ಅಂತ ಒಳಗಿನಿಂದ ದನಿ ಬಂದಿತ್ತು. ’ತುಂಬಾ ಹೊತ್ತು ನಿಲ್ಲಲ್ಲು ಆಗಲ್ಲ’ ಅಂತ ಬ್ರಾಹ್ಮಣ. ಪುಂಡರೀಕ ಹಿಂದೆ ತಿರುಗದೆ, ಅವನ ಪಕ್ಕದಲ್ಲೆ ಇದ್ದ ಇಟ್ಟಿಗೆಯೊಂದನ್ನು ಹೊರಗೆ ಜರುಗಿಸಿ, ’ಇಗೋ ಇದರ ಮೇಲೆ ಕುಳಿತುಕೋ’ ಅಂತ ಹೇಳಿದ ’ ಎಲಾ ಇವನ ಅಂತ ದೇವರು ಸೊಂಟ ಮೇಲೆ ಕೈ ಈಟ್ಟು ಆಶ್ಚರ್ಯ ಚಕಿತನಾಗಿ ನೋಡಿಉತ್ತಿದ್ದರು. ಪುಂಡರೀಕನಿಗೆ ತುಂಬ ದೈವ ಭಕ್ತಿ. ಮನೆಯೊಳಗಿನ ಕೆಲಸ ಮುಗಿಸಿ ಹೊರಗೆ ಬಂದು ನೋಡಿದರೆ ಸಾಕ್ಷಾತ್ ವಿಷ್ಣು ಅವನ ಮುಂದೆ. ಸಂತಸದಿಂದ ಗದ್ಗದಿತನಾಗಿ, ಅಲ್ಲೇ ದೇವರ ಕಾಲಿಗೆ ಬಿದ್ದ. ’ದೇವರೆ!! ನೀವು ಬಂದಿದ್ದೀರಿ ಅಂತ ಯಾಕೆ ಹೇಳಲಿಲ್ಲ’ ಅಂತ ಕೇಳಿದ. ಹೇಳಿದ್ರೆ ಕೆಲಸ ಅರ್ಧ ಬಿಟ್ಟು ಬರ್ತಿದ್ಯಾ’ ಅಂತ ಕೇಳಿದಾಗ ಪುಂಡರೀಕ್ ’ಇಲ್ಲ ಅಂತ ಹೇಳಿದ. ಮರಾಠಿಯಲ್ಲಿ ವಿಠೋಬ = ವಿಠೇ ವರಿ ಉಭಾ= ಇಟ್ಟಿಗೆಯ ಮೇಲೆ ನಿಂತವನು-  ವಿಠಲ್- ಪಾಂಡುರಂಗ ಅಂತ ಹೆಸರು ಪಡೆದುಕೊಂಡ ವಿಷ್ಣು ಆ ಸ್ಥಳದಲ್ಲೇ ಐಕ್ಯನಾದ. ಆ ಸ್ಥಳ ಪಂಢರಪುರ ಅಂತ ಹೆಸರುವಾಸಿಯಾಯಿತು.
ಮಹಾರಾಷ್ತ್ರದಲ್ಲೆಲ್ಲ ವರ್ಕರಿ ಪಂಗಡ ಕಾರ್ತಿಕ ಏಕಾದಶಿ ಹತ್ತಿರ ಬರುತ್ತಿದ್ದ ಹಾಗೆ ಕಾಲ್ನಡಿಗ್ಎಯಲ್ಲಿ ಪಂಢರಪುರಕ್ಕೆ ಯಾತ್ರೆ ಹೋಗುತ್ತಾರೆ. ಈಗೀಗ ಟ್ರ್ಯಾಕ್ಟರ್ ಗಳು ಕೂಡ ಕಾಣ ಬಹುದು. ಪ್ರವಾಸಿಗರಿಗೆ ದಾರಿಯಲ್ಲಿ ಊಟ ತಿಂಡಿ, ರಾತ್ರಿ ಮಲಗುವ ವ್ಯವಸ್ಠೆ ಮಾಡುವ host  ಇರುತ್ತಾರೆ. ಭಜನೆ ಹೇಳುತ್ತಾ ಟೋಳಿ ಮುಂದೆ ನಡೆಯುತ್ತಿರುತ್ತದೆ.


ದೇವರ ದರ್ಶನಕ್ಕೆ ಮೂರು ಮಹಡಿ ರಶ್ ಇತು. ಲಿಫ್ಟ್ ನಲ್ಲಿ ಹೋಗಿ ಕ್ಯೂ ನಲ್ಲಿ ನಿಲ್ಲಬೇಕಿತ್ತು. ಅಷ್ಟು ಹೊತ್ತು ನನಗೂ ಅಮ್ಮನಿಗೂ ನಿಲ್ಲೋಕೆ ಆಗಲ್ಲ. ಹೂ ಮಾರುವವ”ಮುಖ’ ದರ್ಶನ ಅಂತ ಒಂದು ಕ್ಯೂ ಇದೆ. ಅದರಲ್ಲಿ ಹೋದರೆ ದೂರದಿಂದ ದೇವರನ್ನು ಕಾಣಬಹುದು ಅಂದ. ಸರಿ ಹೂ ಮಾರುವವನ ಬಳಿ ಅಮ್ಮ ಹೂ ಕೊಂಡಿದ್ದರಿಂದ, ಚಪ್ಪಲಿ ಅಲ್ಲೇ ಬಿಡಲು ಹೇಳಿದ ಅಂವ. ನಾವು ಮುಖ ದರ್ಶದ ಕ್ಯೂ ಸೇರಿಕೊಂಡ್ವಿ. ಅಲ್ಲೇನೂ ಕಡಿಮೆ ರಶ್ ಇರಲಿಲ್ಲ. ಆ ಜನ ಜಂಗುಳಿಯಲ್ಲಿ ದೇವರನ್ನು ಕಾಣುವುದು ’ಹರ’ಸಾಹಸವೇ ಸೈ ( ಇಲ್ಲೊಂದು ಪನ್ ಆಯ್ತಲ್ಲ್ವಾ :-)) ಅಂದುಕೊಂಡೆ. ಅಮ್ಮನಿಗೆ ಬೇಜಾರು. ದೊಡ್ಡ ಲೈನ್ ಗೆ ಹೋಗುವಾನಾ ಅಂತ ಕೇಳಿದೆ. ಬೇಡ ಮಂಡಿ ನೋವು ಬರುತ್ತೆ ಅಂದ್ರು. ಸರಿ ದೂರದಲ್ಲಿ ದೇವರು ಇರುವ ಗರ್ಭಗುಡಿ, ಅದರ ಮುಂದೆ ಇರುವೆಯಂತಹ ಜನಸಾಗರ. ಅರೆರೆ ಏನಾಶ್ಚರ್ಯ. ಒಂದೆ ಒಂದು ಕ್ಷಣ, ಜನ ಸಮೂಹಾ ಆ ಕಡೆ ಈ ಕಡೆ ಜರುಗಿ ನಮಗೆ ದೇವರ ಇಡಿ ಮೂರ್ತಿ ಕಾಣಸಿಕ್ಕಿತು ಅಂದ್ರೆ ನಂಬ್ತೀರಾ??  ಬಾಲ ಕೃಷ್ಣನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಹೋಗುವಾಗ ವಸುದೇವನಿಗೆ ಸಮುದ್ರ ದಾರಿ ಮಾಡಿಕೊಟ್ಟಿದ್ದು ಹೀಗೆ ಇರಬಹುದಾ ಅಂತ ಒಂದು ಕ್ಷಣ ಆಲೋಚಿಸ್ತಾ ಇದ್ದೆ. ನನಗೆ , ಮಾಲವಿಕ ಮತ್ತು ಅಮ್ಮನಿಗೆ ಮಾತ್ರ ಈ ದರುಶನ ಭಾಗ್ಯ. ಶ್ರೀಕಾಂತ ನಿಹಾ ನಮಗಿಂತ ಸ್ವಲ್ಪ ವೇ ಹಿಂದಿದ್ದರು. ಅವರಿಗೆ ಹೀಗೆ ದರುಶನ ಸಿಗಲಿಲ್ಲ. ಅಮ್ಮನ ಮುಖ ಹಿಗ್ಗಿ ಹೀರೇಕಾಯಿ...
vithobha rukumayi (from the net)

ಅಲ್ಲೊಂದು ಮಠ, ಅದಕ್ಕೆ ತಾಗಿಕೊಂಡಿರುವ ಯಾತ್ರಿ ನಿವಾಸ. ಹೊರಗಡೆ ದೊಡ್ಡ ಬೋರ್ಡ್. No rooms ಅಂತ. ಮಹಾರಾಷ್ಟ್ರಾಲ್ಲಿ ಮಕ್ಕಳಿಗೆ ದೀಪಾವಳಿ ರಜೆ ಒಂದು ತಿಂಗಳು. ಹಾಗಾಗಿ ಜನ ರಜ ಹಾಕಿ ಬಂದಿರುವುದೇ ಜಾಸ್ತಿ. ಎಲ್ಲಿ ನೋಡಿ ದರೂ ಜನ. ಊರಿನ ಹೊರ ಭಾಗದಲ್ಲಿ pay and park. ಅಲ್ಲಿಯೇ ಇರುವ ಈ ಮಠ
ದೇವಸ್ಥನದ ಒಳಗೆ ದೇವರ ಪುಸ್ತಕ ಓದುವುದರಲ್ಲಿ ಮಗ್ನ ತಾತ
ತಾತನ ಜತೆ ಶ್ರೀಕಾಂತಾ :-)
ನಮ್ಮ ನಮ್ಮ ಆಂತರಿಕ ಆಲೋಚನೆಗಳಿಗೆ ಓಗೊಟ್ಟು ಮಗ್ನರಾದ ನಾವು, ಕ್ಲಿಕ್ಕಿಸಿದ ನಿಹಾ
ದೇವಸ್ಥಾನದ ಬೀದಿಯಲ್ಲಿ

