March 29, 2014

ನಾನ್ ಕತಾಯ್ ಅಥವಾ ನಾರಯಣ ಕಟಾರ್

ಕೊಂಕಣಿಯಲ್ಲಿ ಅದು ನಾರಾರಣ ಕಟಾರ್ ಹೇಗಾಯಿತು ಗೊತ್ತಿಲ್ಲ. ನನ್ನ 300 ನೇ ಪೋಸ್ಟ್, 72,000+ ಓದುಗರ ವಿಸಿಟ್ಸ್, ಹಾಗೂ ಯುಗಾದಿಯ ಪ್ರಯುಕ್ತ ಒಂದು ಸ್ವೀಟ್ ಟ್ರೀಟ್. ಟ್ರೀಟ್ ಕೆ ಲಿಯೆ ಕೋಯಿ ಭಿ ಬಹಾನಾ ಚಲೇಗಾ!!:-)

ತುಂಬಾ ಸುಲಭದ ಬೇಕರಿ ತಿನಿಸು. ಮುಂಬೈನಲ್ಲಿ ನಮ್ಮಲ್ಲಿ ಓವನ್ ಇಲ್ಲದ ದಿನಗಳಲ್ಲೂ ಇದನ್ನು ಮಾಡುತ್ತಿದ್ದೆವು. ಕಣಕ ತಯಾರಿಸಿ ಮಧ್ಯಾಹ್ನದ ಹೊತ್ತು ಅದನ್ನು ಬೇಕರಿಗೆ ಒಯ್ದು ಕೊಡುತ್ತಿದ್ದೆವು. ಬೇಕರಿಯವನು ಅದನ್ನು ಬೇಕ್ ಮಾಡಿ ಇಡುತ್ತಿದ್ದ. ಸಂಜೆ ನಾವು ಮಕ್ಕಳು ಯಾರಾದರೂ ಹೋಗಿ ಅದನ್ನು ತೆಗೆದುಕೊಂಡು ಬರುತ್ತಿದ್ದೆವು. ಅಮ್ಮನ ಬಳಿ ಕೇಳಿ ಮಾಡಿದವರು ಎಷ್ಟೋ ಜನ. ಆದರೆ ಅಮ್ಮ ಮಾಡಿದ ರುಚಿ ಅವರು ಮಾಡಿದ್ದಕ್ಕೆ ಬರುತ್ತಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಅದು ಬೇಯುತ್ತಿದ್ದಾಗಿನ ಪರಿಮಳ ನೋಡಿ ಬೇಕರಿಯವನು ,ಬೆಹೆನ್ ನಮಗೂ ಮಾಡಿ ಕೊಡಿ ಎನ್ನುತ್ತಿದ್ದ. 

ಸೊ ನಿನ್ನೆ ನಾನು ಇದನ್ನು ಟ್ರೈ ಮಾಡಿದೆ. of course ಅದನ್ನು ಮಾಡುವ ಬಗ್ಗೆ ಹೇಗೆ ಅಂತ ಮೊದಲಿಗೆ ಅಮ್ಮನಿಗೆ ಫೋನ್ ಮಾಡಿದೆ. ಸಂಜೆ ಅಮ್ಮ ಫೋನ್ ಮಾಡಿ ’ಮಾಡಿದ್ಯೇನೆ? ಅಂತ ಕೇಳಿದಾಗ ಮಾಡಿ ನಿಹಾ ಕಾಲೇಜಿಗೆ ತೆಗೆದುಕೊಂಡು ಹೋಗಿ ಅವಳ ಫ್ರೆಂಡ್ಸ್ ಮಧ್ಯ ಹಿಟ್ ಹಿಟ್ ಆಯ್ತು ಅಂದೆ. ಸ್ವಲ್ಪ ಪನ್ ಕಣ್ರೀ. ಅಮ್ಮನಿಗೆ ಅರ್ಥ ಆಗಲಿಲ್ಲ ಬಿಡಿ. :-) ಹೌದು ಎಷ್ಟು ಸಾಫ್ಟ್ ಅಂದ್ರೆ ಬಾಯಿಗೆ ಹಾಕಿದ ತಕ್ಷಣ ಅದು ಪುಡಿ (ಹಿಟ್ಟು)ಯಾಗಿ ನಿಧಾನಕ್ಕೆ ಮೆಲ್ಟ್ ಆಗುತ್ತೆ. ಅಮ್ಮ ಮಾಡಿದರೆ ರುಚಿಯಾಗುವುದರ ಗುಟ್ಟು ಏನೂ ಗೊತ್ತಾ?? ಮನೆಯಲ್ಲೇ ಬೆಣ್ಣೆ ಕಾಯಿಸಿ ತುಪ್ಪ ಮಾಡುತ್ತಿದ್ದದ್ದು. like mother like daughter ತಾನೇ ನಾನು?? :-)

