October 22, 2011

A whirlwind trip to Chennai & Mahabalipuram

When Dr. Ram Ramarathnam of Chennai invited us over to have a 'dekko' at eco friendly e-cycle he had designed we grabbed this opportunity to turn this visit into official cum pleasure trip. It had been a long time since we all four had travelled together. Hence we decided on chennai and mahabalipuram. Our association with Gayathri Travels , Rajajinagar has been from the past 9 years.We have a favorite driver Ravi. Ravi is from chennai, but he is been in bangalore for many years. he speaks kannada and tamil very well , with splattering of Hindi and English too. what more could we ask??
We left early at 5.45 am.  It was cold and i had the window rolled down getting my ears, nose and cheek ice cold, until Srikanth ordered me to close the window. Oh!! how i love winter....
good morning Bengalooru...and the sun comes to see us off
Not much traffic. Niha shot this from the moving vehicle. She is quite good na?
Muddu Ganapa on the dashboard and Ravi in the rearview mirror...:-)
a view through the windshield (all above photos by Niha)
Just on a whim we got to discussing about the famous golden temple of vellore and he said if take a short detour we can include it in our itinerary....
So he took us golden temple, Siripuram, Vellore. The temple is named Shakti amma Laxmi Narayani . since we purchased the Special darshanam pass we could watch the deity up close. the temple is made of solid gold plates with intricate designs. though it was not much to my liking , i loved its reflection in the water.The temple is located on 100 acres of land on a natural landscaping lush with greenery and resting places for devotees for the trudge to the main temple is quite a distance away. The pathway to the temple is star-shaped designed to calm the nerves (so it says) (photography prohibited)

Sri Sakti Amma  with the deity Laxmi Narayani (my girls were curious why the founder was called Shakti amma instead of appa)
Whenever we were hungry (which happens a lot whenever we travel ;-))Ravi  stopped at the road side  eateries, where the ambience was so- so but the food was good and cheap. we had quite a generous amount of pongal in Chennai at the famous Saravana Bhavan. Ravi is warehouse of information. politics is his favorite subject. He talked about all his former employers from politician to people in the film line. Its a pleasure to hear him talk. there is never a dull moment. But above all he is a very careful driver.
Next stop was the Jalakanteshwara temple at Vellore fort  nearby
.Some details on the temple

YES!!!! I am frowning cos he is ALWAYS on the phone!! Hrrrmmmp!!
Jalakanteshwara Temple 
father -daughter
An act of valour etched  on the pillar
Malavika  posing besides a pillar
 Muruga
the rearing horse
After the fort temple we had lunch in a hotel and proceeded to meet Dr. Ram Ramarathnam at his office cum workshop in Chennai. Dr Ram is a wonder. with like minded youngsters he is on to many new eco-friendly inventions. He showed us the e-bicycle and Ravi had a test drive on it..he was quite impressed by the geared cycle which ran on battery.
with Dr Ram and the e cycle
We stayed at a hotel , the name i forgot.( i will check the bill and enter it at a later date).and early next morning with a grand breakfast at Hotel Saravana Bhavan we left for Mahabalipuram. on the way we cruised slowly along the marina beach where the beach was rife with early morning walkers, exercisers, strollers etc :-)




malathi-the water bottle carrier
the main deity of mamallapuram
Shot by a westerner. she was a fun lady :-)

The beach in the morning.. not many tourists
Westerners  feeling and studying the sand stormed temple walls



Srikanth in his comfort attire 'the mundu' and me in my favorite colour 'BLACK' :-)
this was very exciting..waking up Lord Nataraja in the wee hours of morning with classical morning raga...Chidamabaram

Rangamatapa at the Nataraja Temple. fell in love
Srikanths favorite form of Photography - silhoutte
Next stop was the famous Kamakashi temple at Kanchipuram before returning to Bangalore. There was some religious celebration with homa etc...hundreds of devotees thronged the temple. Ravi was very keen on helping us buy Kanchi Sarees, saying he knew where we could purchase Kanchipuram Sarees at discounted rates..but i was not interested and he was surprised and dejected at how can one say no to saree, hehehe...
On the way to Kancheepuram, Srikanth was interested in the round tiled roofs so got down to make enquiries but could not get much info..

spire (Gopuram) of the Kamakshi Temple

There we some more pictures in Srikanths mobile which he lost before i could download the photos ,owing to my laziness :-(. Sant Kabir das  is right in saying 'kal karo so aaj karo..aaj karo so ab'....The most memorable spot was the IIT-Chennai where the deers were roaming about freely. Its one of the loveliest IIT campus according to me. Fell in love with it..We also made a quick visit to the crocodile and snake park.

This was a funny sight. a turtle piggy-backing on the crocodile
We reached Bangalore around 11.00 in the night. Two days of absolutely jam-packed unplanned fun...
:-)