ಹಿತ್ತಾಳೆ, ತಾಮೃದ ಸಾಮಾನುಗಳು. ನಾನು ತಾಳ ತೆಗೊಂಡೆ
ಎದುರಿಗೆ ಪೀಠದಲ್ಲಿ ಪಾಮ್ದುರಂಗ-ರುಕುಮಾಯಿ ಮೂರ್ತಿಗಳು
ಚಂದ್ರಭಾಗೆಯ ಮಡಿಲಲ್ಲಿ, ಚೌಕಾ ಬಾರಾ ಆಡುವಲ್ಲಿ ತಲ್ಲೀನ ಹೂ ಮಾರುವ ಮಹಿಳೆಯರು
ಈ ಸಲ ಕೂಡ ನಮ್ಮ ಭಾಗ್ಯ. ಬಿಸಿಲಿಲ್ಲ. ಮೋಡದ ವಾತಾವರಣ. ಹಿತವಾದ ಗಾಳಿ. ಚಂದ್ರಭಾಗೆಯಲ್ಲಿ ದೋಣಿ ವಿಹಾರಕ್ಕೆ ಜನ ಜಂಗುಳಿ ತುಂಬಾ ಇತ್ತು.
ತಮ್ಮ ತಮ್ಮ ಆಲೋಚನೆಗಳಲ್ಲಿ....:-)

ನಮ್ಮ ಹಿಂಬದಿಯಿರುವ ಕೋಟೆ/ಅರಮನೆಯಲ್ಲಿ ದ್ವಾರಕಾಧೀಶ ಮಂದಿರ
ಕೋಟೆಯ ಮೇಲ್ಭಾಗ
ಉಸ್ತುವಾರಿನೋಡಿಕೊಳ್ಳುವ ತಾತ ಅಜ್ಜಿ ಮತ್ತು ಮೊಮ್ಮಗ್

ದೇವಸ್ಥಾನ ಕಟ್ಟಿದ ಬಗೆ

ಕೋಟೆಯ ಒಳಗೆ

ಕೆಲವೆಲ್ಲ ರಿಪೇರಿ ನಡೆದಿದೆ

ಒಳಗಿನ ದೃಶ್ಯ

ಆದರೆ ಒಂದು ಮಾತಂತು ನಿಜ. ಹಳೆಯ ಸೌಂದರ್ಯ, ಸೊಬಗು ಎಲ್ಲ ಹೊಸ constructions ಗಳಿಂದ ಮಾಯ/ಮುಸುಕಾಗಿವೆ. ನನಗೆ ಚಿಕ್ಕಂದಿನಲ್ಲಿ ಪಂಢರಾಪುರ ನೋಡಿದ ಸ್ವಲ್ಪ ನೆನಪಿದೆ. ರಿಕ್ಷಾ ಮಾಡಿಕೊಂಡು ಊರಿನ ಒಂದು ಸುತ್ತು ಹಾಕಿದೆವು. ಅಲ್ಲೆಲ್ಲ ತುಂಬಾ ತಂಬೂರಿ ಮಾಡುವ/ಮಾರುವ ದುಕಾನು ಕಂಡಿತು.
ಪಂಡರಪುರದಿಂದ ಸೀದಾ ತುಳಜಾಪುರ. ಶಿವಾಜಿ ಮಹಾರಾಜನ ಆರಾಧ್ಯ ದೇವತೆ ತುಳಜಾ ಭವಾನಿ. ರಾತ್ರಿ ಅಲ್ಲಿ ತಂಗಿದೆವು. ಮರುದಿನ ಬೆಳಿಗ್ಗೆ 5 ಗಂಟೆಗೆ ದೇವರ ದರ್ಶನ ಮಾಡಿದೆವು,ಅಲ್ಲಿ ಕೂಡ ಬೆಳಿಗ್ಗೆಯೆ ಜನಗಳು. ಬ್ರೇಕ್ ಫಾಸ್ಟ್ ಮುಗಿಸಿ ಅಲ್ಲಿಂದ ಮೋರ್ಗಾಂವ್. ಅಲ್ಲಿಂದ ಅಷ್ಟ ವಿನಾಯಕ ದೇವರಲ್ಲಿ ಒಂದಾದ ಗಣಪತಿ ದೇವಸ್ಥಾನ. ಮಹಾರಾಷ್ಟ್ರದಲ್ಲಿ ಇದೊಂದು ಟೂರ್ ಇರುತ್ತದೆ. ಮಹಾರಾಷ್ಟ್ರದ ವಿವಿಧ ಭಾಗದಲ್ಲಿರುವ ಹರಕೆ ಹೊತ್ತಿರುವವರು ಎಂಟು ಗಣಪತಿ ನೋಡಿ ಪುಣ್ಯ ಕಟ್ಟಿಕೊಳ್ಳುವುದು. 
ಅಲ್ಲಿಂದ ಜಿಜುರಿ ಕೋಟೆ. 350 ಮೆಟ್ಟಿಲು ಹತ್ತಿ ನೋಡುವ ಕೋಟೆ. ನಾನು ಅಮ್ಮ ಹೋಗಲಿಲ್ಲ. ಶ್ರೀಕಾಂತ, ಮಾಲವಿಕಾ, ನಿಹಾರಿಕಾ ಎಂಜಾಯ್ ಮಾಡಿದರು. ಅದರ ಚಿತ್ರಗಳು ಮುಂದಿನ ಪೋಸ್ಟ್ ನಲ್ಲಿ
:-)

October 29, 2015

ಮಿರ್ಜಾನ್ ಕೋಟೆ

ಇದು ಕುಮಟೆಯಲ್ಲಿರೋದು. ಗೋಕರ್ಣದಿಂದ ೧೨ ಕಿ ಮಿ. ಗೋಕರ್ಣ ಪೋಸ್ಟ್ ನಲ್ಲಿ ಗೋಗರ್ಭದ ಬಗ್ಗೆ ಬರೆದಿದ್ದೆ. ಅಲ್ಲಿಂದ ಒಂದು ದಾರಿ ಮಿರ್ಜಾನ್ ಕೋಟೆಗೆ ಬರುತ್ತೆ.
ಕೋಟೆಯ ಬಗ್ಗೆ ಅಲ್ಲಿ ಮಾಹಿತಿ ನೀಡಲು ಯಾರೂ ಇರಲಿಲ್ಲ.
ವೈಕಿಪೀಡಿಯಾದಲ್ಲಿ ಏನೇನೋ ಮಾಹಿತಿಗಳಿವೆ ಅಲ್ಲಿ ಓದಕೊಳ್ಳಬಹುದು. ನಾನು ಪಿಚ್ಚರ್ ಹಾಕ್ತಿದ್ದೀನಿ. ಆರಾಮಾಗಿ ಇಲ್ಲಿ ಒಂದು ದಿನ ಕಳೆಯಬಹುದು. ಪಿಕ್ನಿಕ್ ಎಲ್ಲ ಮಾಡಬಹುದಂತೆ...ಕೋಟೆಯ ಒಂದು ಕಡೆ ನಾಗ ಬನ ಇದೆ. ಕೆಲವು ಚಿತ್ರಗಳು ಮಿಸ್ ಆಗಿವೆ. ಹೆಚ್ಚಿನ ಚಿತ್ರಗಳನ್ನು ಮಾಲವಿಕಾಳ ನೋಕಿಯಾ ಸೆಲ್ಲ್ ಫೋನ್ ನಿಂದ ತೆಗೆದವುಗಳು. :-)

ಒಳ ಹೋಗುವ ದಾರಿ. ಅಲ್ಲಿ ಗೋಡೆಗೆ ತಾಗಿದ ಪಾಚಿ ಮತ್ತಿತರೇ ಗಿಡಗಳನ್ನು ತೆಗೆಯುವ ಕೆಲಸ ನಡೀತಿದೆ. ನಾವೇ ಗೇಟ್ ತೆಗೆದು ಹೋಗ ಬೇಕು. ಒಳ ಹೋಗಿ ಗೇಟ್ ಹಾಕಬೇಕು. ಯಾಕಂದರೆ ದನಗಳು ಒಳ ಹೊಕ್ಕುತ್ತಾವೆ ಅಂತ. :-)















ಗವಿಯಿಂದ ದಾರಿ ಇಲ್ಲಿಗೆ ಬರುತ್ತೆ ಅಂತ ಬೋರ್ಡ್ ಓದಿದ ನೆನಪು. ಬೃಹತ್ ಗಾತ್ರದ ಎರಡು ಬಾವಿಗಳಿವೆ ಕೋಟೆಯೊಳಗೆ. ಬಗ್ಗಿ ನೋಡಿದರೆ ಏನೂ ಕಾಣದಷ್ಟು ಆಳ. ಮಾತ್ರವಲ್ಲ ಗಿಡಗಂಟಿಗಳು ಜೊಂಪೆ ಜೊಂಪೆಯಾಗಿ ಬೆಳೆದಿವೆ. ಬಹುಶ: ಅದು ಸೆರೆಮನೆ ಆಗಿರಲಿಕ್ಕೆ ಸಾಧ್ಯ. ಮೇಲಿನಿಂದ ಮುಚ್ಚಿಟ್ಟಿದ್ದಾರೆ. ಇಲ್ಲದಿದ್ದರೆ it is dangerous.

