ದಿನಾ ಬೆಳಿಗ್ಗೆ ನಾನು ೪ ಗಂಟೆಗೆ ಏಳುತ್ತೇನೆ, ಸ್ವಲ್ಪ ಬ್ರೇಕ್ಫಾಸ್ಟ್ ಮತ್ತು ಮಧ್ಯಾಹ್ನದ ಅಡುಗೆಗೆ ತಯಾರಿ ನಡೆಸಿ, ೫ ಗಂಟೆಗೆ ವಾಕ್ ಹೊರಡುತ್ತೇನೆ. ನಮ್ಮ ಮನೆಯ ಬಳಿಯ ಪಾರ್ಕ್ ಏನೋ ನಾಲಕ್ಕು ಗಂಟೆಗೆ ಓಪನ್ ಮಾಡುತ್ತಾರೆ, ಆದರೆ ನನಗೆ ಹೆದರಿಕೆ. ೪.೪೫ ಗೆ ಆನಂದ ಭವನದಲ್ಲಿ ಚಟುವಟಿಕೆ ಆರಂಭ. ಆದ್ದರಿಂದ ಅವರು ಅವರ ಹಿಂದುಗಡೆಯ ಬಾಗಿಲಿಗೆ ಲೈಟ್ ಹಾಕ್ತಾರೆ. ಬೀದಿಯಲ್ಲಿ ಬೆಳಕು ಬೀಳುತ್ತೆ. ಆಗ ನಾನು ಹೊರಡುತ್ತೇನೆ. ಆನಂದ ಭವನ ದಾಟುವಾಗ ಘಂ ಎನ್ನುವ ಸಾಂಬಾರ ಪರಿಮಳಕ್ಕೆ ನನ್ನ ಹೊಟ್ಟೆಯಲ್ಲಿ ತಾಳ ಮದ್ದಲೆ ಶುರು. ನನಗೆ ಹಸಿವೆ ಯಾವತ್ತೂ ಬೇಗ ನೆ ಆಗುತೆ. ಅದಕ್ಕೆ ಶುಗರ್ ಎಲ್ಲಾ ಟೆಸ್ಟ್ ಆಯ್ತು. ಏನೂ ಇಲ್ಲ. ಡಾಕ್ಟರ್ ಬಳಿ ಹೇಳಿದ್ರೆ ಅವರು ನಕ್ಕು ಹಸಿವೆಯಾರೆ ತಿನ್ನಿ ಮೇಡಂ ಅಂತಾರೆ :-)
ನಮ್ಮ ಮನೆಯ ಬಳಿ ಹಲವಾರು ಪಾರ್ಕ್ ಗಳಿದ್ದಾವೆ. ಮಾಳವಿಕಾ ಬರುವುದಾದರೆ ಎಕ್ಸರ್ ಮಿಶಿನ್ ಇರುವ ಪಾರ್ಕ್ ಗೆ ಹೋಗ್ತೇವೆ. ಕೆಲವೊಮ್ಮೆ ಅವಳ ಬಿಸ್ಕೂಟ್ ಫ್ಯಾಕ್ಟರಿ ಬೆಳಿಗ್ಗೆನೆ ಶುರು ಆಗುತ್ತೆ. ಆಗ ನನೊಬ್ಬಳೆ ಸಾದಾ ಪಾರ್ಕ್ ಗೆ ಹೋಗುತ್ತೇನೆ. ಬೆಸ್ಕಾಂ ಪಾರ್ಕ್ ವಾಕ್ ಹೋಗಲು ಚೆನ್ನಾಗಿರುತ್ತವೆ. ಬೆಳಿಗ್ಗೆ ಒಂದಷ್ಟು ಟೈಮ್ ತೆರೆದಿರುತ್ತದೆ. ಆಮೇಲೆ ಬೀಗ ಹಾಕಿ ಆವರಣದಲ್ಲಿರುವ ಮಾಲಿ ಕುಟುಂಬ ಪಾರ್ಕ್ ಕ್ಲೀನ್ ಆಗಿಡುವುದರಲಿ ಶ್ರಮಿಸುತ್ತಾರೆ.
ನಮ್ಮ ಮನೆಯ ಬಳಿ ಹಲವಾರು ಪಾರ್ಕ್ ಗಳಿದ್ದಾವೆ. ಮಾಳವಿಕಾ ಬರುವುದಾದರೆ ಎಕ್ಸರ್ ಮಿಶಿನ್ ಇರುವ ಪಾರ್ಕ್ ಗೆ ಹೋಗ್ತೇವೆ. ಕೆಲವೊಮ್ಮೆ ಅವಳ ಬಿಸ್ಕೂಟ್ ಫ್ಯಾಕ್ಟರಿ ಬೆಳಿಗ್ಗೆನೆ ಶುರು ಆಗುತ್ತೆ. ಆಗ ನನೊಬ್ಬಳೆ ಸಾದಾ ಪಾರ್ಕ್ ಗೆ ಹೋಗುತ್ತೇನೆ. ಬೆಸ್ಕಾಂ ಪಾರ್ಕ್ ವಾಕ್ ಹೋಗಲು ಚೆನ್ನಾಗಿರುತ್ತವೆ. ಬೆಳಿಗ್ಗೆ ಒಂದಷ್ಟು ಟೈಮ್ ತೆರೆದಿರುತ್ತದೆ. ಆಮೇಲೆ ಬೀಗ ಹಾಕಿ ಆವರಣದಲ್ಲಿರುವ ಮಾಲಿ ಕುಟುಂಬ ಪಾರ್ಕ್ ಕ್ಲೀನ್ ಆಗಿಡುವುದರಲಿ ಶ್ರಮಿಸುತ್ತಾರೆ.
