June 29, 2014

ನಿಹಾ ಮಣಿ

ಈ ತಿಂಗಳ ಮೊದಲಿಗೆ ನಿಹಾ ಜತೆ ಅವಳ ಕಾಲೇಜ್ ಗೆ ಅವಳ ಸೈಕೊಲೊಜಿ ಪ್ರಾಕ್ಟಿಕಲ್ಸ್ ಗೆ ಸಬ್ಜೆಕ್ಟ್ ಆಗಿ ಹೋಗಿದ್ದೆ. ಈ ಸಲ ಅಕ್ಕನನ್ನು ಕರಕೊಂಡು ಹೋಗು ಅಂದ್ರೆ, ಇಲ್ಲ ಅಮ್ಮ ಯು ಆರ್ ಲಕ್ಕಿ ಫಾರ್ ಮಿ ಅಂತ ಪ್ಹುಸಲಾಯಿಸಿ ಕರಕೊಂಡು ಹೋದ್ಲು. ಅವಳ ಕೊನೆಯ ವರ್ಷ ಈ ಕಾಲೇಜ್ ನಲ್ಲಿ ಅದಕ್ಕೆ ನಾನು ಸುಮ್ಮನೆ ಹೋದೆ. 
ಕಾಲೇಜ್ ತಲುಪಿದ ತಕ್ಷಣ ಬೆಲ್ಲಕ್ಕೆ ಇರುವೆ ಮುತ್ತಿದ ಹಾಗೆ ಅವಳ ಕ್ಲಾಸ್ಮೇಟ್ಸ್ ಅವಳನ್ನು ಸುತ್ತುವರೆಯುವುದನ್ನು ನೋಡೋದೆ ಒಂದು  ಸಡಗರ ನನಗೆ. 'ನಿಯಾರಿಕ (ನಿಹಾರಿಕಾ) ಕ್ಯಾನ್ ಯು ಪ್ಲೀಸ್ ಹೆಲ್ಪ್ ಮಿ ವಿತ್ ದಿಸ್ ? ಅಂತ ಕೇಳೋವ್ರು ಎಷ್ಟೋ ಫ್ರೆಂಡ್ಸ್. ಅವಳ ಉತ್ತರ , ;Actually it is very easy ಅಂತ ಶುರು ಮಾಡಿ ನಿಧಾನಕ್ಕೆ ಅವರಿಗೆ ಅರ್ಥವಾಗುವಂತೆ explain ಮಾಡ್ತಾಳೆ. ಅವಳು ಟೀಚರ್ ಆಗಲಿ ಅಂತ ನನಗೆ ಅನಿಸಿ, ಹಾಗೇ ಹೇಳಿದ್ದೇನೆ ಕೂಡ. ಆದರೆ ಅವಳು I have no patience to teach, iam a one to one person ಅಂತ ಹೇಳಿ ನಗುತ್ತಾಳೆ. 
ಅವಳನ್ನು ಸ್ನೇಹಿತರು ಸುತ್ತುವರೆದಾಗ ನನಗೆ ನನ್ನ ಶಾಲಾ ಜೀವನದ ನೆನಪಾಗುತ್ತದೆ. ಯಾರಾದರೂ ಮಾತಾಡಿಸಿಯಾರೆಂದು ನಾನು ಬಗ್ಗಿಸಿದ ತಲೆ ಕ್ಲಾಸ್ ತಲುಪಿದ ಮೇಲೆಯೇ ಎತ್ತುತಿದ್ದುದು. ಟೀಚರ್ ಏನಾದರೂ ಪ್ರಶ್ನೆ ಕೇಳಿದ್ದಲ್ಲಿ ನನಗೆ ಉತ್ತರ ಗೊತ್ತಿದ್ದರೂ ನಾನು ಯಾವತ್ತು ಕೈ ಎತ್ತಿ ಉತ್ತರ ಗೊತ್ತುಂಟು ಅಂತ ಅಂದಿದಿಲ್ಲ. ನನಗೆ ಯಾವಾಗಲು ಒಂದು ಹೆದರಿಕೆ ಇರ್ತಿತ್ತು. ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ, ಕ್ಲಾಸ್ ನ ಮಕ್ಕಳೆಲ್ಲ ನಾನು ಮಹಾ ಜಾಣೆ ಅಂತ ತಪ್ಪು ತಿಳಿದುಕೊಂಡು ನನ್ನ ನೋಟ್ ಬುಕ್ ಯಾರಾದರೂ ಪರೀಕ್ಷೆ ಸಮಯದಲ್ಲಿ ನನ್ನ ಬಳಿ ಪಡಕೊಂಡು ಅದನ್ನು ನನಗೆ ವಾಪಸ್ ಮರಳಿಸಲಿಕ್ಕೆ ಇಲ್ಲ ಅಂತ. (ಹೀಗಾಗಿದ್ದು ಯಾರೋ ನಾನು ಚಿಕ್ಕವಳಿದ್ದಾಗ ಮಾತಾಡ್ತಾ ಇದಾಗ ಕೇಳಿಸಿಕೊಂಡಿದ್ದು) ಒಂದ್ಸಲ ಹೀಗೆ ಅಂಬಿಕಾ ಕುಟ್ಟಿ ಟೀಚರ್ ಮ್ಯಾಥ್ಸ್ ಪಾಠ ಹೇಳಿಕೊಡ್ತಾ ಅದರ ಹಿಂದಿನ ದಿನ ನಮಗೆ trigonometry fucntion ಬಗ್ಗೆ ಹೇಳಿಕೊಟ್ಟಿದ್ದರು . ಯಾರಿಗೆ ಗೊತ್ತು ಅಂತ ಕೇಳಿದರು . ನನಗೆ ಗೊತ್ತಿತ್ತು ಆದರೂ ಗುಮ್ಮನ ಗುಸ್ಕನ ತರಹ ಸುಮ್ಮನಿದ್ದೆ. ಕೊನೆಗೆ ಟೀಚರ್ ಒಬ್ಬೊಬ್ಬರನ್ನೇ ನಿಲ್ಲಿಸಿ ಕೇಳುತ್ತಾ ಹೋದರು. ಹೆಚ್ಚಿನ ಹುಡುಗ ಹುಡುಗಿಯರು ಉತ್ತರ ಗೊತ್ತಿಲ್ಲ ಎಂದರು, ಕೆಲವರು ತಪ್ಪು ಉತ್ತರ ನೀಡಿದರು. ನನ್ನ ಸರದಿ ಬಂದಾಗ ನನಗೆ ಗೊತ್ತಿರುವ ಉತ್ತರ ಹೇಳಿದೆ. ಟೀಚರ್ ಅದು ಸರಿಯೋ ತಪ್ಪೋ ಅಂತ ತಿಳಿಸದೇ ಮುಂದಿನ ಬೆಂಚ್ ನವರಿಗೆಲ್ಲ ಪ್ರಶ್ನೆ ಕೇಳುತ್ತ ಹೋದರು. ಇಡೀ ಕ್ಲಾಸ್ ನ ಮಕ್ಕಳಿಗೆಲ್ಲ ಕೇಳಿ ಆಯ್ತು. ಆಮೇಲೆ ಓನ್ಲಿ ಮಾಲತಿ ಪೈ ವಿಲ್ ರಿಮೈನ್ ಇನ್ ದಿ ಕ್ಲಾಸ್ ರೆಸ್ಟ್ ಆಫ್ ಯು ಗೆಟ್ ಔಟ್ ಅಂತ ಹೇಳಿದರು. ಇಡೀ ಕ್ಲಾಸ್ ಖಾಲಿ ನಾನೊಬ್ಬಳೆ ಒಳಗೆ. ಟೀಚರ್ ನನಗೆ sarcastically ಮೇಡಂ ಜೀ ಉತರ ಗೊತ್ತಿತ್ತಲ್ಲವೇ, ಯಾಕೆ ಕೈ ಎತ್ತಲಿಲ್ಲ? ನಾನಾಗಿ ಕೇಳಬೇಕಿತ್ತೆ ಅಂತ ಬೈದು ಬಿಟ್ಟರು. ಅದ್ಯಾಕೋ ನನಗೆ ಯಾರನ್ನಾದ್ರೂ ಹಚ್ಚಿಕೊಳ್ಳೋದರಲ್ಲಿ ಒಂದು ತರಹ ಎಲರ್ಜಿ. ಈಗಲೂ. ಶ್ರೀಕಾಂತ ಎಷ್ಟೊಂದು ಜನರನ್ನು ನನಗೆ ಪರಿಚಯಿಸುತ್ತಾರೆ. ನಾನು ಆ ಕ್ಷಣಕ್ಕೆ ಹಲ್ಲೋ, ಹಾಯ್ ಅಂದು ಮರೆತು ಬಿಡುತ್ತೇನೆ. ಆಮೇಲೆ ಅವರು ಎಂದಾದರೊಂದು ನನಗೆ ಸಿಕ್ಕಿ ಮಾತನಾಡಿಸಿದರೆ ನಾನು ತಬ್ಬಿಬ್ಬು.
ಮಾಲವಿಕ ನನ್ನ ಹಾಗೆ ಸ್ವಲ್ಪ. ನಿಹಾ ಕಮ್ಪ್ಲೀಟ್ ಬೇರೆ. ತುಂಬಾ ಸೋಷಲ್ ನೇಚರ್. ಶ್ರೀಕಾಂತ ತರಹ ಅನ್ನಬಹುದು. 
ನಿಹಾ ಳ ರಿಸಲ್ಟ್ ಬಂದಿದೆ. ಪುನ: ಅವಳು ಒಳ್ಳೆ ಮರ್ಕ್ಸ್ ತೆಗೊಂಡು ಪಾಸ್ ಆಗಿದ್ದಾಳೆ . ಒಂದು ವರ್ಷ ಸ್ಟಡಿ ಗ್ಯಾಪ್ ತೆಗೊಂಡು ಆರ್ಟ್ ಫೋಟೋಗ್ರಾಫಿ ಬಗ್ಗೆ explore ಮಾಡುತ್ತಾಳಂತೆ. ನನಗೆ ಖುಶಿ. ಆಗಲೇ ಕೆಲವು ಫ್ರೀ lance ಕೆಲಸ ಮಾಡಿ ಸ್ವಲ್ಪ ದುಡ್ಡು ಮಾಡಿದ್ದಾಳೆ. 
ಅವಳಿಗೊಂದು ಗುಡ್ ಲಕ್. ಸುಮ್ನೆ ಶೇರ್ ಮಾಡುವ ಮನಸ್ಸಾಯ್ತು ಅಷ್ಟೆ.
ಮಗಳು ಅಪೂರ್ವಳ ಮದುವೆ ಚೆನ್ನಾಗಿ ನಡೆಯಿತು. ಆ ಗಡಿಬಿಡಿಯಲ್ಲಿದ್ದದ್ದರಿಂದ ಬ್ಲಾಗ್ ಅಪ್ಡೇಟ್ ಸ್ವಲ್ಪ ಸ್ಲೋ ಆಯ್ತು. ಇಲ್ಲಿದೆ ನಿಹಾ ಕ್ಲಿಕ್ ಮಾಡಿದ ಫೋಟೊಗಳು........
Some private moments at Apoorva's wedding