1 ಕಪ್ ಮೈದಾ
1 ಕಪ್ ತುಪ್ಪ
1/4 ಚಮಚ ಸೋಡಾ ಪುಡಿ
ಸ್ವಲ್ಪ ಏಲಕ್ಕಿ
1 1/2 ಕಪ್ ಸಕ್ಕರೆ ಪುಡಿ

ಸಕ್ಕರೆ ಒಂದಿಗೆ ಏಲಕ್ಕಿ ಬೆರೆಸಿ ಪುಡಿ ಮಾಡಿಟ್ಟುಕೊಳ್ಳಿ. ಮೈದಾ, ಸೋಡಾ ಪುಡಿ, ಸಕ್ಕರೆ+ಏಲಕ್ಕಿ ಪುಡಿ ಮಿಕ್ಸ್ ಮಾಡಿಡಿ. ತುಪ್ಪವನ್ನು ಉಗುರು ಬೆಚ್ಚಗೆ ಮಾಡಿ ಇದಕ್ಕೆ ಬೆರೆಸಿ. ಕೈನಿಂದ ಚೆನ್ನಾಗಿ ನಾದಿ. ಒದ್ದೆಬಟ್ಟೆಯಿಂದ ಎರಡರಿಂದ ಮೂರು ಗಂಟೆಗಳ ಕಾಲ ಮುಚ್ಚಿಡಿ.
ಆ ಮೇಲೆ ಪುನ: ಸ್ವಲ್ಪ ನಾದಿ ಕೈನಿಂದ ಉಂಡೆ ಮಾಡಿ ಚಪ್ಪಟೆ ಮಾಡಿಡಿ. ಮೈಕ್ರ‍ೊವೇವ್ ಅನ್ನು ಕನ್ ವೆನ್ ಷನ್ ಮೋಡ್ ನಲ್ಲಿ 30 ಸೆಕೆಂಡ್ ಬಿಸಿ ಮಾಡಿ. 

ಈಗ ನಾನ್ ಕತಾಯ್ ಇರುವ ಮೈಕ್ರೋವೇವ್ ಸೇಫ್ ಪಾತ್ರೆ/ಟ್ರೇ ಅನ್ನು ಒಳಗಿಟ್ಟು ಕನ್ವೆನ್ಶನ್ ಮೋಡ್ ನಲ್ಲಿ 180 degree ಬಿಸಿಯಲ್ಲಿ 15 ನಿಮಿಷ ಬೇಕ್ ಮಾಡಿ.

p.s: ಕೆಲವರು ಕೇಸರಿ ಬಣ್ಣ ಬೆರೆಸುತ್ತಾರೆ. ನಾನು ಹಾಕಲ್ಲ.