ರಾತ್ರಿ ಇಡಿ ಸೆಕೆಯಾದ್ರೂ ಬೆಳಗ್ಗೆ ಪಾರ್ಕ್ ನಲ್ಲಿ ಸ್ವಲ್ಪ ಹಿತವಾದ ವಾತಾಅರಣ. ಸಣ್ಣಕ್ಕೆ ಗಾಳಿ ಬಂದರೂ ಹೊಂಗೆ ಮರದಿಂದ ಹಿಮ ಬೀಳುವ ಮಾದರಿಯಲ್ಲಿ ಕೆಳಗೆ ಬೀಳುವ ಹೊಂಗೆ ಮರದ ಹೂ ಹಾಗೂ ಹೂ ಗಳಿಂದ ಏರ್ಪಡುವ ನೆಲಹಾಸು.
ರಾತ್ರಿ ಎಅರಡು ಗಮ್ತೆಯಿಂದಲೇ ಎಚ್ಚರ. ಬಾಲಕನಿಗೆ ಬಂತು ಹೋಳಿ ಹುಣ್ಣಿಮೆಯ ಚಂದ್ರನಿಗೊಂದು ಹಾಯ್ ಹೇಳಿ, ಸ್ವಲ ಹೊತ್ತು ಫೆಸ್ ಬುಕ್ ನಲ್ಲಿ ಸಂಚರಿಸಿದೆ. ಇವತ್ತು ಶ್ರೀಕಾಂತ ಕೂಡ ಬೇಗನೆ ಎದ್ದಿದ್ದರಿಂದ ಮಡಿವಾಳ ಕೆರೆ ಬಳಿ ವಾಕ್ ಹೋಗುವ ಪ್ರಸ್ತಾವನೆ ಇಟ್ಟರು. ಮಕ್ಕಳಿಗೆ ಎಬ್ಬಿಸಿ ಬರುತ್ತೀರಾ ಅಂತ ಕೇಳಿದೆ. ಅವರೂ ಹೂಂ ಅಂತ ಹೊರಟರು. ಕತ್ತಲೆ ರಸ್ತೆ. ನಿಧಾನವಾಗಿ ಸಾಗ ಬೇಕಾಯಿತು. ಅಲ್ಲಲ್ಲಿ ಹೊಂಡ, ಕನ್ಸ್ಟ್ರಕ್ಷನ್ ಸಾಮಾನುಗಳು , ನೀರು ಬಿದ್ದು ಕೊಚ್ಚೆ ಎದ್ದ ರಸ್ತೆ, ಮತ್ತು ದೀಪಗಳಿಲ್ಲದ ರಸ್ತೆ.
೫೩೦ ಗೆ ನಾವು ಲೇಕ್ ಬಳಿ ಇದ್ವಿ. ನಾಲ್ಕೈದೆ ಜನ. ಸಣ್ಣ್ ಕುಳಿರ್ಗಾಳಿ. ವಾಕ್ ಮುಗಿಸಿ ಬೆಳಗಾಗುವುದನ್ನು ನೋಡಿದೆವು. ತರಹೇವಾರಿ ಹಕ್ಕಿಗಳು, ತಣ್ಣಗೆ ಕುಳಿತಿರುವ ನಾಯಿಗಳು, ಆಗಲೇ ತೆಪ್ಪದಲ್ಲಿ ಮೀನು ಹಿಡಿಯುವವರು, ಒಂದಿಬ್ಬರು ಗಾಳ ಹಾಕಿಕೊಂಡು ಕೂತಿದ್ದರು. ನೀರ ಮೇಲೆ ಗಾಳಿಯ ಸಂಚಲನದಿಂದ ಹುಟ್ಟಿದ ತೆರೆಗಳು, ನಿಹಾ ಮಾಳವಿಕಾ ರ ಚೇಷ್ಟೆಯಿಂದ ನಮ್ಮಲ್ಲಿ ಎದ್ದ ನಗು...... ಹೀಗೆ ಎಷ್ಟು ಚೆಂದದ ಬೆಳಗಿನ ವಾಕ್.
ಹಾಗೆ ಇವತ್ತು ಹೋಳಿ ಹಬ್ಬ. ಹೋಳಿ ಹಬ್ಬ ಕ್ಕೆ ಬಿಸ್ಕೂಟ್ ಫ್ಯಾಕ್ಟರಿಯಿಂದ ಹೋದ ಕೇಕ್. ಥಂಡಾಯ್ ಕೇಕ್ , ಅವರಿಗೆ ಕೃತಕ ಬಣ್ಣ ಬೇಡ ಎಂದು ಈ ತರಹ ಗುಲಾಬಿ ಪಕಳೆಗಳಿಂದ ಅಲಂಕಾರ.
ಇದೂ ಥಂಡೈ ಕೇಕ್. ಕಲಯಂಟ್ಸ್ ಗೆ ಹೀಗೆ ಬೇಕಿತ್ತು . ಅವರು ಪ್ರಜಾವಾಣಿ ಪತ್ರಿಕೆಯ ಓದುಗರು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಬರಹಗಾರರು.
ಇನ್ನಷ್ಟು ಚೆಂದದ ಕೇಕ್ ಗಳನ್ನು ನೋಡಲು ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ.
:-)




No comments:
Post a Comment