ನಿಹಾ ಗೆ ಮೈಸೂರಿಗೆ ಡ್ರಾಪ್ ಮಾಡಲು ಹೋಗಲಿಕ್ಕಿತ್ತು. ದೀಪಾವಳಿಗೆ ನಾಲ್ಕು ದಿನ ಮನೆಗೆ ಬಂದಿದ್ದಳು. ನಾಲ್ಕು ಜನ ಸೇರಿ ದೀಪಾವಳಿ ಆಚರಿಸಿದ್ವಿ. ಎರಡು ಮೂರು ವರ್ಷ ಅವಳು ಭೋಪಾಲ್ ನಲ್ಲಿದ್ದಳು. ಈ ಸಲ ಶಾಪಿಂಗ್, ತಿಂಡಿ ತಿನಿಸು ಅಂತ ಗಮ್ಮತ್ತು ಮಾಡಿದ್ವಿ.
ಬೆಳಿಗ್ಗೆ ಬೇಗ ಹೋಗಿ, ಸ್ವಲ್ಪ ಸಮಯ ವಿರಮಿಸಿ ನಂತರ ಕೆ ಆರ್ ಎಸ್ ಕಡೆ ಹೋಗುವುದೆಂದಾಯಿತು. ಮೋಡದ ವಾತಾವರಣ ಇದ್ದುದರಿಂದ ನಮ್ಮ ದೇವಸ್ಥಾನದ ಟ್ರಿಪ್ ಚೆನ್ನಾಗಾಯಿತು.
khoday'ಸ್ ನವರು ನೀರಿನಲ್ಲಿ ಮುಳುಗಿದ್ದ ದೇವಾಲಯವನ್ನು ಪುನರುಜ್ಜೀವನಗಳಿಸಿದ್ದಾರೆ. ಫೋನ್ switch ಆಫ್ ಮಾಡಿ ಮತ್ತು ದಕ್ಷಿಣೆ ಹಾಕಬಾರದೆಂದು... ಸೆಕ್ಯುರಿಟಿ ಅವರು ಬಾರಿ ಬಾರಿ ಎಚ್ಚರಿಸುತ್ತಾರೆ. ತುಂಬಾ ನೆ ಚೆನ್ನಾಗಿದೆ ದೇವಸ್ಥಾನ. ಒಳ್ಳೆ vibes ಇದೆ. ಇನ್ನೊಮ್ಮೆ ಶ್ರೀಕಾಂತ್ ಜತೆ ಹೋಗಬೇಕು.
ನಾವು ಮೂವರು ತುಂಬಾ ಎಂಜಾಯ್ ಮಾಡಿದೆವು. 🙂🙂❤️
ಅಲ್ಲೇ ಬಳಿಯಿದ್ದ ಕೂಲ್ point ಗೆ ಹೋಗಿ ಗೋಲಿ ಸೋಡಾ ಕುಡಿದ್ವಿ 😁. ಹಸಿರು ತೋಟ(ರಾಗಿ) , ನೀರು ಇರುವ ಬಳಿ ಕೆಲವು ಕುರ್ಚಿ ಮೇಜು ಇಟ್ಟಿದ್ದಾರೆ. ಅಲ್ಲಿನ ಬಾತು ಕೋಳಿಗಳ ಜತೆ ಒಡನಾಡುತ್ತ ಸ್ವಲ್ಪ ಸಮಯ ಕಳೆದ್ವಿ. ಈ ಚಿತ್ರಗಳು ಅಜಯ್ ಬಿ ತೆಗೆದದ್ದು 👍🙏
a day well spent..ಹೋಗುವಾಗ ಎರಡು ಗಂಟೆಯಲ್ಲಿ ಮೈಸೂರು ತಲುಪಿದ್ವಿ. ವಾಪಸ್ ಬರುವಾಗ ಬಿಡದಿಯಿಂದ ಟ್ರಾಫಿಕ್ ನಲ್ಲಿ ಸಿಲುಕಿ..ಮೂರುವರೆ ತಾಸು ಬೇಕಾಯಿತು ಮನೆ ತಲುಪಲು. ರಜೆ ಮುಗಿಸಿ ಊರಿಗೆ ಹೋದವರು ವಾಪಸ್ ಬರುವ ಕಾರಣ ಅಂದುಕೊಂಡ್ವಿ
ಒಟ್ಟಿನಲ್ಲಿ ಒಂದು ಒಳ್ಳೆಯ ದೀಪಾವಳಿ ❤️❤️😁👍🙏


















Nice blog
ReplyDelete