June 20, 2014

out of this world- 1

ಹಿಂದಿನ ವರ್ಷ ಜೂನ್ ನಲ್ಲಿ ನಡೆದದ್ದು. ಸಣ್ಣಕ್ಕೆ ಮಳೆ ಹನೀತಾ ಇತ್ತು. ಶ್ರಿಕಾಂತ 'ಇವತ್ತು ವಾಕ್ ಹೋಗಿದ್ದ್ಯೇನೆ?' ಅಂತ ಕೇಳಿದರು. ನಾನು ಹೋಗಿರಲಿಲ್ಲ. ಅದಕ್ಕ ಪ್ರಶ್ನೆ ನನಗಲ್ಲವೆಂಬಂತೆ ಇಗ್ನೋರ್ ಮಾಡಿದೆ. ನಾನು ಉತ್ತರ ಹೇಳಿಲ್ಲವಾದ್ದರಿಂದ ರಾಯರಿಗೂ ಗೊತ್ತಾಯ್ತು ನಾ ವಾಕ್ ಹೋಗಿಲ್ಲವೆಂದು. 'ಸೋಂಬೇರಿ , ನಡಿ  ನಡಿ ಮನೆಯಲ್ಲಿ ಫ್ರೂಟ್ಸ್ ಇಲ್ಲ, ಹಣ್ಣಿನ ಅಂಗಡಿಗೆ ಹೋಗಿ ತೆಗೊಂಡು ಬರುವ' ಅಂದರು. ನಾನು ಹ್ಯಾಪ್ ಮೋರೆ ಮಾಡ್ಕೊಂಡು ರೆಡಿಯಾದೆ. ಮಳೆ ನಿಂತಿತ್ತು. ವಾತಾವರಣ ಕೂಲ್ ಆಗಿತ್ತು. ಮೇನ್ ರಸ್ತೆಯಲ್ಲಿ ರಸ್ತೆ ಅಲ್ಲಲ್ಲಿ ಅಗೆದು ಹಾಕಿದ್ದರಿಂದ ಮಳೆ ನೀರಿನಿಂದ ಸೇರಿ ಕೊಚ್ಚೆಯಾಗಿತ್ತು. ನಿಧಾನವಾಗಿ ನಡೆಯದಿದ್ದರೆ ಜಾರುವುದು ಗ್ಯಾರಂಟಿ. ಡಾಕ್ಟರ್ ನನಗೆ ಬೋನ  ತುಂಬಾ ವೀಕ್ ಆಗಿದೆ ಅಂತ ಹೇಳಿದ ಸಮಯದಿಂದ ನಾನು ಜಾರಿ ಬೀಳದಂತೆ ತುಂಬ ಸಾವಧಾನವಾಗಿ ನಡೆಯುವುದು ಕಲಿತಿದ್ದೇನೆ. ಶ್ರೀಕಾಂತಗೆ ಕೆಲವೊಮ್ಮೆ ಕಿರಿಕಿರಿಯಾಗುವಷ್ಟು. :-) 