:-)
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು in advance. ಎಂಜಾಯ್

March 25, 2014

ಶ್ರೀ ಯಶವಂತ ಚಿತ್ತಾಲರು- (wah wah kya baat hai....ನನ್ನ 300 th ಪೋಸ್ಟ್

ಸ್ವಂತ ಮನೆಗೆ ಶಿಫ್ಟ್ ಆಗಿ ಸರಿಯಾಗಿ ಒಂದು ತಿಂಗಳು. ಪುಸ್ತಕಗಳನ್ನು ಅರ್ಧಕ್ಕಿಂತ ಹೆಚ್ಚು ಕೊಡಬೇಕಾದಾಗ ಆದ ನೋವು ಅಷ್ಟಿಷ್ಟಲ್ಲ. ಮೊದಲೆಲ್ಲ ನಾನು ಪುಸ್ತಕಗಳನ್ನು ಮೂರು ನಾಲ್ಕು ಬಾರಿ ಓದಿಯಾದ ನಂತರ ಆಫಿಸ್ ಲೈಬ್ರರಿಗೆ ವರ್ಗಾಯಿಸಿ ಬಿಡುತ್ತಿದ್ದೆ. ಆದರೆ ಈ ಸಲ ಆಫಿಸ್ ನಲ್ಲೂ ಜಾಗ ಇಲ್ಲ ಅಂದಾಗ ಬೇಜಾರಾಯಿತು. ಹಲವಾರು ಪುಸ್ತಕಗಳನ್ನು ನಿಹಾ ಫ್ರೆಂಡ್ಸ್ ಗೆ, ಕೆಅವು ಆಕೃತಿಗೆ, ಕೆಲವು ಕರ್ನಾಟಕ ತಮಿಳನಾಡು ಬಾರ್ಡರ್ ನಲ್ಲಿರುವ ಒಂದು ಎನ್ ಜಿ ಒ ದ ಲೈಬ್ರರಿಗೆ, ಕೆಲವು ನಿಹಾರಿಕಾಳ ಕಾಲೇಜ್ ಗೆ ಕೊಟ್ತ್ತು ಈಗ ನಾನು ತುಂಬ ಬಡವಿ ಎನ್ನುವ ಫೀಲಿಂಗ್ ಬರುತ್ತಾ ಇದೆ. ಹಾಂ ಪುಸ್ತಕ ಗಳನ್ನು ಇತರರಿಗೆ ಕೊಡುತ್ತಿದ್ದಾಗ ನನ್ನ ಕಣ್ಣು ಯಶವಂತ ಚಿತ್ತಾಲರ ಪುಸ್ತಕ ’ಪುರುಷೋತ್ತಮ’ ದ ಮೇಲೆ ಬಿತ್ತು. ಅದನ್ನು ನಿಹಾ ಅವಳ ಫ್ರೆಂಡ್ ಗೆ ಕೊಡಲು ಎತ್ತಿಟ್ಟಿದ್ದಳು. ನಾನು ಒಂದು ಸಮನೆ ಕಿರುಚಿದೆ, ಹೋಯ್ ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಕೆ.ಟಿ. ಗಟ್ಟಿ ಮಾಮ, ವಸುಧೇಂದ್ರ, ಶ್ರೀನಿವಾಸ ವೈದ್ಯ, ನಾಗೇಶ ಹೆಗಡೆ,ಎಸ್.ಎಲ್. ಭೈರಪ್ಪ, ರಾಘವೇಂದ್ರ ಪಾಟೀ ಲ್,ವಿವೇಕ ಶಾನಭಾಗ, ಯು.ಆರ್ ಅನಂತಮೂರ್ತಿ, ನೆಮಿಚಂದ್ರ, ಇವರ ಪುಸ್ತಕ ಮಾತ್ರ ಕೊಡುವ ಹಾಗಿಲ್ಲ. ಅಪ್ಪ ಜಾಗ ಇಲ್ಲ ಅಂದ್ರೆ ನನ್ನ ಸೀರೆಗಳನೆಲ್ಲ ಕೊಟ್ಟು ಬಿಟ್ಟು ಜಾಗ ಖಾಲಿ ಮಾಡಿಕೊಂಡು ಇಡ್ತೇನೆ, ಗೊತ್ತಾಯ್ತಾ ಅಂತ ಆವಾಜ್ ಹಾಕಿದೆ. ಆಗ ನನ್ನ ತಮ್ಮ ಫೋನ್ ನಲ್ಲಿ ಮಾಲವಿಕಳ ಜತೆ ಮಾತನಾಡುತ್ತಿದ್ದ. ನನಗೆ ಫೋನ್ ಮಾಡಿ ’ಏನೇ ಜೀವ ಹೋದ ಹಾಗೆ ಕಿರುಚಿತಿದ್ದೆ, ಏನಾಯ್ತು? ಅಂತ ’ಹೋಗೊ ನಿನಗದೆಲ್ಲ ಅರ್ಥ್ ಆಗಲ್ಲ ಅಂದಿದ್ದೆ. 
ಆ ಮೇಲೆ ನಿಹಾ ’ಶಿಕಾರಿ’ ಓದಿ ಅದರ ಕವರ್ ಪೇಜ್ contest ನಲ್ಲಿ ಸೆಕೆಂಡ್ ಪ್ರೈಜ್ ಬಂದಾಗ, ಈ ಸಲ ತಮ್ಮನ ಮನೆಗೆ ಮುಂಬೈಗೆ ಹೋದಾಗ ಅವರನ್ನು, ಹಾಗೂ ಮಿತ್ರಾ ವೆಂಕಟರಾಜ್, ಅನು ಪಾವಂಜೆ (ನನ್ನ FB ಫ್ರೆಂಡ್ಸ್) ಭೇಟಿ ಮಾಡಿ ಬರುವಾ ಅಂತ ಪ್ರಾಮಿಸ್ ಮಾಡಿದ್ದೆ. ನಮಗೆ ಅಂಧೇರಿಯಿಂದ ಅದೇನೂ ಅಷ್ಟು ದೂರ ಇಲ್ಲ.ಹಾಗೂ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ನನ್ನ ಇಷ್ಟದ actor ರೇಖಾ ಕೂಡಾ ಇದ್ದಾರೆ ಅಂದಿದ್ದೆ. ಹಿಂದಿನ ಸಲ ಮಕ್ಕಳಿಗೆ ಅಮಿತಾಭ್ ಬಚ್ಚನ್, ಲತಾ ಮಂಗೇಶ್ಕರ್, ನನ್ನ ಇಷ್ಟದ ಇನ್ನೊಂದು ಜಾಗ ಹಾಜಿ ಅಲಿ ತೋರಿಸಿದ್ದೆ .)ತಮ್ಮನ ಗಾಡಿ ಹೇಗೂ ಇದೆ. ಅಂತ. ಆದರೆ ಚಿತ್ತಾಲರು ಈಗಿಲ್ಲ. :-( ನಿಜಕ್ಕೂ  ಬೇಜಾರಿನ ವಿಷಯ
ಮಿತ್ರ ರು ನನಗೆ ಫೋನ್ ನಲ್ಲಿ  ಯಶವಂತ್ ಚಿತ್ತಾಲರು ದೈವಾಧೀನರಾದ ವಿಷಯ ಹೇಳಿದಾಗ (ಅವರ ಜತೆ ಸಂಗೀತ/ಪುಸ್ತಕದ ಬಗ್ಗೆ ಕೋರಿತಿರ್ತೇನೆ)ಪುಸ್ತಕ ಓದಿ ನೇ ಕೆಲವರ ಬಗ್ಗೆ ಆತ್ಮೀಯತೆ ತಂದುಕೊಳ್ಳುತ್ತೇವಲ್ಲವಾ?? (ಅವರ ದೇಹಾಂತದ ಬಗ್ಗೆ ರಾತ್ರಿನೇ ಮೂರು ಎಸ್ ಎಮ್ ಎಸ್ ಬಂದಿತ್ತು. ನಾನೇನೂ ಸಾಹಿತಿಯಲ್ಲ, ಕನ್ನಡದ ಸಾಹಿತ್ಯದ ಬಗ್ಗೆ ಅಷ್ಟೇನೂ ತಿಳುವಳಿಕೆ ಕೂಡ ಇಲ್ಲ, ಆದರೂ ನನಗೆ ಎಸ್ ಎಮ್ ಎಸ್ ಬಂದಿದ್ದು ನೋಡಿ ನನಗೆ ಆಶ್ಚರ್ಯ.ಬಹುಶ: ನನ್ನ ಕವರ್ ಪೇಜ್ ಶಿಕಾರಿ ಪೋಸ್ಟ್ ನೋಡಿ ಕಳುಹಿಸಿರಬೇಕು) ಅಂತ ಕೇಳಿದಾಗ ಅವರೂ ಹೂಂ ಅಂದಿದ್ದರು. ಚಿತ್ತಾಲರ ಕಾದಂಬರಿ ’ಛೇದ’ ಓದಿ(ನನಗೆ ’ಶಿಕಾರಿ’ ಗಿಂತ ಇದೇ ಹೆಚ್ಚು ಇಷ್ಟ ಆಯ್ತು) ಎರಡು ಮೂರು ದಿನ ಹಿಡಿಯಿತು ಅದರ ಗುಂಗಿನಿಂದ ಹೊರ ಬರಲಿಕ್ಕೆ.ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇನ್ನೋರ್ವ ಮಿತ್ರರು, ಎಮ್ ಎಸ್ ಶ್ರೀರಾಮ ಅವರ ಬ್ಲಾಗಿನಲ್ಲಿದ್ದ ಚಿತ್ತಾಲರ ಭೇಟಿಯ ಕತೆ ಯ ಕೊಂಡಿ ಕಳುಹಿಸಿದ್ದರು ಮೊನ್ನೆ. ಇವತ್ತು ಲ್ಯಾಪ್ ಟಾಪ್ ಕೈಗೆ ಸಿಕ್ಕಿದ್ದರಿಂದ ಓದಿ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಾಯಿತು. ನೀವು ಇದನ್ನು ಖಂಡಿತ ಓದಿ ಅಂತ:



