ಓಂ ಶಾಂತಿ ಶಾಂತಿ ಶಾಂತಿಃ.... ಬಿಟ್ಟು ಹೋಯ್ತು 👆👆
ಇವತ್ತು ಶಿವರಾತ್ರಿ. ಉಪವಾಸ ಮಾಡುವಾ ಅಂತಿದ್ದೆ. ಆದರೆ ಏಳುವಾಗಳೇ ಹಸಿವೆ ಅನಿಸ್ತು. ಮುಂಬೈ ಜೀವನ ನೆನಪಾಯ್ತು. ಎಷ್ಟು ಕಟ್ಟುನಿಟ್ಟಾಗಿ ಸಂಕಷ್ಟಿ, ಕೃಷ್ಣಾಷ್ಟಮಿ, ಶಿವರಾತ್ರಿ ಉಪವಾಸ ಮಾಡುತ್ತಿದ್ದೆವು.
ಮೂರು ಜನ ದೊಡ್ಡ ವಾಕ್ ಹೀಗಿ, ಸಿಂಪಲ್ಲಾಗಿ ಒಂದು ಅವಲಕ್ಕಿ ಉಸ್ಲಿ ಮಾಡಿ ತಿಂದೆವು. ನಮ್ಮ engagement ಆದ ದಿನ ಇವತ್ತು. ಹಳೆ ಕೆಲ ವಿಷಯಗಳು ನೆನಪಾಗಿ ನಗೆ ಬಂತು.
ಶ್ರೀಕಾಂತ್ ತಂದೆ ತಾಯಿಗೆ ವಯಸ್ಸಾಗಿತ್ತು, ಮಾತ್ರವಲ್ಲ ಅವರ ತಾಯಿಯವರಿಗೆ ಕಿವಿ ಕಣ್ಣು ಮಂದವಾಗಿದ್ದವು. ನಾವೇ ಮುಂಬೈ ನಿಂದ ಬೆಂಗಳೂರು, ಅಲ್ಲಿಂದ ಶಿವಮೊಗ್ಗ ಮತ್ತು ಅಲ್ಲಿಂದ ತೀರ್ಥಹಳ್ಳಿ ಗೆ ಬಂದೆವು...ಆವಾಗಿನ (1987)ದಿನಗಳಲ್ಲಿ ಇದು strange event ಅಂತ ಹೇಳಬಹುದು.
ತುಂಬಾ strict ಆಗಿ ಬೆಳೆಸಿದ ನನಗೆ, ಶ್ರೀಕಾಂತ್ ನನಗೊಬ್ಬಳನ್ನೇ ಅವರ ಜತೆ ಮಾತುಕತೆ ಆಡಲು, ತೀರ್ಥಹಳ್ಳಿಯಲ್ಲ, ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗುತ್ತೇನೆ ' ಅಂದಾಗ , ಅಪ್ಪ ಅಮ್ಮ ಬೇಡ ಅನ್ನಬಹುದು ಅಂತ ಧೈರ್ಯವಾಗಿದ್ಫೆ...ಆದರೆ ಎಲ್ಲ ಉಲ್ಟಾ ಆಯಿತು. ಅಪ್ಪ, ಮತ್ತು ಮಾವನವರು permisson ಕೊಟ್ಟೆ ಬಿಡುವುದಾ?? ನನಗಿನ್ನೂ ನನ್ನ ಪಿಂಕ್ ಚೂಡಿದಾರ್ ಹಾಕೊಂಡು ಹೋಗಿದ್ದು ನೆನಪಿದೆ...ಶಿವಮೊಗ್ಗದಲ್ಲಿ ಅವರ ಎಲ್ಲ ಪ್ರಶ್ನೆಗೆ ನಾನು 'ಹೌದು' 'ಅಲ್ಲ' ಅಂತಷ್ಟೇ ತಲೆಯಾಡಿಸಿದ್ಫು...ಒಂದೂ ಮಾತಿಲ್ಲ... ಶ್ರೀಕಾಂತ್ ನನಗೆ 'ನೀನು ಬಾಂಬೆ (bombay) ಹುಡಿಗಿ ಹೌದಾ ಅಂತ ನಿರಾಸೆಯಿಂದ ಕೇಳಿ...ಪ್ರತೀ ವರ್ಷ ಮಕ್ಕಳಿಗೆ ಈ ಕತೆ ಕೇಳುವ ಫಜೀತಿ... ಆ ದಿನ ಸಂಜೆ ಮನೆಯ ಹಿರೀಕರ ಎದುರಿಗೆ ಉಂಗುರ ಸಿಹಿ ಹಂಚಿ ನಮ್ಮದೊಂದು engagement ಎನ್ನುವಲ್ಲಿಗೆ....
ಹೀಗೆ ಮಧ್ಯದಲ್ಲಿ ಬಿಟ್ಟು ಹೋಗ್ತಾರೆ ಅಂತ ಅನ್ನಿಸಿರಲಿಲ್ಲ. anyways we have lots of good/fun memories to recall ಅನ್ನುತ್ತಾ.......🙏🙂

Memories blooming in the garden cultivated yesterday always inspires to lead the life on!
ReplyDelete🙏🙏 you are so right 😏
ReplyDelete