February 26, 2025

ಶಿವರಾತ್ರಿ 2025

 ನನ್ನ ಫ್ರೆಂಡ್ ಸೂಸಿ ಕಾಲ್ ಮಾಡಿ 'ಮಾಲತಿ ಇವತ್ತು ಪೂಜೆ ಮಾಡುವಾಗ ನಿನ್ನ ನೆನಪು ಬಂದು ನಗ್ತಾ ಇದ್ದೆ..

ನಾನು : ಯಾಕೆ?!🤔🤔
ಅಲ್ಲ ನೀನು ದೇವರಲ್ಲಿ ನಂಬಿಕೆ ಇಲ್ಲ ಅಂತ ಎಷ್ಟು ತನ್ಮಯಳಾಗಿ ದೇವರನ್ನೆಲ್ಲ ಕ್ವೀನ್ ಮಾಡ್ತೀಯ....
ಹೂಂ ಅದಕ್ಕೆ ನಗು ಯಾಕೆ ಬಂತು..
ಚಳಿಗಾಲದಲ್ಲಿ ಒಮ್ಮೆ ನೀನು ದೇವರ ಮೂರ್ತಿಗಳನ್ನೆಲ್ಲ ಬಿಸಿ ನೀರಿನಿಂದ ತೊಳೆಯುತ್ತಾ..'ಪಾಪ ಅವರಿಗೂ ಚಳಿ ಆಗುತ್ತಲ್ಲವಾ' ಅಂದಿದ್ದು ನೆನಪಾಗಿ ನಗು ಬಂತು..ನಿನ್ನ ತನ್ಮಯತೆಯೇ ನಿನ್ನ ಭಕ್ತಿ.....
ನನಗೆ ದೇವರಲ್ಲಿ ನಂಬಿಕೆಯಿಲ್ಲ ಅಂದ್ರೆ ಬೇರೆಯವರಿಗೆ tension.. ಅವರದ್ದೇ ಆದ ಒಂದು ಸಮಾಧಾನ ನನಗೋಸ್ಕರ  ಕೊಂಡುಕೊಳ್ಳುತ್ತಾರೆ,, ಅಮ್ಮನನ್ನೂ ಒಳಗೊಂಡು.
ಹೌದು ನನಗೆ ದೇವರ ಮೂರ್ತಿಗಳೆಲ್ಲ ಲಕಲಕ ಹೊಳೆಯುವಂತಿರಬೇಕು. ನಾನು ಹುಣಸೆ ಹುಳಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದಕ್ಕೆ ಉಪ್ಪು ಹಾಕಿ, ದೇವರನ್ನು ಉಜ್ಜಲಿಕ್ಕೆ ಎಂದು ಒಂದು eco ಫ್ರೆಂಡ್ಲಿ ಬ್ರಶ್ ಒಂದನ್ನು ಇಟ್ಟಿದ್ದೇನೆ. 🙂








ಮೊದಲೆಲ್ಲ ದೇವರ ಪೀಠ ತಿಂಗಳಿಗೊಂದು ಸಲ ಕ್ಲೀನ್ ಮಾಡುತ್ತಿದ್ದೆ...ಈಗ ಮೆಟ್ರೋ ಕಾಮಗಾರಿಯ ಧೂಳಿಲ್ಲ ಆದರೆ ಮನೆಯ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ನೆಲವನ್ನು ಆಗೆಯುತ್ತಿದ್ದಾರೆ..ಅದಕ್ಕೆ ವಾರಕ್ಕೆ ಒಂದು ಸಲ ಸಾದಾ ಕ್ಲೀನಿಂಗ್...ಹಬ್ಬ ಹರಿದಿನಗಳಲ್ಲಿ ವಿಶೇಷ  ಕ್ಲೀನಿಂಗ್...🙂🙂 
ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಉಪವಾಸ, ಜಾಗರಣೆ ಮತ್ತು ಮೌನವನ್ನೂ ಆಚರಿಸಿ 👍👍🙏

February 21, 2025

ಸಂಚಿಯಿಂದ ಒಂದು ನೆನಪು - Netflix docu-series

 


netflix  ನಲ್ಲಿ the roshans annuva documentary ,ಬಂದಿದೆ.ಬಚೆನ್ನಾಗಿ ಮಾಡಿದ್ದಾರೆ. ಹಿರಿಯ ರೋಷನ್ ರಿಂದ ಕಿರಿಯ ಹೃತಿಕ್ ರೋಷನ್ aಅವರ ಇಬ್ಬರು ಮಗಂದಿರ ಪೀಳಿಗೆ, ಅವರ ಸಂಗೀತದ ಪಯಣ. b&wಜಮಾನಾದಿಂದ ಇಲ್ಲಿಯವರೆಗೆ!!! ನಾನು.ಒಬ್ಬಳೇ ಕೂತು ನೋಡಿದೆ. ನಾನು documentary ಎಲ್ಲ ನೋಡೋದು ಕಡಿಮೆ


ಇಲ್ಲಿ ಪ್ರಸ್ತುತ ಪಡೆಸಿರುವ ಎಲ್ಲ ಹಳೆ ಹಾಡುಗಳನ್ನು ಅವರ ಜತೆಗೆ ಹಾಡಿದೆ....ಮುಂಬೈ ನಲ್ಲಿ ಬೆಳೆದರೂ, ಬ್ಯಾಂಕ್ ನಲ್ಲಿ  ತಂದೆ ಫಿಲ್ಮ್ financing ಖಾತೆ ಹೊಂದಿದ್ದರೂ, ತೀರ ಬುದ್ದಿ ಬಂದ ಮೇಲೆ ಸಿನಿಮಾಗೆ ಹೋಗಿದ್ದು, ನೆನಪಿಲ್ಲ ಅಥವಾ ಶಾಲಾ ಕಾಲೇಜಿಗೆ ಓದುತ್ತಿದ್ದಾಗ ನಮಗೆ ಮಿತ್ರರೊಂದಿಗೆ ಸಿನಿಮಾಗೆ ಹೋಗಲು ಅನುಮತಿ ಕೂಡ ಇರಲಿಲ್ಲ. ಶಾಲೆಯಲ್ಲಿ ತೋರಿಸಿದ ಸಿನಿಮಾಗಳು ಬಿಟ್ಟು...

ಆದರೆ ಮನೆಯಲ್ಲಿ ಸದಾ ಕಾಲ ಹಾಡುತ್ತಿದ್ದ ರೇಡಿಯೋ ಮೂಲಕ ಹೆಚ್ಚಿನ ಹಾಡುಗಳು ಬಾಯಿಪಾಠವಾಗಿತ್ತು, ಅಲ್ಲದೆ ಅಮ್ಮ ಸುಶ್ರಾವ್ಯ ಕ0ಠದಿಂದ ದಿಂದ ಹಾಡುಗಳನ್ನು ಹಾಡುತ್ತಿದ್ದರು.
ನಾನು ಆ ಸಮಯ ಹುಟ್ಟಿದ್ದು ನನ್ನ ಸೌಭಾಗ್ಯ ಅಂತಲೇ ಹೇಳ ಬಹುದು. ಆ ಜಮಾನಾಕೆ ಎಳೆದೋಯ್ತು ಈ documentary.  ವಾಪಸ್ ಅಲ್ಲಿಗೆ ಹೋಗುವಾ ಅನ್ನಿಸಿಬಿಡ್ತು 🤔
ಅಮ್ಮ ಅಪ್ಪ ಕೆಲ ಸಮಯ ಅವರ ಮಿತ್ರರೊಂದಿಗೂಡಿ ಲಾಸ್ಟ್ show ಸಿನಿಮಾಗೆ, ನಮ್ಮನ್ನು ಮನೆಯೊಳಗೆ  ಕೊಡಿಟ್ಟು,ಬೀಗ ಹಾಕಿ ಹೋಗುತ್ತಿದ್ದರು.