ನನ್ನ ಈ ಮನೆಯಲ್ಲಿ ಮುಂಬೈನಂತೆಯೇ ಸದ್ದು ಗದ್ದಲ. ಅಷ್ಟೆ ಅಲ್ಲ ಚೆಂದದ ಸೂರ್ಯಾಸ್ತ ಕೂಡ. ಸಮುದ್ರ ಒಂದೇ ಮಿಸ್ಸಿಂಗ್ :-) ನನ್ನ ಸೆಲ್ ನಲ್ಲಿ ಹಿಡಿದಿದ್ದ ಒಂದು ಚಿತ್ರ
ಈ ತಿಂಗಳು ನಾನು ಮೂರು ಇಂಗ್ಲಿಷ ಪುಸ್ತಕ, ಎರಡು ಕನ್ನಡ ಪುಸ್ತಕ ಓದಿದೆ. ಇಂಗ್ಲಿಷ ಪುಸ್ತಕಗಳು ನನ್ನ shelfari ನಲ್ಲಿ ನಮೂದಿಸಿದ್ದೇನೆ. ಕನ್ನಡ ಪುಸ್ತಕಗಳು : ದೇವರ ರಜೆ -ಗುರುಪ್ರಸಾದ ಕಾಗಿನೆಲೆ- ವಸುಧೇಂದ್ರ ಗೃಹಪ್ರವೇಶಕ್ಕೆ ಬಂದಾಗ ಗಿಫ್ಟಿ* ಸಿದ್ದು, 
ಶ್ರೀಕಾಂತ ಖರೀದಿಸಿದ್ದ (ಕಾಕತಾಳಿಯವೇನೋ ಗೊತ್ತಿಲ್ಲ) ಎಮ್ ಎಸ್ ಶ್ರೀರಾಮ ರ ’ತೇಲ್ ಮಾಲಿಶ” ಮತ್ತು ’ಸಲ್ಮಾನ್ ಖಾನ್ ನ ಡಿಫಿಕಲ್ಟೀಸು(ಅರ್ಧ ಓದಿ ಇಟ್ಟಿದ್ದೇನೆ)”-(ಇದರ್ರಿಂದಲೇ ಶ್ರೀರಾಮರ ಮೈಲ್ ಐಡಿ ನೋಡಿಕೊಂಡು ಅವರ ಬರಹದ ಕೊಂಡಿ ಇಲ್ಲಿ ಸೇರಿಸಲು ಅನುಮತಿ ಪಡೆದುಕೊಂಡಿದ್ದೇನೆ.)
ಇಷ್ಟೆ...
ನನ್ನ ಅಡುಗೆ ಬ್ಲಾಗ್ ನಲ್ಲಿ ಇವತ್ತು ಅಗಸೆ (Flax seed) ಚಟ್ನಿ ಪುಡಿ ಬಗ್ಗೆ ಹಾಕಿದ್ದೇನೆ. ಇಂಟರೆಸ್ಟ್ ಇದ್ದವರು ಅಲ್ಲಿಗೂ ಒಂದು ಕಣ್ಣು ಹಾಯಿಸಬಹುದು. ;-)
:-)
* = No presents please, ಉಡುಗರೆ ಬೇಡ ಸಡಗರ ಇರಲಿ ಅಂತ ಶ್ರೀಕಾಂತ ಗೃಹಪವೇಶದ ಆಮಂತ್ರಣ ಪತ್ರಿಕೆ ಮೇಲೆ ಹಾಕಿದ್ದನ್ನು ಮಿತ್ರರು ಆಪ್ತೇಷ್ಟರು ಪರಿಪಾಲಿಸಿದ್ದು ನನಗೆ ಅತ್ಯಂತ ಖುಶಿಯ ವಿಷಯ. ವಸುಧೇಂದ್ರರಿಗೆ ಯಾಕ್ರಿ ಗಿಫ್ಟ್ ತಂದಿದ್ದೀರಾ ಅಂದ್ರೆ ’ಪುಸ್ತಕ’ ಗಿಫ್ಟ್ ಕೊಡಬಹುದು ಅಂದ್ರು. ಇನ್ನೊಂದು ರಾಧಿಕಾ ಫುಲ್ ಕಾನ್ಫಿಡೆನ್ಸ್ ನಿಂದ ಗಿಫ್ಟ್ ಕೊಟ್ಟು ’ ಯು ವಿಲ್ ಲೈಕ್ ಇಟ್ ಮಾಲತಿ’ ಅಂದಿದ್ದು ಶೇರ್ ಮಾಡುವ ಅಂತ: ಥ್ಯಾಂಕ್ಯೂ ರಾಧಿಕ. :-)