ಹೊರಗಿನಿಂದ ಕೋಟೆಯ ಇನ್ನೊಂದು ಪಾರ್ಶ್ವ

October 27, 2015

ಒಳ್ಳೆತ(ಮ)ನ

ಮಗ ಮದುವೆ  ಮಾಡಿಕೊಳ್ಳುತ್ತಿದ್ದಾನೆ ಅಂದಾಗ ಡಾ. ಪದ್ಮಿನಿಗೆ ತುಂಬಾ ಸಂತೋಷ ಸಮಾಧಾನ. ಆ ದಿನ ಸಂಜೆ ಅವನು ಹುಡುಗಿಯನ್ನು ಮನೆಗೆ ಕರೆದುಕೊಂಡು ಬರುವವನಿದ್ದ. ಮನೆಗೆ ತಾಗಿರುವ ಗರಾಜ್ ಅನ್ನೇ ಮಾಡಿಫೈ ಮಾಡಿ ಅಲ್ಲಿ ತನ್ನ ಪ್ರಾಕ್ಟೀಸ್ ಮಾಡುತ್ತಿದ್ದಳು ಸ್ತ್ರೀ ತಜ್ಞೆ ಯಾದ ಡಾ. ಪದ್ಮಿನಿ. ಸ್ವಲ್ಪ ವಾದ್ರು ಮನೆ ಚೊಕ್ಕಟ ಮಾಡುವ ಅಂತ ಅದರ ಕಾರ್ಯದಲ್ಲಿ ತೊಡಗಿದಳು.  ಬಂದ ಪೇಶೇಂಟ್ಸ್ ಗಳಿಗೆಲ್ಲ ಹಿಂದಿನ ಬೀದಿಯಲ್ಲಿರುವ ತನ್ನ ಸ್ನೇಹಿತೆಯ ಮಗಳ ಬಳಿ ಕಳುಹಿಸುವ ಏರ್ಪಾಡು ಮಾಡಿದಳು. ಮನೆಯೊಳಗೆ - ದಿವಾನ್ ಗೆ ಹೊಸ ಹಾಸು, ಕಿಟಕಿಗಳಿಗೆ ಹೊಸ ಪರದೆ , ಹೂದಾನಿಯಲ್ಲಿ ತಾಜಾ ಹೂವಿನ ಗುಚ್ಛ ಇತ್ಯಾದಿ.. ಆಮೇಲೆ ಸಂಜೆಗೆ ಏನೆಲ್ಲಾ ತಿಂಡಿ  ಮಾಡಬೇಕೆಂದು ಅಡಿಗೆಯ ಶಾಂತಮ್ಮನಿಗೆ ಸಲಹೆ  ಸೂಚನೆಯನ್ನಿತ್ತಳು,   
ಸಂಜೆ ಕಾವೇರಿಯನ್ನು ಕರೆದುಕೊಂಡು ಬಂದಾಗ 'ಇವಳನ್ನು ಎಲ್ಲೋ ನೋಡಿದೆನಲ್ಲ ಅಂತ ಅನಿಸಿತು. ಮಗ ಮೆಚ್ಚಿದ ಹುಡುಗಿ ಅಂತ ಹೆಚ್ಚಿಗೇನೂ ಆಲೋಚನೆ ಮಾಡದೆ ಅವಳು ಮದುವೆಗೆ ಸಮ್ಮತಿ ನೀಡಿದಳು. ಕಾವೇರಿಗೆ  ತನ್ನವರಾರೂ ಇರಲಿಲ್ಲ. ಅನಾಥಾಶ್ರಮದಲ್ಲಿ ಓದಿ ಈಗ ಬ್ಯಾಂಕೊಂದರಲ್ಲಿ ಕೆಲಸ ಆಕೆಗೆ. ಸುಮಾರು ಮಧ್ಯರಾತ್ರಿ ಡಾ ಪದ್ಮಿನಿಗೆ , ಕಾವೇರಿಯನ್ನು ಕಂಡದ್ದೆಲ್ಲಿ ಅಂತ ನೆನಪಾಗಿ ಬೆಚ್ಚಿ ಬಿದ್ದಳು. ಮಗನಿಗೆ ಏನೂ ಹೇಳಲು, ಕೇಳಲು ಹೋಗಲಿಲ್ಲ. ಕಾವೇರಿಯ ಜತೆ ಮಾತುಕತೆಯಲ್ಲಿ ತೊಡಗಿದಾಗ ಆಕೆ ಒಳ್ಳೆಯವಳೆಂದು ಅವಳಿಗೆ ಮನದಟ್ಟಾಗಿತ್ತು. ಮಗ ಮತ್ತು ಕಾವೇರಿ ಆತ್ಮೀಯ ಸ್ನೇಹಿತರಂತೆ ಸಂಭಾಷಿಸುವದು ನೋಡಿ ಸಂತಸ ಪಟ್ಟಿದ್ದಳು. ಮಾತುಗಳಲ್ಲಿ ಏನು ನಯ -ನಾಜೂಕು!!
ಮದುವೆಯೆಲ್ಲ ಮುಗಿದು ಹಲವಾರು ವರ್ಷಗಳು ಕಳೆದರೂ ಕಾವೇರಿಗೆ ಮಕ್ಕಳಾಗಲಿಲ್ಲ. ಇಬ್ಬರಿಗೂ ಅದರ ಕೊರಗು ಹತ್ತಿಕೊಂಡಿತು. ಒಂದು ಸಲ ಏನೋ ಮಾತಾಡುವಾಗ , 'ಮೊದಲ ಪಸಲ ಗರ್ಭ ಧರಿಸಿದಾಗ ಅಬೋರ್ಶನ್ ಮಾಡಿಸಿದರೆ ಮಕ್ಕಳಾಗುವುದು ಸ್ವಲ್ಪ ಕಷ್ಟವೇ  'ಎಂದು ಡಾ. ಪದ್ಮಿನಿ ಉಸುರಿದರು. " ಹೌದಮ್ಮ ಹಾಗಾಗಿದ್ದು ಅವಳ ತಪ್ಪಲ್ಲ  ' ಅಂತ ಮಗ ಪ್ರತ್ಯುತ್ತರ  ನೀಡಿದಾಗ ಇಬ್ಬರಿಗೂ ತಾವೇನೂ ಮಾತನಾಡುತ್ತಿದ್ದೇವೆ ಎಂಬುದರ ಅರ್ಥವಾಗಿ ಪ್ರಶ್ನಾರ್ಥಕವಾಗಿ ಒಬ್ಬರ ಮುಖ ಇನ್ನೊಬ್ಬರು ನೋಡಿ ಕೊಂಡರು. ಇಬ್ಬರೂ ಒಂದೇ ಉಸುರಿಗೆ 'ನಿನಗೊತ್ತಿತ್ತಾ?' ಅಂತ ಕೇಳಿಕೊಂಡರು 
"ಹೌದಮ್ಮ ಮದುವೆಗೆ ಮುಂಚೆ ಆಗಿದ್ದನ್ನು ಕಾವೇರಿ ಹಂಚಿಕೊಂಡಿದ್ದಾಳೆ. ಆ ಅನಾಥಾಶ್ರಮಕ್ಕೆ ಬಂದವರೊಬ್ಬರಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದಾಗ ಆಕೆಗೆ  ೧೩ ವರ್ಷ ವಯಸ್ಸು. ಅಬೋರ್ಶನ್ ಗೆ ನಿನ್ನ ಬಳಿ ಬಂದಿದ್ದು ಗೊತ್ತಿರಲಿಲ್ಲ ಅಂದ ಮಗ. 
"ಹೌದು ಕಣೋ ಮಗ, ನನಗೆ ಅವಳಾರೆಂದು ಆ ದಿನಾನೆ ಗೊತ್ತಾಗಿತ್ತು. ಆದರೆ ನಿಮ್ಮಿಬ್ಬರ ಮದುವೆಯಿಂದ ಇಬ್ಬರೂ ಖುಷಿಯಾಗಿರುತ್ತೀರಿ ಅನ್ನಿಸಿ ನಾನೂ ಸುಮ್ಮನಿದ್ದೆ. ಬಹುಶ: ಯಾವತ್ತೂ ಯಾರಿಗೂ ಏನೂ ಹೇಳುತ್ತಿರಲಿಲ್ಲ. ಈಗ ನೀನು ಮಕ್ಕಳಿಲ್ಲವೆಂಬ ಕೊರಗುತ್ತಿರುವುದಿರಿಂದ ಸೈಂಟಿಫಿಕ್ ರೀಸನ್ ಕೊಟ್ಟೆ ಅಷ್ಟೆ 'ಅಂದರು 
ಇಬ್ಬರ ಮಾತುಗಳನ್ನು ಇನ್ನೊಂದು ಕೋಣೆಯಲ್ಲಿದ್ದ ಕಾವೇರಿ ಕೇಳಿಸಿಕೊಂಡು...'ಒಳ್ಳೆಯವರು ಇರುತ್ತಾರೆ ಜಗತ್ತಿನಲ್ಲಿ ಎಂದು ನಿಟ್ಟುಸಿರು ಬಿಟ್ಟಳು. 