ಸರಿ, ರಸ್ತೆ ಮೇಲೆ ವಾಹನಗಳ ನಿರಂತರ ಓಡಾಟ, ಪಾದಚಾರಿಗಳಿಗೆ ಓಡಾಡಲು ರಸ್ತೆ ಇರಲಿಲ್ಲ. ಕೊಚ್ಚೆ ರಾಶಿಯ ಮೇಲೆ ನಡೀಬೇಕಾಯ್ತು. ಪುನ: ಸಣ್ಣಕ್ಕೆ ಮಳೆ  ಹನಿಯಲು ಶುರು ಆಯ್ತು. ವಾಹನಗಳ ದೀಪದ ಬೆಳಕಿ ನಲ್ಲಿ ಮಳೆನೀರಿಗೆ ಬೆಂಕಿ ತಾಗಿದಂತೆ, ಬಂಗಾರದ ಮಣಿಗಳನ್ನು ಸರಿಗೆಗೆ ಹಾಗಿ ಪೋಣಿಸಿದಂತೆ ಕಾಣುವುದನ್ನು ನಾನು ಎಂಜಾಯ್ ಮಾಡ್ತಾ ಶ್ರೀಕಾಂತ ಕೈಗೆ ಜೋತು ಬಿದ್ದು  ನಡೀತಾ ಇದ್ದೆ. ಅಷ್ಟರಲ್ಲಿ ದೂರದಲ್ಲಿ  ನಾನು ಆ ಗಿಡ್ಡ ಆಕೃತಿಯನ್ನು ನೋಡಿದ್ದು. ಬೆನ್ನಿನ ಮೇಲೆ ಭಾರವಾದ ಚೀಲ ಇದ್ದುದರಿಂದ ಬಾಗಿದ ಬೆನ್ನು. ಕಾಲುಗಳ ಬಳಿ ಮಡಚಿದ ಬಿಳಿ ಪೈಜಾಮ, ಮೇಲೆ ಹರಕಲು ಕಪ್ಪು ಕೋಟು. ಶ್ರೀಕಾಂತ ಸಡನ್ ಆಗಿ 'malathi, what are you doing? ಯಾಕೆ ಹೀಗೆ ತಳ್ಲುತ್ತ  ಇದ್ದೀಯ? ಇನ್ನು ಚರಂಡಿಗೆ ಬಿಳೋದೊಂದು ಬಾಕಿ ' See that man...over there?? he is going to come and touch me' ಅಂದೆ. ಅರೇ ಆತ  ಅಷ್ಟು ದೂರ ಇದ್ದಾನೆ, ಈ ವಾಹನ ಗಳ ಓಡಾಟದಲ್ಲಿ ಸಧ್ಯಕ್ಕಂತು ಆ ಅಸಾಮಿ ಕ್ರಾಸ್ ಮಾಡಲು ಆಗುವುದಿಲ್ಲ. ಮತ್ತೆ ವೈ ವಿಲ್ ಹಿ ಟಚ್ ಯು? ಅಂದ್ರು ನಾನು I don't know ಅಂತ ತಲೆ ಎತ್ತಿದರೆ ಆ ಮನುಷ್ಯ ನನ್ನ ಮುಂದೆಯೇ. ಎರಡು ಕೈಗಳನ್ನು ಶ್ರೀಕಾಂತ ರಟ್ಟೆಗೆ ಜೋತು  ಬಿಟ್ಟಿದ್ದೆ ಅಂದನಲ್ಲ?ನನ್ನ ಉದ್ದ ತೋಳಿನ ಚೂಡೀದಾರ ನಿಂದ ನನ್ನ ಬಲಗೈಯ ಬೆರಳಿನ ಮೇಲಿನ  ಸ್ವಲ್ಪ ಭಾಗ ಹೊರಗೆ ಇಣುಕ್ತಾ ಇತ್ತು. ಆ ಮನುಷ್ಯ ಅವನ ಬಲಗೈ ಯಿನ ತೋರು ಬೆರಳಿನಿಂದ ಒಂದ್ಸಲ ಮುಟ್ಟಿ ಸಲ್ಯೂಟ್ ಹೊಡೆದು ಹೋದ. 
ಈಗ ಶಾಕ್ ಆಗುವ ಸರದಿ ಶ್ರೀಕಾಂತ ದು 'ವಾಟ್ ವಾಸ್ that'?  ಅಂತ ಎರಡು ನಿಮಿಷ ನಾವು ಸುಮ್ನೆ ಅಲ್ಲಿ ನಿಂತಿದ್ವಿ. ಆಮೇಲೆ ತಲೆ ಕೊಡವಿಕೊಂಡು ಹಣ್ಣು ಖರೀದಿಸಿ , ನನಗೆ ಇವೆಲ್ಲವನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳುವ ತವಕ. ಮರುದಿನ ಮಿತ್ರರೊಂದಿಗೆ ಇದನ್ನು ಶೇರ್ ಮಾಡಿದಾಗ ಅವರು 'ನಿನಗೇ  ಯಾಕೆ  ಯಾವಾಗಲು ಈ ತರದ್ದೆಲ್ಲ  ಆಗೋದು' ಅಂತ ಕೇಳಿದ್ರು. ಯಾಕೆಂದರೆ ಅವರ ಜತೆ ಇದ್ದಾಗ ಒಂದೆರಡು ಸಲ  ಈ ತರಹದು ಸಂಭವಿಸಿವೆ. :-)
ನಿನ್ನೆ ಫೇಸ್ ಬುಕ್ ನಲ್ಲಿ ಗಿರೀಶ ರಾವ್ ಹತ್ವಾರ್ (ಜೋಗಿ) ಅವರ ಸ್ಟೇಟಸ್ ಇದನ್ನು ನೆನಪಿಸಿತು.  ಅಷ್ಟೆ. ಹಾಗೆ ನಿಮ್ಮೊಂದಿಗೆ ಶೇರ್ ಮಾಡುವಾ ಅಂತ 