ಈ ಗಿಫ್ಟ್ ಬಗ್ಗೆ ಎಗ್ಸೈಟಡ್ ಆಗಿ ಮಿತ್ರ ರಘು ಜತೆ ಶೇರ್ ಮಾಡಿದಾಗ ಅವರು ಕೂಡಲೆ ಒಂದು ಪನ್ ಮಾಡಿದರು. 
ಹೊರಗಡೆ ಬರೀ ನಾಯ್ಸ್ (Noise)
ಒಳಗಡೆ ಶೆನಾಯ್ಸ್
ಅಂತ....:-)
(ಸ್ವಲ್ಪ track change ಆಗದಿದ್ದರೆ ನನ್ನ ಬ್ಲಾಗ್ ಬ್ಲಾಗ್ ಏ ಅಲ್ಲ)
’ (ಆಗಲೇ ಇದು ನನ್ನ 300 ನೆ ಪೋಸ್ಟ್. ನಿಹಾ ಗೆ ನನ್ನ ಬ್ಲಾಗ್ ಗೆ ಹೊಸ ಮಾಸ್ಟ್ ಹೆಡ್ ಮಾಡಿ ಕೊಡಬೇಕೆಂದು ಹೇಳಿದ್ದೆ. ಆದರೆ ಅವಳೀಗ ಪರೀಕ್ಷೆಗೆ ಓದುತ್ತಿದ್ದಾಳೆ. anyways.....)
ಥ್ಯಾಂಕ್ಯೂ ಎಲ್ಲರಿಗೂ. ನನ್ನ ಬ್ಲಾಗ್ ಒಂದುತರಹ empty vessel making more noise . :-)

March 18, 2014

A glimpse of my balcony

just some pictures. Love my balcony. I am getting back into my natural aloof  solitary world. i am totally disconnected from everything and everybody. mai or meri tanhayee. i am starting a balcony garden slowly but steadily. Will post pictures as my garden will multiply. In FB there is a group Organic terrace gardening. i always envied those people who would post their harvest pictures- robust looking vegetables and fruits and flowers. Now i can have my own and my blog will be my showcase. anyways i am running out of ideas to write anything. My cookery blog will be more active since i am experimenting a lot with the microwave.
Tulsi has the pride of place in my balcony. exactly a month old sapling.  that means one month into grihapravesh, :-)


Today there was this odd white flower peeping at me from the flowerpot. felt so happy to see it i clicked a pic and sent it to my best friend. :-)
Actually there is a lot of things happening under my balcony that can be written but i just cannot pluck myself away from my seat and write about it.
so bye bye till the next post
:-)