October 21, 2015

ಒಬ್ಬಂಟಿ


ಇಷ್ಟು ದೊಡ್ಡ ಜಗದಲ್ಲಿ  ಯಾರೂ ನನಗಿಲ್ಲ
ಪರರ ಮಾತು ಹಾಗಿರಲಿ ನನ್ನವರೂ ನನ್ನ ಪಾಲಿಗಿಲ್ಲ 

ಜನರು ಅತ್ತು ಅತ್ತು ಜೀವನ ಸವೆಸುವರು
ನಾನು ನಗುತ್ತಿದ್ದರೂ ಜೀವನ ಸಾಗಿಸಲಾಗಲಿಲ್ಲ 

ಒಂದು ಚೂರು ಪ್ರೀತಿ ಅಷ್ಟೆ ನನಗೆ ಬೇಕಿತ್ತು
ಜಗತ್ತಿಗೆ ಅದನ್ನೂ ಸಹಿಸಲಾಗಲಿಲ್ಲ

ಆಕಾಶವೇ ಎಷ್ಟೊಂದು ತಾರೆಗಳು ನಿನ್ನ ಸನ್ನಿಧಿಯಲ್ಲಿ
ನನ ಜೀವನದಲ್ಲಿ ಆ  ಅದೃಷ್ಟ ಜಗಮಗಿಸಲಿಲ್ಲ
:-)

guess ಮಾಡಿ 
(ಮಿರ್ಜಾನ ಕೋಟೆ ಚಿತ್ರಗಳು ಮುಂದಿನ ವಾರ ಪುರುಸೊತ್ತು ಆದ್ರೆ. ಗೋಕರ್ಣ ಕ್ಕೆ ಹೋಗಿ ಬಂದದ್ದೇ ಬಿಸ್ಕೂಟ್  ಫ್ಯಾಕ್ಟರಿ ಗೆ ಬಿಡುವಿಲ್ಲದ ಕೆಲಸ . ನನಗೊತ್ತಿರೋವಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ನಮ್ಮ ಮಾಮೂಲಿ ಅಡಿಗೆಯ ಹಾಗೆ ಅಲ್ಲ. ಮಾಮೂಲಿ ಅಡಿಗೆಯಾದ್ರೆ ಅದೇನೋ ಹೇಳ್ತಾರಲ್ಲ ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡಿಗೆ ಮಾಡುವುದು' ಅಂತ ..... ನನ್ನ ಅಡಿಗೆ ಸ್ವಲ್ಪ ಹಾಗೆ ಕಾಯಿ, ಉಪ್ಪು, ಹುಳಿ ಹಾಕೋದು ಏನೋ ಒಂದು ಮಾಡಿ ಇಡೋದು.  Baking  needs precision. ಬೇಕಿಂಗ್  ಅದೆಲ್ಲ ನನಗೆ ಹೇಳಿ ಮಾಡಿಸಿದ್ದಲ್ಲ. ಕೆಲ ಐಡಿಯಾ, suggestions,  ಲೇಬಲ್ ಅಂಟೀಸೋದು, ಬಾಕ್ಸ್ ಅಸೆಂಬಲ್ ಮಾಡಿ ಕೊಡೋದು, ಪಾತ್ರೆ ತೊಳೆಯೋದು ಇಂತದ್ದೆಲ್ಲ ಮಾಡಿ ಕೊಡೋದು. ಹಾಂ ಮತ್ತೆ ನನಗೆ ಅವಳು ಸಂಬಳ ಕೊಡುತ್ತಾಳೆ. :-))
ಬೇಕಿಂಗ್ = ? in ಕನ್ನಡ 
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 




October 12, 2015

ಗೋಕರ್ಣಕ್ಕೆ ಒಂದು ಟೂರ್ (my 350 th post)



ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ತಿರುಪತಿ, ಕನ್ಯಾಕುಮಾರಿ, ಪಂಡರಾಪುರ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ. ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ

ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)

ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು  ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)

ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ. ಈಗ ನಿಮ್ಮ ಜತೆ 
ಶ್ರೀಕಾಂತ್ ಬ್ಯಾಂಕ್ ನಲ್ಲಿದ್ದಾರೆಂದಾಗ ನನಗೆ ಖುಶಿ ಎನಿಸಿದ್ದು ಎರಡು ವರ್ಷಕ್ಕೊಮ್ಮೆ ಸಿಗುವ LFC (Leave fare concession). ಆದರೆ ನಮ್ಮ ಮದುವೆಯಾದ ಕೆಲವೇ ವರ್ಷದಲ್ಲಿ ಅದನ್ನು ನಿಲ್ಲಿಸಲಾಯಿತು. ಆಗ ನಮ್ಮ ಬೈಕಿಂಗ್, ಹೈಕಿಂಗ್, ಟ್ರೆಕ್ಕಿಂಗ್ ಅಂತ ಏನಾದರೂ ಇರುತ್ತಿತ್ತು. ನನ್ನ ಹಾಗೆ ಪ್ರಯಾಣಿಸುವ ಹುಚ್ಚು ನನ್ನ ಮಕ್ಕಳಿಗೂ ಇದೆ. ಹಾಗಾಗಿ ನಾವು ಎಲ್ಲಾದರೂ ಹೋಗುತ್ತಿರುತ್ತೇವೆ. ಶ್ರೀಕಾಂತ ಗೆ ಇತ್ತೀಚೆಗೆ ತುಂಬಾ ಕೆಲಸ ಹಾಗಾಗಿ ಈಗ ನಾವು ಮೂರು ಜನ , ಅಥವಾ ತಂಗಿ ಬಂದಾಗ ಅವಳು ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಸೇರಿ ನಮ್ಮ ’ಲೇಡೀಸ್ ಓನ್ಲಿ’ ಟ್ರಿಪ್ ಶುರು ಆಯಿತು.
ಗೋಕರ್ಣಕ್ಕೆ ಹೋಗಲು ಕಾರಣ , ನನಗೆ ಸ್ಮಿತಾ ಕಾಯ್ಕಿಣಿ ವಾಟ್ಸಾಪ್ ನಲ್ಲಿ ಕಳುಹಿಸಿದ ಗೋಕರ್ಣದ ಚಿತ್ರಗಳು. ನಾನು ನಿಹಾ ಏನೇ ಆಗಲಿ ತಿಂಗಳಿಗೊಂದು ಸಲ ಎಲ್ಲಾದರೂ ಹೋಗಲೇ ಬೇಕೆಂದು ಡಿಸೈಡ್ ಮಾಡಿದ್ದೇವೆ. ಶ್ರೀಕಾಂತ ಗೆ ಅವರ ಕೆಲಸ, ಮಾಲವಿಕಾಳಿಗೆ ಅವಳ ಕಿರು ಉದ್ಯಮ ಬಿಟ್ಟು ಬರಲು ಆಗಲ್ಲ. ಹಾಗಾಗಿ ನಾನು ನಿಹಾ ರಜಾ ಇದ್ದಾಗ ಎಲ್ಲಾದರೂ ಹೋಗಿ ಬರುತ್ತೇವೆ. ಲಾಸ್ಟ್ ನಮ್ಮ ಟ್ರಾವೆಲ್ ಜುಲೈ ನಲ್ಲಿ ಆಗಿದ್ದು. ಆಮೇಲೆ ನಿಹಾ ಆಫಿಸ್ ನಲ್ಲಿ ಅವಳಿಗೆ ಒಂದು ಆಪ್ (App) ಹಾಗೂ ವೆಬ್ ಸೈಟ್ ಡೆವೆಲಪ್ ಮಾಡುವ ಅರ್ಜೆಂಟ್ ಕೆಲಸಗಳಿಂದ ಬಿಡುವು ಸಿಕ್ಕಿರಲಿಲ್ಲ. ಈ ಸಲದ ಲಾಂಗ್ ವೀಕೆಂಡ್ ವೇಸ್ಟ್ ಮಾಡಲು ಅವಳು ಸಿದ್ದಳಿರಲಿಲ್ಲ. ಹಾಗಾಗಿ ಅಮ್ಮ ನೀವು ಬರದಿದ್ದರೆ ನಾನೊಬ್ಬಳೆ ಹೋಗೋದು ಗ್ಯಾರಂಟಿ ಅಂದಳು. ಗೋಕರ್ಣದ ಹುಳ ಅವಳ ತಲೆಗೆ ನಾನೆ ಬಿಟ್ಟಿದ್ದು. ಸರಿ ಹೋಗುವುದೆಂದಾದ ಮೇಲೆ ಸ್ಮಿತಾ ಗೆ ಎಸಿಸ್ಟ್ ಮಾಡಲು ಹೇಳಿದೆ. ಅಲ್ಲಿನ ಲೋಕಲ್ ಗೈಡ್ ಮನೇಶ್ವರ್ ನಂ ಕೊಟ್ಟರು. ಮೊದಲು ಬಸ್ ನಲ್ಲಿ ಹೋಗುವುದೆಂದಿತ್ತು. ಇಲ್ಲಿಂದ ಬೆಳಗಾವಿ ಆಮೇಲೆ ಅಲ್ಲಿಂದ ಗೋಕರ್ಣ ತುಂಬಾ ಹತ್ತಿರ. ಆದರೆ ಶ್ರೀಕಾಂತ you can cover more places if you hire a vehicle 'ಅಂದ್ರು. ನಾವು ಯಾವಗಲೂ ಹಯರ್ ಮಾಡುವ ಅನ್ವೇಕರ್ ಮಾಮಾ ಸತಾರಾ ಟ್ರಿಪ್ ನಲ್ಲಿದ್ದರಿಂದ ಅವರೇ ಇನ್ನೊಂದು ಗಾಡಿಯವನ ಪರಿಚಯ ಮಾಡಿ ಕೊಟ್ಟರು. ಆ ಚಾಲಕನ ಹೆಸರು ರಾಜು. ಪುರ್ತಿ ನಮ್ಮ ಟೂರ್ ನಲ್ಲಿ ಡ್ರೈವರ್, ಗೈಡ್ ಅಂಡ್ ಬಾಡಿಗಾರ್ಡ್ .
ಅಲ್ಲಿ ಹೋಗುವ ಮ್ಯಾಡಂ, ಇಲ್ಲಿ ಹೋಗುವಾ ಮ್ಯಾಡಂ ಅಂತ ಅವನಿಗೆ ಎಲ್ಲಿಲ್ಲದ ಹುಮ್ಮಸ್ಸು. ಮನೇಶ್ವರ ಸಹಾಯದಿಂದ ಮಾಮೂಲಿ ಯಾತ್ರಾ ಸ್ಥಳಗಳು ಬಿಟ್ಟು ಹೊಸ ಹೊಸ ಜಾಗೆ ನೋಡುವ ಅವಕಾಶ ರಾಜುಗೂ...:-) ಇಲ್ಲಿವೆ ಕೆಲವು ಚಿತ್ರಗಳು. ಸ್ಮಿತಾ ಗೆ ಥಾಂಕ್ಸ್ ಹೇಳುತ್ತಾ.....ನಮ್ಮ ಮುಂದಿನ ಟ್ರಿಪ್ ನನ್ನ ತಂಗಿ ಮತ್ತು ಅವಳ ಮಕ್ಕಳು ಯು ಎಸ್ ನಿಂದ ಬಂದಾಗ ನೈನಿತಾಲ್ ಗೆ. ಅಲ್ಲಿ ಮಾಲವಿಕಳ ಕಾಲೇಜ್ ಮೇಟ್ ನ ಅಮ್ಮ ಹೋಮ್ ಸ್ಟೇ ನಡೆಸುತ್ತಾರೆ. ಸೋ ಪರಿಚಯದವರು ಸಿಕ್ಕಿದ್ದು ಖುಶಿ. looking forward to our trip involving flight and train

ಬೆಳಗಾವಿಯಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟಿತು ನಮ್ಮ ಸವಾರಿ. ತುಂಬಾ ಮಂಜು ಕವಿದಿತ್ತು.




7.45 ಗೆ ಯೆಲ್ಲಾಪುರದ ಶಾನುಭೋಗ್ ಹೋಟಲ್ ನಲ್ಲಿ ಇಡ್ಲಿ ಸಾಂಬಾರ, ಟೀ ಕುಡಿದು ಮುಂದಿನ ದಾರಿ
 ಮೊದಲಿಗೆ ಮಾಗೋಡು ಫಾಲ್ಸ್ ಸಿಕ್ಕಿತು. ಇನ್ನು ಚಿತ್ರಗಳ ಮುಖಾಂತರ ಕತೆ ಹೇಳುತ್ತೇನೆ. :-)


ರಭಸದಿಂದ ಧುಮ್ಮುಕ್ಕುವ ನೀರಿನಿಂದಾಗಿ , ಹೊಗೆಭರಿತ ವಾತಾವರಣದ ಹಾಗೆ ಅನ್ನಿಸುತ್ತಿತ್ತು.








ಆ ಮೇಲೆ ದಾರಿಯಲ್ಲಿ ಸಣ್ಣಕ್ಕೆ ಮಳೆ ಹನೀತಾ ಇತ್ತು. ಅಷ್ಟರಲ್ಲೇ ತಮ್ಮನ ನಾಲ್ಕು ವಾಟ್ಸಾಪ್ ಮೆಸೇಜ್ ಎಲ್ಲಿದ್ದೀರಾ ಅಂತ. :-) ನಾವು ಮೂರೆ ಜನ ಹೋಗೋದು ಅವನಿಗೆ ಸುತಾರಾಂ ಇಷ್ಟವಿಲ್ಲ. ಅವನು ಬರುತ್ತೇನೆಂದಾಗ ನಾನು ನಯವಾಗ ತಿರಸ್ಕರಿಸಿದೆ. ಮಾತ್ರವಲ್ಲ ನಾವು ನಾವೇ ಹೀಗೆ ಹಲವಾರು ಬಾರಿ ತಿರುಗಾಡಿ  ಬಂದಿದ್ದೇವೆಂದು ಹೇಳಿದ್ದೆ,