June 14, 2014

power packed pongal (copied from my food blog)

aka ಪಾಲಕ್  ಪೊಂಗಲ್

ಮೂರು ವರ್ಷದ ಹಿಂದೆ ಶ್ರೀಕಾಂತ ಗೆ ಆಫಿಸ್ ಕೆಲಸದ ಮೇಲೆ ಯೂರೊಪ್ ಗೆ ಹೋಗಲಿಕ್ಕಿತ್ತು. ಯೂರೊ ಡೊಲರ್ಸ್ ತೆಗೆದುಕೊಳ್ಳಲ್ಲು ರಿಚ್ ಮಂಡ್ ರೋಡ್ ಗೆ ಹೋಗಬೇಕಿತ್ತು. ಮತ್ತು ಅಲ್ಲಿಂದ ಪ್ರವಾಸಕ್ಕೆ ಬೇಕಾದ ಬಟ್ಟೆ ಬರೆಗಳನ್ನು ಕೊಳ್ಳಲು ಕಮರ್ಶಿಯಲ್ ಸ್ಟೀಟ್ ಗೆ ಹೋಗಲಿಕ್ಕೆದೆಯೆಂದು ನನಗೂ ಅವರ ಜತೆ ಬರಲು ಹೇಳಿದರು. ಆ ದಿನ ನಿಂಪಿ ಗೆ ರಜೆ. ಅವಳನ್ನೂ ಕರೆದುಕೊಂಡು ಹೋದೆವು. ರಿಚ್ ಮಂಡ್ ರೋಡ್ ಗೆ ಹೋಗಿ ಕ್ಯಾಶ್ ಕೊಟ್ಟು ಅದನ್ನು ಯೂರೊ ಡಾಲರ್ಸ್ ಗೆ ಬದಲಾಯಿಸಿ ( ಆ ಆಫಿಸ್ ತೆರೆಯುವುದೇ ಬೆಳಿಗ್ಗೆ 11.00 ಗಂಟೆಗೆ. ನಾವು ತಲುಪುವಾಗ 11.45. ಅಲ್ಲಿಯ ಫಾರ್ಮೆಲಿಟಿಸ್ ಮುಗಿಯ ಬೇಕಾದರೆ ಸುಮಾರು ಹೊತ್ತು ಕಳೆಯಿತು. ಹೊಟ್ಟೆ ತಾಳಹಾಕಲಾರಂಭಿಸಿತು. ಶ್ರೀಕಾಂತ ನಮ್ಮನ್ನು ಅಲ್ಲಿಯೆ ಬಳಿ ಯಿದ್ದ ವುಡ್ ಲ್ಯಾಂಡ್ಸ್ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲ ಬಾರಿಗೆ ಸವಿದಿದ್ದು ಪಾಲಕ್ ಪೊಂಗಲ್. ನನಗಂತೂ ತುಂಬಾ ಇಷ್ಟ ಆಗಿ ಈಗ ನನ್ನದೇ ವರ್ಶನ್ ಗಳಲ್ಲಿ ಇದನ್ನು ಮಾಡುತ್ತೇನೆ.

ಬೇಕಾಗುವ ಸಾಮಾನು:
ಜವೆ ಗೋದಿ ಸದಕು (ಬ್ರೊಕನ್ ವ್ಹೀಟ್), ಹಸಿರು ಬೇಳೆ ಸಮ ಪ್ರಮಾಣದಲ್ಲಿ

ಮೊದಲಿಗೆ ನಾನು ಹೆಸರು ಬೇಳೆಯನ್ನು ಸ್ವಲ್ಪ ಹುರಿದುಕೊಳ್ಳುತ್ತೇನೆ.ತಣ್ಣಗಾದ ನಂತರ ಜವೆ ಗೋದಿಯೊಂದಿಗೆ ಮಿಕ್ಸ್ ಮಾಡಿ ಚೆನ್ನಾಗಿ ತೊಳೆದು ಮೂರು ಪಟ್ಟು ನೀರು ಹಾಕಿ ಬೇಯಿಸಬೇಕು.
ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಎರಡು ನಿಮಿಷ ಬಿಸಿ ನೀರಿನಲ್ಲಿ ಹಾಕಿ, ಅದರಿಂದ್ದ ತೆಗೆದು ತಣ್ಣೀರಿನಲ್ಲಿ ಹಾಕಿಡಿ. ಆ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪಕ್ಕಕ್ಕಿಡಿ.
ನೀರುಳ್ಳಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ (optional), ಸ್ವಲ್ಪ ಹಸಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ.
ಸ್ವಲ್ಪ ಎಣ್ಣೆ/ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕರಿಬೇವು, ಇಡೀ ಕರಿ ಮೆಣಸು ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಹುರಿಯಿರಿ, ನಂತರ ಶುಂಠಿ ಚೂರು ಹಾಕಿ. ಸ್ವಲ್ಪ ಅರಿಶಿನ ಪುಡಿ ಬೆರೆಸಿ. ರುಬ್ಬಿಟ್ಟ ಪಾಲಕ್ ಸೊಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ನೀರು ಬೆರೆಸಿ. ಇದಕ್ಕೆ ಬೇಯಿಸಿಟ್ಟ ಗೋದಿ+ಹಸಿರುಬೆಳೆ ಹಾಕಿ. ಉಪ್ಪು ಚೂರು ಬೆಲ್ಲ ಬೆರೆಸಿ ಬೇಕಾದಷ್ಟು ನೀರು ಹಾಕಿ ಒಂದು ಕುದಿ ಬಂದ ನಂತರ ಕೆಳಗಿಳಿಸಿ. ಇದಕ್ಕೆ ಕಾಯಿ ಚಟ್ನಿ ಅಥವಾ ಟ್ಯೋಮೇಟೋ ನೀರುಳ್ಳಿ+ಮೊಸರು ಸ್ಯಾಲಾಡ್ ಜತೆ ಸೆರ್ವ್ ಮಾಡಿ.
ಬೇಗ ಹಸಿವೆ ಆಗಲ್ಲ. ಮತ್ತು ಇಡೀ ದಿನ್ active ಆಗಿರುತ್ತೆ ದೇಹ/ಮನಸ್ಸು. ಶುಗರ್ complaint ಇರುವವರಿಗೆ ಇದು ಉಪಯುಕ್ತ. 