October 19, 2011

ಒಂದು ಸಾವಿನ ಸುತ್ತ

ಆಫಿಸ್ ಗೆ ಆ ದಿನ ಸ್ವಲ್ಪ ಲೇಟ್ ಆಗಿ ಹೊರಟಿದ್ದೆ. ರಾಜಾಜಿನಗರದಿಂದ ಜಯನಗರ ಆಫಿಸ್ ಗೆ ಕೆಲವು ಮುಖ್ಯ ಫೈಲ್ ಗಳನ್ನು ಒಯ್ಯಲಿಕಿತ್ತು. ಡಿಸೆಂಬರ್ ತಿಂಗಳ ಒಂದು ಶುಕ್ರವಾರ. ಮೆಜಿಸ್ಟಿಕ್ ನಿಂದ ಜಯನಗರದ ಬಸ್ ನಲ್ಲಿ ನನಗೆ ಸೀಟ್ ಸಿಕ್ಕಿತು. ಬಸ್ ಹೊರಡ್ತಿರಬೇಕಾದ್ರೆ ಒಬ್ಬ ಹೆಂಗಸು ಓಡಿ ಬಂದು ಹತ್ತಿದಳು. ಶುಕ್ರವಾರದ ಪೂಜೆ ಮುಗಿಸಿ ಕೆನ್ನೆಗೆ ಧಾರಾಳವಾಗಿ ಹಚ್ಚಿದ ಅರಿಸಿನ, ತಲೆಗೆ ಮುಡಿದ ಮಲ್ಲಿಗೆ ಹಾರ, ಉಟ್ಟಿಕೊಂಡ ಸಿಲ್ಕ್-ಕೊಟನ್ ಸಿರೆ. ಅದರ ಬಣ್ಣ ನನಗೆ ತುಂಬ ಇಷ್ಟ ಆಗಿತ್ತು. ಬಸ್ಸು ಹೊರಟ ಮೇಲೆ ನನ್ನ ಪಕ್ಕದಲ್ಲಿದ ಹೆಂಗಸು ಕಿಟಕಿ ಬಾಗಿಲು ಹಾಕ್ಕೊಂಡಳು. ನನಗೆ ಚಳಿ-ಮಳೆ ಸೆಖೆ ಹೇಗಿದ್ದರೂ ಕಿಟಕಿಯಿಂದ ಗಾಳಿ ಬರಬೇಕು. ಪಕ್ಕದ ಸಹಯಾತ್ರಿ ಕಿವಿಯಲ್ಲಿ ಹತ್ತಿ ಹಾಕಿಕೊಂಡು ಆ ಮೇಲೆ ಸ್ಕಾರ್ಫ್ ಕೂಡ ಕಟ್ಟಿಕೊಂಡರು. ಕೊರ್ಪೋರೇಶನ್ ಸಿಗ್ನಲ್ ಸ್ಟಾಪ್ ನಲ್ಲಿ ಕೆನ್ನೆಗೆ ಢಾಳಾಗಿ ಅರಿಸಿನ ಹಚ್ಚಿದ ಹೆಂಗಸು ಇಳಿದು ಬೇರೆ ಬಸ್ ಸ್ಟಾಪ್ ಗೆ ಹೋಗಲು ಸಿಗ್ನಲ್ ಬಳಿ ನಿಂತರು. ಹಿಂದು ಗಡೆ ಸೀರೆ ಉಟ್ಟಿದ್ದು ಸ್ವಲ್ಪ ಮೇಲಾಗಿ ಒಳ ಲಂಗ ಕಾಣಿಸುತ್ತಿತ್ತು. ಸವೆದ ಹೋದ ಚಪ್ಪಲಿ,  ಕಾಲಿನ ಬೆರಳುಗಳಿಗೆ ಹಚ್ಚಿದ ಮರೂನ್ ಕಲರ್  ಬಣ್ಣ, ಕಪ್ಪಾಗಿದ್ದ ಕಾಲುಂಗುರ, ವ್ಯಾನಿಟಿ ಬ್ಯಾಗ್ ನ ಒಂದು ಹ್ಯಾಂಡಲ್ ತುಂಡಾಗಲಿಕ್ಕೆ ಬಂದಿದ್ದು, ಅದಕ್ಕೆ ಹಾಕಿದ ಸೇಪ್ಟೀ ಪಿನ್, ನೀರಿನ ಬಾಟಲಿ, ಊಟದ ಡಬ್ಬಿಯಿಂದ ಉಬ್ಬಿದ ಬ್ಯಾಗ ನೋಡುತ್ತಿದ ಹಾಗೆ, ರಸ್ತೆ ಖಾಲಿಇದ್ದುದರಿಂದ, ಹಾಗೂ ರಸ್ತೆಯಲ್ಲಿನ ತಿರುವಿನಿಂದ ಆ ಕಡೆಯಿಂದ ಬರುವ ಬಸ್/ವಾಹನಗಳ ಬಗ್ಗೆ ಗಮನ ನೀಡದೆ ಆಕೆ ರಸ್ತೆ ಕ್ರಾಸ್ ಮಾಡಿದರು. ರಸ್ತೆ ಆ ಅಂಚು ತಲುಪುವಷ್ಟರಲ್ಲಿ ರಭಸದಿಂದ ಬಂದ ಬಸ್ ಆಕೆಯ ಪಕ್ಕೆಗೆ ಬಡಿದ ರಭ್ಸಕ್ಕೆ ಆಕೆ ಅಷ್ಟು ದೂರ ಹಾರಿ ಆಕೆಯ ತಲೆ ಪೇವ್ ಮೆಂಟ್ ಗೆ ಬಡಿದು, ಆಕೆಯ ತಲೆ ತಿರುಚಿಕೊಂಡ ರೀತಿಯಲ್ಲೆ ಆಕೆಯ ಪ್ರಾಣಪಕ್ಷಿ ಹಾರಿದ್ದು ಗೊತ್ತಾಗುತ್ತಿತ್ತು. ಒಂದು ಕ್ಷಣದಲ್ಲಿ ಅಷ್ಟು ನಡೆದು, ಪ್ರತಿಕ್ರಿಯುಸುವುದಕ್ಕೂ ಶಾಕ್ .ಈ ದೃಶ್ಯ ನೋಡಿದ ಬಸ್ಸ ನಲ್ಲಿರುವವರೆಲ್ಲರೂ , ’ತ್ಚು ತ್ಚು, ಏನನ್ಯಾಯ, ಸ್ವಲ್ಪ ನೋಡಿ ಕೊಂಡು ಹೋಗಬಹುದಿತ್ತು’, ಪಾಪ , ಚಿಕ್ಕ ಪ್ರಾಯ, ’ಮುತ್ತೈದೆ ಸಾವು’ ಮುಂತಾದ ಮಾತುಗಳು ಕೇಳಿಸಿದವು.  ’ಸಿಗ್ನಲ್ ಸ್ಟಾಪ್ ನಲ್ಲಿ ಬಾಗಿಲು ಯಾಕಾದರೂ ಓಪನ್ ಮಾಡ್ತಾರೋ’ ’ಪಾಪ, ಯಾರ ಮನೆ ಹೆಣ್ಣು ಮಗಳೋ’ ಅಂದದ್ದು ಕೇಳಿಸಿತು. ನಾನು ಕಿಟಕಿಯಿಂದ ಇನ್ನೂ ಆ ಹೆಂಗಸನ್ನೆ ನೋಡುತ್ತಿದ್ದೆ...ಚಿಲ್ಲಾಪಿಲ್ಲಿಯಾಗಿ ಬಿದ್ದ ಆಕೆಯ ಬ್ಯಾಗ್, ಕಳಚಿಹೋದ ಆಕೆಯ ಚಪ್ಪಲಿ, ಪೋಲಿಸ್ ಬಂದು, ವಾಕಿ-ಟಾಕಿಯಲ್ಲಿ ಮಾತಾಡಿದ್ದು, ಅಲ್ಲೆ ಇದ್ದ ಜನ ಅಲ್ಲಿ ಸುತ್ತು ವರೆದಿದ್ದು, ರಸ್ತೆ ಮೇಲಿನಿಂದ ಆಕೆಯ ಕಾಲನ್ನು ಪೇವ್ ಮೆಂಟ ಮೇಲೆ ಇಟ್ಟಿದ್ದು, ಯಾರೋ ಒಬ್ಬರು ನೀರು ಸಿಂಪಡಿಸಿದ್ದು ನೋಡ್ತಿದ್ದ ಹಾಗೆ ನಮ್ಮ ಬಸ್ ಮುಂದಕ್ಕೋಡಿತು. ನನ್ನ ಕೈ ನಲ್ಲಿ ತಣ್ಣಗಿನ ಕೈ ಯೊಂದು ಸೇರಿಕೊಂಡಾಗ ಎಚ್ಚೆತ್ತೆ. ಪಕ್ಕದ ಹೆಂಗಸು ಶಾಕ್ ಆಗಿ ಮಾತು ಬರದೆ, ಕಣ್ಣಲಿ ಗಾಬರಿ ಕಣ್ಣೀರು , ಆಗಲೆ ನಾನು ಪೂರ್ತಿ ಅವರ ಕಡೆ ಗಮನ ಕೊಟ್ಟಿದ್ದು. ಬಸುರಿ ಹೆಂಗಸು. ’its oks its ok ಅಂತ ಆಕೆಯ ಕೈ ಯನ್ನು ಅದುಮಿ ನನ್ನ ಕೈ ನಲ್ಲೇ ಇರಲು ಬಿಟ್ಟೆ.
ಪುನ: ನನ್ನ ಮನಸ್ಸು ಕ್ರಾಸ್ ಮಾಡಿದ ಹೆಂಗಸನ್ನು ನೆನಸಿಲಿಕ್ಕೆ ಶುರು ಮಾಡಿತು
ಬೆಳಿಗ್ಗೆ ಎದ್ದು ಗಂಡನಿಗೆ , ’ರೀ, ಹಾಲು ತರುವಾಗ ಎರಡು ಮೊಳ ಮಲ್ಲಿಗೆ ಹೂ ತನ್ನಿ, ಇವತ್ತು ಶುಕ್ರವಾರ’ ಅಂದಿರ ಬಹುದೆ? ಅಥವ ತಲೆ ಕೆರೆದುಕೊಳ್ಳುತ್ತ ಹಾಲು ತಂದು, ಹೂ ತರಲು ಮರೆತ ಗಂಡನಿಗೆ, ’ಥೂ ಒಂದು ಕೆಲಸ ನೆಟ್ಟಗೆ ಮಾಡಕ್ಕೆ ಬರಲ್ಲ ಅಂತ ಸಿಟ್ಟು ಮಾಡಿಕೊಂಡಿದ್ದು, ಆತ ಪುನ: ಹೋಗಿ ಹೂ ತೆಗೆದುಕೊಂಡು ಬಂದಿರ ಬಹುದೆ? ಅಥವ ಬೆಳಿಗ್ಗೆ ಮನೆ ಯೆದುರಿಗೆ ನೀರು ಹಾಕಿ ರಂಗೋಲಿ ಬಿಡಿಸು ವಾಗ ಹೂವಿನವನಿಂದ ಹೂ ತೆಗೆದುಕೊಂಡಿರಬಹುದೆ? ಪೂಜೆ ಎಲ್ಲ ಮುಗಿಸಿ, ತಿಂಡಿ-ಟಿಫನ್ ಕೆರಿಯರ್ ರೆಡಿ ಮಾಡಿ, ಮಗನಿಗೆ ಶಾಲೆಗೆ ಹೊರಡಿಸಿ ಬರುವಾಗ ಆಫಿಸ್ ಗೆ ಲೇಟಾಗಿರ ಬಹುದೆ?
ಆ ಸೀರೆ ಗೌರಿ ಹಬ್ಬಕ್ಕೆ ಅಮ್ಮ ಕೊಡಿಸಿದ್ದು. ಮೊದಲು ಸಲ ಉಟ್ಟಿಕೊಂಡು ಆಫಿಸ್ ಗೆ ಹೋದಾಗ, ಗೆಳತಿಯರು ’ಈ ಸೀರೆ ನಿನಗೆ ತುಂಬ ಒಪ್ಪುತ್ತೆ’ ಅಂದಿರ ಬಹುದೆ?
ಗಂಡ ಹೆಂಡತಿ ಮಧ್ಯ ಜಗಳವಾಗಿ, ಇಬ್ಬರೂ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಇಟ್ಟುಕೊಂಡಿದ್ದರೆ, ಆಕೆಯ ಐಡೆಂಟಿಫಿಕೇಶನ್ ಸಿಗದೆ ಸುಮ್ಮನೆ ಆಕೆ ಶವಾಗಾರದಲ್ಲಿ, ಬೆಳಿಗ್ಗೆ ಯಾರದ್ದೋ ಹೆಂಡತಿ, ಅಮ್ಮ, ಅಕ್ಕ, ತಂಗಿ, ಸ್ನೇಹಿತೆಯಾದವಳು ಈಗ ಕೇವಲ ’ಬಾಡಿ’ (body) ಯಾಗಿ ಉಳಿಯುವವಳೆ.
ಅಮ್ಮ ಸಂಜೆ ಮನೆಗೆ ಬರದೆ ಇದ್ದು, ಆಕೆಯನ್ನು ಕಾಯುತ್ತ ಆಕೆಯ ಮಗ ’ನಿನ್ನೆ ಅಮ್ಮ ನಿಗೆ ನಾನು ಬೇಗ ಬೇಗ ಹೋಮ್ ವರ್ಕ್ ಮಾಡದೆ, ಸಿಟ್ಟು ಬರಿಸಿದ್ದರಿಂದ’ ಅಮ್ಮ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಇನ್ನೂ ಬಂದಿಲ್ಲವೇ ಅಂದು ಕೊಳ್ಳಬಹುದೇ?
’ಇವಳ ಸಿಟ್ಟು ಯಾಕೋ ದಿನೇ ದಿನೇ ಹೆಚ್ಚಾಗಿ, ಯಾವತ್ತಿನ ಹಾಗೆ ತವರು ಮನೆಗೆ ಹೋಗಿ ಇದ್ದು ಬಿಟ್ಟಿದ್ದಾಳೆ’ ಅಂತ ಗಂಡ ಸುಮ್ಮನಾಗಿ ಬಿಟ್ಟರೆ?? ಅಥವ ’ಪಾಪ ನನ್ನ ಹಾಗೆ ದುಡಿಯುವ ಜೀವ, ಸ್ವಲ್ಪ ಕೋಪ ಮಾಡಿಕೊಂಡರೆ ಏನಡ್ಡಿಯಿಲ್ಲ’ ಇವತ್ತು ಶಾಂತಿಸಾಗರ ದಿಂದ ಆಕೆಯ ಇಷ್ಟದ ಕಾಶ್ಮೀರಿ ಪಾಲಾವ್ ತಂಡಿಟ್ಟು ಸರ್ ಪ್ರೈಸ್ ಕೊಡಲು ಕಾಯುತ್ತಿರಬಹುದೇ
ಆಕೆ ಮೊನ್ನೆ ಭಾನುವಾರ ನನ್ನ ತರಹ ನೆಲದ ಮೇಲೆ , ಮಂಡಿ ಬಗ್ಗಿಸಿ ಕೂತು, ಅದರ ಮೇಲೆ ಗದ್ದ ಇಟ್ಟು, ಕಾಲಿನ ಉಗುರುಗಳಿಗೆ ನೈಲ್ ಪಾಲಿಷ್ ಹಚ್ಚಿ ಅಲ್ಲೇ ಕೂತು ನೋಡುತ್ತಿದ್ದ ಮಗ ನನ್ನು ನೋಡಿ ’ಏ ಫೂ ಅಂತ ಗಾಳಿ ಹಾಕೋ, ಬೇಗ ಒಣಗುತ್ತೆ ಅಂದಿರ ಬಹುದೇ?
ಅಥವ ಮಧ್ಯಾಹ್ನದ ಊಟದ ನಂತರ ಮನೆಯವರೆಲ್ಲ ಮಲಗಿದ ಮೇಲೆ ಹೊರಗಡೆ ರೂಮಿನ ಟೀ ಪಾಯ್ ಮೇಲೆ ಕಾಲು ಚಾಚಿ ಉಗುರಿಗೆ ಬಣ್ಣ ಹಚ್ಚಿ ಅದು ಒಣಗುವಾಗ ಸುಧಾ ಅಥವ ತರಂಗ ಓದಿರಬಹುದೇ
ಹಾಸ್ಟಲ್ ನಲ್ಲಿರುವ ತಮ್ಮನಿಗೆ ’ಏ ಲವ್ ಗಿವ್ ಅಂತ ತಲೆ ಕೆಡಿಸ್ಕೋ, ಬೇಡ, ಪ್ರೀತಿ ಮಾಡಿದವರು ಯಾರೂ ಉದ್ದಾರವಾಗಿಲ್ಲ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸಿಕೋ, ಅಂತ ಪ್ರೀತಿಯಿಂದ ಬೈದಿರಬಹುದಾ?
ಬೆಂಗಳೂರಿನಲ್ಲೇ ಇರುವ ತಂಗಿಗೆ, ಹೇ ಸಂಡೆ ಮನೆಗೆ ಬಾ, ಇಲ್ಲೇ ಊಟ ಮಾಡಿ, ಶಿವರಾಜಕುಮಾರ್ ಫಿಲ್ಮ್ ನೋಡುವ, ಬಾ’ ಅಂತ ಆಮಂತ್ರಿಸಿರಬಹುದಾ?
ಅಥವ ಪರ ಊರಿನಲ್ಲಿರುವ ಅಣ್ಣನಿಗೆ ’ಹೋ ಮಹಾ ಹೆಂಡ್ತಿ ಗುಲಾಮ, ಅಮ್ಮ ನ ಬಳಿ ರೂಡ್ ಆಗಿ ಮಾತಾಡಿದ್ದಿಯಂತೆ’ ಅಂತ ಸಿಟ್ಟಿನಿಂದ ಫೋನ್ ಕುಕ್ಕಿರಬಹುದಾ?
’ನನ್ನ ಸೊಸೆ ಸ್ವಲ್ಪ ಮುಂಗೋಪಿ, ಆದರೂ ಒಳ್ಳೆಯವಳು, ಈ  ಭಾನುವಾರ ಆಕೆಯ ತಲೆಗೆ ಬಿಸಿ ಎಣ್ನೆ ಹಚ್ಚಿ ಅಕೆಗೆ ಎಣ್ಣೆನೀರು ಹಾಕಬೇಕು’ ಅಂತ ಆಕೆಯ ಅತ್ತೆ ಅವಳನ್ನು ನೆನೆಸಿಕೊಂಡಿರಬಹುದೇ?
ಬರುವ ಭಾನುವಾರ ಫ್ರೆಂಡ್ಸ್ ಜತೆ ಶಾಪಿಂಗ್ ಹೋಗಿ ಹೊಸ ವ್ಯಾನಿಟಿ ಬ್ಯಾಗ್ ತರುವ ಪ್ಲ್ಯಾನ್ ಹಾಕಿಕೊಂಡಿರಬಹುದಾ??
’ಸ್ವಲ್ಪ ದಾರಿ ಬಿಡಿ ನಾನು ಇಳಿಯುವ ಸ್ಟಾಪ್ ಬಂತು, ಅಂತಪಕ್ಕದಲ್ಲಿ ಕೂತಿರುವ ಹೆಂಗಸು ಹೇಳಿದಾಗ ನನ್ನ ಯೋಚನೆಗಳಿಗೆ ಬ್ರೇಕ್.’ ಅಕೆಯೆ ಪುನ: ನಿಮ್ಮ ಕೈ ತುಂಬ ಬಿಸಿಯಿದೆ’ ಜ್ವರ ಬಂದಿದೆಯ ಅಂತ ಕೇಳಿದಾಗ ’ಇಲ್ಲ, ನಾನಿರುವುದೇ’ ಹಾಗೆ ಅಂದೆ, ತಕ್ಷಣ ನಿಹಾರಿಕಳ ಬೆಳಿಗ್ಗೆ ಹೇಳಿದ್ದ ಮಾತು ನೆನೆಪಾಯಿತು. ನಿಹಾರಿಕ ನಿಗೆ ಟಚ್ ಥಿರೆಪಿ ಬೇಕು, ಅಂದರೆ hug ಮಾಡುವುದು, ಸುಮ್ಮನೆ ಮೈ ಮೇಲೆ ಬೀಳುವುದು ಇಂತಹುದನ್ನು ಮಾಡುತ್ತಿರುತ್ತಾಳೆ.ಆ ದಿನ ನಾನು ದೋಸೆ ಹುಯ್ಯುತ್ತಿರುವಾಗ ಹಿಂದಿನಿಂದ ಅಪ್ಪಿಕೊಂಡು ’ಐ ಲವ್ ಯು ಮೊಮಿ’ ಅಂದು ಎಷ್ಟು ಬಿಸಿಯಾಗಿದಿಯಾ, ನಿನ್ನ ಹೊಟ್ಟೆಗೆ ಜಿಪ್ ಇದ್ದರೆ ನಾನು ನಿನ್ನ ಹೊಟ್ಟೆಯೊಳಗೆ ಹೋಗಿ ಕೂರುತ್ತಿದ್ದೆ, ಈ ಚಳಿಗಾಲದಲ್ಲಿ ,ಅಂದಾಗ ನಾನು ಕ್ಯಾಂ ಗರು (kangaroo) ನೆನಪಾಗಿ ನಕ್ಕಿದ್ದು ನೆನಪಿಗೆ ಬಂತು.
ಮುಂದಿನ ಸ್ಟಾಪ್ ನಂದೇ. ಆಫಿಸ್ ತಲುಪಿದ ಮೇಲೆ ಪುರುಸೊತ್ತಿಲ್ಲದ ಕೆಲಸಗಳು. ಸಂಜೆ ವಾಪಸು ಮನೆಗೆ ಬರುವಾಗ ಆ ಕ್ರಾಸ್ ಬಳಿ ಒಂದು ಕ್ಷಣ ಆಕೆಯ ನೆನಪಾಗಿ ಅಲ್ಲಿ ನೋಡಿದರೆ ಅಲ್ಲಿ ಬೆಳಿಗ್ಗೆ ನಡೆದ ಆಕ್ಸಿಡೆಂಟ್ ನ ಯಾವ ಕುರುಹೂ ಇರಲಿಲ್ಲ, ನಗುತ್ತ ಹೋಗುವ ಕಾಲೇಜು ಹುಡುಗರ ತಂಡವೊಂದು ಅಲ್ಲಿಂದ ಹಾದುಹೋಗುತ್ತಿತ್ತು. life just goes on...ಅಲ್ವಾ?


