December 18, 2024

ಚಿಬ್ಬಲು ಗುಡ್ಡೆ ಎಂಬ ಸುಂದರ ತಾಣ


 ತುಂಗೆಯ ತೀರದಲ್ಲಿದೆ ಈ ಸಿದ್ದೀವಿನಾಯಕ ದೇವಸ್ಥಾನ. ನಮ್ಮ ಮನೆಯಿಂದ ಗಾಡಿಯಲ್ಲಿ 5 ನಿಮಿಷದ ಪ್ರಯಾಣ.

ನೀರಿನಲ್ಲಿರುವ ಮೀನುಗಳಿಗೆ...ದೇವಸ್ಥಾನಕ್ಕೆ ತಾಗಿದಂತೆಯೇ ಇರುವ ಅಂಗಡಿಯಲ್ಲಿ ಚುರುಮುರಿ ಕೊಂಡು ಒಯ್ಯಬೇಕು. ಅಂಗಡಿಯಲ್ಲಿರುವ ಹುಡುಗಿ ಶ್ರೀಕಾಂತ್ ನನ್ನು ನೋಡಿ...'ನೀವು ಬಾಲಕೃಷ್ಣ ಶೆಣೈ ಅವರ ಮಗನಾ? ಅವರದ್ದೇ ಪಡಿಯಚ್ಚು' ಅಂತ ಹೇಳಿದಳು...'ನಿಮ್ಮ ಅಂಗಡಿಯಲ್ಲಿ ಸಿಗದಿದ್ದ ವಸ್ತು ಇರಲಿಲ್ಲ' ಅಂತ ಕೂಡ ಸೇರಿಸಿದಳು 😁

ದೇವರಿಗೆ ನಮಸ್ಕರಿಸಿ, ಮೀನಿದ್ದಲ್ಲಿಗೆ ಹೋದೆವು , ಆಗಲೇ ಕತ್ತಲೆಯಾಗಿತ್ತು. ಅಲ್ಲಿದ್ದ ಮೂವರು ಮಂಡಕ್ಕಿ ಹಾಕಿದ್ದರಿಂದ ಮೀನು ಗಳು ದುಬ ದುಬ ಮೇಲೆ ಕೆಳಗೆ ಹೋಗುವ ಸಡ್ಡು ಕೇಳಿಸುತ್ತಿತ್ತು ವಿನಃ ಕಣ್ಣಿಗೆ  ಕಾಣಲಿಲ್ಲ..ಆಗಲೇ ಕತ್ತಲೆ ಯಾಗಿತ್ತು. 

ಚಿಬ್ಬಲು / ಚಿಬ್ಲು ಅ0ದ್ರೆ ಬಹುಷ್ಯ ಸಿಡುಬು , ಯಾವುದೇ ಗುಣವಾಗದ ಚರ್ಮ ರೋಗವಿದ್ದಲ್ಲಿ, ದೇವರಿಗೆ ಹಣ್ಣು, ಮೀನುಗಳಿಗೆ ಮಂಡಕ್ಕಿ ಅರ್ಪಿಸಿದರೆ ಕಾಯಿಲೆ ಗುಣವಾಗುತ್ತದೆ ಎಂಬ ಪ್ರತೀತಿ...ದೇವರ ವಿಗ್ರಹದ ಮೇಲಿನ electronic scroll ಮೇಲೆ ಓದಿದೆ... ಹಾಗೆಯೇ ನಾಳೆ 18.12.2024  ಸಂಕಷ್ಟಿ ಅಂತ ಕೂಡ ಬಂತು. ಸೂರ್ಯಾಸ್ತ ಸಿಗಲಿಲ್ಲ ಅಂತ ಸ್ವಲ್ಪ ಬೇಜಾರಾಯ್ತು. ಇನ್ನೆರಡು ದಿನದಲ್ಲಿ ಸೂರ್ಯೋದಯ ನೋಡುವ ಆಸೆ. ಹೋದ್ರೆ ಖಂಡಿತ ಶೇರ್ ಮಾಡುವೆ 😁❤️🙏








No comments:

Post a Comment