ಆ ಒಂದು ಸಿನಿಮಾಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ನಾನು ಮಲಗಬಹುದು ಎಂಬ ಅಂದಾಜಿತ್ತೇನೋ. ಆದರೆ ಆ ಸಿನಿಮಾದ ಹಾಡುಗಳು ನನ್ನಲ್ಲಿ ಉಳಿದುಕೊಂಡು ಬಿಟ್ಟಿತು. ಅದರಲ್ಲಿನ ಕೆಲ scene ಗಳೂ ನನ್ನಲ್ಲಿ ಉಳಿದುಕೊಂಡು ಬಿಟ್ಟಿತು. ಸಿನಿಮಾದ ಹೆಸರು ಎಲ್ಲ ನೆನಪಿರಲಿಲ್ಲ. ಯು ಟ್ಯೂಬ್ ನಲ್ಲಿ ಒಂದು ಹತ್ತು ವರ್ಷದ ಹಿಂದೆ ಓ ಮಾಯಿ ರಿ ಹಾಡು ಟೈಪ್ ಮಾಡಿ ಗೂಗಲಿಸಿ ಆ ಸಿನಿಮಾ ನೋಡಿದೆ. ರೆಹಾನಾ ಸುಲ್ತಾನ್ ಮತ್ತು ಸಂಜೀವ್ ಕುಮಾರ್ ಮುಖ್ಯ ಪಾತ್ರ, ಸಿನಿಮಾ ಹೆಸರು 'ದಸ್ತಕ್'  ಆ ಕಾಲಕ್ಕೆ ಈ ಸಿನಿಮಾ ಬೋಲ್ಡ್ ಅಂತಲೇ ಹೇಳಬಹುದು. ಅಮ್ಮ ಅಜ್ಜಿಗೆ ಅದರ ಬಗ್ಗೆ ಕೇಳಿದರೆ ನನ್ನ ಬಾಯಿ ಮುಚ್ಚಿಸಿದ್ದರು. 😀
ಅಜ್ಜ ಮನೆಗೆ ಬಂದಿರುವವರ ಜತೆ ನನ್ನ ಆಂಗ್ಲ ಓದಿನ ಪ್ರಾವೀಣ್ಯ ತೋರಿಸಿಕೊಂಡರೆ, ಅಮ್ಮ , ಸಿನಿಮಾದ ನೃತ್ಯ ಹಾಗೂ ಹಾಡನ್ನ ನನ್ನಿಂದ ಮಾಡಿಸುತ್ತಿದ್ದರು.
ಅಕ್ಕ ಕೂಡ ಹಳೆ ಹಾಡುಗಳನ್ನು ಗುನುಗುಣಿಸ್ತಾಳೆ...ನಾನು ಹಾಡೊದನ್ನು ಕೇಳಿ..🙂
ಇಷ್ಟೆಲ್ಲ ನೆನಪಾಯಿತು ಆ docuseries ನಿಂದ

February 18, 2025

Brahmin's Soda Factory

 ನಾವು ನಿಹಾ ಗೆ ಮೈಸೂರಿಗೆ ಗಾಡಿಯಲ್ಲಿ ಹೋಗಿ ಬಿಡ ಬೇಕಾದಲ್ಲಿ, ಅಕ್ಕ instagram ನಿಂದ ನೋಟ್ ಮಾಡಿಕೊಂಡ sight seeing ಜಾಗ ಅಥವಾ ತಿನ್ನುವ ಜಾಗ ಗಳಿಗೆ ಭೇಟಿ ನೀಡಿ ಬರುವ ಪರಿಪಾಠ. ನನಗೆ ಈ ಸಲ ರಂಗನತಿಟ್ಟು ಗೆ ಹೋಗಬೇಕೆಂದಿತ್ತು. ಅಕ್ಕನಿಗೆ ಮೂಡ್ ಇರಲಿಲ್ಲ. ಶ್ರೀಕಾಂತ್ ಕೆಲದದಲ್ಲಿ ಬ್ಯುಸಿ...ಹಾಗಾಗಿ ಈ ಒಂದು ಐಸ್ ಕ್ರಿಮ್ ಅಂಗಡಿಗೆ ಹೋಗುವಾ ಅಂದ್ಲು ಅಕ್ಕ. 'ಹೊಗೆ ಬೆಳಿಗ್ಗೆ ಹತ್ತು ಗಂಟೆಗೆ ಐಸ್ ಕ್ರೀಮ್ ಅಂಗಡಿ ಓಪನ್ ಇರುತ್ತಾ ಅಂದ್ರೆ...ಹೌದಮ್ಮ 10 ಗಂಟೆ ಅಂದಿದ್ರು instagram ನಲ್ಲಿ ಅಂದ್ಲು. ಸರಿ ಮ್ಯಾಪ್ ಹಾಕ್ಕೊಂಡು ಹೋದ್ವಿ