October 13, 2011

ಕಲೆ...ಸ್ಪೂರ್ತಿ ಸೆಲೆ...ನಮ್ಮ ನೆಲೆ

ನಮ್ಮ ಸಂಸ್ಥೆಗಳ ನೋಂದಣಿ ಆಗಿದ್ದಷ್ಟೆ. ನಮ್ಮ ಸಂಸ್ಥೆಯ ಸೀನಿಯರ್, ದೇಶಪಾಂಡೆಯವರ  ಹಳೆ ಪರಿಚಯದವರು, ಅವರನ್ನು ಸಂಪರ್ಕಿಸಿ, ಅವರ ಮಿತ್ರರಾದ ರಶ್ಮಿ ಹೆಗ್ಡೆಯವರ ಶಂಕರಾ ಫೌಂಡೇಶನ್ (ಕನಕಪುರ ರಸ್ತೆ) ಸಂಸ್ಥೆಯನ್ನು ಇನ್ನೂ ಚೆನ್ನಾಗಿ ನಿಭಾಯಿಸಲು ಸಲಹೆ/ ಮಾರ್ಗದರ್ಶನ ಬೇಕಾಗಿ,. ’ನಿಮ್ಮಲ್ಲಿ ಯಾರದರೂ ಸಹಾಯ ಮಾಡಬಹುದ” ಅಂತ ಕೇಳಿದಾಗ ನಾವೇ ಅಲ್ಲಿಗೆ ಹೋಗಿದ್ವಿ. ಹೋದಾಗ ಅಲ್ಲಿ ಪರಿಚಯ ಆದವರು ಶ್ರೀ ಡಿ.ಟಿ. ಲೋಹಿತ್ ಅವರು. ಅತ್ಯದ್ಭುತ ಕಾಲಾವಿದರು. ಆದರೆ ನನಗೆ ತುಂಬಾ strike ಆಗಿದ್ದು ಅವರು ಬಿಡಿಸಿದ ಕುದುರೆಗಳ ಚಿತ್ರ. ಈಗ ಪಟದಿಂದ ಹೊರಗೆ ಬರುತ್ತದೇ ಎನೋ ಅನ್ನುವ ಅನುಭೂತಿ. ಅವರಿಗೆ ಹೇಳಿದ್ದೆ ನನ್ನ ಬಳಿ ಸ್ವಂತ ಮನೆ ಹಾಗೂ ಸಾಕಷ್ಟು ದುಡ್ಡು ಕೂಡಿದಾಗ ನಿಮ್ಮ ಕಲಾಕೃತಿ ತೆಗೆದುಕೊಳ್ಳುವವಳಿದ್ದೇನೆ  ಅಂತ
ನೆಟ್ ನಿಂದ ಕದ್ದಿದ್ದು...ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ...no response

ಯಾವತ್ತಿನ ಹಾಗೆ ಮೇಲಿನ topic ಗೆ ಪುನ: ಬರುವ ಮುಂಚೆ ನನ್ನ ಮತ್ತು ಒಂದು ಕುದುರೆಯ ಮೈತ್ರಿಯ ಬಗ್ಗೆ ಬರೀತೀನಿ
ಮದುವೆಯಾಗಿ ಸ್ವಲ್ಪ ಸಮಯ ತೀರ್ಥಹಳ್ಳಿಯಲ್ಲಿ ಕಳೆದು, logistic problem ನಿಂದ (ನನ್ನ ಹಳೆ ಪೋಸ್ಟನಲ್ಲಿದೆ) ನಾವು ಕೊಪ್ಪದಲ್ಲಿ ಮನೆ ಮಾಡಬೇಕಾಯಿತು. ಶ್ರೀಕಾಂತ ಬ್ಯಾಂಕ್ ನಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಆಗಿದ್ದರು. ಅವರು ಅಲ್ಲಿ ,ಬ್ಯಾಂಕ್ ನ ವತಿಯಿಂದ ರೈತರ ಗುಂಪೊಂದನ್ನು ಮಾಡಿಕೊಂಡಿದ್ದರು. ವಾರ್ಯಾಂತದಲ್ಲಿ ಅವರೆಲ್ಲ ಸೇರಿ ಬೇಸಾಯದಲ್ಲಿನ ಹೊಸ ಪದ್ದತಿ/ಕಷ್ಟ-ಕೋಟಲೇ/ಹಣಕಾಸಿನ ನೆರವು , ಬೇರೆ ಊರಿನಿಂದ, ಪರ್ಯಾಯ ಪದ್ದತಿ ಅಥವ ಬೇಸಾಯದಲ್ಲಿ ಹೊಸದೇನೋ ಸಾಧಿಸಿದವರನ್ನು ಕರೆದು Talks ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಿದ್ದರು. ಹೀಗೆ ಪರಿಚಯವಾದವರು ಭುಜಂಗರಾಯರು. ಕೊಪ್ಪದಲ್ಲಿ ಗುರ್ಜರ್ ಎಂಬುವರ ಎಸ್ಟೇಟ್ ಇತ್ತು. ಆ ಕುದುರೆ ಅವರದ್ದು. ಭುಜಂಗರಾಯರಿಗೂ, ಗುರ್ಜರ್ ಅವರಿಗು ಏನು ಸಂಬಂಧ ಅಂತ ನನಗೆ ಗೊತ್ತಿಲ್ಲ. ಯಾಕಂದರೆ ನಾನು ಅವರ ಜತೆ ಒಂದು ದಿನ ಕೂಡ ಮಾತಾಡಿಲ್ಲ. ಅವರು ಏನಾದರೂ discuss ಮಾಡಬೇಕಾದರೆ ನಮ್ಮ ಮನೆಗೆ ಬರುತ್ತಿದ್ದರು.ಒಳ್ಳೆ ತೀಡಿದ ದೊಡ್ಡ ದೊಡ್ಡ ಪೊದೆ ಮೀಸೆ ಇತ್ತು ಅವರಿಗೆ. ಕುದುರೆ ಮೇಲೆ ಬರುವುದು ಅವರ ಸವಾರಿ ನಮ್ಮಲ್ಲಿಗೆ. ನಮ್ಮ ಮನೆಯ ಗೇಟಿಗೆ ಕುದುರೆಯನ್ನು ಕಟ್ಟುತ್ತಿದ್ದರು. ನಾನು ನನ್ನ ಕೆಲಸಗಳನ್ನೆಲ್ಲ ಬಿಟ್ಟು ಅದನ್ನು ಮುದ್ದಿಸಲು ಹೋಗುತ್ತಿದ್ದೆ. ಯಾವಾಗಲೋ ಚಿಕ್ಕಂದಿನಂದು ಓದಿದ್ದ black beauty ಕತೆಯಲ್ಲಿ  ಕುದುರೆಗಳಿಗೆ ಬೆಲ್ಲ ಇಷ್ಟ ಅಂತ ಓದಿದ ನೆನಪಿನಿಂದ, ನಾನು ಅವರಿಬ್ಬರ ಕಣ್ಣು ತಪ್ಪಿಸಿ, ನನ್ನ ಭಯ್ಯ ನನಗೆ ಪ್ರತೀ ತಿಂಗಳು ಕೊಡುತ್ತಿದ್ದ ಉಂಡೆ ಬೆಲ್ಲ ಅದಕ್ಕೆ ತಿನ್ನಿಸುತ್ತಿದ್ದೆ. ಆ ಮೇಲೆ ಅವರಿಗೆ ಶ್ರೀಕಾಂತ ಹತ್ತಿರ ಏನೂ ಕೆಲಸವಿಲ್ಲದಿದ್ದರೂ ಅವರು ನಮ್ಮ ಮನೆ ಕಡೆಯಿಂದ ಹಾದು ಹೋಗುವಾಗಲೆಲ್ಲ ಆ ಕುದುರೆ ನಮ್ಮ ಮನೆ ಯಿಂದ ಮುಂದೆ ಹೋಗಕ್ಕೆ ಕೇಳದೆ ರಸ್ತೆಯಲ್ಲಿ ಮುಶ್ಕರ ಹೂಡುತ್ತಿತ್ತು. ಅವರಿಗೆ ಆಶ್ಚರ್ಯ. ಆಮೇಲೆ ಅವರಿಗೆ ಗೊತ್ತಾಯಿತು ನನ್ನ ಕಿತಾಪತಿ. ಈ ಪ್ರಕರಣ ಸುಮಾರು ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ನನಗೆ ಮೊದಲನೆ ವರ್ಷದ ಬಿ.ಎ. ಪರೀಕ್ಷೆಗೆ ಮುಂಬಯಿಗೆ ಹೋಗ ಬೇಕಾಯಿತು. ನನ್ನ ಪರೀಕ್ಷೆ ಮುಗಿಯುವಷ್ಟರಲ್ಲಿ ಶ್ರೀಕಾಂತ ಗೆ ಬೆಲ್ತಂಗಡಿ ಗೆ ವರ್ಗ ವಾಗಿತ್ತು. ನಾನು ಪರೀಕ್ಷೆ ಮುಗಿಸಿ ಬಂದ ಮೇಲೆ ಬ್ಯಾಂಕನವರಿಗೆ, ಆಪ್ತ ಮಿತ್ರರಿಗೆ ಬೀಳ್ಗೊಡಿಕೆ party , ಸಾಮನು ಪ್ಯಾಕಿಂಗ್ ಮುಂತಾದ ಕೆಲಸದಲ್ಲಿ ನನಗೆ ಕುದುರೆಯ ನೆನಪು ಮರೆತೇ ಹೋಗಿತ್ತು. ನಾವು ಕೊಪ್ಪ ಬಿಟ್ಟು ಬೆಲ್ತಂಗಡಿಗೆ ಬಂದ ಮೇಲೆ ಒಂದು ಸಲ ತಿರುಗಿ ಕೊಪ್ಪಕ್ಕೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಭುಜಂಗರಾಯರು ಸಿಕ್ಕಿದ್ದರು. ಕುಂಟುತ್ತಿದ್ದರು. ಕುದುರೆ ಬಗ್ಗೆ ಕೇಳಿದಾಗ ಅದಕ್ಕೆ ಹುಚ್ಚು ಹಿಡಿದು, ಅವರನ್ನು ಕೆಳಗೆ ಬೀಳಿಸಿದ ರಭಸಕ್ಕೆ ಅವರ ಕಾಲು ಮೂಳೆ ಮುರಿದದ್ದು, ಕುದುರೆಯನ್ನು ಸಾಯಿಸಿದ್ದು ಎಲ್ಲ ಹೇಳಿದರು. ಬೇಜಾರಾಯಿತು.
ನಾವು ಕನಕಪುರ ರಸ್ತೆಗೆ ತೆರಳಿ ರಶ್ಮಿ ಹೆಗ್ಡೆ ಜತೆ ಮಾತು ಕತೆ ಎಲ್ಲ ಮುಗಿದು ಕೆಲ ಸಮಯದ ನಂತರ ನಮ್ಮ ಸಂಪರ್ಕ ತಪ್ಪಿತು. ನಮ್ಮ ಸಂಸ್ಥೆ ಹೆಚ್ಚಾಗಿ ಹಳ್ಳಿ ಗಳಲ್ಲಿ ಕೆಲಸ ಮಾಡುವುದು. ಹಳ್ಳಿಯ ಜನತೆಗೆ ಒದಗಿಸುವ ಪಠ್ಯಪುಸ್ತಕ (training manual) ಇತ್ಯಾದಿಯಲ್ಲಿ ನಾವು , ಅವರಿಗೆ ಸುಲಭವಾಗಿ ಅರ್ಥವಾಗುವಂತೆ, ಅವರಿಗೆ ತಿಳಿಸಬೇಕಾದುದನ್ನು ರೇಖಾಚಿತ್ರ (illustration) ಮೂಲಕ ತಿಳಿ ಹೇಳುತ್ತೇವೆ. ಪಠ್ಯಪುಸ್ತ್ಕಕಗಳಲ್ಲಿ ನಾವು ಆಗಾಗ ಅಗತ್ಯಗನುಗುಣವಾಗಿ ಬದಲಾವಣೆಗಳನ್ನೂ ಮಾಡುತ್ತಿರುತ್ತೇವೆ. ಹಾಗೂ ಹೊಸ ಹೊಸ ರೇಖಾಚಿತ್ರಕಾರರಿಗೆ ಹುಡುಕಾಟ ನಡೆಸುತ್ತಿರುತ್ತೇವೆ. ಪಾಂಡುರಂಗ ರಾಯರು,




