August 20, 2026

8 months without you

 


just the other day there was a message in our apartment group for help on information regarding liver transplant and liver specialists.
ಯಾಕೋ ಎಲ್ಲ ಪುನಃ ನೆನಪಾಯಿತು. ಬೇಗನೆ ಮದುವೆಯಾಗಿ joint family ಸೇರಿದರೂ ನನಗೆ ನಾವು ನಾಲ್ಕು ಜನ ಮಾತ್ರ important ಅನುಸೋದು. ಯಾರನ್ನು ನನ್ನ ಸರ್ಕಲ್ ನಲ್ಲಿ ಸೇರಿಸುತ್ತಿರಲಿಲ್ಲ. ಶ್ರೀಕಾಂತ್ ಗೆ ನಿಹಾ ಗೆ ತುಂಬಾ ಜನ ಸ್ನೇಹಿತರು ಇದ್ದರೆ ನಾನು ಅಕ್ಕ ಸ್ವಲ್ಪ ಹೆಚ್ಛೇ introvert. ಮನೆಗೆ ನೆಂಟರು ಇಷ್ಟರು ಯಾರೇ ಬಂದರೂ ಅವರು ಹೋದ ಮೇಲೆ ನೆಮ್ಮದಿ....
ಮದುವೇಯಾಗಿ 37 ವರ್ಷಗಳೇ ಆದವು...ಶ್ರೀಕಾಂತ್ ಹೇಳಿದ್ದಕ್ಕೆಲ್ಲ yes yes ಅಂತ ಕೋಲೇ ಬಸವನ ತರಹ ತಲೆಯಾಡಿಸಿ, ಉತ್ಸುಕಳಾಗಿ ಎಲ್ಲಾ support ನೀಡಿದ್ದೆ...ಅದೇ ಒಂದು ಡಾಕ್ಟರ್ ಗೆ ತೋರಿಸಿ ಎನ್ನುವ ನನ್ನ ಒಂದೇ ಕೋರಿಕೆ ಅವರು ಮನ್ನಿಸಲೇ ಇಲ್ಲ. ಅದು ನನಗೆ ತುಂಬಾ ಸಿಟ್ಟು ನೋವು ತರಿಸಿದೆ. ಅವರು ಇಲ್ಲದೆ ಏನೋ ಒಂದು ಮಿಸ್ಸಿಂಗ್... ಜಗಳ ಎಲ್ಲ ಮಾಡ್ತಿದ್ದೆವಪ್ಪ...we were not perfect... but we had a good ಥಿಂಗ್ going....financially  ಕೆಲವು ಏರು ಪೇರು ಇದ್ದರೂ ಅದೇನು ನಮ್ಮ ನೆಮ್ಮದಿ ಕೆಡಿಸಲಿಲ್ಲ...ಅದೇ health ವಿಷಯದಲ್ಲಿ ಅವರು ಕೇರ್ ತೆಗೊಳ್ಳಲಿಲ್ಲ...ನಾನು ಅದರ ಬಗ್ಗೆ ಒಂದು ಆರು ತಿಂಗಳು ಕಿರಿ ಕಿರಿ- ಪಿರಿ ಪಿರಿ ಮಾಡಿದ್ದಕ್ಕೆ ಲೆಕ್ಕವೇ ಇಲ್ಲ..ಅಮ್ಮ ತಮ್ಮ ಫೋನ್ ಮಾಡಿದಾಗಲೆಲ್ಲ ನನ್ನ complaints  ಇರುತ್ತಿತ್ತು. ಅವರ ಫೋಟೋ ಕೂಡ ಕಳಿಸ್ತಿದ್ದೆ....ಅಮ್ಮ 'ಯಾಕೆ ಡಾಕಟ್ರ ಹತ್ತಿರ ಹೋಗೋದಿಲ್ಲ ಅಂದ್ರೆ,' ಇಲ್ಲ ಮಾಯಿ ಎಲ್ಲ ಸರಿಯಿದೆ' ಎಂದೇ ಅವರು ಉತ್ತರಿಸುತ್ತಿದ್ದರು..ಇದ್ದ ಬದ್ದ ಲೇಖನಗಳನ್ನು ಗಟ್ಟಿಯಾಗಿ ಓದಿ ಹೇಳುತ್ತಿದ್ದೆ...ಸಧ್ಯ ನನ್ನ ಕಪಾಳಕ್ಕೆ ಎರಡು ಬಿಟ್ಟಿಲ್ಲ ಅಷ್ಟೇ....yes, i was that irritating...
ನನಗೆ ಡಾಕ್ಟರ್ ಹತ್ತಿರ  ಹೋಗಲು ಇಷ್ಟವಿಲ್ಲ ಅಂದಿದ್ದರೂ ನಾನು ಸುಮ್ಮನಿರುತ್ತಿದ್ದೆ.