June 8, 2014

ಮಾತಿಗಿಂತ ’ಮೌನ’..............??!! Not always

ಆಫಿಸ್ ನ ಕೆಲಸ, ಮತ್ತೊಂದೆರಡು ತುರ್ತು ಕೆಲಸ ಮುಗಿಸಿ ಅಲಿಂದ ಹೊರಡುವಾಗ ಲೇಟ್. ಆದರೂ 15 ನಿಮಿಷ ಮುಂಚೆ ತಲುಪುತ್ತೇವೆ ಅಷ್ಟು ಸಾಕು ಅಂದುಕೊಂಡಿದ್ದೆ. ರಾಯರು ನಮ್ಮನ್ನು drop ಮಾಡಿ ಮನೆಗೆ ಹೋಗುವವರಿದ್ದರು. ನಾನು ಶುಕ್ರವಾರ ಮೂರು ಟಿಕೆಟ್ ಬುಕ್ ಮಾಡಿಕೊಂಡಿದ್ದೆ. ಕೊನೆ ಗಳಿಗೆಯಲ್ಲಿ ಮಾಲವಿಕಾ ಬರಲ್ಲ ಅಂದ್ಲು. ನಾನು ನಿಹಾ (ನನ್ನ ನಿಹಾ ಕಾಲೇಜಿನ ಹಲವಾರು ನಾಟಕಗಳಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಭಾಗವಹಿಸಿ(ರಂಗ ಸಜ್ಜಿಕೆ ಅವಳ speciality) ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಹಾಗಾಗಿ ನಾನು ಅವಳು ನಾಟಕಗಳಿಗೆ ಹೋಗುವುದು ಸಾಮಾನ್ಯ. ಏನಾದರೂ ಹೊಸತನ್ನು ಕಲೀಲಿಕ್ಕೆ/ನೋಡಕ್ಕೆ ಸಿಗತ್ತೆ ಅಂತ.) ದಾರಿ ಮಧ್ಯ ಶ್ರೀಕಾಂತ,’ನಾನು ನಾಟಕಕ್ಕೆ ಬರ್ತೀನಿ ಹೇಗೂ ಮೂರು ಟಿಕೆಟ್ ಬುಕ್ ಮಾಡಿದೀ ಅಲ್ಲ’ ಅಂದ್ರು. ನನಗೆ ಪುಕು ಪುಕು. ನಿಧಾನಕ್ಕೆ ಬಾಯಿ ಬಿಟ್ಟೆ. ’ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟರ್ ನೋಡಿ ಮತ್ತು ನನ್ನ ಇಷ್ಟದ ಕುಮುದವಲ್ಲಿ ಅದರಲ್ಲಿ ಇದ್ದಾರೆ ಅಂತ ಈ ನಾಟಕ ನೋಡುವ ಪ್ಲ್ಯಾನ್ ಅಂತ ಹೆದರಿ ಹೆದರಿ ಹೇಳಿದೆ. ಪುಕುಪುಕು/ಹೆದರಿಕೆ ಯಾಕಂದ್ರೆ after an hectic tiruing day at the office i wanted him to relax and enjoy. 
ನಾನು ನನ್ನ ಯೋಚನೆಯಲ್ಲಿ ಮುಳುಗಿದ್ದು ಸಡನ್ ಆಗಿ ಅಲ್ಲಿಂದ ಹೊರಬಂದಾಗ ದಾರಿ ಫಲಕ ಅಶೋಕನಗರ ತೋರಿಸ್ತಾ ಇತ್ತು. ’ಹೋಯ್ ಮಾರಾಯ್ರೆ ಎಲ್ಲಿಗೆ ಅಂತಾ ಕರಕೊಂಡು ಹೋಗ್ತಿದ್ದೀರಿ? ಅಂದ್ರ’ ಹನುಮಂತನಗರ ಮೇಡಂ ಅಂದಾ ಆಟೋ ದವ. ಯಾರಿಗಾದ್ರು ಕೇಳಿ ಯಾಕೋ ದಾರಿ ತಪ್ಪಿದ ಹಾಗೆ ಅನ್ನಿಸ್ತಾ ಇದೆ ಅಂದೆ. ಅಲ್ಲೇ ನಿಂತಿದ್ದ ಇನ್ನೊಂದು ರಿಕ್ಷಾದವನಿಗೆ ಕೆ ಎಚ್ ಕಲಾಸೌಧ ಎಲ್ಲಿ ಅಂದ್ರೆ, ನನ್ನ ಮುಖ ಮಿಕಿ ಮಿಕಿ ನೋಡ್ತಾ ಇದ್ದ. ಕೊನೆಗೆ ರಾಮಾಂಜನೇಯ ದೇವಸ್ಥಾನ ಅಂದೆ. ಅದಕ್ಕೆ ರೈಟ್ ಗೆ ಹೋಗಿ ಇನ್ನೊಂದು ರೈಟ್ ಆಮೇಲೆ ಸರ್ಕಲ್ ಅಲ್ಲಿಂದ ಸೀದಾ ಅಂದ ಭೂಪ್. ನಮ್ಮ ಆಟೋ ಡ್ರೈವರ್ ಇನ್ನಷ್ಟು ಸುತ್ತಾಡಿಸಿ, ನಾನು ಆಲ್ಮೋಸ್ಟ್ ನನ್ನ ಭಾರವಾದ bag ನಿಂದ ಅವನ ತಲೆ ಒಡೆಯುವುದೊಂದು ಬಾಕಿ. ಅಂತೂ ಇಂತೂ ಸುತ್ತಾಡಿಸಿ ನನ್ನ ಪಿರಿಪಿರಿ ಮಧ್ಯೆ 7.28 ಕ್ಕೆ ನಾವು ಕಲಾಸೌಧ ತಲುಪಿದ್ವಿ. ಆಗಲೇ ಅಲ್ಲೆಲ್ಲ ರಶ್. ’ಚೆನ್ನಾಗಿದೆಯಾ ಈ ನಾಟಕ? ಎಷ್ಟೊಂದು ಜನರು ಅಮ್ತ ಕೇಳಿದರು ರಾಯರು. ಅದಕ್ಕೆ ನಾನು ಫೇಸ್ ಬುಕ್ ಪ್ರಭಾವ. ನಾನು ಅಲ್ಲೇ ಇದರ ಪೋಸ್ಟರ್ ನೋಡಿ ಬಂದದ್ದು ಅಂದಾಗ ಅವರು ಗಟ್ಟಿಯಾಗಿ ನಕ್ಕರು. ನಿಹಾ ಟಿಕೆಟ್ ತರಲು ತೆರಳಿದರೆ ನಾನು ಟಾಯಲೆಟ್ ಗೆ ಹೋದೆ. ಅಲ್ಲಿಂದ ಹೊರಗೆ ಬರುವಾಗ ಕೆಳಗಡೆ ಹೌಸ್ ಫುಲ್, ಮೇಲಕ್ಕೆ ಹೋಗಿ ಅಂದ್ರು. ನನಗೆ ಯಾವತ್ತೂ ನಾಟಕ ನೋಡಲು ಹೋದಾಗ ಒಳಗಡೆ ಹೋಗಿ ಸ್ಟೇಜ್ ಕಡೆಯ vantage point ನೋಡಿ ಜಾಗ ಹುಡುಕುವ ಅಭ್ಯಾಸ. ಮೇಲೆ ಕೂಡ ರಶ. ನಾನು ಹಲವಾರು ಬಾರಿ ಕೆ ಎಚ್ ಕಲಾಸೌಧಕ್ಕೆ ಹೋದರೂ ಮೇಲಿನ ಸೆಕ್ಷನ್ ಒಪನ್ ಮಾಡುವಷ್ಟು ಗರ್ದಿ ಇರಲಿಲ್ಲ. ರಾಯರು ಎದುರಿನ ಬೆಂಚ್ ಮೇಲೆ ಕೂರುವ ಅಂದ್ರು. ಅಲ್ಲಿ ಕೂತ್ರೆ ಅಲ್ಲಿನ parapet ನಮಗಿಂತ ಉದ್ದ. ಸ್ಟೇಜ್ ಸರಿಯಾಗಿ ಕಾಣ್ತಿರಲಿಲ್ಲ. ಮಂಗಗಳ ತರ parapet ಮೇಲೆ ನೇತಾಡ್ತಾ ನಾಟಕ ನೋಡುವ ಅನುಭವ. ಅದರಲ್ಲಿ ನನ್ನ ಹಿಂಬದಿ ಕೂತವರಿಗೆ ಕೆಮ್ಮು, ಗಡಿ ಗಡಿ ಕ್ಯಾಕರಿಸ್ತಾ ಇದ್ರೆ ನನಗೆ ಬೆನ್ನ ಮೇಲೆ ಅವರ ಕಫ ಏನಾದರೂ ಬೀಳ ಬಹುದು ಅಂತ amoeba ತರಹ ಮೈ ಅನ್ನು ಮುದುಡಿಸ್ತಾ ಇದ್ದೆ. :-(.  ಇಇನ್ನೊಬ್ಬರು ಪಿಸಿ ಪಿಸಿ ಮಾತಿನಲ್ಲಿ ನಾಟಕ ಯಾರಿಗೋ explain ಮಾಡ್ತಾ ಇದ್ರು. ಅಸಹನೆ ಇಂದ ಅವರ ಕಡೆ ನೋಡಿದ್ರೆ ಅವರು ಪುಟ್ಟ ಹುಡುಗಿಗೆ ನಾಟಕ explain ಮಾಡ್ತಾ ಇದ್ದದರಿಂದ ಸುಮ್ನಾದೆ. ಮತ್ತೆ ಹಿಂದೆ ಕೂತವರ ಕಾಲು ನಮ್ಮ ಬೆನ್ನಿಗೆ ತಾಗ್ತಾ literally we were on the edge of the seat. ಮನೆಗೆ ಬಂದು ಅಕ್ಕನಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು. ಅವಳು mommeeeee ಅಂತ ಹೇಳಿದಾಗ ಆಗುವ ಖುಶಿನೆ special.