a tiny demonstration of one of the artist at the interview,  illustration for a new book 
 ಭೂಪತಿ ಮುಂತಾದವರೆಲ್ಲ ಒಂದು ಕಾಲಕ್ಕೆ ನಮಗೆ ಸಹಾಯ ಮಾಡಿದ್ದಾರೆ. ಒಂದು ಸಲ ಇಂತಹ ಒಂದು ಪುಸ್ತಕದ ಬಗ್ಗೆ ಮಾತನಾಡಲು ಶ್ರೀ ಡಿ.ಟಿ. ಲೋಹಿತ್ ರು ನಮ್ಮ ಕಛೇರಿಗೆ ಬಂದಿದ್ದರು. ಮಾತುಕತೆ, ನಮ್ಮ ಅವಶ್ಯಕತೆಗಳನ್ನು ಅವರಿಗೆ ತಿಳಿಹೇಳಿಸುವಷ್ಟರಲ್ಲಿ ಮಧ್ಯಾಹ್ನ ಊಟದ ಹೊತ್ತು. ಶ್ರೀಕಾಂತ ಅವರಿಗೆ, ’ಬನ್ನಿ ಸರ್, ನಮ್ಮ ಮನೆಯಲ್ಲಿ ಊಟ ಮಾಡುವ ’ಅಂದಾಗ ಅವರು ತಕ್ಷಣ ಒಪ್ಪಿದರು. ಅಲ್ಲೆ ಇದ್ದು ಕೇಳಿಸಿಕೊಂಡ ನಾನು, ’ಶ್ರೀಕಾಂತ, ನಾನು ಬಸ್ ನಲ್ಲಿ ಮುಂದೆ ಹೋಗಿರ್ತೀನಿ. ನೀವು ಅವರನ್ನು ಸ್ವ್ಲಲ್ಪ ಹೊತ್ತು ಬಿಟ್ಟು ಕರೆದುಕೊಂಡು ಬನ್ನಿ’ ಅಂದೆ. ನಾನು ಬೆಳಿಗ್ಗೆ ಆಫಿಸ್ ಗೆ ಬರುವ ಮುನ್ನ ಅನ್ನ, ಸಾರು, ಬೀನ್ಸ್ ಪಲ್ಯ ಮಾಡಿದ್ದೆ. ಆಫಿಸ್ ಗೆ ನಾನು ಚಪಾತಿ ಬೀನ್ಸ್ ಪಲ್ಯ ತಂದಿದ್ದೆ. ನನ್ನ ಡಬ್ಬಿ ಆಫಿಸ್ ನವರಿಗೆ ಶೇರ್ ಮಾಡಲಿಕ್ಕೆ ಹೇಳಿ, ನಾನು ಬೇಗ ಬೇಗ ಮನೆಗೆ ಬಂದು ದೊಡ್ಡಮೆಣಸಿನಕಾಯಿ ಬೋಂಡ, ಹಪ್ಪಳ-ಸಂಡಿಗೆ ಕರೆದಿಟ್ಟೆ, ಮತ್ತು ಮಸಾಲೆ ಮಜ್ಜಿಗೆ ಮಾಡಿದೆ. ಆ ಮೇಲೆ ನಾವು ಮಾತಾಡುತ್ತ  ಆರಾಮಾಗಿ ಊಟ ಮಾಡಿದ್ವಿ.  ಅವರು ವೃತ್ತಿಯಿಂದ ಇಂಜಿನಿಯರ್. ಆದರೆ ಕಲೆಯ ಬಗ್ಗೆ ಒಲವು ಹೆಚ್ಚಾಗಿ ಕೈ ತುಂಬ ಸಂಬಳ ಬರುವ ಇಂಜಿನಿಯರಿಂಗ ನೌಕರಿ ತ್ಯಜಿಸಿ, ಅವರ ಪತ್ನಿಯ ಸಲಹೆಯ ಮೇರೆಗೆ-(ಅವರು ಬ್ಯಾಂಕನಲ್ಲಿದ್ದರು) ಕಲೆಯನ್ನೇ ಮುಂದುವರೆಸಿದರು. ಹಳ್ಳಿಯ ಚಿತ್ರಣಗಳನ್ನು ತುಂಬ ಚೆನ್ನಾಗಿ ಚಿತ್ರಿಸುತ್ತಾರೆ ಅವರು. ಮಾತ್ರವಲ್ಲ ಶಂಕರ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆಯನ್ನೂ ಹೇಳಿಕೊಡುತ್ತಿದ್ದರು. ಅಂಚೆ ಮೂಲಕ ಕಲಾ ಶಿಕ್ಷಣದ ಸೌಲಬ್ಯವೂ ಇನ್ನೋರ್ವ ಮಿತ್ರರೊಡಗೂಡಿ ಒದಗಿಸುತ್ತಿದ್ದರು. ಮಾಲವಿಕ ಅದನ್ನು ಉಪಯೋಗಿಸಿಕೊಂಡಿದ್ದಾಳೆ. ಮತ್ತು ಖ್ಯಾತ ಭರತನಾಟ್ಯ ಕಲಾವಿದೆ ರಶ್ಮಿ ಹೆಗಡೆಯವರು ಅಕ್ಕ ಪಕ್ಕದ ಹಳ್ಳಿ ಹೆಣ್ಣುಮಕ್ಕಳಿಗೆ ಪ್ರತೀ ವರ್ಷ  ಉಚಿತವಾಗಿ ನೃತ್ಯ ತರಬೇತಿ ನೀಡಿ, ವರ್ಷಕ್ಕೆರಡು ಸಲ ಶಂಕರಾ ಫೌಂಡೇಶನ್ ನಲ್ಲಿ ಆ ಮಕ್ಕಳಿಂದ ಕಾರ್ಯಕ್ರಮ ನಡೆಸುತ್ತಾರೆ. ಎಲ್ಲರೂ ಅಲ್ಲಿ ಒಂದು ಸಲ ಭೇಟಿ ನೀಡಲೇ ಬೇಕು.
ಶ್ರೀ ಲೋಹಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ
http://www.khanstudiointernational.com/lohithbio.htm
ಸರಿ, ಅವರಿಗೆ ಮಾತು ಕತೆಯಾಡಲು ಬಿಟ್ಟು ನಾನು ಮುಂದೆ ಆಫಿಸ್ ಕಡೆ ಹೋದೆ. ಅವರು ನಮ್ಮ ಮನೆಯಿಂದಲೆ ವಾಪಸ್ ಹೊರಟು ಹೋದರು. ಶ್ರೀಕಾಂತ ಬಳಿ ಅವರು ಊಟ enjoy ಮಾಡಿದ್ದರ ಬಗ್ಗೆ ಹಾಗೂ ಥ್ಯಾಂಕ್ಸ್ ಕೂಡ ಹೇಳಿ ಕಳಿಹಿಸಿದ್ದರು.
ಕೆಲ ಸಮಯದ ನಂತರ ಶ್ರೀಕಾಂತ ಅವರ ಮನೆಗೆ ಹೋದಾಗ ಅವರ ಪತ್ನಿ ಗೀತಾ ಅವರು ಅವರ ಅಜ್ಜಿ ಬರೆದ ಅಡುಗೆ ಪುಸ್ತಕವನ್ನು -limited edition- ನನಗೋಸ್ಕರ ಕಳುಹಿಸಿಕೊಟ್ಟರು. ನನಗಂತು ಯಾರಾದರು ಪುಸ್ತಕ ಕೊಟ್ಟರೆ ತುಂಬ ಖುಶಿ. ಮಕ್ಕಳು ಮಾತ್ರ ನನಗೆ ಗೇಲಿ ಮಾಡಿದರು, ’ಬಹುಶಃ ನಿನ್ನ ಅಡಿಗೆ ಅಷ್ಟು ಚೆನ್ನಾಗಿರಲಿಲ್ಲವೇನೋ, ಅದಕ್ಕೆ ನೀನು ಅಡಿಗೆ ಕಲಿಯಲಿ ಅಂತ ಆ ಪುಸ್ತಕ ಕಳಿಸಿದ್ದಾರೆ’ ತುಂಬ ಹಳೆಯ ಪುಸ್ತಕ...scan ಮಾಡಿ ಹಾಕುತ್ತಿದ್ದೇನೆ, ಹಾಗೂ bachelor ಓದುಗರಿಗೆ ಬಾಯಲ್ಲಿ ನೀರು ಬರೆಸಲು ಒಂದು recipe ಸಹ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಡಿ.ಟಿ. ಲೋಹಿತ್ ಅಂತ ಗೂಗಲ್ search ಮಾಡಿದರೆ, ಅವರ ಕಲಾಕೃತಿ, ಅವರಿಗೆ ಸಂಧ ಗೌರವ ಎಲ್ಲ ನಿಮಗೆ ಕಾಣ ಸಿಗುತ್ತದೆ.
ಈ ಸಂಗತಿ ನಡೆದ ಕೆಲ ಸಮಯದ ನಂತರ ಅವರು , ಅವರ ಅರವತ್ತನೆ ವರ್ಷ ವಯಸ್ಸಿನಲ್ಲಿ, ಅವಕಾಶವನ್ನು ಹುಡುಕಿಕೊಂಡು, ಅಮೇರಿಕಕ್ಕೆ ತೆರಳಿದರು. ಈಗ ಅವರು ಅಲ್ಲಿ ತುಂಬ Demand ನಲ್ಲಿರುವ ಕಲಾವಿದರು. ಅವರ ಧೈರ್ಯವನ್ನು ಖಂಡಿತ ಮೆಚ್ಚತಕ್ಕದ್ದು.
ಇಲ್ಲಿದೆ ಪುಸ್ತಕದ ಮುಖಪುಟ




:-) ಪದೇ ಪದೇ ನಾನು ಅಡುಗೆ ವಿಷಯಕ್ಕೆ ಯಾಕೆ ಬರುತ್ತೀನಿ ಅಂತ ನಿಮಗೆ ಹೇಳ್ತೇನೆ. ತೀರ್ಥಹಳ್ಳಿಯಲ್ಲಿ ನಮಗೆ ಜಮೀನಿದೆ. ಮಾಲವಿಕ ಕಲಿತಿದ್ದು bachelors degree in Hospitality Industry (Hotel Management)..ಅಂದರೆ ಹೋಟಲ್ ಉದ್ಯಮ ನಡೆಸುವ ಅರ್ಹತೆ  ಇದೆ ಅವಳಿಗೆ. ನಮ್ಮ ತೋಟದಲ್ಲಿ ಹೊಸತೇನಾದರೂ ಮಾಡಬೇಕೆಂದು ನಮ್ಮೆಲ್ಲರ ಅಭಿಲಾಷೆ. ದುಬೈ ನಲ್ಲಿರುವ ತಮ್ಮ ಇನ್ನು ಆರು ತಿಂಗಳಲ್ಲಿ ಪುನ: ಭಾರತಕ್ಕೆ ಬರುತ್ತಿದ್ದಾನೆ. ಅವನಿಗೆ ಹೋಟಲ್ ಉದ್ಯಮ ನಡೆಸುವ ಉಮ್ಮೇದು ಬಂದಿದೆ, ಹಾಗೆ ನನ್ನ ಬ್ರದರ್ -ಇನ್-ಲಾ ಕೂಡ ಇದರಲ್ಲಿ ತುಂಬ ಆಸಕ್ತಿ ತೋರಿಸುತ್ತಿದ್ದಾರೆ. ತೀರ್ಥಹಳ್ಳಿ ಸುಂದರವಾದ ಪ್ರದೇಶ ಮಾತ್ರವಲ್ಲದೆ ಹತ್ತಿರದಲ್ಲಿ  ಟೂರಿಸ್ಟ್ interest ತಾಣಗಳು ಸಾಕಷ್ಟಿವೆ. ಕಳೆದ ಐದು ವರ್ಷದಿಂದ ನಾವು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅಲ್ಲಿ ಅಕ್ಕ ಪಕ್ಕ ಇರುವ ದೇವಸ್ಥಾನ, ಕೋಟೆ, ಗುಡ್ಡ ಗಳನ್ನು ನೋಡಿಕೊಂಡು ಬರುತ್ತ ಇದ್ದೇವೆ. ನಾವು ecotel/eco tourism ಪ್ರಾರಂಭ ಮಾಡುವ ಹುನ್ನಾರದಲ್ಲಿದ್ದೇವೆ. ಮಾಲವಿಕ ಬೇರೆ ಕಡೆ ಕೆಲಸಕ್ಕೆ ಹೋಗುವ ಇಷ್ಟ ನಮಗಿಲ್ಲ. ಸಧ್ಯಕ್ಕೆ to understand the trick of the trade' ಅವಳು ಕೆಲಸಕ್ಕೆ ಸೇರಿದ್ದಾಳೆ. ನಮ್ಮದು ಡಿಫರೆಂಟ್ ಆಗಿರುತ್ತೆ. ನಿಧಾನವಾಗಿ ಯೋಜನೆಗಳನ್ನೆಲ್ಲ ಹಮ್ಮಿಕೊಳುತ್ತಾ ಇದ್ದೇವೆ. ಎಲ್ಲರೂ ತುಂಬ excite ಆಗಿದ್ದೇವೆ. ಎಷ್ಟೆಲ್ಲ ತಯಾರಿ ನಡೆಸಬೇಕು...ಹಣಕಾಸು ವ್ಯವಸ್ಥೆ. project proposal, ಚಂದದ ಹೆಸರು, unique selling propostition (USP),brochure, interior decoration... ಸೃಜನಾತ್ಮಕ ಕೆಲಸಗಳು ಶ್ರೀಕಾಂತ, -ಮಾಲವಿಕ ಮತ್ತು ನೀಹಾ ಪಾಲು, ತಲೆ ನನ್ನ ತಮ್ಮ ಹಾಗೂ ಶ್ರೀಕಾಂತ, ಹಣಕಾಸು ಸ್ವಲ್ಪ ಮಟ್ಟಿಗೆ ನನ್ನ brother-in-law. ಮತ್ತೆ ನಂದು..ಕೇವಲ moral support. ನನ್ನ ಅಮ್ಮ ಕೂಡ ಇದರಲ್ಲಿ involve ಆಗುತ್ತಿದ್ದಾರೆ. skype ನಲ್ಲಿ ನಾವೆಲ್ಲರೂ ಸೇರಿ ಮಾತಾಡುವಾಗ ಇದೆ ನಮ್ಮ ಡಿಸ್ಕಷನ್..

ನಗರದ ಕೋಟೆಯ ಚಿತ್ರಗಳ ನಂತರ ಒಂದು ಸಣ್ಣ ಜೋಕ್


ಸೆಲ್ ಫೋನ್ ನಲ್ಲಿ ತೆಗೆದದ್ದು. ಪುರಾತತ್ವ ಇಲಾಖೆ ಈಗ ಕೋಟೆಯನ್ನು ಇನ್ನಷ್ಟು ಚೆಂದವಾಗಿಸಿದೆ
ತೀರ್ಥಹಳ್ಳಿ ಬಳಿಯ ನಗರದಲ್ಲಿರುವ ಕೋಟೆಗೆ (Nagara Fort) ಹೋಗಿದ್ವಿ . ವಾಪಸ್ ಬರ್ತಾ ಅಲ್ಲಿ ಚಿಕ್ಕದೊಂದು ಹೋಟಲ್ ಗೆ ಹೋದ್ವಿ. ಟೀ -ಬೋಂಡಾ order ಮಾಡಿದ್ವಿ. ಅವರು ಕೊಂಕಣಿಯವರು ಹಾಗಾಗಿ ನಮ್ಮ ಲೋಕಾಭಿರಾಮ ಮಾತು ಶುರು ಆಯ್ತು. ಅವರ ಹೆಂಡ್ತಿ ಮಾಲವಿಕಳಿಗೆ ಏನು ಓದ್ತಾ ಇದ್ದೀಯಾ ಅಮ್ಮ ಅಂತ ಕೇಳಿದ್ರು, ಅದಕ್ಕೆ ಮಾಲವಿಕ- Hotel Management ಮಾಡ್ತಾ ಇದ್ದೀನಿ ಆಂಟಿ’ ಅಂದ್ಲು. ಅದಕ್ಕೆ ಅವರಿಬ್ಬರೂ ನಾವು ಹೋಟಲ್ ಮ್ಯಾನೆಜ್ ಮಾಡ್ತಾ ಇದ್ದೇವಲ್ಲವಾ?? ಅದರಲ್ಲಿ ಕಲೀಲಿಕ್ಕೆ ಏನಿದೆ ಅಂದಾಗ ನಮಗೆಲ್ಲ ನಗು....
ಶ್ರೀಕಾಂತ ದೇಶ-ವಿದೇಶಗಳ ಟೂರ್ ಹೋದಾಗಲೆಲ್ಲ ಬೇರೆ ಬೇರೆ ಹೋಟಲ್ ಗಳಿಗೆ ಗೆ ಹೋಗಿ ಅಲ್ಲಿ ಏನು special ಇದೆ ಅಂತ ನೋಡಿ, ಕೇಳಿ ಅವರ kitchen ಗೆ ಎಲ್ಲ ಭೇಟಿ ನೀಡಿ , ಹೊಸ ಹೊಸ ಐಡಿಯ ಗಳನ್ನೆಲ ಕಲೆತು ಹಾಕುತ್ತಿದ್ದಾರೆ....

Its always exciting to have something to look forward to  ಅಲ್ವಾ?? ನಿಮ್ಮೆಲ್ಲರ ಶುಭ ಹಾರೈಕೆ ಖಂಡಿತ ಬೇಕು
ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಬಂತು ವಿಷಯ ಯಾವತ್ತಿನ ಹಾಗೆ........

:-)