March 12, 2014

ಪನೀರ್ ಕುಲ್ಚಾ

ನನ್ನದೊಂದು ಅಡುಗೆ ಬ್ಲಾಗ್ ಇದೆ ಗೊತ್ತಾ?? ತಂಡೂರಿ ಪನೀರ್ ಕುಲ್ಚಾ ಗೆ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ

ತಂಡೂರಿ ಪನೀರ್ ಕುಲ್ಚಾ

:-)

March 8, 2014

ಅಂತರ್ ರಾಷ್ಟೀಯ ಮಹಿಳಾ ದಿನಾಚರಣೆ-2014

ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. ಅಲ್ಲಾ! ನಮಗಾಗಿ ಅಂತ ಒಂದು ದಿನ ಮೀಸಲಿಡಿಯುವುದು ನಿಜಕ್ಕೂ ಬೇಕಾ? ಎಲ್ಲ ದಿನಗಳೂ ನಮ್ಮವಲ್ಲವೇ? ನನಗೆ ಬುದ್ದಿ ತಿಳಿದಾಗಿನಿಂದ i have been celebrating my existence.
ಆದರೂ ಒಂದು advantage ಅಂತೂ ಇದೆ. :-) ಕ್ಯಾಲೆಂಡರ್ ನಲ್ಲಿ ಎಸ್ ಎಮ್ ಎಸ್ ಗಳಲ್ಲಿ ಇವತ್ತು ಮಹಿಳಾ ದಿನಚರಣೆ ಅಂತ ಬರಲಿಕ್ಕೆ ಶುರು ಆದ ಮೇಲೆ ಶ್ರೀಕಾಂತ ’ladies enjoy yourself. ಹೊರಗೆ ಹೋಗಿ ಊಟ ಮಾಡಿ, ಸಿನಿಮಾ ನೋಡಿ, ಅಥವಾ ಆ ದಿನ ಅವರಿಗೆ ರಜೆಯಿದ್ದರೆ. Ladies i will cook for you today ಅನ್ನುತ್ತಾರೆ, ನನಗಿಷ್ಟ ಅಂತ ದೊಡ್ಡ ದೊಡ್ಡ cadburys ಚಾಕೋಲೇಟ್ ತಂದು ಕೊಡುತ್ತಾರೆ.
ಈ ವರ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗದಿರಲಿ ಎಂದು ಹಾರೈಸುತ್ತ, ನಿಹಾರಿಕಾ, ನಾನು ತಮ್ಮನ ಮಗಳು ವಿದಿಶಾಳನ್ನು ಮುದ್ದಿಸುತ್ತಿದ್ದಾಗ ಬರೆದ ಚಿತ್ರವನ್ನು ಹಾಕುತ್ತೇನೆ
ಅವಳು ಬರೆದ ಚಿತ್ರ ಚೆನ್ನಾಗಿದೆ. ನನ್ನ ಸೆಲ್ ಫೋನ್ ನಿಂದ ತೆಗೆದ ಚಿತ್ರ ಸರಿಬಂದಿಲ್ಲ. ಮುಂದೊಂದು ದಿನ ಸ್ಕ್ಯಾನ್ ಮಾಡಿ ಹಾಕುತ್ತೇನೆ. :-)
ಎಂಜಾಯ್ ಮಾಡಿ ಈ ದಿನ ಎಲ್ಲರೂ

March 4, 2014

ಹೊಸ ಮನೆಯಿಂದ ಮೊದಲ ಪೋಸ್ಟ್


ಸಂತೋಷ , ನೆಮ್ಮದಿ ಈ ಹಾಲಿನ ಹಾಗೆ ಉಕ್ಕಿ ಹರಿಯಲಿ ಅಂತ ನೀವೂ ಹಾರೈಸಿ :-)