10.45 ಗೆಲ್ಲ ನಾವು ಗೋಕರ್ಣ ತಲುಪಿದೆವು. ಎಂಟರ್ ಆಗುವಾಗಲೇ ಪಾರ್ಕಿಂಗ್ ಫೀ ತೆಗೆದುಕೊಂಡು ಬಿಡುತ್ತಾರೆ. ಯಾಕಂದ್ರೆ ಪುಟ್ಟ ಊರು ಮತ್ತು ಸಣ್ಣ ಸಣ್ಣ ಗಲ್ಲಿಯ ರಸ್ತೆ. ಹಾಗಾಗಿ ಹೋಗಲು ಬರಲು ಬೇರೆ ಬೇರೆ ದಾರಿ. ಅದೇ convenient ಕೂಡಾ. ಮೊದಲಿಗೆ ಗೋಕರ್ಣನಾಥೇಶ್ವರನ ದರ್ಶನ. ಹಳೆ ಹೊಸ construction. ದೊಡ್ಡ ಪ್ರಾಂಗಣ. ಚಪ್ಪಲಿ ಹೊರಗೆ ಬಿಟ್ಟು ಹೂ ಮಾರುವವರ ಬಳಿ ನೈದಿಲೆ, ದಾಸವಾಳ ಹೂಗಳನ್ನು ಮುತ್ತಗದ ಎಲೆಯಲ್ಲಿ ಹಾಕಿ ಕೊಟ್ಟಿದ್ದನ್ನು ತೆಗೆದುಕೊಂಡು ಕ್ಯೂ ನಲ್ಲಿ ನಿಂತು ಬಂದ ಜನರನ್ನು ಗಮನಿಸುತ್ತಾ ನಿಂತೆ. ಗರ್ಭಗುಡಿ ತಲುಪುವಷ್ಟರಲ್ಲಿ 12,00 ಗಂಟೆ ಆಗಿತ್ತು. ನಾವು ಒಳಗಿದ್ದ ಹಾಗೆಯೇ ಮುಖ್ಯ ದ್ವಾರವನ್ನು ಹಾಕಿ ಬಿಟ್ಟರು. ಇನ್ನು ದೇವರ ದರ್ಶನ ಸಂಜೆಯೆಂದು ತಿಳಿಯಿತು. ನಾವು ಸರತಿಯಲ್ಲಿ ಹೋಗಿ ಆತ್ಮ ಲಿಂಗವನ್ನು ಮುಟ್ಟಿ ಬಂದೆವು.
ನಿಹಾ ಗೆ ನನ್ನ ಅಜ್ಜ ಹೇಳಿದ ಕತೆ- ಗೋಕರ್ಣದಲ್ಲಿ ಶಿವನ ದೇವಸ್ಥಾನ ಕಟ್ಟಿದ ಬಗ್ಗೆ ಹೇಳಿದೆ. ನಿಮಗೆ ಬೇರೆ ವರ್ಶನ್ ಗೊತ್ತಿದ್ರೆ ದಯವಿಟ್ಟು ಹೇಳಿ.
ರಾವಣನ ತಾಯಿಗೆ ಪೂಜೆ ಮಾಡಲು ಒಂದು ಶಿವಲಿಂಗ ಬೇಕಿತ್ತಂತೆ. ರಾವಣನಿಗೆ ಎಲ್ಲೂ ಸಿಗಲಿಲ್ಲ. ಅದಕ್ಕೆ ಅವನು ಶಿವನ ಕುರಿತು ಕಠಿನ ತಪಸ್ಸು ಮಾಡಿದ. ಶಿವ ಸಂತೃಪ್ತನಾಗಿ ಆತ್ಮಲಿಂಗವನ್ನು ರಾವಣನ ಕೈಯಲ್ಲಿ ಕಳುಹಿಸಿಕೊಟ್ಟ. ಒಂದೇ ಶರತ್ತು ಏನೆಂದರೆ, ಯಾವ ಕಾರಣಕ್ಕೂ ಲಿಂಗ ವನ್ನು ನೆಲದ ಮೇಲೆ ಇಡಬಾರದು. ಇಟ್ಟರೆ ಅದು ಅಲ್ಲೇ ಸಮಾಧಿಯಾಗುತ್ತದೆಂದು. ಇದನ್ನು ನೋಡಿದ ವಿಷ್ಣು, ’ಇವನ ಕೈಗೆ ಶಕ್ತಿಯುತ ಆತ್ಮ ಲಿಂಗ ಬಂದಿದೆ. ಇದನ್ನು ಅವನು ಕೆಟ್ಟ ಕಾರ್ಯಕ್ಕಾಗಿ ಬಳಸುತ್ತಾನೆಂದು, ಹೇಗಾದರೂ ಮಾಡಿ ಅದನ್ನು ರಾವಣ ನೆಲದ ಮೇಲೆ ಇಡುವಂತೆ ಮಾಡಬೇಕೆಂದು ನಿಶ್ಚಯಿಸುತ್ತಾನೆ. ರಾವಣ ಆತ್ಮಲಿಂಗವನ್ನು ಹಿಡಿದುಕೊಂಡು ಗೋಕರ್ಣದ ಸಮುದ್ರ ತಡಿಯಲ್ಲಿ ನಡೆಯುತ್ತಿರುತ್ತಾನೆ.  ವಿಷ್ಣು ತನ್ನ ಸುದರ್ಶನ ಚಕ್ರವನ್ನು ಸುರ್ಯನಿಗೆ ಅಡ್ಡ ಇಟ್ಟು ಮುಸ್ಸಂಜೆಯ ಸಮಯದ atmospheric look ಕೊಡಿಸುತ್ತಾನೆ, ರಾವಣ ನೇಮ ನಿಷ್ಟೆಯನ್ನು ಪಾಲಿಸುವುದರಲ್ಲಿ ಎತ್ತಿದ ಕೈ. ಸಂಜೆಯ ಸಂಧ್ಯಾವಂದನೆಯ ಸಮಯವಾಯಿತೆಂದು ಅತ್ತ ಇತ್ತ ನೋಡುತ್ತಿರುವಾಗಲೇ, ಬಾಲ ಬ್ರಾಹ್ಮಣನ ವೇಷ ತೊಟ್ಟ ವಿಷ್ಣು ಕಾಣಸಿಗುತ್ತಾನೆ. 'ಬಾಲಕ, ನಾನು ಕೈ ಕಾಲು ಮುಖ ತೊಳೆದು ಸಂಧ್ಯಾವಂದನೆ ಮಾಡಿ ಬರುವ ತನಕ ಈ ಲಿಂಗವನ್ನು ಹಿಡಿದು ಕೋ, ಯಾವುದೇ ಕಾರಣಕ್ಕೆ ಇದನ್ನು ನೆಲದ ಮೇಲೆ ಇಡಬೇಡ’ ಎನ್ನುತ್ತಾನೆ. ಅದಕ್ಕೆ ಬಾಲಕ ನೋಡಲು ಭಾರ ಇದ್ದ ಹಾಗೆ ಕಾಣುತ್ತೆ. ನಾನು ಮೂರು ಸಲ ಕರೆಯುತ್ತೇನೆ. ಅಷ್ಟರಲ್ಲಿ ನೀವು ಬರದಿದ್ದರೆ ನಾನು ಲಿಂಗವನ್ನು ನೆಲದ ಮೇಲೆ ಇಡುತ್ತೇನೆ’ ಅಂತ ಹೇಳುತ್ತಾನೆ. ಸಮುದ್ರದಲ್ಲಿ ಕೈ ಕಾಲು ತೊಳೆಯಲು ಹೋಗುವಾಗ ಸಮುದ್ರ ದೂರ ದೂರ ಹೋಗುತ್ತಾ ಇತ್ತು. ಕೊನೆಗೆ ವಿಷ್ಣು ಸಮುದ್ರದಲ್ಲಿ ಗಾಳಿ ಮೊರೆತ ಸೃಷ್ಟಿಸಿ, ಮೂರು ಸಲ ರಾವಣನನ್ನು ಕರೆದ ಹಾಗೆ ಮಾಡಿ, ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟೇ ಬಿಟ್ಟ. ಲಿಂಗ ಅಲ್ಲಿ ಚಿರ ಸ್ಥಾಯಿಯಾಯಿತು....ಗೋಕರ್ಣನಾಥೇಶ್ವರನ (ಮಹಾಬಲೇಶ್ವರ) ದೇವಸ್ಥಾನವಾಯಿತು. ಮುಂದೆ ಏನಾಯ್ತು ಗೊತ್ತಿಲ್ಲ ಪಾಪದ ರಾವಣನಿಗೆ.poor chap!!
ನಮಗೆ ದೇವಸ್ಥಾನ ಮುಂತಾದ್ದರಲ್ಲಿ ಅಷ್ಟೊಂದು ಆಸಕ್ತಿಯಿರಲಿಲ್ಲ. ಯಾವುದಾದರೂ ಶಾಂತ ಸ್ಥಳದಲ್ಲಿ ನಿಹಾ ಗೆ ಚಿತ್ರ ಬರೆಯಲು ಅವಕಾಶವಾದರೆ ಸಾಕಿತ್ತು, ಮತ್ತು ಬೀಚ್ ನಲ್ಲಿ ಕೊಂಚ ಸಮಯ. ಗೋಕರ್ಣ ಚೆಂದದ ಊರು, ನಮ್ಮ ತೀರ್ಥಹಳ್ಳಿಯ ಹಾಗೆ- temple town. ಹಸಿರು ಬೆಟ್ಟ, ಹಸಿರಿನ ವಾತಾವರಣದಿಂದ ಕೂಡಿದೆ. ಸ್ಮಿತಾ ಏನೆಲ್ಲಾ ನೋಡಬಹುದೆಂದು ದೊಡ್ಡ ಲಿಸ್ಟ್ ಎ ಕೊಟ್ಟಿದ್ದರು. ನಾನು ಎರಡು ದಿನ ಸಾಕಾಗುತ್ತಾ ಅಂತ ಕೇಳಿದ್ದಕ್ಕೆ, ಗೋಕರ್ಣ ಸಣ್ಣ ಊರು ಅಂದಷ್ಟೆ ಹೇಳಿದ್ದರು. ಹೌದು ನಾಲ್ಕು ಸಲ ತಿರುಗಾಡಿದ ಮೇಲೆ ನಮಗೆ ಎಲ್ಲೆಲ್ಲಿ ಏನೇನಿದೆ ಅಂತ ತಿಳಿಯುತ್ತಾ ಹೋಯಿತು. ಮತ್ತು ಸ್ಮಿತಾ- ಸೆಕೆ ಬಿಸಿಲು ಇರುತ್ತೆ ಕ್ಯಾಪ್, sun screen lotion ಇಟ್ಟುಕೊಳ್ಳಿ ಅಂದಿದ್ದರು, ನಾವು ಮೂರು ಜನರೂ ಮುಖಕ್ಕೆ ಏನನ್ನೂ ಹಚ್ಚುವುದಿಲ್ಲ, ಹಾಗಾಗಿ ತಲೆಗೆ ಟೋಪಿ ಮತ್ತು ಕೊಡೆಗಳನ್ನು ಹಿಡಿದುಕೊಂಡಿದ್ದೆವು. ನಮ್ಮ ಅದೃಷ್ಟ ಎನ್ನಲೇ ಬೇಕು. ಮೋಡ ಮತ್ತು ಹನಿ ಮಳೆಯ ವಾತಾವರಣ ನಮಗೆ ತುಂಬಾ ಅನುಕೂಲವಾಯಿತು. especially ಸಮುದ್ರ ತೀರದಲ್ಲಿ ಸಮಯ ಕಳೆಯುವಾಗ.
ದೇವಸ್ಥಾನದಿಂದ ಹೊರಗೆ ಬಂದು ದೇವಸ್ಥಾನದ ಸುತ್ತ ಮುತ್ತ ಸ್ವಲ್ಪ ಹೊತ್ತು ಕಳೆದೆವು. ಆಮೇಲೆ ಸಮುದ್ರ ತೀರಕ್ಕೆ ಹೋದೆವು. ಇವತ್ತು ಅಮವಾಸ್ಯೆ. ನೀರಲ್ಲಿ ಹೋದರೆ ಒಳ್ಳೆಯದು ಅಂದ ರಾಜು. ಅದಕ್ಕೆ ನಾನು ಕಾಲು ಒದ್ದೆ ಮಾಡಿದ ಹಾಗೆ ಮಾಡಿದೆ. ನನಗೆ ಮುಂಬೈ ನಲ್ಲಿ ಬೀಚ್ ಬಳಿಯಿದ್ದರೂ ನೀರಲ್ಲಿ ಹೋಗಕ್ಕೆ ಅಷ್ಟು ಇಷ್ಟ ಇರುತ್ತಿರಲಿಲ್ಲ. ದೂರದಿಂದ ಅಲೆಗಳ ಆಟ ನೋಡುವುದರಲ್ಲೇ ಹಿತ.
ಎಷ್ಟು ಚೆಂದದ ಕಲಾತ್ಮಕ ಹೊರ ಮೈ ಈ ಮನೆಗೆ??!! ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ


ಸಮುದ್ರಕ್ಕೆ ಭೇಟಿ.

ಇಲ್ಲಿ ನಾವು ಗೋಕರ್ಣದ ಲೋಕಲ್ ಗೈಡ್ ಮನೇಶ್ವರ್ ಗೆ ಕಾಯ್ತಾಇದ್ವಿ. ಮನೇಶ್ವರ್ ಅವರದ್ದು ರಿಕ್ಷಾ ಇದೆ. ನಾವು ಗಾಡಿ ಮಾಡಿಕೊಂಡು ಹೋದದ್ದರಿಂದ ಅವರು ಅವರ ರಿಕ್ಷಾವನ್ನು ಸಮುದ್ರದ ತಡಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಬಂದರು. ನಿಹಾ ಒಳ್ಳೆಯ ಮೀನು ಊಟ ಮಾಡಬೇಕೆಂದಿತ್ತು. ಮನೇಶ್ವರ್ ಅವರ ಪರಿಚಯದ ಪುಟ್ಟ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ನಮಗೆ ರುಚಿಯಾದ ಮೀನಿನ ಊಟ ಸಿಕ್ಕಿತು.