October 5, 2011

ಮಹಾssssನವಮಿ ಮತ್ತು ಕ್ಯಾರಟ್ ಹಲ್ವಾ : carrot halwaa

ಇವತ್ತು ಬೆಳಿಗ್ಗೆ ಬೆಳಿಗ್ಗೆ ನನ್ನ ಮಿಕ್ಸಿ ಢಮಾರ್. ಅರ್ಥಿಂಗ್ ಲೀಕೆಝ್ ಅಂತೆ . ಹಬ್ಬದ ದಿನ ನಾವು ಅಕ್ಕಿ ತಿಂಡಿ ಅಂದರೆ ಅಕ್ಕಿಯಿಂದ ಮಾಡಿದ ಪದಾರ್ಥ ಏನಿದ್ದರೂ ಮಾಧ್ಯಾಹ್ನದ ಪೂಜೆ ಮುಗಿದು, ನೈವೈದ್ಯ ಎಲ್ಲ ಮುಗಿದ ಮೇಲೆ. ನಾಳೆ ವಿಜಯದಶಮಿ. ಹೇಗೂ ಉಪ್ಪಿಟ್ಟು ಅವಲಕ್ಕಿ ಅಂತ ಇವತ್ತು ರವಾ ಇಡ್ಲಿ ಮಾಡಿದೆ. (ಅಳತೆ ಒಂದು ಕಪ್ ಉದ್ದಿನಬೇಳೆಗೆ ಮೂರು ಕಪ್ ಬಾಂಬೆ ರಾವೆ.)
ಇಡ್ಲಿಗೆ ಸ್ವಲ್ಪ ತೊವ್ವೆ, ಆಲೂಗಡ್ಡೆ-ಟೋಮೆಟೋ ಪಲ್ಯ (ಹಬ್ಬದಲ್ಲಿ ನೀರುಳ್ಳಿ-ಬೆಳ್ಳುಳ್ಳಿ ಬಳಸಲ್ಲ) ಮಾಡ್ದೆ. ಚಟ್ನಿ ಮಾಡಲಿಕ್ಕೆ ಮಿಕ್ಸಿ ಆನ್ ಮಾಡಿದಾಗ ಮಿಕ್ಸಿ ಸುಟ್ಟಿಹೋಗಿ ಬಿಡ್ತು. ಇವತ್ತು ಬ್ರೆಕ್ ಫಾಸ್ಟ್ ಸ್ವಲ್ಪ ಲೇಟ್. ನಮಗೆ ಬೇಗ ತಿಂಡಿ ತಿಂದು ಅಭ್ಯಾಸ. ಇವತ್ತು ಕ್ಲೀನೀಂಗ್, ಸ್ನಾನ, ಪೂಜೆ ಅಂತ ಸ್ವಲ್ಪ ಲೇಟ್ ಆಗಿತ್ತು ಆಗಲೇ. ಚಟ್ನೀ ಇಲ್ಲ ಅಂತ ಶ್ರೀಕಾಂತ ರಾಯರು ಸ್ವಲ್ಪ ಡಲ್ ಆದ ಹಾಗೆ ಕಂಡಿತು. ಅದಕ್ಕೆ ಇನ್ನೂ ಹದಿನೈದು ನಿಮಿಷ ಕಾದರೆ ಒರಳು/ರುಬ್ಬೋಕಲ್ಲು ಕ್ಲೀನ್ ಮಾಡಿ ಚಟ್ನೀ ಮಾಡಿಕೊಡ್ತೇನೆ ಅಂದೆ.ರುಬ್ಬುವ ಕಲ್ಲನ್ನು ಉಪಯೋಗಿಸದೆ ಮೂರು ನಾಲ್ಕು ತಿಂಗಳು ಆಗಿತ್ತು. ಹಸಿವೆಯಿಂದ ಕಾಯುವ ಸ್ಥಿತಿಯಲ್ಲಿ ಇರಲಿಲ್ಲ ಯಾರೂ. ಅದಕ್ಕೆ ಇನ್ನೊಂದು suggestion ಮುಜುಗರದಿಂದ ಮುಂದಿಟ್ಟೆ. ಮುಜುಗರ ಯಾಕೆಂದ್ರೆ ಹಬ್ಬ ಆಗಿ ಹೋಟಲ್ ನಿಂದ ತರಿಸುವುದಾ ಅಂತ ಅಷ್ಟೆ!! ಅದಕ್ಕೂ ಮಾಲವಿಕ ನ ಬಳಿ ಸಿದ್ದ ಉತ್ತರ ಇರುತ್ತೆ. ’ಅಮ್ಮ’ ನಾವು ಹಿಂದೆ ಎರಡು ಸಾರಿ ಹಬ್ಬಕ್ಕೆ ತಿರುಗಾಡ್ಲಿಕ್ಕೆ ಹೋಗಿದ್ವಿ..ಆವಾಗೆಲ್ಲ ಹೋಟಲ್ ನಲ್ಲೇ ತಾನೆ ತಿಂದಿದ್ದು’ ಅಂತ ಹೇಳಿದ್ಲು. ಹಾಗಾಗಿ ಶೆಣೈ ಮಾಮನವರಿಗೆ- ಮನೆ ಬಳಿ ಇರುವ ದರ್ಶಿನಿಯಿಂದ ವಡಾ ತನ್ನಿ. ಅದರ ಜತೆಗೆ ಚಟ್ನೀ ಸಿಗುತ್ತೆ ಅಂದೆ. good idea ಅಂತ ಶ್ರೀಕಾಂತ ಹೊರಟು ಬಿಟ್ಟರು. ಅಷ್ಟರಲ್ಲಿ ನೀಹಾ ಫೋನ್ ಮಾಡಿದ್ಲು ಹೆಗ್ಗೋಡಿನಿಂದ. ಅವಳಿಗೆ ಇಲ್ಲಿನ ಕತೆ ಹೇಳಿ ನಗಿಸಿದೆ. ಅದಕ್ಕೆ ಪ್ರತಿಯಾಗಿ ಅವಳು ’ಅಗೈನ್ the day is saved by mommy' ಅಂದ್ಲು. by the way ಅವಳು ಅಲ್ಲಿ ಎಂಜಾಯ್ ಮಾಡ್ತಿದ್ದಾಳೆ ಮತ್ತು ಮುಂದಿನ ವರ್ಷ ನಾನೂ ಸಂಸ್ಕೃತಿ ಶಿಭಿರದಲ್ಲಿ ಪಾಲ್ಗೊಳ್ಳಬೇಕಂತೆ. :-) (ಶಿಭಿರ or ಶಿಬಿರ ಯಾವ ಪದ ಸರಿ??= confusion)
(ಅಂದ ಹಾಗೆ ಈ ಸಲ ಶ್ರೀಕಾಂತ ಗೆ -ರಜೆ ಇದೆ, ಎಲ್ಲಾದರೂ ಹೋಗುವ ಅಂದ್ರೆ ಕಿವಿ ಮೇಲೆ ಹಾಕ್ಕೋಳಿಲ್ಲ. ಮಾಲವಿಕ ಬೇರೆ ಕಾಲಿಗೆ ನೋವು ಮಾದಿಕೊಂಡು ಕೂತಿದ್ದಾಳೆ. ಬಿದ್ದು ಕಾಲಿನ- ankle ligament strain ಆಗಿದೆ ) :-(
ಹಾಗೆ ಇವತ್ತು ಬೆಳಿಗ್ಗೆ ನಮಗೆ ಪೊಗದಸ್ಟು ಬ್ರೇಕ್ ಫಸ್ಟ್ ಆಫ್ ಬೆಣ್ಣೆಯನ್ನು ನಾಚಿಸುವಂತ ಮೃದುವಾದ ಇಡ್ಲಿ, ಹೋಟಲ್ ನ ಮೂರು ವಡೆ.ಅದಕ್ಕೆ ನಂಚಿಕೊಳ್ಳಲು ಚಟ್ನಿ,(ಶ್ರೀಕಾಂತ ವಡೆ ಜತೆ ಹೋಟಲ್ ನವರು ಕೊಡುವ ಸಾಂಬಾರು ಬೇಡ, ಜಾಸ್ತಿ ಚಟ್ನೀ ನೆ ಕೊಡಿ ಅಂದುಬಿಟ್ಟು extra ಚಟ್ನಿ ತೆಗೆದುಕೊಂಡು ಬಂದಿದ್ದರು), ಆಲೂಗಡ್ಡೆ ಪಲ್ಯ ಮತ್ತು ತೊವ್ವೆ.
ಮಧ್ಯಾಹ್ನ ಬೂದುಗುಂಬಳಕಾಯಿಯ ಕೊದ್ದೆಲ್ (ಸಿಹಿ-ಹುಳಿ-ಖಾರ..ಚೆನ್ನಾಗಿರುತ್ತೆ ಮಾತ್ರವಲ್ಲ ದಿನವಿಡಿ ಕೈ ಘಂ ಎನ್ನುತ್ತೆ) :-), ಬದನೆಕಾಯಿ-ನುಗ್ಗೆಕಾಯಿ ಪಲ್ಯ, ಸಾರು ಮತ್ತು ಶ್ಯಾವಿಗೆ ಪಾಯಸ.
ನಾನು ರುಬ್ಬುವ ಕೆಲಸ ಒಂದು ಬಿಟ್ಟು ಅಡಿಗೆ ಮಾಡಿ ಮುಗಿಸಿದೆ. ಶ್ರೀಕಾಂತ ಮತ್ತು ಮಾಲವಿಕ ಹೋಗಿ ಹೊಸ ಮಿಕ್ಸಿ ಮಾತ್ರವಲ್ಲ ಅದರ ಜತೆ microwave ಸಹ ತೆಗೆದುಕೊಂಡು ಬಂದಿದ್ದಾರೆ. grand ಅಲ್ವಾ? ಹೊಸ ಮಿಕ್ಸಿನಲ್ಲೇ ರುಬ್ಬಿದ್ದು ಬೂದುಕುಂಬಳ ಕೊದ್ದೇಲಿಗೆ. :-)
ಗಟ್ಟಿಯಾಗಿ ಊಟ ಹೊಡೆದು, ನಾನು ಅಡಿಗೆ ಮನೆ ಕ್ಲೀನಿಂಗ ಕೆಲಸ ಮುಗಿಸಿ ಬರುವಷ್ಟರಲ್ಲಿ, ಅಪ್ಪ-ಮಗಳು ಗೊರಕೆ ಹೋಡಿತಿದ್ದಾರೆ. ನಿಹಾ ಇದ್ರೆ ನಾನು ಅವಳು ಹೊರಗಡೆ ರೂಮ್ ನಲ್ಲಿ ಕುಳಿತು ನಗುವುದೋ, ಅವಳು ಯಾರದ್ದಾದ್ರೂ ಮಿಮಿಕ್ರಿ ಮಾಡುವುದೋ, ಚಿತ್ರ ಬರೆಯುದು ಏನಾದ್ರು ಮಾಡ್ತಾ ನಾವು ಹರಟೆ ಹೊಡಿತೀವಿ. ಅವಳಿಲ್ಲದೆ ಬೇಜಾರು. ಅದಕ್ಕೆ ನಿಮ್ಮ ತಲೇನಾದ್ರೂ ತಿನ್ನುವ ಅಂತ ಇದನ್ನೆಲ್ಲ ಬರೀತಿದ್ದೀನಿ. :-)
ನಿಹಾ ಶಿಭಿರಕ್ಕೆ ಹೊರಡುವ ಮುನ್ನ ’ಅಮ್ಮ, ಸುಮಾರು ದಿನ ಆಯ್ತು ಕ್ಯಾರೆಟ್ ಹಲ್ವ ಮಾಡಿಲ್ಲ. ಇವತ್ತು ಮಾಡಿಕೊಡ್ತಿಯ’ ಅಂತ ಮುದ್ದು ಮುದ್ದಾಗಿ  ಕೇಳಿದ್ರೆ,  ನಾನು ಇಲ್ಲ ಅಂತ ಹೇಳಕ್ಕಾಗುತ್ಯ್ರೆ??
ಹಾಗಾಗಿ ನಿಮ್ಮ ಮುಂದಿದೆ ಕ್ಯಾರಟ್ ಹಲ್ವ. ಫೋಟೊ ನಿಹಾ ನೆ ತೆಗೆದಿದ್ದು.

1/2 ಕೆ.ಜಿ ಕ್ಯಾರಟ್ ತುರಿದು ಗ್ಲಾಸ್ ಅಥವ ಸಣ್ಣ bowl ನಿಂದ ಅಳೆದು ಬಾಣಲೆಯಲ್ಲಿ ಹಾಕಿ. ಅರ್ಧ ಲೀಟರ್ ಹಾಲು, ತುರಿದ ಕ್ಯಾರಟ್   cover ಆಗುವಷ್ಟು  ಹಾಕಿ ಬೇಯಿಸಿ. ಹಾಲು ಆವಿಯಾದಮೇಲೆ, ತುರಿದ ಕ್ಯಾರಟ್ ನ ಅರ್ಧ ಅಳತೆ ಸಕ್ಕರೆ ಬೆರೆಸಿ (ಉದಾಹರಣೆಗೆ ತುರಿದ ಕ್ಯಾರಟ್ ನಾಲ್ಕು ಗ್ಲಾಸ್ ಇದ್ದಲಿ, ಸಕ್ಕರೆ ಎರಡು ಗ್ಲಾಸ್.ಸ್ವಲ್ಪ ಕಡಿಮೆ ಹಾಕಿದ್ರೂ ನಡಿತದೆ. ಗಟ್ಟಿಯಾಗುತ್ತ ಬಂದ ಹಾಗೆ ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿ  ಹಾಗೂ ಏಲಕ್ಕಿ ಪುಡಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ ಎರಡು ದೊಡ್ಡ ಸ್ಪೂನ್ ತುಪ್ಪ ಬೆರೆಸಿ. ಬಿಸಿ ಬಿಸಿ ತಿನ್ನಬಹುದು ನಿಹಾ ಹಾಗೆ ಅಥವ ಬಿಸಿ ಹಲ್ವದ ಮೇಲೆ vanilla icecream ಹಾಕಿ ತಿನ್ನಬಹುದು ಮಾಲವಿಕನ ಹಾಗೆ. ನಾನು?? ಎರಡು ದಿನ ಬಿಟ್ಟು- ಉಳಿದ್ರೆ ತಿನ್ನುತ್ತೇನೆ ಅಷ್ಟೆ. ಮತ್ತೆ  ಶ್ರೀಕಾಂತ - ಬಿಸಿ ಯಿದ್ದಾಗ ಒಮ್ಮೆ, ತಣ್ಣಗಾದ ಮೇಲೆ ಇನ್ನೊಂದು ಸಲ..ಹೀಗೆ ಕ್ಯಾರಟ್  ಹಲ್ವ ತಿನ್ನುವ ಪರಿ
ನನ್ನ ಕುಟುಂಬದಲ್ಲೆಲ್ಲ ನಾನು ಮಾಡಿದ ಕ್ಯಾರಟ್ ಹಲ್ವ ನೇ ಎಲ್ಲರೂ ಇಷ್ಟ ಪಡೋದು. ನಮ್ಮ ಆಫಿಸ್ ನಲ್ಲಿ ಪಂಜಾಬ್ ನಿಂದ ಒಬ್ಬರು ಬಂದಿದ್ದರು. ಅವರಿಗೋಸ್ಕರ ನಾನು ಕ್ಯಾರಟ್ ಹಲ್ವ ಮಾಡಿದ್ದೆ. ಅವರು ಹೀಗೆ ಹೇಳಿದ್ರು , ’we always prepare carrot halwa there but this halwa is  the best one i have tasted' ಅಂದಾಗ ನಾನು ಹಾರುವುದೊಂದೆ ಬಾಕಿ
ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಒಂದು ದಿನ ಮುಂಚಿತವಾಗಿ.
:-)

October 1, 2011

ನಾನು, ಅಕ್ಕ ’subject” ಆಗಿದ್ದು

ಹಿಂದಿನ ವಾರ ನಿಹಾರಿಕಾ ಹೇಳಿದ್ಲು, ’ಅಮ್ಮ ನಾಡಿದ್ದು ಬುಧವಾರ ನನಗೆ psychology practicals ಪರೀಕ್ಷೆ. ನೀನು subject ಆಗ್ತೀಯಾ?? ಅಂತ. ನನಗೊ ಮನೆಯಿಂದ ಹೊರಗಡೆ ಹೋಗುವುದೆಂದರೆ ಬೇಜಾರು. ನಾನು, ’ಅಪ್ಪನ ಕರ್ಕೊಂಡು ಹೋಗೆ ’ ಅಂದೆ....ಅವಳು ಸ್ವಲ್ಪ ಹೊತ್ತು ಬಿಟ್ಟು, ’ಅಲ್ಲ ಬಿಸ್ಕತ್ ಮತ್ತು ಜ್ಯೂಸ್ ಕೊಡ್ತಾರೆ. ನೀನೆ ಬಾರೆ’ ಅಂದ್ಲು...-as if i am always starving....ಅವಳಿಗೊಂದು grrrrrr
ಸರಿ ನಿನ್ನೆ ಬೆಳಿಗ್ಗೆ ಬೇಗ ಬೇಗ ಕೆಲಸ ಮುಗಿಸಿ...ಶ್ರೀಕಾಂತ -'ಅಡಿಗೆ ನಾನೆ ಮಾಡ್ತೀನಿ..ನೀನು breakfast ಕೆಲಸ ಮುಗಿಸಿ ಹೊರಡು' ಅಂದ್ರು.  ನಾನು ಸ್ವಲ್ಪ ಗಂಭೀರ ಕಾಣಲಿ ಅಂತ  starch ಹಾಕಿ ಇಸ್ತ್ರಿ ಮಾಡಿದ favorite ಕಲಕತ್ತ ಕಾಟನ್  ಸೀರೆ  ಉಟ್ಟುಕೊಂಡೆ. ನಾವು ಮೂರು ಜನ 8.00 ಗಂಟೆಗೆ ಮನೆಯಿಂದ ಹೊರಗೆ ಹೊರಟ್ವಿ. ಮೂರು ಜನ ಯಾಕೆ ಅಂದ್ರೆ, ಹಿಂದಿನ ದಿನ ರಾತ್ರಿ ನಿಹಾ ಳ ಫ್ರೆಂಡ್ ಗೆ ಯಾರೂ subject ಸಿಗದೆ,ಅಳುತ್ತ, ’ಪ್ಲೀಸ್, ನಿನ್ನ ಅಕ್ಕನ ಕೇಳ್ತಿಯಾ ನನ್ನ ಪರವಾಗಿ’ ಅಂತ ಗೋಗರೀತಾ ಇದ್ಲು. 
ಇಲ್ಲಿಂದ ಮಜಿಸ್ಟಿಕ್ ಮತ್ತು ಅಲ್ಲಿಂದ ಬನಶಂಕರಿ ಬಸ್ ಹತ್ತಿಕೊಂಡು, ನಂದಾ ಥೀಯೇಟರ್ ಸ್ಟಾಪ್ ನಲ್ಲಿ ಇಳಿದು, ನಂದಾ ಥೀಯೇಟರ್ ಹುಡುಕಿದ್ದೆ ಹುಡುಕಿದ್ದು. ಕೀಟಲೆ ನೀಹಾ ಅದು ನೋಡು ನಿನ್ನ ಎದುರುಗಡೆ ಹುಲ್ಲು ಗಿಡ ಗಂಟೆ  ಎಲ್ಲಾ ಬೆಳೆದಿದೆಯಲ್ಲ್ವಾ?? ಅದೇ ಮೊದಲು ಥೀಯೇಟರ್ ಇದ್ದ ಜಾಗ ಅಂದ್ಲು. ಕಾಲೇಜು ಎಂಟರ್ ಆಗ್ತಿದ್ದ ಹಾಗೆ ನಿಹಾ ಫ್ರೆಂಡ್ಸ್ ಎಲ್ಲ ಹಲೋ ಆಂಟಿ..ಹಲೋ ಆಂಟಿ ಶುರು ಮಾಡಿದ್ರು...ಅವರೆಲ್ಲ ನನ್ನನ್ನು ನಿಹಾ ಜತೆ facebook ನಲ್ಲಿ ನೋಡಿದ್ದಾರಂತೆ :-). ಆದರೂ she looks different here ಅಂತಲೂ ಸೇರಿಸಿದರು :-(.  ಮತ್ತೆ ಉಳಿದವರಿಗೆ ಅಂದರೆ facebook ನಲ್ಲಿ ಇಲ್ಲದಿದ್ದವರಿಗೆ ಅವಳು , ’ನನ್ನ ಅಮ್ಮ ಅಂತ ಪರಿಚಯಿಸುವುದು ಬಿಟ್ಟು ನನ್ನ subject' ಅಂತಲೆ ಪರಿಚಯ ಮಾಡಿಸಿದ್ದು. grrrrrr- part-2
ಕಾಲೇಜ್ ಒಳಕ್ಕೆ ಹೋಗುವಾಗ ಸೆಕ್ಯುರಿಟಿಯವನು ಐಡೆಂಟಿಟಿ ಕಾರ್ಡ್ ಕೇಳಿದಾಗ ನಿಹಾಳ ಫ್ರೆಂಡ್...ಅಂಕಲ್ ಇವರು (ನಮ್ಮ ಕಡೆ ಬೆರಳು ಮಾಡಿ...) subjectives ಅಂದಾಗ ನಾನು ಅವರ ನಗುವಿನಲ್ಲಿ ಪಾಲ್ಗೊಂಡೆ.
ಒಳ ಹೋದ ಮೇಲೆ ನನಗೆ ಗೊತ್ತಾಗಿದ್ದು psychology lab ಗೆ ಹೋಗಲು ಮೂರು ಮಹಡಿ ಏರಬೇಕೆಂದು. ಹತ್ತಿ ಸುಸ್ತಾಯ್ತಪ್ಪ...ಎಲ್ಲೆ ಜ್ಯೂಸ್ ಮತ್ತು ಬಿಸ್ಕತ್ ಅಂದ್ರೆ ’ಅದು ಆಮೇಲೆ’ ನಿಮ್ಮ ಮೇಲೆ ಎಕ್ಸ್ಪಿರಿಮೆಂಟ್ ಎಲ್ಲ ನಡೆಸಿದ ಮೇಲೆ ಅಂದ್ಲು. (ನಾನು 11th 12th ಕ್ಲಾಸ್ ನಲ್ಲಿ ವಿಜ್ಝಾನ ವಿಷಯ ಆಯ್ದುಕೊಂಡಿದ್ದರಿಂದ ನನಗೆ science lab ಗೊತ್ತಿತ್ತು. psychology lab ಮೊದಲ ಸಲ ನೋಡಿದ್ದು...ಗಾಳಿ ಬೆಳಕು ಬರುವ ಕೋಣೆ ಚೆನ್ನಾಗಿತ್ತು)
ನಿಹಾ ಅವಳ lecturer ಗೆ ..ನನ್ನನ್ನು -ಮಾಲವಿಕ ನ್ನ introduce ಮಾಡಿದ್ಲು,’ my mom and sister' ಅಂತ
ಅವಳ lecturer 'niharika you are supposed to bring only one 'subject' ಅಂದಿದಕ್ಕೆ ಇವಳು, 'my mom is my subject, maam.. i am loaning my sister to my friend' ಅಂತ ಹೇಳಿ ಕಿಟಿ ಕಿಟಿ ನಗ್ತಾ ಇದ್ದಳು. ನಿಹಾ ಫ್ರೆಂಡ್ ಅಂತು i am nervous yaar  ಅಂತ ಎಷ್ಟೊಂದು ಸಲ ಅಂದ್ಲು. ನಿಹಾ ನೂ sudden ಆಗಿ ಅಮ್ಮ ಕಡಿಮೆ ಮಾರ್ಕ್ಸ್ ಬಂದರೆ ಬಯ್ಯಲ್ಲಲ್ಲ್ವಾ ಅಂತ ಕೇಳಿದ್ಲು. ಪಿ ಯು ಸೆಕೆಂಡ್ ನಲ್ಲಿ psychology ಯಲ್ಲಿ100 ರಲ್ಲಿ 97 ತೆಗೆದುಕೊಂಡ ಹುಡುಗಿ nervous ಆಗಿದ್ದು ಮೊದಲ ಸಲ ನೋಡಿದ್ದು ನಾನು. ಹೋಗಲಿ ಬಿಡೆ ಏನ್ ಮಹಾ ಅಂದೆ!!
ಮೊದಲು ಒಂದು ಗಂಟೆ ಅವಳಿಗೆ ಬರಹ ಪರೀಕ್ಷೆ. ನಾವು ಕಾಯ ಬೇಕಾಗಿ ಬಂತು. ಮೊದಲ ಹತ್ತು ನಿಮಿಷದಲ್ಲಿ ನಾನು ಮಾಲವಿಕ The Hindu-metro crossword ಮಾಡಿ ಮುಗಿಸಿದ್ವಿ. ಅದಾದ ಮೇಲೆ ಅವಳು ಅವಳ ಫ್ರೆಂಡ್ಸ್ ಗೆ ಟೆಕ್ಸ್ಟ್ ಮಾಡ್ತಾ ಕೂತಲು. ನಾನು ನನ್ನ ಸೆಲ್ ಫೋನ್ ಮನೆಯಲ್ಲೇ ಬಿಟ್ಟು ಬಂದಿದ್ದೆ, ಇಲ್ಲದಿದ್ದರೆ  ಅದರಲ್ಲಿ ಆಡಬಹುದಿತ್ತು..
NMKRV ನಲ್ಲಿ ಒಳ್ಳ್ಳೆ ಮರಗಿಡ ಗಳಿದ್ದು ಹಸಿರು ವಾತಾವರಣ. ಕಿಟಕಿಯಿಂದ ಪುರ್ತಿ ಕಾಲೇಜ್ campus ಕಾಣುತ್ತಿತ್ತು. ಸುಮ್ಮನೆ ಒಂದು ಸಲ ತಲೆ ಎತ್ತಿದಾಗ ಆಕಶದಲ್ಲಿ ಒಂದು ಜೆಟ್ ವಿಮಾನ ಹೊಗೆ ಉಗುಳುತ್ತ ಹೋಗುತ್ತಿತ್ತು. ಸೆಲ್ ಫೋನ್ ಮನೆಯಲ್ಲೇ ಇದ್ದಿದ್ದು ಶ್ರೀಕಾಂತ ಗೆ ತಿಳಿಸುವಾ ಅಂತ ಅಕ್ಕನ ಸೆಲ್ಲ್ ನಿಂದ ಫೋನ್ ಮಾಡಿ ಹೇಳಿದೆ.
ಒಂದು ಅರ್ಧ ಗಂಟೆ ಬಿಟ್ಟು ಶ್ರೀಕಾಂತ ಅಕ್ಕನ ಸೆಲ್ಲ್ ಗೆ ಕರೆ ಮಾಡಿ...ತೊಗರಿ ಬೆಳೆ ಸರಿ ಬೆಂದಿಲ್ಲ ಅಂದ್ರು..ನನಗೆ ಕೂಡಲೆ ಅರ್ಥ ಆಯ್ತು...ಶ್ರೀಕಾಂತ ನಳ ಮಹಾಶಯರು ತೊಗರಿ ಬೆಳೆ ಗೆ ಬದಲಾಗಿ ಕಡಲೆ ಬೆಳೆ ಬೇಯಿಸಿದ್ದಾರ ಅಂತ.....ಇನ್ನು ಸ್ವಲ್ಪ ಹೊತ್ತು ಕುಕ್ಕರ್ ನಲ್ಲಿಟ್ಟು ವಿಸಿಲ್ ಬರ್ಸಿ ಅಂದೆ. ಆಮೇಲೆ ಸಾಂಬಾರು ಪುಡಿ ಯಾವುದು, ಸಾರು-ಸಾಂಬಾರು ಪುಡಿ ಬಾಟಲು ಒಂದ ರ ಪಕ್ಕ ಒಂದಿದೆ... ಅಂತ ಕೇಳಿದರು...ಯಾವ ಬಾಟಲಿ ಮುಚ್ಚಳ ಸಲೀಸಾಗಿ ಕೈ ಗೆ ಬರುತ್ತೋ ಅದೇ ಸಾಂಬಾರ ಪುಡಿ ಅಂದೆ....ವ್very good way of identifying ಅಂತ ಫೋನ್ ಇಟ್ಟರು.
ಸೀನಿಯರ್ ಮಕ್ಕಳು ನಾವಿದ್ದ ಕ್ಲಾಸ್ ರೂಮ್ ನಲ್ಲಿ ಸೇರಿಕೊಂಡ್ರು ಎಲ್ಲರು ಉರು ಹೊಡೀತಾ ಇದ್ರು. ನಾನು ಒಂದನೆ ಕ್ಲಾಸ್ ನಿಂದ 12 ನೆ ಕ್ಲಾಸ್ ತನಕ girls ಸ್ಕೂಲ್ ನಲ್ಲೇ ಕಲಿತಿದ್ದು. ನನ್ನ ಸ್ಕೂಲ್ ನೆನಪಾಯ್ತು. ಹುಡುಗಿಯರು ಚಂದದ ಚಿತ್ತಾರ, ತಮ್ಮ ತಮ್ಮ, ತಮ್ಮ ಸ್ನೇಹಿತೆಯರ ಹೆಸರನ್ನು ಡೆಸ್ಕ್ ಮೇಲೆ carve ಮಾಡಿದ್ದರು.ಒಂದು ಡೆಸ್ಕ್ ಮೇಲಂತು ಬಿಳಿ ಪೈಂಟ್ ನಿಂದ ಚೆಂದದ ರಂಗೋಲಿ ನೇ ಬಿಡಿಸಿದ್ದರು. ಮುಸ್ಲಿಮ್ ಹುಡಿಗಿಯರು ತಮ್ಮ ಬುರ್ಖಾ ಗಳನ್ನು ಬಿಚ್ಚಿ, ಫೋಲ್ಡ್ ಮಾಡಿ ಬ್ಯಾಗ ನಲ್ಲಿಟ್ಟು.. text  ಮಾಡುವುದರಲ್ಲಿ, ಓದುವುದರಲ್ಲು ಮಗ್ನ ರಾದರು. 
ಮುಂಬಯಿನ ಟ್ರೈನ್ ನಲ್ಲಿ ಹೋಗುವಾಗ, ನನ್ನ ಕಾಲೇಜಿನ ಹುಡಿಗಿಯರು ಲೇಡಿಸ್ ಕಂಪಾರ್ಟಮೆಂಟ್ ನಲ್ಲಿ ಅವರ ಬುರ್ಖಾ, ಹಿಜಾಬ್ ತೆಗೆದು make up ಎಲ್ಲ ಮಾಡಿಕೊಳ್ಳುವುದು ನನಗೆ ಅಶ್ಚರ್ಯ ತರುತ್ತಿತ್ತು. ವಾಪಸ್ ಕಾಲೀಜಿನಿಂದ ಮನೆಗೆ ಹಿಂದಿರುಗುವಾಗ ಮುಖ ಎಲ್ಲ ಸ್ವಛ್ಚ ತೊಳೆದು ಪುನ: ಬುರ್ಖಾ ಹಾಕಿಕೊಂಡು ಹೊರಡುತ್ತಿದ್ದರು. ನನ್ನ ಫ್ರೆಂಡ್ ನಜಮಾ ಗೆ ಹಾಗೆ ಯಾಕೆಂದು ಕೇಳಿದ್ರೆ , ’ನಹಿ ತೊ ಮೆರೆ ಪಿತಾಜಿ ಔರ್ ಭಾಯಿ  ಮುಝೆ ಜಾನ ಸೆ ಮಾರ್ ಡಾಲೆಂಗೆ” ಅಂತಿದ್ದು ನೆನಪಿಗೆ ಬಂತು. ಆವಾಗ ಸಿಂಪಲ್ ಆಗಿದ ಬುರ್ಖಾ ಈಗ ಚಂದ ಚಂದ designer ಮಾದರಿ ಯಲ್ಲಿ ಬರುತ್ತೆ.. ಕಪ್ಪು ಬಣ್ಣದ ಬುರ್ಖಾ ಮಾತ್ರ ನೋಡಿದ ನನಗೆ ಈಗ ನೇವಿ ಬ್ಲು, ಮರೂನ್ ಬಣ್ಣ ಹಾಗೂ ತಲೆ ಮೇಲೆ ಹಾಕುವ ಬಟ್ಟೆಗೆ (ಹಿಜಾಬ್) ಚಂದದ ಪಿನ್ ಗಳು ಕಾಣ ಸಿಕ್ಕಿದವು.
ಎಲ್ಲ ಪರಿಕ್ಷಾರ್ಥಿಗಳು ಒಂದೊಂದು subject ಗಳನ್ನು ತಂದಿದ್ದರು. ಅದರಲ್ಲಿ ಮೂವರು ಗಂಡಸರು ಇದ್ದು,ಮುಜುಗರದಿಂದ  ನಮ್ಮನ್ನೆಲ್ಲ ಮಿಕಿ ಮಿಕಿ ನೋಡುತ್ತಿದ್ದರು.
ಸುಮಾರು ಒಂದು ಗಂಟೆ ಕಾದ ಮೇಲೆ ನಮ್ಮನ್ನು ಒಬ್ಬೊಬ್ಬರಾಗಿ ಕ್ಲಾಸಿಗೆ ಕರೆದಾಯ್ತು. ಒಳಗೆ ಹೋಗುವ ಮುಂಚೆ ನಿಹಾರಿಕ ನನಗೆ ಅಮ್ಮ- please behave ಅಂತಂದ್ಲು.grrrrrr...(part-3)
ನನ್ನ ಮೇಲೆ ನಿಹಾರಿಕ experiment ಮಾಡುತ್ತಿದ್ದಾಗ  ಒಬ್ಬ ಹುಡುಗಿಗೆ maze learning experiment ಬಂದಿತ್ತು. ಅವಳ subject  ನ್ನು ಆ ಎಕ್ಸ್ಪೆರಿಮೆಂಟ್ ಗೆ ಒಳಪಡಿಸಿ ಅದರ observation ಅವಳು ಕೂಡಲೇ invigilator ಗೆ submit ಮಾಡಬೇಕು. ಪಾಪ ಆ ಹುಡುಗಿ maze ಬರಿಬೇಕಾದ ಕಡೆಯೆಲ್ಲ maize ಅಂತ ಬರೆದಿದ್ದಳು ಅನ್ನಿಸುತ್ತೆ...ನರ್ವಸ್ ನೆಸ್ಸ್ ಅಥ್ವಾ unconsciously ಇರಬಹುದು). ಅದಕ್ಕೆ ಅವಳ lecturer, 'whats  ಥಿಸ್ maize?' ಅಂತ ಕೇಳಿದಾಗ ಆಕೆ ’corn' maam ಅಂದಳು.ನನ್ನ ಎದುರಿಗೆ ಕುಳಿತ ನಿಹಾರಿಕ ಖಿಕ್ ಅಂದ್ಲು ಒಂದು ಸಾರಿ, ನಾನು ನಗು ತಡೆದುಕೊಳ್ಳಲ್ಲು ನನ್ನ ಬಳಿಯಿದ್ದ ಪೆನ್ ನೋಯುವಷ್ಟು ಗಟ್ಟಿಯಾಗಿ ಹಿಡಿದುಕೊಂಡೆ. ಯಾಕಂದ್ರೆ ನಗಲು ಶುರು ಮಾಡಿದ್ರೆ ಅದು ನಾನ್ ಸ್ಟಾಪ್. ಊಟಕ್ಕೆ ಹೋಗುವಾಗ ದಾರಿಯಲ್ಲಿ ನಕ್ಕಿದ್ದೆ ನಕ್ಕಿದ್ದು. ಅದು ಮಾತ್ರ ಅಲ್ಲ ಎಲ್ಲರ ಪೇಪರ್ಸ್ correct ಮಾಡ್ತಾ, lecturer ಗಟ್ಟಿಯಾಗಿ ಕಮೆಂಟ್ ಕೂಡ ಪಾಸ್ ಮಾಡ್ತಾ ಇದ್ದರು. ನಗು ತಡೆಹಿಡಿಯಲು ಸುಮಾರು ಪ್ರಯಾಸಪಡಬೇಕಾಯಿತು.
ಮಕ್ಕಳು ನಮ್ಮ ಮೇಲೆ experiment (General perception) ಮಾಡುವಾಗ ಲೆಕ್ಚರರ್ ಗಮನವಿಟ್ಟು, ಅವರು ಸರಿಯಾಗಿ experiment ನಡೆಸುತ್ತಿದ್ದಾರಾ ಇಲ್ಲವಾ ಅಂತ ನೋಡುತ್ತ ಇದ್ದರು. ಪ್ರತಿಯೊಂದು step ಗೂ ಅಂಕ ಕೊಡಲಾಗುತ್ತದೆ. ಒಟ್ಟು ಮೂರು ಗಂಟೆಯ ಪರೀಕ್ಷೆ. 40 ಮಾರ್ಕ್ಸ್. ಆಮೇಲೆ ನಾವು third block ಗೆ ಬಂದು ಊಟ ಮಾಡಿ, ಅಲ್ಲಿಂದ british library ಕಡೆ ಹೊರಟ್ವಿ. ಅಲ್ಲಿನ ತಂಪು ವಾತಾನೂಕುಲಿತ ವಾತಾವರಣದಲ್ಲಿ ಸ್ವಲ್ಪ ಹೆಚ್ಚೆ ಸಮಯ spend ಮಾಡಿ ಅಲ್ಲಿಂದ ಹೊಸ ಬುಕ್ಸ್ ಪಡೆದುಕೊಂಡು ಮನೆಗೆ ಕಡೆ ಹೊರೆಟೆವು
ಹೀಗೆ ಒಂದು ದಿನ ನಾನು, ಅಕ್ಕ'subject' ಆಗಿದ್ದು, ಅಮೇಲೆ ರಸ್ತೆಯ ಧೂಳು, ಟ್ರಾಫಿಕ್, ಸದ್ದಿಗೆ, ಸೆಕೆಗೆ, ಬೆವರಿಗೆ subjected to ಆಗಿದ್ದು ಮನೆಗೆ 5 ಗಂಟೆ ಸುಮಾರಿಗೆ ತಲುಪಿದ್ವಿ
ಹ್ಮ್ಮ್ಮ್ ಶ್ರೀಕಾಂತ ಮಾಡಿದ ಕಡಲೆ ಬೇಳೆ ಸಾಂಬಾರ್ ಸಖತ್ ಮಜವಾಗಿತ್ತು!!
*here akka means Malavika
ಸ್ವಲ್ಪ ಹೆಚ್ಚೆ ಆಂಗ್ಲ ಪದಗಳ ಬಳಕೆಯಾಗಿದೆ. ದಯವಿಟ್ಟು ಕ್ಷಮೆಯಿರಲಿ.....
:-)