ಓಪನ್ ಬಿಡಿ, ಆಗಲೇ ಸುಮಾರು ಜನ ಐಸ್ ಕ್ರೀಮ್ ತಿಂದು ಹೋದ ಕುರುಹು ಇತ್ತು 😁. ಅಕ್ಕ ಮತ್ತು ಸಾರಥಿ ಅಜಯ್ ಫ್ರೂಟ್ ಸಲಾಡ್ ಮತ್ತು ಐಸ್ ಕ್ರೀಮ್ ತೆಗೊಂಡ್ರು, ನಾನು ಗಡ್ಬಡ್...ಚೆನ್ನಾಗಿತ್ತು ಐಸ್ ಕ್ರೀಮ್..ತುಂಬಾ ಸಿಹಿ ಇರಲಿಲ್ಲ. ಹದವಾದ ಸರ್ವಿಂಗ್..




ಕ್ಯಾಶ್ only ನೋಡಿ, ಅಜಯ್ ಯಾಕೆ ಯು ಪಿ ಐ ಮಾಡಿಕೊಂಡಿಲ್ಲ ಅಂದ್ರೆ..ರಶ್ ಇದ್ದಾಗ ಸುಮಾರು ಜನ ದುಡ್ಡು ಕೊಡದೆ ಹೋಗಿದ್ದಾರೆ ಅಂದ್ರು. ವಯಸ್ಸಾದ  ಮೂವರು ಜನ ಮ್ಯಾನೇಜ್ ಮಾಡುವುದು. 91 ವರ್ಷ ಹಳೆಯ ಅಂಗಡಿ. ಬ್ರಿಟಿಷ್ ರ ಕಾಲದ ಕುರ್ಚಿ ಮೇಜು. 


ಅಜಯ್ 'ಇವರು ಶಿವಮೊಗ್ಗ ದಿಂದ ನಿಮ್ಮ ಅಂಗಡಿ ಹುಡುಕಿಕೊಂಡು ಬಂದಿದ್ದಾರೆ ' ಅಂದು ಬಿಟ್ರು. 

'ಹೌದಾ ಶಿವಮೊಗ್ಗದಿಂದ ಬಂದ್ರಾ? ಅಲ್ಲಿ ನನ್ನ ಮಗಳು ಇದ್ದಾಳೆ, ವಿನೋಬ ನಗರದಲ್ಲಿ...ಆಯುರ್ವೇದಿಕ್ ಡಾಕ್ಟ್ರು...ನೀವು ಮೈಸೂರಿಗೆ ಹೇಗೆ..

ನಾನು- ಮಗಳು ಕೆಲಸದ ನಿಮಿತ್ತ ಇಲ್ಲಿದ್ದಾಳೆ. ಅವಳಿಗೆ ಬಿಡಲಿಕ್ಕೆ ಬಂದಿದ್ಫು....ಚೆನ್ನಾಗಿತ್ತು ಐಸ್ ಕ್ರೀಮ್. thank you ಅಂದೆ.

ನಾವು ಮಾತುಕತೆಗೆ ತೊಡಗಿರುವಾಗಲೇ ಹಲವು ಜನ ಜ್ಯುಸ್ ಕುಡಿದು ಹೋದ್ರು. ಹೆಚ್ಚಿನ ಜನ ಸೊಗಡೆ ಬೇರಿನ ಜ್ಯುಸ್ ತೆಗೊಂಡ್ರು..ಅದು ಬಿಟ್ಟರೆ ರೋಸ್ ಮಿಲ್ಕ್. ಮುಂದಿನ ಸಲ ನಿಹಾ ಮತ್ತು ಶ್ರೀಕಾಂತ್ ಜತೆ ಹೋಗಿ ಅದನ್ನು ಟೇಸ್ಟ್ ಮಾಡಬೇಕು 😀❤️