ಹಳೆ ಪೋಸ್ಟ್ on liver cirrhosid

'ಒಂದು ಚೆಕ್ ಮಾಡಿಸಿ....english ಔಷಧಿ ತೆಗೋ ಬೇಕಿಲ್ಲ... i believe in the power of healing through food.... late ಆಗಬಹುದು ಆದರೆ ಯಾವುದೇ ರೋಗ ಸರಿ ಪಡಿಸ ಬಹುದು ಎನ್ನುತ್ತಿದ್ದೆ.
ಊರಿಗೆ ಹೋಗಿ ಸೆಟ್ಲ್ ಆಗುವುದು...ತೋಟದಲ್ಲಿ ವಯಸ್ಸಾದವರಿಗೆ ಮನೆ ಕಟ್ಟಿ ನೋಡಿಕೊಳ್ಳುವುದು, ಅಂತ ತುಂಬಾ ದುಡ್ಡು ಅಲ್ಲಿ invest ಮಾಡುತ್ತಿದ್ದರು...ಹೀಗೆ ಇಂದು ಸಲ ಲಕ್ಷಕ್ಕೂ ಹೆಚ್ಚಿನ ದುಡ್ಡು ಕಳುಹಿಸಿ ಹತ್ತು ಹಲವಾರು ಗಿಡಗಳನ್ನು ಊರಿಗೆ ಸಾಗಿಸಿದರು. ಇದರ ಮಧ್ಯೆ ಊರಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ಫು rib bone ತರಚಿದಂತಾಯಿತು...ಆವಾಗಲೂ ಗಾಡಿ ಹೈರ್ ಮಾಡಿ ಬನ್ನಿ, ತುಂಬಾ weight ಎತ್ತಬೇಡಿ ಅಂದ್ರೂ ರೈಲ್ ನಲ್ಲೇ ಬಂದ್ರು. ಇಲ್ಲಿ ಬಂದ ಮೇಲೆ ಇನ್ನಷ್ಟು ಆರೋಗ್ಯ ಬಿಗಡಾಯಿಸಿತು... ಡಾಕ್ಟರ್ ಅದೂ ಇದೂ ಅಂತ ಖರ್ಚು.....ಅದು ಸರಿಯಾಗುತ್ತಿದೆ ಅನ್ನುವಾಗ, ನಾನು ಬೇಡ ಬೇಡ ಅಂದ್ರೂ heavy heavy ಅಶೋಕ ವೃಕ್ಷಗಳನ್ನು ಹಿಡಿದುಕೊಂಡು ರೈಲ್ ನಲ್ಲಿ ಅಯೋಧ್ಯೆಗೆ ಹೋದರು ಅಲ್ಲಿ ಗಿಡ ನೆಡಲು....ನನಗೆ ಎಷ್ಟು ಸಿಟ್ಟು ಬಂತೆಂದರೆ ನಾನು ಎರಡು ತಿಂಗಳು ಮಾತು ಬಿಟ್ಟೆ....ಇನ್ನಷ್ಟು ದುಡ್ಡು ತೀರ್ಥಹಳ್ಳಿಗೆ ಕಳುಹಿಸಿದಾಗ ನಾನೊಂದೇ ಮಾತು ಹೇಳಿದೆ 'what is the use of
investing when you don't take.of your health?  ಅದೇ ಸಮಯಕ್ಕೆ ಕಣ್ಣಿನ cataract operation ಗೆ ಮುನ್ನ  ಶುಗರ್ ಟೆಸ್ಟ್ ಗೆ ವೈದ್ಯರ ಬಳಿ ಹೋದಾಗ....ಅವರು 'ಯಾಕೋ ನನಗೆ doubt' ಅಂತ ಟೆಸ್ಟ್ ಬರೆದು ಕೊಟ್ರು....ಆವಾಗಲೇ ಲೇಟ್ ಆಗಿ ಹೋಗಿತ್ತು...Livet Cirrhosis ಆಗಿ ಬಿಟ್ಟಿತ್ತು...ಪತ್ತೆಯಾದ ಏಳು ತಿಂಗಳಿಗೆ ಹೋಗಿಯೂ ಬಿಟ್ರು...😭😭
ಲೀವರ್ ಕಸಿ ಬೇಕೇ ಬೇಕು ಅಂದಾಗ, ಬೇಗ ಬೇಗ ಅದಕ್ಕೆ ಬೇಕಾಗುವ ದುಡ್ಡನ್ನು ರೆಡಿ ಮಾಡಿ, exercise, ಔಷಧ, ಯೋಗಾಸನ ಮಾಡಿ, september october ನಲ್ಲಿ ಆರೋಗ್ಯ improve ಆಗಿತ್ತು.
..   MELD score nalli improvement ಆಗಿ , ನಾನು, ನಮ್ಮ ಮಿತ್ರರಾದ ಸಾಲಿಮಠ ಇವರೆಲ್ಲ, operation ಆದ ಮೇಲೆ ಹೀಗೆ ಮಾಡುವಾ, ಹಾಗೆ ಮಾಡುವ ,ಅದು ಮಾಡುವ ಇದು ಮಾಡುವ ಅಂತ ಸಮಾಧಾನದಿಂದ , ಉತ್ಸಾಹದಿಂದ ಇದ್ವಿ.  ಆದರೆ october second half ನಲ್ಲಿ ಪದೇ ಪದೇ ಮೈಯಲ್ಲಿ ammonia ಜಾಸ್ತಿಯಾಗಿ ಹಲವಾರು ಬಾರಿ ಅಡ್ಮಿಟ್ ಆಗಬೇಕಾಯಿತು...
ಹೀಗೆ cirrhosis ಪತ್ತೆಯಾದ 7 ತಿಂಗಳಿಗೆ, ಯುರಿನರಿ infection ನಿಂದಾಗಿ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಕಾರ್ಡಿಎಕ್ ಅರೆಸ್ಟ್ ಆಗಿ ಹೋಗೆ ಬಿಟ್ರು