ಗೃಹಪ್ರವೇಶ ಎಲ್ಲ ಮುಗಿದು, ಅಮ್ಮನಿಗೆ ನೆಂಟರಿಷ್ಟರ ಮನೆಗೆಲ್ಲ ಕರೆದುಕೊಂಡು ಹೋಗಿ ಈಗ ಮನೆಯ ಸಾಮಾನು ಸರಂಜಾಮನೆಲ್ಲ ಒಂದು ಸ್ಥಿತಿಗೆ ತಂದಿಟ್ಟಿದ್ದಾಯಿತು. ಸ್ನೇಹಿತರಿಗೆ ಎಷ್ಟು ದಿನ ನನ್ನ ಮನೆಯನ್ನು ಹೊಸ ಮನೆಯೆಂದು ಕರೆಯಬಹುದು ಎಂದು ಕೇಳಿದಾಗ ಇನ್ನೊಂದು ರೌಂಡ್ ಪೈಂಟಿಂಗ್ ಆಗುವ ತನಕ ಅಂದಿದ್ದಾರೆ. :-)
ತುಂಬಾ ಎಂಜಾಯ್ ಮಾಡ್ತಾ ಇದ್ದೇನೆ ನನ್ನ ಹೊಸ ಮನೆಯನ್ನು. ಬ್ಲಾಗ್, ಫ್ರೆಂಡ್ಸ್ , ಇ-ಮೈಲ್, ಪುಸ್ತಕ, ಸಿನಿಮಾ ಇವೆಲ್ಲರಿಂದ ದೂರ ಆಗಿದ್ದೀನಿ. ಕೆಲಸ ಮಾಡ್ತಾ ಮ್ಯೂಸಿಕ್ ಕೆಳ್ತೀನಿ. ಉಳಿದ ಸಮಯ ಬಾಲ್ಕನಿಯಲ್ಲಿ ಕಳೆಯುತ್ತೇನೆ. ಬಾಲಕನಿ ಕೆಳಗಿರುವ ದೊಡ್ಡ ನೇರಳೆ ಮರ ಅದಕ್ಕೆ ಬಿಟ್ಟಿರಿವ ಹೂ. ಒಂದು ದೊಡ್ಡ ಓಪನ್ ಸ್ಪೇಸ್ ಅಲ್ಲಿರುವ ಹಲವಾರು ಮರಗಳು, ದಿನಾ ಬೆಳಿಗ್ಗೆ ಅಲ್ಲಿ ನಡೆಯುವ ಮಹಿಳೆಯರ ಲಾಫಿಂಗ್ ಕ್ಲಬ್, ಶನಿವಾರ ಭಾನುವರ ಅಲ್ಲಿ ಸೇರುವ ಚಿಣ್ಣರು, ಬಿಲ್ಡಿಗ್ ಎದುರುಗಡೆಯಿರುವ ಪೆಟ್ರೊಲ್ ಬಂಕ್, ಹೋಟಲ್ ರಸ್ತೆಯಲ್ಲಿ ಯಾವತ್ತೂ ಕಡಿಮೆಯಾಗದ ಟ್ರಾಫಿಕ್...ಇವೆಲ್ಲದರಲ್ಲಿ ಸಧ್ಯಕ್ಕೆ ನಾನು ಫುಲ್ಲಿ involved.




ಬೆಳಿಗ್ಗೆ ಎದ್ದು ವಾಕ್ ಹೋಗುವುದು, ಹಾಲು ತರುತ್ತಾ. ಕಾರ್ ವಾಶ್ ಮಾಡುವ ಗಿರೀಶ ಕಾಸರವಳ್ಳಿಯವರಿಗೆ ಮುಗುಳ್ನಗೆಯ ಹಾಯ್ ಹಲ್ಲೋ ಅನ್ನುವುದು ಅವರ ಚೆಂದದ ಎರಡು ನಾಯಿಗಳನ್ನು ಮಾತನಾಡಿಸುವುದು ಬೆಳಗ್ಗಿನ ದಿನಚರಿಯಾದರೆ, ಸಂಜೆ ಮಕ್ಕಳು ಮನೆಗೆ ವಾಪಸ್ಸ್ ಆದ ನಂತರ ಹತ್ತಿರದಲ್ಲಿ ಯಾವ ಯಾವ ಅಂಗಡಿಗಳಿವೆ, ಹಾಗೂ ಆಫಿಸ್ ಸ್ಪೇಸ್ ಗಾಗಿ ಹುಡುಕಾಟ. ಇನ್ನೂ ನಮಗೆ ಚಕ್ಕಿ/ಗಿರಣಿ ಎಲ್ಲಿದೆ ಎನ್ನುವ ಸುಳಿವು ಸಿಕ್ಕಿಲ್ಲ. ಉಳಿದಂತೆ ಬ್ಯಾಂಕ್, ಏಟಿಎಮ್ ಮಾತ್ರ ಅಲ್ಲ ಊರಿಗೆ ಹೋಗುವ ಬಸ್ ಗಳೂ ನಮ್ಮ ಬಿಲ್ಡಿಂಗ್ ಎದುರಿಗೆ ಅದರ ಸೌಲಭ್ಯ ಸಿಗುತ್ತೆ ಎನ್ನುವ ಖುಶಿ. 11ವರ್ಷ ರಾಜಾಜಿನಗರ ಅಕ್ಕಪಕ್ಕದಲ್ಲಿದ್ದು, ಈ ಬಿಟಿಎಮ್ ಲೇಔಟ್ ಒಂತರಹ ಬೇರೆ ಊರಿಗೆ ಬಂದ ಹಾಗೆ ಅನ್ನಿಸ್ತಿದೆ. ನಿಹಾ ಗೆ ಕಾಲೇಜ್ ಹತ್ತಿರ ಆಗುತ್ತೆ ಆದರೆ ಇನ್ನೊಂದು ತಿಂಗಳಲ್ಲಿ ಅವಳು ಆ ಕಾಲೀಜಿನಿಂದ ಹೊರ ಬರುತ್ತಾಳೆ. ರಂಗಶಂಕರ ಮತ್ತು ಕೆ ವಿ ಎಸ್ ಆಪ್ತ ರಂಗಮಂದಿರ, ಸುಚಿತ್ರ ಫಿಲ್ಮ್ ಸೊಸೈಟಿ ನಮಗಿಲ್ಲಿ ಹತ್ತಿರವಾಗುತ್ತೆ.

