April 19, 2010

ರಾಮಚಂದ್ರಾಪುರ ಮಠದ ಗೋ ಶಾಲೆ

ಇತ್ತೀಚೆಗೆ ತೀರ್ಥಹಳ್ಳಿಗೆ ಹೋದಾಗ ಹೊಸನಗರ ದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಹೋಗಿದ್ದೆವು. ಈ ಮಠದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಮಠದ ಆವರಣ ಉತ್ತಮ ನೀರಾಶ್ರಯ ಭೂಮಿಯನ್ನು ಒಳಗೊಂಡಿದ್ದು ಗೋವುಗಳಿಗೆ ಬೇಕಾದ ಹಸಿರು ಹುಲ್ಲು ಇಲ್ಲೇ ಬೆಳೆಯುತ್ತದೆ. ಕೊಟ್ಟಿಗೆ, ಹಟ್ಟಿಯನ್ನು clean ಆಗಿ ಇಡಲಾಗಿದ್ದು, ಅವುಗಳ ಗೋಡೆಗಳ ಮೇಲೆ ಮುದ್ದಾದ ಚಿತ್ತರಗಳನ್ನೂ ಬರೆದಿದ್ದಾರೆ. ಉತ್ತಮ ಹಾಗೂ ವಿಶಿಷ್ಟ ಗುಣದ ದೇಶಿಯ ತಳಿಗಳ ಗೋವುಗಳ ಸಂಗ್ರಹವನ್ನು ಇಲ್ಲಿ ನೋಡಬಹುದು. ಶ್ರೀ ರಾಘವೇಶ್ವರ ಸ್ವಾಮಿಗಳು ಕೈಗೊಂಡ ಕಾಯಕವು ಅತ್ಯಂತ ಶ್ಲಾಘನೀಯ. ದೇಶ ವಿದೇಶಗಳಿಂದ ಜನರು ಇಲ್ಲಿಗೆ ಭೇಟಿ ನೀಡಿ ತಮಗಾಗುವಷ್ಟು ಧನ ಸಹಾಯ ಕೂಡ ಮಾಡುತ್ತಾರೆ. ಹಿಂದಿ-ಇಂಗ್ಲೀಷ ಮಾತಾನಾಡುವ ಯುವಕರು ಅತ್ಯಂತ ಖುಶಿಯಿಂದ ಮಠದ ವಿವರವನ್ನು ಒದಗಿಸುತ್ತಾರೆ. ಸಾವಯವ ಪದ್ದತಿಯಲ್ಲಿ ಬೆಳೆಸಿದ ಅರಿಶಿನ ಪುಡಿ, ಕಶಾಯದ ಪುಡಿ, ಔಷಧೀಯ ಪುಡಿಗಳು, ಗೋಮೂತ್ರ, ಜೇನುತುಪ್ಪ , ಗಂಧದ ಕಡ್ಡಿ ಇಲ್ಲಿ ಲಭ್ಯ.
 ರೋಗ ಪೀಡಿತ / stray ಹಸುಗಳನ್ನೂ (ಕೆಲವಕ್ಕೆ ಬೆನ್ನಿನಿಂದ ಮೂರನೆ ಕಾಲು ಬಂದಿತ್ತು, ಕೆಲವಕ್ಕೆ ಕಾಲಿನ ಬುಡಕ್ಕೆ(foot)ಗೆ ಏನೋ ರೋಗ ಬಂದಿತ್ತು, ಕೆಲವು ಹಸುಗಳ ಕಣ್ಣಿನಿಂದ ಕೀವು ಒಸರುತ್ತಿತ್ತು, ಸುಮಾರು ಕಣ್ಣು ಕಾಣದೇ ಇರುವ ಹಸು ಕರುಗಳೂ ಇದ್ವು)ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.
ಮಠದ ಆವರಣ ತುಂಬ ಸ್ವಚ್ಛವಾಗಿಡಲಾಗಿದೆ. ಭೇಟಿ ನೀಡಿದವರಿಗೆಲ್ಲ ಬಿಸಿ ಬಿಸಿ ಕಶಾಯ ನೀಡುತ್ತಾರೆ. ಅಲ್ಲಿ ತಂಗುವ ವ್ಯವಸ್ಥೆ ಕೂಡ ಇದೆ.
ಮಠದ / ಗೋ ಶಾಲೆಯ ಹೆಚ್ಚಿನ ಭಾಗವನ್ನು ಶ್ರೀಕಾಂತ್ video ದಲ್ಲಿ ಸೆರೆ ಹಿಡಿದಿದ್ದರಿಂದ, ಇಲ್ಲಿ ಕೆಲವೇ ಫೋಟೊಗಳನ್ನು ಹಾಕಿದ್ದೇನೆ.