’ಮೌನ’ ನಾಟಕ ಒಟ್ಟು ಐದು ಕತೆಗಳ ಸಂಗಮ. ಎರಡನೆ ಕತೆ ಅಷ್ಟು impressive ಆಗಿ ಬರಲಿಲ್ಲ. ಕೊನೆಯ ಕತೆಯಲ್ಲಿ ಹಾಡು ಸ್ವಲ್ಪ ಜಾಸ್ತಿ ಆಯ್ತು. ಕುಮುದವಲ್ಲಿಯವರ acting .005% over ಅನ್ನಿಸಿದ್ರೂ not bad. ಜಯಲಕ್ಷ್ಮಿ ಪಾಟೀಲ, ಪುಟ್ಟ ಸಾತ್ವಿಕ್ ಸೂಪರ್. ರಂಗ ಸಜ್ಜಿಕೆ, ಲೈಟಿಂಗ್ ನ ಹೊಸ ಟೆಕ್ ನೀಕ್ ಗೆ ನನ್ನದು 5/5. 
ಹಿನ್ನೆಲೆಗಾಯನ ಕುಮುದವಲ್ಲಿ ಸೂಪರ್.You have a very sweet voice. ಅವರ ಜತೆ ಇದ್ದವರು ಕೂಡ, ಆದರೆ ಚಪ್ಪಾಳೆ ತಟ್ಟುವ ಭರದಲ್ಲಿ ಅವರ ಹೆಸರುಗಳು ಸರಿಯಾಗಿ ಕೇಳಿಸಲಿಲ್ಲ. 
’ಮೌನ’ ನಾಟಕದ ಬಗ್ಗೆ ಹೇಳುವುದಾದ್ರೆ....................ಅರೇ ನಾನ್ಯಾಕೆ ಹೇಳ್ಲಿ?? ಪುನ: ಕೆ ಎಚ್ ಕಲಾಸೌಧದಲ್ಲಿ ಅವರ show ಇದೆ. ಹೋಗಿ ನೋಡಿ ಪ್ರೋತ್ಸಾಹಿಸಿ.
ಶ್ರೀಕಾಂತ ಅಂತೂ ಟೀಮ್ ನಲ್ಲಿರುವ ಒಟ್ಟಾರೆ youngsters ಗಳನ್ನು ನೋಡಿ ತುಂಬಾ ಇಂಪ್ರೆಸ್ಡ್. ನಾನು ನಿಹಾ ಗಿಂತ ಅವರು ಜಾಸ್ತಿ ಎಂಜಾಯ್ ಮಾಡಿದಾರೆ. I am glad.
ಆಜಾದ್ ಭಾಯ್ ನಿಮ್ಮನ್ನು ಸ್ಟೇಜ್ ಮೇಲೆ ಸೋಮಯಾಜಿ ಯವರು ನೆನಪಿಸಿಕೊಂಡಾಗ , ಶ್ರೀಕಾಂತ , ’ನಿನ್ನ ಆಜಾದ್ ಭಾಯ್ ನಾ’ ಅಂತ ಕೇಳಿದಾಗ ಹೌದು ಎನ್ನಲು ಖುಶಿ ಅನ್ನಿಸ್ತು. ನೀವು ಕುವೈಟ್ ನಲ್ಲಿದ್ದು ಕೊಂಡು ಸಪೋರ್ಟ್ ಮಾಡ್ತಿದ್ದೀರಲ್ಲ..ಭೇಷ!!! ಇಲ್ಲೆ ಇದ್ದುಕೊಂಡು ನಾವೇನೂ ಮಾಡಲ್ಲ.
ಪ್ರಕಾಶ ಹೆಗ್ಡೆ : ’ನಿಮ್ಮ ಬ್ಲಾಗ್ ಓದುತ್ತಿದ್ದ ದಿನಗಳಲ್ಲಿ ನನಗೆ ಸಖತ್ ಕಾಡಿದ ಕತೆಯನ್ನು ಇಲ್ಲಿ adapt ಮಾಡಿದ್ದು ಖುಶಿ ಅನ್ನಿಸ್ತು.
'ಮೌನ; i award it 3.8 / 5
:-) 
ಸರಿ ನೀವು ಓದ್ತಾ ಇರಿ ನಾ ಹೊಂಟೆ.....ಮೆಂಥ್ಯದ್ ದೊಸೆ ಮಾಡಲು ಎಲ್ಲರಿಗೂ ಹೊಟ್ಟೆ ಹಸೀತಾ ಇದೆ ಅಂತೆ. ಸಂಡೆ ಅಲ್ಲವಾ ಸ್ವಲ್ಪ ಲೇಟ್ .....ಇದನ್ನು ಬರೆದು ಹೋಗುವಾ ಅಂತ ಬಂದೆ
ಬರಲಾ??
:-)