Brahmin's Soda Factory 094839 01667 https://g.co/kgs/uY9tQKp

ಇನ್ನೊಂದು ಆಶ್ಚರ್ಯ ಕಾದಿತ್ತು. ಮಕ್ಕಳಿಗೆ ದಾಸ್ ಪ್ರಕಾಶ್ ಹೋಟಲ್ ಬಗ್ಗೆ ಹೇಳಿ ಹೇಳಿ ತಲೆ ಕೆಡಿಸಿದ್ದೆ. ಗೂಗಲ್ ಮಾಡಿದಾಗ permanently closed ಬಂದಿತ್ತು. ಅಲ್ಲಿ ಸಿಸ್ ಕ್ರೀಮ್ ತಿಂದು ಸ್ವಲ್ಪ ಓಡಾಡುತ್ತಿದ್ದಾಗ ಅಲ್ಲೇ ದಾಸ್ ಪ್ರಕಾಶ್ ಹೋಟಲ್ ಸಿಕ್ಕಿ ಬಿಡ್ತು. ಹೌದು ಈಗ ಬೋರ್ಡ್ ಮಾತ್ರ ಉಳಿದಿದೆ. ಮದುವೆ ಆದ ಹಾಗೆ ಒಂದು ಸಲ ಭೇಟಿ ನೀಡಿದ್ವಿ...38 ವರ್ಷಗಳ ಹಿಂದೆ..ಅಕ್ಕನಿಂದ ಫೋಟೋ ತೆಗೆಸಿಕೊಂಡೇ




February 15, 2025

Book Release

 ನಮ್ಮ ಅಪಾರ್ಟ್ಮೆಂಟ್ ನ ಪಾರ್ಟಿ ಹಾಲ್ ನಲ್ಲಿ ನಮ್ಮ ರೆಸಿಡೆಂಟ್ ಒಬ್ಬರ ತಂದೆಯವರು ಬರೆದ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನಗೆ ಪ್ರತ್ಯೇಕವಾಗಿ ಆಹ್ವಾನ ವಿದ್ದರಿಂದ ನಸ್ನು ಹೋಗುವ ಪ್ಲಾನ್ ಹಾಕಿಕೊಂಡೆ. ಅಕ್ಕನಿಗೆ ಬೆಳಿಗ್ಗೆ ಕೇಕ್ ಆರ್ಡರ್ ಇಲ್ಲದ್ದರಿಂದ ಅವಳು ಬರುತ್ತೇನೆ ಎಂದಳು.

ನಾನಿವರೆಗೆ (ಹಲವು ವರ್ಷಗಳು ಸಂದಿವೆ) ವಸುಧೇಂದ್ರ, ಬಿಟ್ಟರೆ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ಬಿಟ್ಟರೆ...ಇತ್ತೀಚೀನ  ದಿನಗಳಲ್ಲಿ ಈ ಬಿಡುಗಡೆ ಕಾರ್ಯಕ್ರಮಕ್ಕೆ ಎದುರು ನೋಡಿದ್ದು.

ಬೆಳಿಗ್ಗೆ ಉಪ್ಪಿಟ್ಟು, ಶೀರ, ಚಟ್ನಿ, ಕಾಫಿಯಾದ ಮೇಲೆ ಕಾರ್ಯಕ್ರಮ ಶುರು.

ಬರಹಗಾರರ 8 ನೆ ಪುಸ್ತಕವಂತೆ ಇದು. ಹೃದಯಕ್ಕೆ ಸಂಬಂದಿಸಿದ ಶಸ್ತ್ರ ಚಿಕಿತ್ಸೆಗೆ ಒಳಗಾದ ಬರಹಗಾರರು ತುಂಬಾ ಹೆದರಿಕೊಂಡಾಗ, ಪೋರ್ಟಿಸ್ ಆಸ್ಪತ್ರೆಯ ಡಾ. ಸುದರ್ಶನ್   ತುಂಬಾ ಧೈರ್ಯ ನೀಡಿದ್ದರಂತೆ. ಹಾಗೆ ಇವರು ಬರಹಗಾರೆಂದು ತಿಳಿದು, ಚಿಕಿತ್ಸೆಯ ನಂತರ ಇವರ ಒಡನಾಡಿಯಾದರಂತೆ. ಡಾ ಸುದರ್ಶನ್ ಆ ದಿನದ ಮುಖ್ಯ ಅತಿಥಿ. 