ಇನ್ನೂ ಈ ಕಡೆ ಆಫಿಸ್ ಆಗದೆ ಇದ್ದುದರಿಂದ ಶ್ರೀಕಾಂತ್ ಕೂಡ ಟಿಫಿನ್ ತೆಗೆದುಕೊಂಡು ಹೋಗುತ್ತಾರೆ.ಹಾಗಾಗಿ ನನ್ನ ಮನೆಕೆಲಸಗಳು ಬೇಗ ಮುಗಿಯುತ್ತವೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲು ಅವರು ಟಿಫಿನ್ ತೆಗೆದುಕೊಂಡು ಹೋಗುವುದು. 

 ಹಲವಾರು ವರ್ಷಗಳ ಹಿಂದೆ ಮಿತ್ರ ಶ್ರೀವತ್ಸ ಜೋಶಿಯವರ ಜತೆ ಚಾಟ್ ಮಾಡುತ್ತಿದ್ದಾಗ ಅವರು(ಆಫಿಸ್ ನಿಂದ) ’ಇವತ್ತು ಉಪ್ಪಿಟ್ಟು, ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿನ್ನುತ್ತಾ ಇದ್ದೇನೆ’ ಅಂದಾಗ ನನಗೆ ತುಂಬ ಥ್ರಿಲ್ ಅನ್ನಿಸಿತ್ತು. ನಮ್ಮ ಆಫಿಸ್ ನಲ್ಲೂ ಆ ಸೌಕರ್ಯ ಇದ್ದಿದ್ದರೆ ಅಂತ ಅಂದುಕೊಂಡಿದ್ದೆ. ನಮ್ಮ ಆಫಿಸ್ ನ ಎಲ್ಲರು ತುಂಬ ಕಮಿಟ್ಟಡ್ ಆಗಿರುವವರು. ಶನಿವಾರ ಭಾನುವಾರ ಗಳಲ್ಲೂ ಕೆಲಸ ಮಾಡುವವರು, ಅವರಿಗೆ ಕನಿಷ್ಠ ಮಧ್ಯಾಹ್ನ ಬಿಸಿ ಊಟ ಸಿಗುವ ಹಾಗೆ ಆಗಬೇಕೆಂದು ನನಗೆ ಯಾವತ್ತೂ ಅನ್ನಿಸಿತ್ತು. ಶ್ರೀಕಾಂತ ಈ ಮನೆಗೆ ಬರುವಾಗ ಎಲ್ಲ ಹೊಸ ಸಾಮಾನು ತೆಗೆದುಕೊಳ್ಳುವ ಹಳೇಯದು ಯಾವುದೂ ಬೇಡ (ಸಧ್ಯ ನನ್ನನ್ನು ಹಳೆಯ ಸಾಮಾನಿನ ಪಟ್ಟಿ ನಲ್ಲಿ ಸೇರಿಸದಿದ್ದದ್ದು ನನ್ನ ಪುಣ್ಯ :-))ಅಂದಾಗ ನಮ್ಮ ಮೈಕ್ರೋವೇವ್, ಅದನ್ನು ಕೊಂಡು ಒಂದು ವರೆ ವರ್ಷ ಆಗಿತ್ತಷ್ಟೆ, ಆಫಿಸ್ ಗೆ ಕೊಟ್ಟುಬಿಡಬೇಕೆಂದು ನನ್ನ ಇಚ್ಛೆಯಾಗಿತ್ತು ಆದರೆ ಹೇಳಲು ಭಯ. ಅಮ್ಮ ನ ಬಳಿ ಕೂಡ ಅಂದಿದ್ದೆ. ಇಲ್ಲಿಗೆ ಶಿಫ್ಟ್ ಆಗುವ ಒಂದು ದಿನ ಮುಂಚೆ ಶ್ರೀಕಾಂತ್ ಅವರಾಗಿ ’ನಮ್ಮ ಮೈಕ್ರೋವೇವ್ ಆಫಿಸ್ ಗೆ ಕೊಟ್ಟು ಬಿಡೋಣ ನಿನ್ಗೆ ಹೊಸದು, ದೊಡ್ಡ ದು ಕೊಡಿಸ್ತೀನಿ ಅಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಸೋ ಈಗ ಆಫಿಸ್ ನಲ್ಲಿ ಎಲ್ಲರು ಮಧ್ಯಾಹ್ನ ಬಿಸಿ ಊಟ ಎಂಜಾಯಿಸುತ್ತಿದ್ದಾರೆ.
ಇವತ್ತಿಗಿಷ್ಟೆ......
ಸುಮ್ನೆ ಏನೋ ಗೀಚಿದೆ. ಒಪ್ಪಿಸಿಕೊಳ್ಳಿ.
A picture of my balcony was saved in my cell phone. this is for you Radhika: The lovely nameplate has yet to be installed. :-) am excited and looking forward to it. will post a picture of it once it is put up