ಮಾಲವಿಕಾ ಮಾತ್ರ ಕಷ್ಟಪಟ್ಟು ಊಟ ಮಾಡಿದಳು. ಅಲ್ಲಿಂದ ಓಂ ಬೀಚ್ ಗೆ ಹೋದೆವು.
 ಇಲ್ಲಿ ಹಲವಾರು ಸಿನಿಮಾ ಶೂಟ್ ಗಳಾಗಿವೆಯಂತೆ. ಮೇಲೆ ಯಾವುದೋ ಸ್ಪೋಟ್ ನಿಂದ ನೋಡಿದ್ರೆ ಈ ಬೀಚ್ ಓಂ ಆಕಾರದಲ್ಲಿ ಕಾಣುತ್ತಂತೆ. ನಿಹಾ ಚಿತ್ರ ಬರೆಯಲು ಕೂತರೆ, ನಾನು ಒಂದು ಬಂಡೆ ಮೇಲೆ ಬಂಡೆಯಂತೆಯೇ ಪವಡಿಸಿ ಜನರನ್ನು ನೋಡುತ್ತಿದ್ದೆ. ಮಾಲವಿಕಾ ಉದ್ದ್ದಕ್ಕೆ ಒಂದು ಸಮುದ್ರ ಕಿನಾರೆಯ ವಾಕ್ ಕೈಗೊಂಡಳು. ಸಮಯ ಮಧ್ಯಾಹ್ನದ ಮೂರು ಆದರೂ ಮೋಡದ ವಾತಾವರಣದಿಂದಾಗಿ ಇದೆಲ್ಲ ಸಾಧ್ಯವಾಯಿತು
ಇಲ್ಲಿ ನೀಹಾ ಚಿತ್ರ ಬರೆಯುತ್ತಿದ್ದ ಹಾಗೆ ಹಲವಾರು ಜನ ಕೂಡಿದರು, artist ಆ, architect ಆ , ಯಾವೂರು ಮುಂತಾದೆಲ್ಲ. ಅವಳ ಸುತ್ತು ಜನರು ಸೇರಿದ್ದನ್ನು ಕಂಡು ನಮ್ಮ ಡ್ರೈವರ್ ರಾಜು ಅಲ್ಲಿಗೆ ಹೋದ. ಕೂಡಲೇ ಜನ ಜಾಗ ಖಾಲಿ ಮಾಡಿ ಹೋದರು.


ಚೆಂದದ ಕೊಡೆಯಿಂದಾಗಿ ಚಿತ್ರ ಇನ್ನೂ ಚೆನ್ನಾಗಿ ಕಾಣುತ್ತಿದೆಯಲ್ಲವಾ?

ಇಲ್ಲಿಂದ ನಮಗೆ ಮನೇಶ್ವರ್ ಗೋಗರ್ಭಕ್ಕೆ ಕರೆದೊಯ್ದರು. ಹಲವಾರು ಜನರಿಗೆ ಇದರ ಬಗ್ಗೆ ಗೊತ್ತಿಲ್ಲವಂತೆ. ಗುಡ್ಡ ಪ್ರದೇಶದಲ್ಲಿ ಸ್ವಲ್ಪ ಮೇಲಕ್ಕೆ ಹೋದರೆ ಅಲ್ಲೊಂದು ಪುಟ್ಟ ಗುಹೆ. ಸರೀ ನೋಡಿದರೆ ಮಾತ್ರ ಗೋಚರಿಸುವಂತದ್ದು.
ಗುಹೇಶ್ವರ
 ಒಂದು ಪುಟ್ಟ ಬೆಳಕಿಂಡಿಯಿಂದ ಗುಹೆಯೊಳಗೆ ಬೆಳಗು
ಬೆಳಕಿಂಡಿ ಮೇಲಿನಿಂದ

ಆ ಗುಹೆಯಿಂದ ಮುರ್ಡೇಶ್ವರ, ಕಾರವಾರ ಮತ್ತು ಮೀರ್ಜಾನ್ ಫೋರ್ಟ್ ಗೆ ದಾರಿಯಿದೆ ಅಂದರು. ತುಂಬಾ ಕತ್ತಲೆ ಮಾತ್ರ ಬಾವಲಿಗಳು ನಮ್ಮ ತಲೆ ಕಿವಿಗಳ ಹತ್ತಿರವೇ ಓಡಾಡಿಕೊಂಡಿದ್ದವು. ನಾನು ಕಿವಿ ಮೇಲೆ ಕೈ ಇಟ್ಟುಕೊಂಡೇ ಇದ್ದೆ. ಮನೇಶ್ವರ ತುಂಬ ಚಿಕ್ಕವರಿದ್ದಾಗ  ಆ ಗುಹೆ ಹೊಕಿದ್ದರಂತೆ. ಸುಮಾರು ಎರಡು ಕಿ ಮಿ ದೂದ ನಡೆದ ನಂತರ, ಉಸಿರಾಡಲು ಆಗದೇ ಅವರ ಮಿತ್ರರು ಅವರನ್ನು ಅಲ್ಲಿಂದ ಹೊರಗೆ ತಂದರಂತೆ.
ಪುನ: ದೇವಸ್ಥಾನದ ಬೀಚ್ ಬಳಿ ಕರೆದುಕೊಂಡು, ಅಲ್ಲಿಂದಲೇ ಏನೇನು ನೋಡಬೇಕೆಂದು ನಮಗೆ ತೋರಿಸಿದರು. ಮನೇಶ್ವರ ದೇವಸ್ಥಾನ, ರಾಮ ತೀರ್ಥ etc. ಅವರಿಗೆ ಥ್ಯಾಂಕ್ಸ್ ಹೇಳಿ. ನಮ್ಮ ಮುಂದಿನ ಕಾರ್ಯಕ್ರಮ ಹಮ್ಮಿಕೊಂಡೆವು. ಮೊದಲಿಗೆ ಮನೇಶ್ವರ ದೇವಸ್ಥಾನ. ಇಲ್ಲಿವೆ ಚಿತ್ರಗಳು. ಮಧ್ಯಾಹ್ನ ವಾದುದರಿಂದ ಗರ್ಭಗುಡಿ ಮುಚ್ಚಿದ್ದವು. ಕೂರಲು ಪ್ರಶಸ್ಥ ಜಾಗ ಇತ್ತು. ನಾನು bhraminy kite ಮತ್ತು ಕಾಗೆಗಳ ಜಗಳ ನೋಡುತ್ತಿದ್ದರೆ, ನಿಹಾ ದೇವಸ್ಥಾನದ ಪೈಂಟಿಂಗ್ ನೋಡುತ್ತಿದ್ದಳು, ಮಾಲವಿಕಾ ಅಲ್ಲೇ ಇದ್ದ ಕಿರು ದಾರಿಗಳಲ್ಲಿ ವಾಕ್ ಹೋದಳು. ನಾನು ಕೂತ ಸ್ಥಳದಿಂದ ನನಗೆ ಕೆಳಗೆ ಬಹುದೂರದ ವರೆಗೆ ಕಾಣುತ್ತಿತ್ತು. ಅಲ್ಲಿ ಒಂದೆಡೆ ಮಾಡು ರಿಪೇರಿಯಾಗುತ್ತಿತ್ತು. ಪಿತೃ ಪಕ್ಷ ವಾದ್ದರಿಂದ ಪಿತರಿಗೆ ತರ್ಪಣ ನೀಡಲು ಬಂದ ಜನರು ಹಲವಾರು. ಅವರೆಲ್ಲ ಪುರೋಹಿತರ ಮನೆಗಳಲ್ಲಿ, ಯಾತ್ರಿ ನಿವಾಸದಲ್ಲಿ ಉಳಿದುಕೊಂಡಿದ್ದರು. ಮಾತ್ರವಲ್ಲ long week end ವಾದ್ದರಿಂದ, ಟೂರಿಸ್ಟ್ ಗಳೂ ಹಲವಾರು. otherwise ಅಲ್ಲಿ ಸೀಸನ್ ಶುರು ವಾಗುವುದು ನವೆಂಬರ್ ನಿಂದ ಫೆಬ್ರವರಿ ವರೆಗಂತೆ. " ಆಗ ಇಲ್ಲಿ ರಸ್ತೆ ನೆ ಕಾಣ ಸಿಗಲ್ಲ ಮ್ಯಾಡಂ, ಅಷ್ಟೊಂಡು foreigners ತುಂಬಿರುತ್ತಾರೆ. "ನನಗೆ ಜರ್ಮನ್, ಇರಾನಿ ಮತ್ತು ಅಮೇರಿಕನ್ ಇಂಗ್ಲಿಷ್ ಗೊತ್ತಿರೋ ಬಗ್ಗೆ ಆ ಊರಿನಿಂದ ಬಂದವರಿಗೆಲ್ಲ ನನ್ನ ಬಗ್ಗೆ ಆಶ್ಚರ್ಯ" ಅಂತ ಅರ್ಧ ನಾಚುತ್ತ ಅರ್ಧ ಹೆಮ್ಮೆಯೊಂದಿಗೆ ಹೇಳಿಕೊಂಡರು ಮನೇಶ್ವರ್. ಅವರದ್ದೊಂದು ಫೋಟೊ ತೆಗೆಯಲು ಮರೆತೇ ಹೋಯಿತು.
’ಡೇರಿಂಗ್ ಡ್ಯಾನಿ’ ಗೊತ್ತಾ? ಅಂತ ಕೇಳಿದರು ನನಗೆ. ಇಲ್ಲವಲ್ಲ ಯಾರವರು ಅಂತ ಕೇಳಿದೆ. ಅದೇ ಮ್ಯಾಡಂ ಫಿಲ್ಮ್ ನಲ್ಲಿ ಸ್ಟಂಟ್ ಎಲ್ಲ ಮಾಡ್ತಾರೆ??!! ಅವನು ನನ್ನ ಫ್ರೆಂಡ್ ಅಂದರು. 
ಕನ್ನಡ ಫಿಲ್ಮ್ ನಲ್ಲಾ? ಅಂತ ಕೇಳಿದೆ. ಹೌದೆಂದರು.
ನಾನು ಕನ್ನಡ ಫಿಲ್ಮ್ ನೋಡಲ್ಲ ಅಂದಿದ್ದಕ್ಕೆ ಸ್ವಲ್ಪ ಪೆಚ್ಚಾದರು. :-)
ಮನೆಯಲ್ಲಿ ಯಾರ್ಯಾರಿದ್ದಾರಂತ ಕೇಳಿದೆ. ಅಮ್ಮ, ಅಣ್ಣ ಮತ್ತು ನಾನು ಎಂದರು. ಸ್ವಲ್ಪ ಜಮೀನಿದೆಯಂತೆ. ಅಲ್ಲಿ ಅವರು ಭತ್ತ ಬೇಳೀತಾರಂತೆ.
"ಸೀಸನ್ ನಲ್ಲಿ ನಮ್ಮ ಹೊಟಲ್ ಓಪನ್ ಮಾಡ್ತೇವೆ, ಮತ್ತು ಬಾಡಿಗೆಗೆ ನಮ್ಮ ಟೂ ವ್ಹೀಲರ್ಸ್ ಇದೆ ಮ್ಯಾಡಂ, ನೀವೆಲ್ಲ ಆಗ ಬರಲೇ ಬೇಕು. ಒಳ್ಳೆ ಫಿಶ್ ಕರಿ ಮಾಡ್ತೇವೆ’ ಅಂದಿದ್ದಾರೆ. ನೀಹಾ ಹೋಗ್ತಾಳಂತೆ to have that touristy feeling..:-)