Entrance

ಆಕಳು ಕರು.


ಹಿಂಬಾಗಿಲಿನಲ್ಲಿರುವ ಕಟ್ಟೆ. ಅದರಲ್ಲಿ ಪುಟ್ಟ ನಂದಿ .ನೆಲದ ಮೇಲೆ ಸುತ್ತಲೂ ತುಲಸಿ ಗಿಡಗಳು



gigantic
ಎಲ್ಲರೂ ತುಂಬಾ ಸಾಧುಸ್ವಭಾವದವರು, ನಮ್ಮೆಲ್ಲರಿಂದ ನೇವರಿಸಿಕೊಳ್ಳುವ ಆಸಕ್ತಿ. ನಾವೂ enjoy ಮಾಡಿದ್ವಿ. :-) ಗೋಡೆ ಮೇಲಿನ ಚಿತ್ತಾರ ಸ್ವಲ್ಪ ಕಾಣಿಸುತ್ತಿದೆ.

ಬರಗೂರು...ತಮಿಳುನಾಡಿನಿಂದ ಬಂದ ತಳಿ

ಇದರ ಕೊಂಬು ನನಗೆ ತುಂಬಾssssss ಇಷ್ಟ

ಕಾಂಗಯಂ ಜಾತಿಯ ತಳಿ. ಮಾಲು ನಿಹಾ ಏನಾದರು ತಂದಿದ್ದಾರಾ ಅಂತ ಕುತೂಹಲದಿಂದ ಅವರೆಲ್ಲ ಆ ಕಡೆ ತಿರುಗಿದಾಗ

ಇದರ coat ನ sheen ನನಗೆ ತುಂಬಾ ಇಷ್ಟವಾಯ್ತು. ಒಳ್ಳೆ ವೆಲ್ವೆಟ್ ತರಹ ಮೈ. ಕೊಂಬು ನೋಡಿ!!!!

ಮುದ್ದು ಮುದ್ದು.



Oh!! just look at him. Magnificant ಅಲ್ವಾ?

ಪತಿ - ಪತ್ನಿ ಔರ್ wow


ನನ್ನ ಶ್ರೀಕಾಂತ್ and ಗೋವು (ಸಿರಸಿ-ಸಿದ್ದಾಪುರದ (north kanara)ಕೊಂಕಣಿಯಲ್ಲಿ ಗಂಡನಿಗೆ ಗೋವ್ ಅಂತಲೂ ಸಂಭೋಧಿಸುತ್ತಾರೆ.)hehehe



ಸಮ್ರಾಟ್ another pose. ನಮಗೆ ಸೊಪ್ಪ್ ಹಾಕಲಿಲ್ಲ :-) 


ತಲೆಯ shape ನೋಡಿ!! unique ಆಗಿದೆಯಲ್ವಾ?


ಇದು ಸಮ್ರಾಟ್ ನನ್ನ favorite of the lot. ಮುಟ್ಟಲಿಕ್ಕೆ ಬಿಡುವುದಿಲ್ಲ. ಸಿಟ್ಟಿನ ಎತ್ತು.
(hey!! ಇದು ನನ್ನ 50 ನೇ ಪೋಸ್ಟ್. did not think i would manage it. ಥ್ಯಾಂಕ್ಸ್ to ’ಶ್ರೀಕಾಂತ್ &'ರಘು ಅಪಾರ' for their confidence in my ability to write in kannada)


:-)

April 12, 2010

ಮೀರ್ ಮುಖ್ತಿಯಾರ್ ಅಲಿ


ನಿನ್ನೆ ಸಂಜೆ ಎರಡು ಗಂಟೆಗಳ ಕಾಲ , ತಮ್ಮ ವಿಶಿಷ್ಟ ಸೂಫಿ ಸಂಗೀತದಿಂದ ನಮ್ಮನೆಲ್ಲ ರಂಜಿಸಿದರು,ಬಿಕಾನೇರ್ (ರಾಜಸ್ಥಾನ್) ಬಳಿಯ ಪುಟ್ಟ ಹಳ್ಳಿ ಪೂಗಲ್ ನಿಂದ ದೇಶ ವಿದೇಶಗಳಲ್ಲಿಯೂ ಅವರ ಹಾಡುಗಳಿಂದ ಪ್ರಖ್ಯಾತರಾದ ಮೀರ್ ಮುಖ್ತೀಯಾರ್ ಅಲಿ.
ಹರೀ..ಮೌಲಾ....ರಾಮ್...ರಹೀಮ್, ಅಲೀ...ಬಜರಂಗ್ ಬಲೀ....ಹೀಗೆ ಸಾಗಿತ್ತು ಅವರ ಹಾಡಿನ ಪ್ರಯಾಣ. ಸಂಗೀತಕ್ಕೆ ಯಾವುದೇ ಅಡೆತಡೆಗಳಿಲ್ಲ ಅಲ್ಲವೇ? music is so divine

ಚಿತ್ರಕಲಾ ಪರಿಷದ್ ನ ಬಯಲು ಉದ್ಯಾನದಲ್ಲಿ ನಡೆದ ಈ ಸಂಗೀತ ಮಂಜರಿ ಕಾರ್ಯಕ್ರಮದಲ್ಲಿ, ಕೇಳುಗರು ಅಲಿಯವರ ಹಾಡು, ಸಾರಂಗಿ, ತಬಲಾ, ಢೋಲಕ್, ಹಾರ್ಮೋನಿಯಮ್ ನ ಸಾಥ್ ಗೆ ತಲೆ ದೂಗಿಸುತ್ತ ಇದ್ದರೆ, ಅಲ್ಲಿನ ಮರಗಿಡಗಳು ಇನಿತೂ ಅಲ್ಲಾಡದೇ ಸಂಗೀತವನ್ನು ಕೇಳುತ್ತಿದ್ದವು. ವೆಂಡರ್ ಕಣ್ಣು ಪುಸ್ತಕದ ಬರಹಗಾರರು-ವಿಶ್ವ ವಿಖ್ಯಾತ ಛಾಯಾಗ್ರಾಹಕರು ಕೆ. ಶಿವು ಬಂಡೆಯ ಮೇಲೆ ಕೆಳಗೆ ಚುರುಕಾಗಿ ಓಡಾಡುತ್ತ ’perfect moment' ನ ಫೋಟೋ ಕ್ಲಿಕ್ಕಿಸುವುದನ್ನು ನೋಡುವುದೂ ಕೂಡ ಒಂದು ವಿಶೇಷವಾಗಿತ್ತು.

ಸಂತ ಕಬೀರ್ ದಾಸರ ’ಜಬ್ ಮೈ ಥಾ ತಬ್ ಹರಿ ನಹಿ ,ಅಬ್ ಹರೀ ಹೈ ಮೈ ನಹೀಂ...ಸಬ್ ಅಂಧಿಯಾರಾ ಮಿಠ ಗಯಾ ಜಬ್ ದೀಪಕ್ ದೇಖಿಯಾ ಮಹೀಂ(here mein- me, refers to our ego)ಅದರ ಅರ್ಥವನ್ನು ಹಾಡಿನ ಮಧ್ಯ ವಿವರಿಸುತ್ತ ಅವರ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಲಿದ್ದರೆ, ನಮಗೆ ಸಮಯದ ಪರಿವೇ ಆಗಲಿಲ್ಲ. ಮೇರೆ ಪಿಯಾ ಘರ್ ಆಯೆ ಓ ಲಾಲನಿ ಹಾಡುವಾಗ ಕೇಳುಗರೂ ಅವರೊಂದಿಗೆ ಚಪ್ಪಾಳೆ ತಟ್ಟುತ್ತ ದನಿ ಮೇಳೈಸಿದರು.
ಚದರಿಯಾ ಝಿನಿ ರೆ ಝಿನಿ, ಹೈ ರಾಮ ರಸ ಭಿನಿ....ಮನುಷ್ಯ ಜೀವನವನ್ನು ಬಟ್ಟೆಗೆ ಹೋಲಿಸುತ್ತ,ಹತ್ತಿಯು, ಬೀಜ ದಿಂದ ದರ್ಜಿಯವರೆಗಿನ ತನಕ ಕೈಗೊಂಡ ಪ್ರವಾಸದ ಕತೆ ಹೇಳುತ್ತ ಹಾಡಿದ ಜೈಪುರಿ ಭಾಷೆಯ ಹಾಡು ನನಗೆ ತುಂಬಾ ಇಷ್ಟ ಆಯ್ತು. ಒಂದು ತುಂಬಾ ಚೆನ್ನಾದ ಪಂಜಾಬಿ ಹಾಡಿತ್ತು. ಅದರ lyrics ಮರೆತು ಹೋಗಿದೆ. ಅದರ ಅರ್ಥ ಹೀಗಿದೆ. ಒಂದು ಸಲ ವೃಕ್ಷಕ್ಕೆ  ಬೆಂಕಿ ಬೀಳುತ್ತೆ. ಆದರೆ ಆ ವೃಕ್ಷದಲ್ಲಿ ಗೂಡು ಕಟ್ಟಿ ವಾಸಿಸುವ ಪಕ್ಷಿಗಳು ಹಾರಿ ಹೋಗದೇ ಮರದಲ್ಲೆ ಉಳಿಯುತ್ತವೆ. ಮರ ಕೇಳುತ್ತೆ..ನನಗಾದರೆ ನನ್ನ ಬೇರುಗಳು ನೆಲದಲ್ಲಿ ಸೇರಿಕೊಂಡಿವೆ, ಆದರೆ ನೀನು ರೆಕ್ಕೆಗಳ ಸಹಾಯದಿಂದ ಹಾರಿ, safe ಜಾಗಕ್ಕೆ ಹೋಗಬಹುದಲ್ಲವಾ?? ಅದಕ್ಕೆ ಪಕ್ಷಿ ಹೇಳುತ್ತೆ, ’ಮೊಟ್ಟೆಯಿಂದ ಮರಿಯಾಗುವ ತನಕ ನನಗೆ ರಕ್ಷಣೆ ಕೊಟ್ಟಿದ್ದಿಯಾ, ನಿನ್ನ ಫಲ ಪುಷ್ಪಗಳಿಂದ ನನಗೆ ಆಹಾರ ಒದಗಿಸಿದ್ದೀಯಾ, ಈಗ ಆಪತ್ಕಾಲದಲ್ಲಿ ನಿನ್ನನ್ನು ಬಿಟ್ಟು ಹೋಗುವುದು ನನ್ನ ಧರ್ಮವಲ್ಲ’...ಈ ಹಾಡು ತುಂಬ racyಯಾಗಿತ್ತು.
ಹಿಂದಿನ ಸಲ ಅವರ ಕಾರ್ಯಕ್ರಮ miss ಮಾಡಿದ್ದೆ. ಈ ಸಲ iam glad i could attend. ಈ ಅನುಭವ ವರ್ಣಿಸಲಸಾಧ್ಯ. ಕೇಳೆತೀರಬೇಕು.
ವಾರ್ತಾ ಇಲಾಖೆ ಹಾಗೂ ಚಿತ್ರಕಲಾ ಪರಿಷದ್ ಜಂಟಿ ಯಾಗಿ ಈ ಕಾರ್ಯಕ್ರಮವನ್ನು, ನಿನ್ನೆ ದಿನಾಂಕ 10.04.2010 ರಂದು ಆಯೋಜಿಸಿತ್ತು
:-)

April 6, 2010

ಛಂದ ಪುಸ್ತಕ ಮುಖಪುಟ ಸ್ಪರ್ಧೆ

Chandha Pusthaka had organised a cover page contest (December 2009)for Radhesh Tolpadi's book of Childrens Poem titled 'Hello Hello Chandamama'. among 130 entries 30 were shortlisted. Niharika's was one of them. Thought will add it to my blog. of course i have her permission to do so.
:-)
http://raghuapara.blogspot.com/2010/01/blog-post_10.html

Below are two other attempts she made. Did not send them though, for at the time we were travelling and it was in home PC. first  one i scanned, other was an unfinished attempt in the netbook. The shortlisted coverpage was done in 10 minutes flat  :-)