ಅಷ್ಟೇ....
ನೀರು ಕುಡಿಲಿಕ್ಕೆ ಇಲ್ಲ, ಉಪ್ಪು ಖಾರ ಇಲ್ಲ...ರುಚಿಗೆ ನಿಂಬೆ ಹಣ್ಣಿನ ರಸ, ಕಾಳು ಮೆಣಸು ಜೀರಿಗೆ ಓಂ ಕಾಳು , ಇಂಗು....etc... ಮತ್ತು ಕಾಕಿ ಸೊಪ್ಪು, ಪನೀರ್, ಮಶ್ರೂಮ್ ಇವೆಲ್ಲ ಲೀವರ್ ಗೆ ಸಹಾಯಕ ಅಂತ ಇವೆ ಇವೆ ತಿನ್ನುತ್ತಿದ್ದೆವು..ನಾನು ಅವರು....ಹುಷಾರಾದ ಮೇಲೆ ನಿಮಗೆ ಬೇಕಾದ್ದೆಲ್ಲ ತಿನ್ನ ಬಹುದು...ಈಗ ನಿಮಗೆ ಇಷ್ಟವಾದ ಊಟ ತಿಂಡಿ.imagine ಮಾಡ್ತಾ ನುಂಗಿ ಎನ್ನುತ್ತಿದ್ದೆ 😭😭
ಇವತ್ತು ಅವರ ಇಷ್ಟದ ನೀರು ದೋಸೆ ಮಾಡಿದ್ದೆ...







No comments: