March 13, 2026

AI / ಕೃತ್ರಿಮ ಬುದ್ದಿಮತ್ತೆ!!!

 ವಸುಧೇಂದ್ರ ಅವರು ತಮ್ಮ whatsapp status ನಲ್ಲಿ ಒಂದು ಪುಸ್ತಕ ಬಿಡುಗಡೆಯ invite ಹಾಕಿದ್ದರು. ಸಂಪೂರ್ಣವಾಗಿ AI ಅನುವಾದ ಮಾಡಿದ ಒಂದು ಕೃತಿ.

ಶ್ರೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಮೊಬೈಲ್ ನಲ್ಲಿ ಒಂದು ಕತೆ ಕುಟ್ಟಿದೆ. ಅರ್ಧಂಬರ್ಧ...ಮಧ್ಯ ಮಧ್ಯ ಅದಕ್ಕೆ addition, deletion, edition ಮಾಡ್ತಾ ಹೋಗ್ತಿದ್ದೆ. ಅವರು ದೈವಾಧೀನರಾದಮೇಲೆ ಅದು ನಿಂತು ಹೋಗಿತ್ತು. ಹೀಗೆ ಒಂದು ನಿದ್ದೆ ಬರದ ರಾತ್ರಿ ಆ ಕತೆಯನ್ನು copy paste ಮಾಡಿ ..Meta AI ಗೆ ಆಂಗ್ಲಕ್ಕೆ ಅನುವಾದ ಮಾಡಲು ನಿರ್ದೇಶಿಸಿದೆ....ಎರಡೇ ಸೆಕೆಂಡ್ ನಲ್ಲಿ ಮಾಡಿ ಬಿಟ್ಟಿತು. ನಿಜಕ್ಕೂ ಅನುವಾದ ಚೆನ್ನಾಗಿತ್ತು. ನಾನು ಕತೆ ಪೂರ್ಣ ಗೊಳಿಸಿರಲಿಲ್ಲ...ಅದರ ಅಂತ್ಯ ನನ್ನ ತಲೆಯೊಳಗಿತ್ತು ಆದರೆ ಯಾಕೋ ಬರೆಯಲು ಮನಸ್ಸೇ ಇಲ್ಲ...Meta ಕೇಳಿತು 'ಶಲ್ ಐ continue' ಅಂತ...yes ಕೊಟ್ಟೆ....ಕತೆಗೊಂದು ಚೆಂದದ ಕೊನೇನೂ ಕಾಣಿಸ್ತು....ನನ್ನ ಎಂಡಿಂಗ್ ಬೇರೇನೇ ಇದೆ....but i was damn impressed 🤔🤔
ಕತೆಯನ್ನು ಮನಸ್ಸಿದ್ದರೆ/ ಕೊನೆಗೊಳಿಸಿದರೆ  ದೀಪಾವಳಿಗೆ ಯಾವುದಾದರೂ ವಿಶೇಷಾಂಕಕ್ಕೆ ಕಳಿಸುವಾ ಅಂತಿದ್ದೇನೆ.....🙂🙏👍
ಸುಮ್ನೆ ಶೇರಿಂಗೂ, not that i am a great story teller or anything

*ಆಸ್ಪತ್ರೆ ವಾಸದಿಂದ ಅಲ್ಲಿನ ದಿಂಬನ್ನು ಉಪಯೋಗುಸಿದ ನಂತರ ತಲೆಗೇನೋ ಅಲರ್ಜಿಯಾಗಿದೆ...ಔಷಧಿ ಉಪಚಾರದಿಂದ ಕೆರೆತ ನಿಂತಿಲ್ಲ ಆದರೆ ತಲೆಗೂದಲು ಸಿಕ್ಕಾಪಟ್ಟೆ ಹೋಗ್ತಿದೆ....ಅದಕ್ಕೆ AI ಉಪಯೋಗಿಸಿ ತಲೆಗೂದಲು ಕತ್ತರಿಸಿದರೆ ಯಾವ ಮಾದರಿ ಕಟ್ ನನಗೆ suit ಆಗಬಹುದು ನೋಡಿದೆ 😁
ಹಾಗೆ ಪೂರ್ತಿ ಕೂದಲು ಹೋದ್ರೆ ಯಾವ ಬಣ್ಣ ಮತ್ತು ಮಾದರಿಯ ವಿಗ್/ wig ನನ್ನ ಮುಖಕ್ಕೆ ಸರಿಹೊಂಡಬಹುದು ಅಂತ ಚೆಕ್ ಮಾಡಿದೆ....
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
ಎಂಜಾಯ್ ಮಾಡಿದೆ....
Interesting!!!!

March 10, 2026

ಠನಕಪುರ್ thanakpur

 

ನಕ್ಪುರ್/ tanakpur

ಲೋಹಾಘಟ್ ನಿಂದ ವಾಪಸ್ ಲಕ್ನೋ ಗೆ ಬರುವಾಗ ಪುನಃ ತನಕ್ಪುರ್ ಮಾರ್ಗವಾಗಿ ಬರಬೇಕಿತ್ತು. ನಮ್ಮ ಬಳಿ ಸ್ವಲ್ಪ ಸಮಯ ಇತ್ತು. ಸಂಜೆ 4 ಗಂಟೆಗೆ ಹೋಟಲ್ ಸಿದ್ಧಾರ್ಥ್ ತಲುಪಿದ್ವಿ. ನಾನು ಆನ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದ್ದೆ. ಹೊರಗಿನಿಂದ ನೋಡಲು ಹೋಟಲ್ ಚೆನ್ನಾಗಿತ್ತು. ಒಳಗಡೆ ಗಬ್ಬು. ನಮಗೆ ಕೊಟ್ಟ ಕೊಠಡಿ ತೆರೆದರೆ ಅಲ್ಲಿ ಪಬ್ಲಿಕ್ ಲೆವೆಟರಿ ವಾಸನೆ ಮಾತ್ರವಲ್ಲ ಜೋಂಪು ಜೋಂಪು ಸೊಳ್ಳೆಗಳು. ನಮ್ಮ ದುಡ್ಡು ವಾಪಸ್ ತೆಗೊಂಡು, ಶ್ರೀಕಾಂತ್ ವಾಕ್ ಹೋಗಿ ಇನ್ನೊಂದು ಹೋಟಲ್ ಹುಡುಕಿದ್ರು. ಹೊಸದಾಗಿ ಕಟ್ಟಿಸಿದ್ದ. ಈ ಹೋಟೆಲ್ ಚೆನ್ನಾಗಿತ್ತು. ಇಷ್ಟರೊಳಗೆ 5 ಗಂಟೆ ಆಗಿತ್ಯು. ಹೋಟಲ್ ನವ ಅಲ್ಲಿನ  ಹೆಸರಾಂತ ಪೂರ್ಣಾದೇವಿ ಮಂದಿರ ಈಗ ಬಂದ್ ಆಗಿರುತ್ತೆ, ಆದ್ದರಿಂದ ನಮಗೆ ಶಾರದಾ ನದಿಗೆ ಹೋಗಲು ಹೇಳಿದರು. ಅಲ್ಲಿ ಪ್ರತಿ ಸಂಜೆ ಆರತಿ ಆಗುತ್ತೆ... ಕೆಳಗಿನ ಚಿತ್ರದಂತೆ ಊರು ತುಂಬ ಇಂತಹ ಚಿಕ್ಕ ದೊಡ್ಡ ಊರೂಟು ಕಲ್ಲುಗಳು. ಶ್ರೀಕಾಂತ್ ಪುರೋಹಿತರನ್ನು ಮಾತಾಡಿಸುತ್ತಿದ್ರೆ,  ನಾನು ಸಣ್ಣಕ್ಕೆ ಸದ್ದು ಮಾಡುತ್ತಿರುವ ನದಿ ಯ ಸದ್ದು ಆಲಿಸುವುದರಲ್ಲಿ ತನ್ಮಯಳಾದೆ. ವಾಪಸ್ ಬರ್ತಾ ಪೇಟೆಯೊಳಗೆ ಒಂದು ರೌಂಡ್ ಹಾಕಿದ್ವಿ.




ಇದು ನಮ್ಮ ಕೊನೆಯ ಹೊರ ರಾಜ್ಯದ ಪಯಣ...ಇನ್ನೂ ಓರಿಸ್ಸಾ, ಗುಜರಾತ್ ಪ್ಲ್ಯಾನ್ ಮಾಡಿದ್ದೆ ಬಂತು...ತುಂಬಾ ಬೇಜಾರಾಗುತ್ತೆ ಕಣ್ರೀ...😏😏

March 3, 2026

thandayi ನನ್ನ ರೆಸಿಪಿ

why should people with sugar complaints be left out.of the fun?~..have fun snd enjoy with my 'no added sugar' thandai recipe

Ingredients:

- Handful of fox nuts (makhana), lightly fried

- 4-5 cashew nuts

- 10 raisins

- 1/2 tsp  poppy seeds

- Cardamoms (a few)

- Milk

- Pistachios and rose petals for garnish


Instructions:

1. Blend fried fox nuts, cashews, raisins, khuskhus, and cardamoms into a fine powder.

2. Heat milk and add the blended mixture.

3. Boil until it thickens.

4. Garnish with pistachios and rose petals.

5. Serve warm or chilled.

Enjoy! 😊 Happy birthday, Srikanth!



ಕಾವಲಿಯಲ್ಲಿ ಮಖಾನಾ, 4-5 ಗೇರು ಬೀಜ, 10 ಒಣ ದ್ರಾಕ್ಷಿ, 1/2 ಟಿ ಚಮಚೆ ಗಸ್ ಗಸೆ  ಯನ್ನು ಹುರಿಯಿರಿ. ತಣಿದ ನಂತರ ಎಲಕ್ಕಿಯೊಂದಿಗೆ ಮಿಕ್ಸಿ ಯಲ್ಲಿ ನುಣ್ಣಗೆ ಪುಡಿ ಮಾಡಿ. 

ಬಿಡಿ ಹಾಳಲ್ಲಿ ಬೆರೆಸಿ, ಕುಡಿಬಂದು ದಪ್ಪ ಆಗುವವರೆಗೆ ಓಲೆ ಮೇಲೆ 8ಡಿ.  ಗುಲಾಬಿ ಪಕಳೆ, ಪಿಸ್ತಾ ಒಂದಿಗೆ decorate ಮಾಡಿ ಬಿಸಿ ಅಥವಾ ತಣ್ಣಗೆ ಸರ್ವ್ ಮಾಡಿ



March 2, 2026

HBD Shenoy maam

 


ನಮ್ಮ ಅತ್ತೆ ಯಾವಾಗಲೂ ಹೇಳೋರು. 'ಕಾಂತು ಹೋಳಿ ಹಬ್ಬದ ದಿನ ಹುಟ್ಟಿದ್ದು  ಅಂತ. ನಾಳೆ ಹೋಳಿ...ಆಂಗ್ಲ calender ಪ್ರಕಾರ ಇವತ್ತು ಶ್ರೀಕಾಂತ್ ಹುಟ್ಟಿದ ದಿನ.  ಎರಡು ದಿನ celebration

ಅದಕ್ಕೆ ಮುಂಚೆ ಮನೆಯೆಲ್ಲ ಸುಣ್ಣ ಬಡಿದಿದ್ಫು ಆಯ್ತು. ಮೆಟ್ರೋ  construction ಮುಗಿದ ಮೇಲೆ ಮಾಡೋದು ಮಾಡೋದು ಅಂತ ಪ್ಲಾನ್ ಮಾಡಿ...ಆಮೇಲೆ ಶ್ರೀಕಾಂತ್ ಗೆ ಹುಷಾರು ತಪ್ಪಿ ಮುಂದೂಡುತ್ತ ಕೊನೆಗೆ ಮೊನ್ನೆಗೆ ಮನೆ ಫ್ಹುಲ್ ಲಕಲಕ ಅಂತಿದೆ....ಪೈಂಟಿಂಗ್ ಜತೆ chimney, ಗ್ಲಾಸ್ ಬಾಗಿಲು, ನಳ, ಬಾತ್ ರೂಮ್ ಟೈಲ್ಸ್ ಎಲ್ಲ ಸ್ವಚ್ಛ...ಆಶ್ಚರ್ಯ ಅಂದರೆ ಕೆಲಸಕ್ಕಿದ್ದವರೆಲ್ಲ ವಯಸ್ಸಾದವರು. ಸರಿಯಾಗಿ ಒಂಬತ್ತಕ್ಕೆ ಬಂದು ಸಂಜೆ 5 ಕ್ಕೆ ಕ್ಲೋಸ್. ಹೆಚ್ಚು  / ಅನಾವಶ್ಯಕ ಮಾತಿಲ್ಲ, ಕತೆಯಿಲ್ಲ, ಮೊಬೈಲ್ ಬಳಿಸಿಲ್ಲ.... ಟಿ ಕಾಫಿ ಗೆ ಒಂದು 10 ನಿಮಿಷ ,  ಮಧ್ಯಾಹ್ನ ಊಟಕ್ಕೆ ಅರ್ಧ ಗಂಟೆ ಬ್ರೇಕ್ ಅಷ್ಟೇ. ಸೋಮವಾರ ಶುರು ಮಾಡಿ ಶನಿವಾರ ಸಂಜೆ.complete. ಮೂರು ಜನ ಇದ್ರು ಎಲ್ಲ ಸಾಮಾನು ಎಲ್ಲೆಲ್ಲಿತ್ತೋ  ಅಲ್ಲಿ ನೀಟಾಗಿ ಜೋಡಿಸಿ ಕೊಟ್ರು...ನಾನಂತು ಫುಲ್ ಖುಶ್...

ನನ್ನ ತಮ್ಮನ ಮಗಳು ಸ್ಯಾಮಿ ಪೈ ಶ್ರೀಕಾಂತ್ ಗೋಸ್ಕರ ಅವಳೇ compose ಮಾಡಿ, ಹಾಡಿದ ಹುಟ್ಟು ಹಬ್ಬದ ಹಾಡು...ಮತ್ತು ನನ್ನ ತಮ್ಮ ಪಾಂಡು ಈ ದಿನವನ್ನು ಶ್ರೀಕಾಂತ್ ಡೇ ಅಂತ ಹೆಸರಿಸಿದ್ದಾನೆ 🙂❤️🙏🙏



msgs about the  delicacies he taught us 👆👆

February 21, 2026

fansu

 ನಿನ್ನೆ ನನ್ನ ಮುಂಬೈ ಫ್ರೆಂಡ್ಸ್ ಬಂದಿದ್ದರು. ಎಲ್ಲರೂ ಬೆಂಗ್ಳೂರಲ್ಲೇ ಸೆಟ್ಲ್ ಆಗಿದ್ದಾರೆ.  ಒಬ್ಬ ಫ್ರೆಂಡ್ ದುಬೈ ನಲ್ಲಿ ಇದ್ಲು...ಈಗ ಕೆಲವು ತಿಂಗಳಿಂದ ಇಲ್ಲಿಗೆ ಬಂದಿದ್ದಾಳೆ.  ಹಾಗೆ ಮಾತು ಸೋಷಿಯಲ್ ಮೀಡಿಯಾ, ಯು ಟ್ಯೂಬ್, ಇನ್ಸ್ಟಾಗ್ರಾಮ್ , ಆತ್ಮಹತ್ಯೆ, digital ಅರೆಸ್ಟ್, hacking, ಲೀವರ್ ಕಾಯಿಲೆ ಇದೆಲ್ಲದರ ಕಡೆ ಆಯ್ತು. 'ನಿನ್ನ ಎಫ್ಹ್ ಬಿ ಪೋಸ್ಟ್, instagram ರೀಲ್ಸ್ ಎಲ್ಲ ಮಿಸ್ ಮಾಡಿ ಕೊಳ್ತಿದ್ದೆವೆ ಅಂದರು. ನಿನ್ನ ಭೋಪಾಲ್ ಫೋಟೋಸ್ ಎಷ್ಟು ಚೆನ್ನಾಗಿದ್ದವು...ಅಂತೆಲ್ಲ.. ಅದಕ್ಕಿಂತ ಮುಂಚೆ ಹಿಂದಿನ ವಾರ ನನ್ನ ಹೈ ಸ್ಕೂಲ್ ಕ್ಲಾಸ್ಮೇಟ್, ಯು ಎಸ್ ನಲ್ಲಿರೋದು..ಮಾಲವಿಕಾಳಿಗೆ 'ನಿನ್ನ ಅಮ್ಮನ ಎಷ್ಟು ಸೈಲೆಂಟ್..ಆದ್ರೂ ಅಮ್ಮನ  ಪೋಸ್ಟ್ ಗೆ ಎಷ್ಟೆಲ್ಲ ಲೈಕ್ಸ್, ಕಮೆಂಟ್ಸ್ ಬತಿದ್ವು ಗೊತ್ತಾ ಅಂದರೆ....ಅಕ್ಕ'ಅಯ್ಯೋ ಅಮ್ಮನ ಬ್ಲಾಗ್ ಫ್ಯಾನ್ಸ್ ಎಷ್ಟಿದ್ದಾರೆ...ರಸ್ತೆಯಲ್ಲಿ  ಹೋಗುವವರೆಲ್ಲ  ಗುರುತಿಸೋರು..ಅಂದ್ಲು...ಸಿಕ್ಕಾ ಪಟ್ಟೆ ಮುಜುಗರ ಆಯ್ತು...

ಅದೇ ನಾನು insta ದಲ್ಲಿದ್ದಾಗ ನನ್ನ ಪೋಸ್ಟ್ ಗೆ.ಮೊದಲ ಲೈಕ್ ನನ್ನ ತಮ್ಮನ ಮಗಳು ಸ್ಯಾಮಿ...'ಮಾಲ್ತ್ಯಕ್ಕಾ ನನ್ನ ಫ್ರೆಂಡ್ಸ್ ಗೆಲ್ಲ ನಿನ್ನ ಪೋಸ್ಟ್ ಇಷ್ಟ ಆಗುತ್ತೆ 'ನಿನ್ನ ಆಂಟಿ ಎಷ್ಟು ಲವಲವಿಕೆಯಿಂದಿದ್ದಾರೆ....ನನ್ನ ಆಂಟಿಗೆ ಅಷ್ಟೇನೂ ವಯಸ್ಸಾಗಿಲ್ಲ ಆದ್ರೂ ಮುದುಕರ ತರಹ ಆಡ್ತಾರೆ... ಯಾವುದ್ರಲ್ಲೂ ಇಂಟೆರೇಸ್ಟ್

 ಇಲ್ಲ ' ಅಂದಾಗ ಸಿಕ್ಕಾಪಟ್ಟೆ ಜೋರಾಗಿ ನಕ್ಕಿದ್ದು ನೆನಪಾಗಿ...ಈಗ ಅವಳು ನನ್ನ you ಟ್ಯೂಬ್ follow ಮಾಡ್ತಾಳೆ...

hydroponics experiment

ನನ್ನ ತಮ್ಮ ತಂಗಿಯರು ಏನು ಅಡಿಗೆ ಅಂದ್ರೆ ಯು ಟ್ಯೂಬ್  ನೋಡಿ ಅಂತೀನಿ...ಅದರಲ್ಲಿ ಮುಂಬೈ ತಮ್ಮ ನೋಡ್ತಾನೆ ಆದರೆ ಲೈಕ್ ಎಲ್ಲ ಹಾಕಲ್ಲ..ಮಿಲ್ಲೆಟ್ ಗಂಜಿ ತಯಾರಾಗ್ತಿದೆ...ತಿನ್ನುವ ಮುಂಚೆ ಸ್ವಲ್ಪ  ಕೊರೆಯುವ ಅಂತ... 🙂❤️


ಮಿಲ್ಲೆಟ್ಸ್ ಒಂದಿಗೆ ,ತುಪ್ಪ ಬಳಸಿ. ಮೊಸರು ಬಳಸಿ. ನೀರು ಮಜ್ಜಿಗೆ ಸೇವಿಸಿ ತುಂಬಾ ನೀರು ಕುಡಿಯಿರಿ.  ಕೆಲವರಿಗೆ ಹೀಟ್ ಆಗುತ್ತೆ. ನನಗಂತೂ ಮಿಲ್ಲೆಟ್ಸ್ ತುಂಬಾ ಇಷ್ಟ...🙏🙏


February 20, 2026

Two months

 ಪದೇ ಪದೇ ಅದೇ ಅನ್ನಿಸುತ್ತೆ. ಸ್ವಲ್ಪ ಅರೋಗ್ಯದ ಬಗ್ಗೆ ಕಾಳಜಿ ವಹಿಸಿದಿದ್ರೆ?? ಎಲ್ಸರೂ ಟೈಮ್ ಆಗಿತ್ತು, destiny, ಹೋಗಿ ಬಿಟ್ರು ಮುಂತಾದ ಮಾತುಗಳಿಂದ ಸಮಾಧಾನ ಮಾಡುತ್ತಾರಾದ್ರೂ ನನಗೆ ಅದು ಸರಿ ಅನ್ನಿಸಿವುದೇ ಇಲ್ಲ. ಮನಸ್ದು accept ಮಾಡುತ್ತಿಲ್ಲ. ಈಗ retire ಆಗಿ relax ಆಗಿರುವ ಸಮಯದಲ್ಲಿ ಹಾಗೆ ಬಿಟ್ಟು ಹೋಗೋದಾ? 😢 ಕೆಲವೊಮ್ಮೆ ರಾತ್ರಿ ನಿದ್ದೆ ಬರದಿದ್ದಲ್ಲಿ ಮನೆ ತುಂಬಾ ಓಡಾಡುವಾಗ ಸಡನ್ ಆಗಿ 'ಹೌದಾ ಹೋಗಿದ್ದು' ಅಂತ ಪೆಚ್ಚಾಗಿ ಒಂದು ಕ್ಷಣ ಹಾಗೆ ನಿಂತು ಬಿಡ್ತೀನಿ.

insurance, ಬ್ಯಾಂಕ್ ಖಾತೆ ಎಲ್ಲ ನನ್ನ ಹೆಸರಿಗೆ ವರ್ಗಾವಣೆ ಆದವು. ಕೆಲವೆಲ್ಲ ಡಾಕ್ಯುಮೆಂಟ್ಸ್ ಹುಡುಕಲು ಮನೆಯೆಲ್ಲ ತಲೆಕೆಳಗೆ ಮಾಡಿದೆವು. ಹಳೆ ಪತ್ರ ಓದಿ, ಫೋಟೋ ಗಳನ್ನು  ನೋಡಿ ಬೇಜಾರು ಮಾಡಿಕೊಂಡೆವು, ನಕ್ಕೆವು etc..ಇನ್ನೂ ಕೆಲವು ಕೆಲಸಗಳು ಮಾರ್ಚ್ ಅಷ್ಟರಲ್ಲಿ ಮುಗಿಸಿ ನಾವು ಮೂವರು ಎಲ್ಲಾದರೊ ಹೋಗಿ ಬರಬೇಕು..
ಕೂತು ತಿಂದರೆ ಕುಡಿಕೆ ಹಣ ಸಾಲದು ಅಂತ ಒಂದು ಹೇಳಿಕೆ ಇದೆಯಲ್ಲವಾ???
since i would not be working i have to make the money work, invest wisely that lasts me a long time...🤔🤔.  cos i am going to live long...to 106 years. i am not financially ವೆರಿ literate 😏.





ತಬೆಬುವ ಹೂ ಗಳು ಅರಳಿ ಬೆಂಗಳೂರು  ತುಂಬಾ ಚೆಂದ ಕಾಣುತ್ತಿವೆ. ನನಗೆ ಬಾಲ್ಕನಿಯಿಂದ ಹಲವಾರು ಗಿಡಗಳು ಕಾಣುತ್ತಿದ್ದವು, ಈಗ ಮೆಟ್ರೋ ದೆಸೆಯಿಂದ ಅವು ಕಾಣುತ್ತಿಲ್ಲ.
ಹೀಗೆ....... ಮುಂದುವರಿಲೇ ಬೇಕು....🙏🙏. ಅಷ್ಟೇ

February 15, 2026

ಶಿವರಾತ್ರಿ - ನೆನಪು

 

 

ಓಂ ಶಾಂತಿ ಶಾಂತಿ ಶಾಂತಿಃ.... ಬಿಟ್ಟು ಹೋಯ್ತು 👆👆

ಇವತ್ತು ಶಿವರಾತ್ರಿ. ಉಪವಾಸ  ಮಾಡುವಾ ಅಂತಿದ್ದೆ. ಆದರೆ ಏಳುವಾಗಳೇ ಹಸಿವೆ ಅನಿಸ್ತು. ಮುಂಬೈ ಜೀವನ ನೆನಪಾಯ್ತು. ಎಷ್ಟು ಕಟ್ಟುನಿಟ್ಟಾಗಿ ಸಂಕಷ್ಟಿ, ಕೃಷ್ಣಾಷ್ಟಮಿ, ಶಿವರಾತ್ರಿ ಉಪವಾಸ ಮಾಡುತ್ತಿದ್ದೆವು.

ಮೂರು ಜನ ದೊಡ್ಡ ವಾಕ್ ಹೀಗಿ,  ಸಿಂಪಲ್ಲಾಗಿ ಒಂದು ಅವಲಕ್ಕಿ ಉಸ್ಲಿ ಮಾಡಿ ತಿಂದೆವು. ನಮ್ಮ engagement ಆದ ದಿನ ಇವತ್ತು. ಹಳೆ ಕೆಲ ವಿಷಯಗಳು ನೆನಪಾಗಿ  ನಗೆ ಬಂತು. 




ಶ್ರೀಕಾಂತ್ ತಂದೆ ತಾಯಿಗೆ ವಯಸ್ಸಾಗಿತ್ತು, ಮಾತ್ರವಲ್ಲ ಅವರ ತಾಯಿಯವರಿಗೆ  ಕಿವಿ ಕಣ್ಣು ಮಂದವಾಗಿದ್ದವು. ನಾವೇ ಮುಂಬೈ ನಿಂದ ಬೆಂಗಳೂರು, ಅಲ್ಲಿಂದ ಶಿವಮೊಗ್ಗ ಮತ್ತು ಅಲ್ಲಿಂದ ತೀರ್ಥಹಳ್ಳಿ ಗೆ  ಬಂದೆವು...ಆವಾಗಿನ (1987)ದಿನಗಳಲ್ಲಿ ಇದು strange event ಅಂತ ಹೇಳಬಹುದು.

ತುಂಬಾ strict ಆಗಿ ಬೆಳೆಸಿದ ನನಗೆ, ಶ್ರೀಕಾಂತ್ ನನಗೊಬ್ಬಳನ್ನೇ ಅವರ ಜತೆ ಮಾತುಕತೆ ಆಡಲು, ತೀರ್ಥಹಳ್ಳಿಯಲ್ಲ, ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗುತ್ತೇನೆ ' ಅಂದಾಗ , ಅಪ್ಪ ಅಮ್ಮ ಬೇಡ ಅನ್ನಬಹುದು ಅಂತ ಧೈರ್ಯವಾಗಿದ್ಫೆ...ಆದರೆ ಎಲ್ಲ ಉಲ್ಟಾ ಆಯಿತು. ಅಪ್ಪ, ಮತ್ತು ಮಾವನವರು permisson ಕೊಟ್ಟೆ ಬಿಡುವುದಾ??  ನನಗಿನ್ನೂ ನನ್ನ ಪಿಂಕ್ ಚೂಡಿದಾರ್ ಹಾಕೊಂಡು ಹೋಗಿದ್ದು ನೆನಪಿದೆ...ಶಿವಮೊಗ್ಗದಲ್ಲಿ ಅವರ ಎಲ್ಲ ಪ್ರಶ್ನೆಗೆ ನಾನು 'ಹೌದು' 'ಅಲ್ಲ' ಅಂತಷ್ಟೇ ತಲೆಯಾಡಿಸಿದ್ಫು...ಒಂದೂ ಮಾತಿಲ್ಲ... ಶ್ರೀಕಾಂತ್ ನನಗೆ 'ನೀನು ಬಾಂಬೆ (bombay) ಹುಡಿಗಿ ಹೌದಾ ಅಂತ ನಿರಾಸೆಯಿಂದ ಕೇಳಿ...ಪ್ರತೀ ವರ್ಷ ಮಕ್ಕಳಿಗೆ ಈ ಕತೆ ಕೇಳುವ ಫಜೀತಿ... ಆ ದಿನ ಸಂಜೆ ಮನೆಯ ಹಿರೀಕರ ಎದುರಿಗೆ ಉಂಗುರ ಸಿಹಿ ಹಂಚಿ ನಮ್ಮದೊಂದು engagement ಎನ್ನುವಲ್ಲಿಗೆ....
ಹೀಗೆ ಮಧ್ಯದಲ್ಲಿ ಬಿಟ್ಟು ಹೋಗ್ತಾರೆ ಅಂತ ಅನ್ನಿಸಿರಲಿಲ್ಲ.  anyways we have lots of good/fun memories to recall ಅನ್ನುತ್ತಾ.......🙏🙂

February 4, 2026

ನೀರುಳ್ಳಿ ಸೊಪ್ಪಿನ ಝುಣಕಾ

 ಮೊನ್ನೆ ಬೆಳಿಗ್ಗೆ ಕೆ ಪಿ ಏನ್ ಗೆ ಹೋದಾಗ ತಾಜಾ ನೀರುಳ್ಳಿ ಸೊಪ್ಪು ಬಂದಿತ್ತು. ತೆಗೊಂಡೆ. ಸೊಪ್ಪು ನೋಡಿ ನಿಹಾ ,'ಅಮ್ಮ spring onion ಝುಣಕಾ ತಿನ್ನದೆ ಸುಮಾರು ಸಮಯ ಆಯ್ತು. ನಲ್ಲೇ ಆಫಿಸ್ ಲಂಚ್ ಬಾಕ್ಸ್ ಗೆ ಮಾಡ್ತಿಯಾ ' ಅಂತ  ಕೇಳಿ ದ್ಲು...ನಾ ಹೂ ಅಂದೆ..ಅವಳು ರಾತ್ರಿ ಚಪಾತಿ ಹಿಟ್ಟು ಕಲಿಸಿ ಇಟ್ಟಳು. 

ನವೆಂಬರ್ ನಲ್ಲಿ ಅವಳಿಗೆ ಜಾಬ್ ಆಫರ್ ಸಿಕ್ತು...ಜನವರಿಯಲ್ಲಿ ಜಾಯ್ನ್ ಆಗುವ ಹಾಗೆ. ಶ್ರೀಕಾಂತ್ 'congrats ನಿಂಪಿ' ಅಂದಿದ್ದು ಇನ್ನು ಕೇಳಿದ ಹಾಗೆ ಇದೆ. December ನಲ್ಲಿ ಅವರು ಹೋಗಿ ಬಿಟ್ರು...ನಾವು ಗೋಕರ್ಣ ಕ್ಕೆ ಹೋಗಿ ಬಂದು, ನುಡಿ ನಮನ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಅವಳು ಕೆಲಸಕ್ಕೆ ಸೇರಿದ್ದು ನನಗೆ ಸಮಾಧಾನ ಅನ್ನಿಸ್ತು...attention divert  ಆದ ಹಾಗೆ ಆಯಿತು....ಸ್ವಲ್ಪ ಹೆಚ್ಛೆ emotional ಅವಳು ❤️❤️

ನಾನು ಝುಣಕಾ ಮಾಡುವ ವಿಧಾನ

ಸೊಪ್ಪನ್ನು ಚೆನ್ನಾಗಿ ತೊಳೆದು...ಬುಡದಲ್ಲಿನ ತಾಜಾ ಇರುಳ್ಳಿ ಚಿಕ್ಕದಾಗಿ ಕಟ್ ಮಾಡಿ ಬೇರೆ ಇಡುತ್ತೇನೆ. ಸೊಪ್ಪನ್ನೂ ಕತ್ತರಿಸಿ ಇಡಿ. regular ನೀರುಳ್ಳಿ ಕೂಡ ಕಟ್ ಮಾಡಿ ಇಡಿ. ಸ್ವಲ್ಪ ಕಡಲೆ ಹಿಟ್ಟು ಲೈಟ್ ಆಗಿ ಹುರಿದಿಡಿ.

ಮೊದಲಿಗೆ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿದ ಮೇಲೆ ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ. next ರೇಗುಲರ್ ನೀರುಳ್ಳಿ ಹಾಕಿ ಕೆಂಪ ಗಾಗುವ ತನಕ ಹುರಿಯಿರಿ. ಅರಿಸಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಧನಿಯಾ ಜೀರಾ powder ಬೆರೆಸಿ. ಎರಡು ನಿಮಿಷ ಬಿಟ್ಟು ಇದಕ್ಕೆ ಎಳೆ ನೀರುಳ್ಳಿ ತುಂಡು ಬೆರೆಸಿ. ಎರಡು ನಿಮಿಷ ಆದ ಮೇಲೆ ದಂಟು ಸೇರಿಸಿ....ಅದು ನೀರು ಬಿಡಲು ಆರಂಭ ಆಗುವಾಗ, ಎಷ್ಟು ಬೇಕೋ ಅಷ್ಟು  ಹುರಿದ ಕಡಲೆ ಹಿಟ್ಟು ಬೆರೆಸಿ. ಡ್ರೈ ಆಗುವ ತನಕ ಒಲೆ ಮೇಲಿಡಿ ....

ಅಷ್ಟೇ


spring onion jhunka



February 1, 2026

morning walk @cubbon.park

 ನಿನ್ನೆ ಸಂಜೆ ನಿಹಾ "ಅಮ್ಮ ಸಂಬಳ credit ಆಯ್ತು. ನಾಳೆ ಎಲ್ಲಾದರೂ ವಾಕ್ ಹೋಗಿ, ಬೆಳಗಿನ ತಿಂಡಿ ನನ್ನ treat 'ಅಂದ್ಲು.  ಬೇಜಾರು ಮಾಡೋದು ಬೇಡ ಅಂತ ಹೂಂ ಅಂದೆ. ಲಾಲಬಾಗ್ or ಕಬ್ಬನ್ ಪಾರ್ಕ್ ಅಂತ ಕೇಳಿದ್ಲು....ನಾನು ಸಾಂಕೀ ಟ್ಯಾಂಕ್ ಹೊದ್ರೆ  ಹೇಗೆ ಅಂದೆ...ಅದಕ್ಕೆ ಅಕ್ಕ 'ಅಮ್ಮ ನಾವು ಏಳೋದು ಲೇಟ್ ಆದ್ರೆ??....ಅದು 10 ಗಂಟೆಗೆ ಕ್ಲೋಸ್ ಅಂದ್ಲು... ಕಬ್ಬನ್ ಪಾರ್ಕ್ choose ಮಾಡಿ ಅಲ್ಲಿಗೆ ಹೋದ್ವಿ...

         ನನ್ನ veggie english breakfast. Niha's treat...ಹೊಸ ಕೆಲಸದ ಮೊದಲ ಸಂಬಳ



wizened wise, deep rooted tree that caught mine and nimpi's attention. akka had gone for a run...
                            namma metro




January 31, 2026

Grief / ದುಃಖ / ನೋವು

 every one's experience of grief and coping mechanism is different. it is super draining to listen to comparisions.

The doctor's words still rankle - "you're lucky" Srikanth's condition was diagnosed late after age 60😔. Like, what even is that comparison? We just want our loved ones healthy, period 🙏

And then the bank manager' said 'i can understand madam, my father passed away 2 months ago.... losing a partner is different from losing a father 😤. Comparisons don't help, they just make it worse. 

People often try to relate through their own experiences, but it doesn't diminish the pain 😔. Everyone's grief is unique - losing a partner, kids, or a friend are different kinds of loss. Comparisons don't help. I know people mean well, but sometimes feel like screaming, but it's better to just listen 🙏. 

Now i am apprehensive when people say they want to come meet me...😭😧




January 20, 2026

A month without you



Shock has settled and reality has kicked in

Srikanth was nauseous on the morning of the 8th Dec 2025 and didn't eat much. He slept for a while and couldn't have lunch either, looking weak and faint. Without an appointment, we took him to the doctor. Dr. Sandur examined him, diagnosed gastritis, and suggested medication. He referred us to Dr. Naveen Ganjoo - Liver yransplant surgeon, at Aster RV, saying, "Better go and meet him today itself."

We had to wait quite a bit to meet Dr. Naveen, who said, "I heard about you, Mr. Shenoy, long before your visit to me." He advised Srikanth to get admitted for observation and tests. We waited 45 minutes for a single occupancy ward. Salimath, who accompanied us, asked the administrator for a place for Srikanth to lie down.

As I entered the ward, an unknown fear clutched my heart. I asked Akka if we could go back to Manipal Hospital, but Dr. Sandur had suggested Dr. Naveen since he's a transplant surgeon. Srikanth perked up by evening and had dinner after medication.

A clumsy nurse kept dropping things, and I was exasperated when she dropped an injection vial. She kept making me fetch hot water, mix medicines, and give them to him. She had a terrible cold and cough and lost her voice the next day, whispering loudly at everyone – it was irritating.

The annas took 20-25 minutes to clean him up and change his diaper. He was given a laxative and had loose motions every 5 minutes. I told Srikanth, I'd seen YouTube videos and could clean him and change his diaper, he was amused but did not agree to it , inspite of me saying that  lying in filth wasn't good. They put a tube since he wasn't passing urine and did some tapping. Before tapping, he was left unattended in the corridor in the basement until the bed was free – they could do better with coordination. I was aghast and took pictures; his urinary tube was showing blood.

On Thursday evening, the oximeter didn't show any reading. The night shift nurse panicked, rubbed his fingers, and covered him up. A horde of doctors and nurses came with some equipments. Around 11 pm, they shifted him to ICU for observation. The hospital let me stay in the ward that night.

Each time I visited ICU, there was nobody attending him. He pulled the dialysis tube, and the bed was wet with blood. They said they couldn't change the sheet during dialysis and put restraints – it was heart-rending. A person who spent his life striving for the betterment of rural farmers and the urban poor, begging to free his hands... it broke my heart 😭😭.

Another time, when I was in the washroom, Salimath visited and said blood was spurting like a fountain with nobody attending him. He rushed to the duty doctor for help and was visibly shaken.

 i wonder if there are security cameras inside ICU. No sympathy or empathy just general apathy

The doctor told us to keep his spirits up and visit ICU as much as possible but failed to communicate this to security. I  begged them everytime to let me visit, even for a short while.

Since he couldn't void after three days, they tried more dialysis – nothing worked, and there were internal complications. On the 17th, the doctor said things weren't looking good, and I called my brothers and amma to come to Bengaluru 😧😧😭.

On the 20th, I fought with security and went in, telling Srikanth, "I'm here at the hospital. fighting the security person is tiring, Get well soon, we can go home..." that was my last cinversation with him..albeit one way .There was a 'hand over' process, (doctors change in shift)and I was sent out. at 10.42 I got a call from ICU that he'd suffered a cardiac arrest... everything went numb... he was cold to my touch, and his lips had turned yellow. I hope he didn't suffer much... 😭😭.
at 8 am my msg to my bro..by 10.47 srikanth was no more 😭


my take on the hospital : they are seriously short staffed. could not help but compare the facilities with Manipal Hospital, Kanakapura road. Such efficient , kind hearted Doctors,bstaffs and nurses.

Many stood by us in our grief, helping with hospital discharge paperwork and insurance. Since he wished to donate his body to a medical college, we had help from Narasimha Prasad, Srikanth's friend Dr. Somashekhar's son...

Life has to go on; we have to come to terms with things 🙏🙏.

January 18, 2026

Niha's sketch at NGMA

 


Super excited to share that Niha's sketch is on display at NGMA as part of #bengaluruhabba 2026, from Jan 16th to 25th, 10am-6pm! 🎨 There are art activities for all ages, so do drop by if you're free. Nearest metro: Cubbon Park or Ambedkar Bhavan/Vidhan Soudha 🙏

Niha's sketch

more about the artist and the art 👇👇

https://drawingbengaluru.com/web/2026/01/niharika-shenoy/


January 11, 2026

ಆಶಾ ರಘು

 

ಇತ್ತೀಚೆಗೆ ರಾತ್ರಿ ಎಚ್ಚರವಾಗಿ 'ಛೆ ,ಇವ್ಸ್ರಿಗೆ ಶ್ರೀಕಾಂತ್ ನಿಧನದ ಬಗ್ಗೆ ಹೇಳಿಲ್ಲ' ಅಂತ ಹಲವು ಜನರನ್ನು ನೆನೆಸಿಕೊಳ್ಳುತ್ತೇನೆ. ಅವರ ಸೇಲ್ ಫೋನ್ ಲಿಸ್ಟ್ ನಲ್ಲಿ ಹೆಸರಿಲ್ಲದಿದ್ದರೆ ಅವರನ್ನು ಫೇಸ್ ಬುಕ್ ನಲ್ಲಿ ಹುಡುಕುತ್ತೇನೆ. ನಿನ್ನೆ ಇಬ್ಬರ ನೆನಪಾಗಿ ಶ್ರೀಕಾಂತ್ ಫೇಸ್ ಬುಕ್ ಪೇಜ್ ಒಪೆನ್ ಮಾಡಿದ್ದೇ.. ದೀಪದ ಮಲ್ಲಿ ಯವರು 'ಅಕ್ಕ ಹೊರಟೆ ಬಿಟ್ರು' ಅಂತ ಆಶಾ ಅವರ ಭಾವ ಚಿತ್ರ- ಶ್ರದ್ಧಾಂಜಲಿ ಪೋಸ್ಟ್ ನೋಡಿ, ಕೈ ಕಾಲು ತಣ್ಣಗಾಗಿ ಅಲ್ಲೇ ಇರುವ ಕುರ್ಚಿ ಮೇಲೆ ಕುಸಿದು ಕುಳಿತೆ. ಆತ್ಮಹತ್ಯೆ ಎಂದು ತಿಳಿದು ಹುಷಾರು ತಪ್ಪಿದಂತಾಯ್ತು....ತಕ್ಷಣಕ್ಕೆ ನನಗೆ ನೆನಪಾಗಿದ್ದು ಅವರ ಪುಟ್ಟ ಮಗಳು ಉಪಾಸನಾ. 

ನನಗೂ ಅವರಿಗೂ ವೈಯಕ್ತಿಕ ಪರುಚಯ ಏನಿಲ್ಲ. ಅವರ ನಗು ಮುಖದ ಫೋಟೋಗಳು ನನಗೆ ತುಂಬಾ ಇಷ್ಟವಾಗುತ್ತಿತ್ತು....ಯಾವಾಗಲೂ ಬರಹ ಸಾಹಿತ್ಯ ಅಂತ ಬ್ಯುಸಿ ಆಗಿರೋದು ನೋಡುತ್ತಿದ್ದೆ

ನಾನು ಅವರ  ' ಗತ' ಕಾದಂಬರಿ ಓದಿ ಅದರ ಬಗ್ಗೆ ನಾಲ್ಕು ಸಾಲು ಬರೆದು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಕಿರಿಯ ಮಿತ್ರರು ಅದನ್ನು ಆಶಾ ಜತೆ ಶೇರ್ ಮಾಡಿ ಅವರು ನನ್ನಎಫ್ ಬಿ ಪುಟಕ್ಕೆ ಬಂದು ಧನ್ಯವಾದ ಹೇಳಿದ್ದರು. ಆಮೇಲೆ ನಾನು fb ಗೀಳಾಯಿತು ಅಂತ ಅಲ್ಲಿಂದ ಹೊರ ಬಂದು, ಅಕ್ಕ ಹೇಳಿದ್ದಕ್ಕೆ instagram ಸೇರಿದೆ. ಅಲ್ಲಿ ಆಶಾ ರಘು ಅವರನ್ನು follow ಮಾಡ್ತಿದ್ದೆ. ರಘು ಅವರು ತೀರಿಕೊಂಡಾಗ, ಶ್ರೀಕಾಂತ್ ಮತ್ತು ರಘು ಒಟ್ಟಿಗೆ ಟ್ರೈನ್ ನಲ್ಲಿ.ಪ್ರಯಾಣಿಸಿ, ಪರಿಚಯವಾಗಿದ್ದು, ಅವರ ಮಾತು ಕತೆ, ಶ್ರೀಕಾಂತ್ ಗ್ ರಘು ಅವರ ಮೇಲಿನ ಅಭಿಮಾನ ಎಲ್ಲ ಶೇರ್ ಮಾಡಿದಕ್ಕೆ, 'ಉಪಾಸನಾ' ನನ್ನ ಕಾಮೆಂಟ್ ಗೆ like ಹಾಕಿದ್ದು, ಆ ಚೆಂದದ ಹೆಸರಿನ ಜಾಡು ಹುಡುಕಿ ಹೋದಾಗ ಅವರು ಆಶಾ ರಘು ಮಗಳು ಎಂದು ಗೊತ್ತಾಯಿತು..ಮುದ್ದು ಮುಖದ ಪುಟ್ಟ ಹುಡುಗಿ.
instagram ನಲ್ಲಿ 500 followers... ಕೆಲವರಿಗೆ, ನನಗೆ ಕಿರಿಕಿರಿ ಅನಿಸುವಷ್ಟು ನನ್ನ ಮೇಲೆ ಕಳ ಕಳಿ/ ಕಾಳಜಿ.... ನಾಲ್ಕು ದಿನ ಏನೂ ಪೋಸ್ಟ್ ಮಾಡದಿದ್ದರೆ ಏನು ಎತ್ತ ಅಂತ ಮೆಸೇಜ್ ಗಳು. ಅದಕ್ಕೆ ತೋಟದಲ್ಲಿ ಮನೆ -ನನ್ನ ಇಷ್ಟದಂತೆ  ಕೊಟ್ಟಿಗೆ -ಅಂತ ಕಟ್ಟುವುದು, ಅಲ್ಲೇ settle ಎಂದು ಡಿಸೈಡ್ ಮಾಡಿದಾಗ ತೋಟದ ಕೆಲಸದಲ್ಲಿ ಬ್ಯುಸಿ ಆಗಿರುತ್ತೇನೆ ಅಂತ instagram ನಲ್ಲಿ ಎಲ್ಲರಿಗೂ ವಿದಾಯ ಹೇಳಿ...ಯಾವಾದಕ್ಕೂ ಯು ಟ್ಯೂಬ್ ನಲ್ಲಿ ಇರುತ್ತೇನೆ ಅಂತ ಹೇಳಿ instagram ನಿಂದ ಹೊರ ಬಂದೆ.
ಶ್ರೀಕಾಂತ್ ಗೆ ಅವರ 'ಆವರ್ತ' ಕಾದಂಬರಿ ಇಷ್ಟವಾಗಿತ್ತು. ಆಸ್ಪತ್ರೆಯಲ್ಲಿ ಓದಲು ನಾನು ಅವರು ಸಂಕಲಿಸಿದ 'ನೂತನ ಜಗದ ಬಾಗಿಲು' ತಂದು ಇನ್ನೂ ಓದುತ್ತಾ ಇದ್ದೇನೆ. ಶ್ರೀಕಾಂತ್ ಸಾವಿನ ಜತೆ ಆಶಾ ರಘು ಅವರ ಸಾವು ನನ್ನನ್ನು ತುಂಬಾ ಕಂಗೆಡಿಸಿದೆ
ಈಗ ಮೂವರೂ - ಶ್ರೀಕಾಂತ್, ಎಸ್ ಎಲ್ ಭೈರಪ್ಪ , ಆಶಾ ರಘು ಅಲ್ಲಿ ಮೇಲೆ ಫಿಲ್ಟರ್ ಕಾಪಿಯೊಂದಿಗೆ ಸಾಹಿತ್ಯಿಕ ಚಿಂತನೆಗಳಲ್ಲಿ ತೊಡಕಿಕೊಂಡಿರಲಿ...ಅಲ್ವಾ??!!

January 9, 2026

ತುಪ್ಪದ ಅವಲಕ್ಕಿ - ಧಾರವಾಡ special

 ಹಿಂದಿನ ವಾರ ದೋಸೆ ಹಿಟ್ಟು ಕಡಿಮೆ ಇತ್ತು. ಏನು ಮಾಡೋದು ಅಂತ ತಲೆ ಕೇರೀತಾ....ಒಂದು ಕ್ಷಣ ವಾಪಸ್ ಹೋಗಿ ಮುಸುಕು ಹೊದ್ದು ನಾನಿಲ್ಲ ಅಂದು ಕೊಳ್ಳುವಾ ಅಂತಿದ್ದೆ....ಮೇ ತಿಂಗಳಿಂದ ಬೆಳ್ಳಿಗ್ಗಿನಿಂದ ರಾತ್ರಿ ಹೇಗೆ ಕಳೆಯುತ್ತಿದೆ ಅಂತ ಗೊತ್ತಾಗದಷ್ಟು ಪುರುಸೊತ್ತಿಲ್ಲದ ಜೀವನ...ಬೆಳಿಗ್ಗೆ ಎದ್ದು ತಿಂಡಿ, ಅಡುಗೆ, ಮನೆ ಕೆಲಸ ಅಲಾರಂ ಇಟ್ಟು ಇಡೀ ದಿನ ಔಷಧಗಳನ್ನು ಕೊಡುವುದು...ಇಂತವೇ....ಹಿಂದಿನ ವಾರದ ಬೆಳಿಗ್ಗೆ ಎದ್ದು ಮಾಡುವುದೇನು ಅಂತ ಪರಿಸ್ಥಿತಿ...ಈಗ ನಿಹಾ ಹೊಸ ಜಾಬ್.ಬೆಳಿಗ್ಗೆ. ಬೇಗ ಮನೆ ಬಿಡಬೇಕು...ಬ್ರೆಕ್ಫಾಸ್ಟ್ ಮಾಡಿ ಮಧ್ಯಾಹ್ನದ ಊಟ ಕಟ್ಟಿಕೊಂಡು ಹೋಗುತ್ತಾಳೆ...ಅದಕ್ಕೆ ಪುನಃ ಬೇಗ ಎದ್ದು ತಿಂಡಿ ಊಟ....ಬಹಳಷ್ಟು ಬ್ಯಾಂಕ್, insurance ಮುಂತಾದ ಕೆಲಸ...

ಸರಿ ಆ ದಿನ ತಲೆ ಕೇರಿತಾ ಇದ್ದ ಹಾಗೆ ಈ ತಿಂಡಿ ಮಾಡುವ ಐಡಿಯಾ ಬಂತು. ಶ್ರೀಕಾಂತ್  ಅವರ ಧಾರವಾಡ ಕಾಲೇಜಿನ ದಿನಗಳಲ್ಲಿ ಇಷ್ಟ ಪಟ್ಟು ತಿನ್ನುತ್ತಿದ್ದ ಸಂಜೆ ಸ್ನಾಕ್.



ತುಪ್ಪದ ಅವಲಕ್ಕಿ

ಎಣ್ಣೆ+ತುಪ್ಪ ಬಿಸಿ ಮಾಡಿ...ಸಾಸಿವೆ ಜೀರಿಗೆ ಒಗ್ಗರಣೆ. ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಗೇರು ಬೀಜ , ಕಡಲೆ ಬೀಜ ಕರಿಬೇವು ಸೇರಿಸಿ. ನೀರುಳ್ಳಿ ಕೆಂಪಾದ ನಂತರ... ತೆಳು ಅವಲಕ್ಕಿ, ಉಪ್ಪು, ಸಕ್ಕರೆ ಬೆರೆಸಿ... ಚೆನ್ನಾಗಿ ಕೈಯಾಡಿಸಿ. ಕೊತ್ತಂಬರಿ ಸೊಪ್ಪು ಬೆರೆಸಿ.   ಮೇಲಿಂದ ಕಾಯಿ ತುರಿ add  ಮಾಡಬಹುದು...ಲಿಂಬೆ ರಸ...ಬೇಗ ತಯಾರಾಗುವ ತಿನಿಸು

ತುಪ್ಪದ ಅವಲಕ್ಕಿ



January 6, 2026

ನುಡಿನಮನ...... ಮತ್ತೊಂದಿಷ್ಟು

 


ಆಫಿಸ್ ನವರು ಎಲ್ಲರೂ ಸೇರಿ ತುಂಬಾ ಚೆಂದದ ನುಡಿ ನಮನ ಕಾರ್ಯಕ್ರಮ ನಡೆಸಿದರು. Everyone shared nice things about Srikanth and the lunch had all Srikanth's favorite food items. ಮತ್ತು ಸಾಲಿಮಠ ಕುಟುಂಬದವರು ನಮ್ಮನ್ನು ತಮ್ಮ ಬಳಗದವರ ಹಾಗೆ ಇಷ್ಟೂ ದಿನ ನಮ್ಮನ್ನು ಸಲುಹಿದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು. Salimath has been a pillar of strength- a father figure to us 🙏🙏

Tejaswini Ananthkumar madam spent some time with us and provided solace. 🙏🙏

ಕಾರ್ಯಕ್ರಮ ದ ಯು ಟ್ಯೂಬ್ ವಿಡಿಯೋ ಸಿಕ್ಕ ಮೇಲೆ ಬ್ಲಾಗ್ ನಲ್ಲಿ ಅಳವಡಿಸುತ್ತೇನೆ

ಆ ದಿನ ರಾತ್ರಿ ಕನಸಲ್ಲಿ ಬಂದು ಯಾವುದೋ ವಿಷಯಕ್ಕೆ ನಗುತ್ತಿರೋದು ನೋಡಿದೆ. ಮರುದಿನ ತಮ್ಮನಿಗೆ ಹೇಳಿದೆ. ಅವನು 'ಭಾವಾಜಿ is in a good place ಮಾಲ್ತಿsss 'ಅಂದ.  May be he already got a brand new life.??!!(ಮರುಜನ್ಮ) 🤔🤔