ಕೆಳಗಡೆಯಿಂದ ಕಾಣುವ ದೇವಸ್ಥಾನದ ಚಿತ್ರ, ಹಾಗು ಒಳಗಡೆ ಪ್ರಾಂಗಣದಲ್ಲಿರುವ ಪೈಂಟ್ಂಗ್


ಒಳದಾರಿಯಲ್ಲಿ ಹಾಗೆ ಸುಮ್ಮನೆ ನಡೀತಾ ಹೋದೆವು. ಅಲ್ಲಿ ಪರ್ಣಕುಟಿ ಎಂಬ ಮನೆಯ ಹೆಸರು ಕಾಣಿಸಿತು. ಅಲ್ಲೆ ಸೆಲ್ ಫೋನ್ ನಲ್ಲಿ ಮಾತಾಡ್ತಾ ಇರುವ ಪುರೋಹಿತರಿಗೆ, ’ಇಲ್ಲಿ ಜಯಂತ ಕಾಯ್ಕಿಣಿ’ಯವರ ಮನೆ ಎಲ್ಲಿ ಅಂತ ಕೇಳಿದೆ. ಅವರು ಸನ್ನೆಯಿಂದ ಈ ಮನೆಯನ್ನು ತೋರಿಸಿದರು. ನಿಹಾ ಗೆ ಹಠ, ’ಫೋಟೊ ತೆಗೆದು ನಿನ್ನ ಫ್ರೆಂಡ್ ಗೆ ಕಳುಹಿಸು’ ಅಂತ..ಅದಕ್ಕೆ ಬೇಡ ಬೇಡ ಅಂತ ನಾಚ್ಕೋತಾ ಪೋಸ್ ಕೊಟ್ಟಿದ್ದು. :-)

ಪರ್ಣಕುಟಿ ಎಂತ ಚೆಂದದ ಹೆಸರು. ಅದರ ಸೈಡ್ ವಿಂಗ್...:-)
 ಮಕ್ಕಳಿಗೆ ಸಮುದ್ರ ಸ್ನಾನ ಮಾಡಬೇಕಿತ್ತು. ಪೂರ್ತಿ ಸಂಜೆ ಯಾದ ಮೇಲೆ ಹೋಗುವ ನಿರ್ಧಾರ ಮಾಡಿದೆವು, ಡ್ರೈವರ್ ಗೂ ರೆಸ್ಟ್ ಬೇಕಿತ್ತು. ಆದ್ದರಿಂದ ನಾವು ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ ಬಂಡಿಕೇರಿ ಮಠದ (ಬಂಡಿ ಹೋಗುವ ಜಾಗ ಅಷ್ಟೆ ಇರುವುದರಿಂದ ಈ ಹೆಸರು ಬಂದಿದ್ದಂತೆ) ಕಡೆ ಪಯಣಿಸಿದೆವು. ಸುತ್ತು ಬಳಸುವ ಕೊನೆಯಿಲ್ಲದ ಒಳದಾರಿಯಲ್ಲಿ ಕೊನೆಗೂ ಮಠ ತಲುಪಿದೆವು. ಊರಿನಿಂದ ಕೊಂಚ ಒಳಕ್ಕಿದೆ ನಮ್ಮ ಕೊಂಕಣೀಯರ ಈ ಚಿತ್ರಾಪುರ ಮಠ. ಒಳ್ಳೇ picturesque location. ಸ್ವಲ್ಪ ಹೊತ್ತು ವಿಶ್ರಮಿಸಿ ಸಂಜೆ 5.30 ಗೆ ಕುಡ್ಲೇ ಬೀಚ್ ಗೆ ಹೋಗುವುದೆಂದು ನಿರ್ಧರಿಸಿದೆವು.

ಸಂಜೆ ಕುಡ್ಲೆ ಬೀಚ್ ಕಡೆ ಏನೋ ಹೋದ್ವಿ. ಆದರೆ ನಾವು ಬೀಚ್ ತಲುಪುವಷ್ಟರಲ್ಲಿ ಕತ್ತಲೆಯಾಗಿತ್ತು. ಚೆಂದದ ಸೂರ್ಯಾಸ್ತ ಸಿಕ್ಕಿತು. ಆದ್ರೆ ನೀರಲ್ಲಿ ಆಡ್ತಾ ಕೂತ್ರೆ  ತುಂಬಾ ಕತ್ತೆಲೆಯಾಗ್ತಿತ್ತು. ಅಲ್ಲಿನ ದಾರಿಯಲ್ಲಿ ಬೆಳಕಿರಲಿಲ್ಲ ಮಾತ್ರವಲ್ಲ ದೊಡ್ಡ ದೊಡ್ಡ ಕಂದಕಗಳೂ, ಬಂಡೆಗಳೂ ಇದ್ವು. ಎರಡು ಹೋಟಲ್ ಗಳಿದ್ವು ಬೀಚ್ ಗೆ ತಾಗಿಕೊಂಡು ಅದರಲ್ಲೂ ಮಿಣಿ ಮಿಣಿ ಬೆಳಕು. ಅದಕ್ಕೆ ಬೇಗ ಅಲ್ಲಿಂದ ಹೊರಗೆ ಬಂದ್ವಿ.ರಾತ್ರಿಯ ನಮ್ಮ ಊಟ ಪೈ ರಿಫ್ರೆಶಮೆಂಟ್ಸ್ ನಲ್ಲಿ. ಪೂರ್ತಿ ವೆಜಿಟೇರಿಯನ್ ಊಟ, ಮಾಲವಿಕಾಗೆ ಸಮಾಧಾನ. ನಾವು ಉಳಿದುಕೊಂಡಿದ್ದ ಬಂಡೀಕೇರಿ ಮಠದಲ್ಲೂ ಊಟ ತಿಂಡಿಯ ವ್ಯವಸ್ಥೆಯಿತ್ತು. 








ಮರುದಿನ ಬೆಳಿಗ್ಗೆ  ದೇವಸ್ಥಾನದ ಬೀಚ್ ನಲ್ಲಿ  ಬೆಳಿಗ್ಗೆ ನೀರಿಗಿಳಿದು, ಬ್ರೇಕ್ ಫಾಸ್ಟ್ ಮಾಡಿ ಅಲ್ಲಿಂದ ಕುಮಟೆಯಲ್ಲಿರುವ ಮಿರ್ಜಾನ ಕೋಟೆಗೆ ಭೇಟಿ ನೀಡುವುದೆಂದಾಯಿತು.
ಬೆಳಗಿನ ದೃಶ್ಯ

ಮಾಲು ನಿಹಾ ನೀರಿಗಿಳಿದರೆ ನಾನು ಈ ಮೀನು ತರುವ ಚಿಕ್ಕ ದೋಣಿಗಳನ್ನು ನೋಡುತ್ತಲಿದ್ದೆ.



ಪಿತೃಗಳಿಗೆ ತರ್ಪಣ ನೀಡುವ ಕೆಲಸದ ಮಧ್ಯೆ ಬ್ರೇಕ್ ತೆಗೊಂಡು ಫೋಟೊ ತೆಗೆಸಿಕೊಳ್ಳುತ್ತಿರುವುದು :-)
ನಮ್ಮ ಬೆಳಗಿನ ಉಪಾಹಾರ ಬೀಚ್ ಗೆ ತಾಗಿಕೊಂಡ ಸ್ವಾತಿ ಹೋಟಲ್ ನಲ್ಲಿ. ವಿದೇಶಯರಿಗೂ ಹೇಳಿಮಾಡಿಸಿದಂತಹ ತಿಂಡಿಗಳು ಇದ್ವು. ಪಾಸ್ತಾ, ಬ್ರೆಡ್ ಟೋಸ್ಟ್, Muesli, Oats ಮುಂತಾದವು. ಇಡ್ಲಿ, ವಡಾ ದೋಸಾ ಕೂಡ ಇದ್ವು. 

ಕುಮಟೆಗೆ ಹೋಗುವ ದಾರಿಯಲ್ಲಿ ಯಶವಂತ ಚಿತ್ತಾಲರ ಕಾದಂಬರಿಗಳಲ್ಲಿ/ಕತೆಗಳಲ್ಲಿ ಬರುವ ಹನೇಹಳ್ಳಿ, bankikoodlu, chittaapoora  ಊರುಗಳನ್ನು ಕಂಡು ರೋಮಾಂಚನವಾಯಿತು. 
ಕೋಟೆಯ ಚಿತ್ರ ಇನ್ನೊಂದು ಪೋಸ್ಟ್ ನಲ್ಲಿ.
:-)