†*****************************************

ಜೋರು ಮಳೆಗಾಲದಲ್ಲಿ ನನ್ನ ಸ್ನೇಹಿತೆ ಸೂಸಿ ಮನೆಯಂಗಳದಲ್ಲಿ ನೀರು ತುಂಬಿದಾಗ ಅಲ್ಲಿ ಒಂದು ಆಮೆ ಬಂದಿತ್ತಂತೆ. ಮಳೆ ನೀರು ಕಡಿಮೆಯಾದ ಮೇಲೆ ಅದು ನಿ ಧಾನಕ್ಕೆ ಅವರ ಮನೆ ಸೇರಿ, ಅಲ್ಲೇ ಬೀಡು ಬಿಟ್ಟಿತು. ಸೂಸಿ ಅದನ್ನು :ಕೂರ್ಮಾ' ಅಂತ ನಾಮಕರಣ ಮಾಡಿದ್ದರು. ಹೆಸರು ಹಿಡಿದು ಕೂಗಿದರೆ ಅದು ನಿಧಾನಕ್ಕೆ ಹೊರಗೆ ಬರುತ್ತಿತ್ತು, ಹೊಸ ಜನರು ಯಾರಾದರೂ ಬಂದರೆ ಕುತ್ತಿಗೆಯನ್ನು ಚಿಪ್ಪೊಳಗೆ ಸೇರಿಸಿ ಹಾಗೆ ಬಹಳ ಹೊತ್ತು ಅಲ್ಲಾಡದೆ ಕೂತಿರುತಿತ್ತು. 

ನನಗೂ ಹಾಗೆ ಚಿಪ್ಪೊಳಗೆ ಹೋಗಿ ಕೂರಬೇಕೆನಿಸಿದೆ. ಯಾರೂ ಜನರು ಬೇಡ ಅನ್ನಿಸುತ್ತಿದೆ. ದೂರ ಹೋಗಿ ಎಲ್ಲಾದರೂ ಒಂಟಿಯಾಗಿರಬೇಕು. ಆದರೆ ಇನ್ನೂ ಬ್ಯಾ0ಕ್ paperwork ಎಲ್ಲ ಕೆಲಸ ನಡೀಬೇಕು. ಇವೆಲ್ಲ ಕೆಲಸ ನನಗೆ ಬೇಕಿರಲಿಲ್ಲ. 

ನಾನು ಸ್ವಭಾವತಃ ಅಂತರ್ಮುಖಿ (introvert). ಬಡಲಾಗಳೂ ಪ್ರಾಮಾನ್8ಕವಾಗಿ ಪ್ರಯತ್ನ ಕೂಡ ಮಾಡಿದ್ದೇನೆ. but i was/am not teally successful. ಶ್ರೀಕಾಂತ್ ಹಲವು ಬಾರಿ ನನನ್ನು anti social ಅಂದಿದ್ದಿದೆ. Now i just want to be keft alone, as is my nature...

ನಿಹಾ ಹೊಸ ಕೆಲಸಕ್ಕೆ ಸೇರಿದಾಳೆ. ಬೆಳಗ್ಗೆ ಬೇಗನೆ ಹೊರಡಬೇಕು. ಆದ್ದರಿಂದ breakfast , ಮಧ್ಯಾಹ್ನದ ಡಬ್ಬಿ - ಊಟದ ತಯಾರಿ. ಆಮೇಲೆ ನನ್ನ ಹೊರಗಿನ ಕೆಲಸಗಳು ನಿನ್ನೆ ಶ್ರೀಕಾಂತ್ ರ ಹಳೆ ಚಪ್ಪಲ್ ಶೂ ಗಳನ್ನೆಲ್ಲ ಹೊರಗೆ  ಇಟ್ಟಿದ್ದೆ. ಇನ್ನು ಬಟ್ಟೆ ಬರೆಗಳ ಸರದಿ. ಫ್ಹೈಲ್ಸ್ sort ಮಾಡೋದು. ಇದರಲ್ಲಿ ವ್ಯಸ್ತವಾಗಿದ್ದೇನೆ. 

ಇವಿಷ್ಟು ನನ್ನ ಸಧ್ಯದ ಜೀವನದ ಅಪ್ಡ್ಡೇಟ್...😧😧

January 1, 2026

2026

 i am still in a daze at the pasing away of Srikanth.


ಮೂರು ಗಂಟೆಗೆ ಎಚ್ಚರ ಆದ್ರೂ ಹಾಗೆ ಮುಸುಕಿನಲ್ಲಿ ಮಲಗಿದ್ದೆ, ಸ್ವಲ್ಪ ಬೆಳಕಾಗ್ಲಿ ಅಂತ!  ಅರೆ! ಆರು ಗಂಟೆಯಾದ್ರೂ ಬೆಳಕೇ ಇರಲಿಲ್ಲ. ನನ್ನ ಸೇಲ್ ಫೋನ್ ಹಾಳಾಗಿದೆಯಾ ಅಂತ ಗೋಡೆ ಗಫಿಯಾರ ಚೆಕ್ ಮಾಡಿದೆ. ಸೂರ್ಯನಿಗೂ ಕೂಡ ಮೋಡದ ಮುಸುಕಿನಿಂದ ಹೊರ ಬರಲು  ಮನಸ್ಸಿರಲಿಲ್ಲವೇನೋ..

ಹಿಂದಿನ ವರ್ಷ ನನ್ನ ನಕ್ಷತ್ರದ ಪ್ರಕಾರ ತುಂಬಾ ಒಳ್ಳೆಯದಿತ್ತೆಂದು ನೋಡಿ ನಾನು ಖುಷಿ ಪಟ್ಟಿದ್ದೆ.(ಅದರಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ಸಹ) ಮೇ ತಿಂಗಳು ಇವರ ಅನಾರೋಗ್ಯ ಪತ್ತೆಯಾಯಿತು. ಡಿಸೆಂಬರ್ ನಲ್ಲಿ ಹೋಗೆ ಬಿಟ್ಟರು.

ಹುಷಾರಾದ ಮೇಲೆ ಅದು ಮಾಡ್ಬೇಕು, ಇದು ಮಾಡಬೇಕೆಂಬ ಅವರ ಆಶಯಗಳು ಉಳಿದೆ ಬಿಟ್ಟವು. ತೋಟದಲ್ಲಿ ಕುಟುಂಬದವರಿಗೆಲ್ಲ ಮನೆ ಕಟ್ಟುವುದು ಅವರ ದೊಡ್ಡ ಪ್ಲ್ಯಾನ್ ಅಗಿತ್ತು. 

ನನಗೆ ಹೆಚ್ಚಿನ ಆಸೆ ಗಳಿರಲಿಲ್ಲ. ಸಣ್ಣದೊಂದು ಮಣ್ಣಿನ ಮನೆ ಮತ್ತು ಒಂದು ಹಸು ಕೊಡಿಸಬೇಕೆಂದು ಹೇಳಿದ್ದಾಗ ನಕ್ಕು ಹೂಂ ಅಂದಿದ್ದರು.

next ಅವರಿಗೆ vietnam ಗೆ ಹೋಗ ಬೇಕೆಂಬ ದೊಡ್ಡ ಆಸೆ ಇತ್ತು. ಅಕ್ಕ ಪ್ಲಾನ್ ಮಾಡು, ಪ್ಲಾನ್ ಮಾಡು ಅಂತಿದ್ದಾಗಲೇ ಹುಷಾರು ತಪ್ಪಿತು.

😭😭