ಈ ವರ್ಷ ಅವರ 75 ನೆ ಹುಟ್ಟುಹಬ್ಬ, ಹಾಗೂ 50 ನೆ ವಿವಾಹ ಆಚರಿಸಿದ್ದಾರೆ..ಅದಕ್ಕೆ ಅವರಿಗೆ ಪುಟ್ಟದೊಂದು ಸನ್ಮಾನ ಕಾರ್ಯಕ್ರಮ ಅವರ ಸ್ನೇಹಿತ ರಿಂದ....

ಪುಸ್ತಕದ ಹೆಸರು 'ಮಂಥನ - 75'  ಬರಹಗಾರರ ಹೆಸರು ಬಿಮಾ ಉಮೇಶ್- ಸಿಹಿ ಕಹಿ ಚಲನಚಿತ್ರದಿಂದ ಖ್ಯಾತರಾದವರು.. ಚಲಚಿತ್ರ, ಕಿರುತೆರೆ ಕಾರ್ಯಕ್ರಮಕ್ಕಾಗಿ ಬರೆದಿದ್ದಾರಂತೆ. ಕಾರ್ಯಕ್ರಮದ ನಿರೂಪಣೆ ಪುನಃ ಕಿರುತೆರೆ ಖ್ಯಾತಿಯ ..ಕೆನರಾ ಬ್ಯಾಂಕ್ ನ ಮಾಜಿ ಬಿ ಎಂ ಸಂಪತ್ ಕುಮಾರ

ಪುಸ್ತಕದ ಕುರಿತು ಮಾತನಾಡಿದರು ಬಿ. ಎಂ ಮಿಥುನ್...

ನನಾಂತೂ ಎಂಜಾಯ್ ಮಾಡಿದೆ. ,🙂❤️.

ಇಲ್ಲಿದೆ ಆಹ್ವಾನ ಪತ್ರಿ





February 11, 2025

Annual Day 2025

ಪ್ರತಿ ವರ್ಷ ಜನವರಿ 26 ರಂದು ನಮ್ಮ ಬ್ಯಾಂಕ್ ಆಫಿಸರ್ಸ್ ಕಾಲೋನಿ ಯವರು annual ಡೇ ಆಚರಿಸುತ್ತೇವೆ. ಅದಕ್ಕಿಂತ ಮುಂಚೆ ವಿವಿಧ ಕ್ರೀಡೆ, ಕಲೆ , ಪುಟ್ಟ ಮಕ್ಕಳಿಗೆ ಆಟದ ಸ್ಪರ್ಧೆ ಎಲ್ಲ ನಡೆದು ಬಹುಮಾನವನ್ನು 26 ರಂದು ಕೊಡುತ್ತಾರೆ. ಅಪಾರ್ಟ್ಮೆಂಟ್ ನವರದ್ದು ಸ್ಟಾಲ್ ಗಳನ್ನು ಇಡುತ್ತಾರೆ..ತಿಂಡಿ, ಬಟ್ಟೆ-ಬರೆ ಮುಂತಾದ್ದು. ಅಕ್ಕ ಈ event ಗೆ ಯಾವಾಗಲೂ ಕಾತುರದಿಂದ ಎದುರು ನೋಡುತ್ತಾಳೆ. ಈ ವರ್ಷ ಕೇಕ್ ಜತೆ ಗೇಮ್ ಸ್ಟಾಲ್ ಕೂಡ ಹಾಕಿದ್ದಳು. ನಾನು ಕೇಕ್ ಮಾರುವ ಬಗ್ಗೆ ನಿಗಾ ವಹಿಸಿದೆ. ಒಂದೇ ಸಲಕ್ಕೆ ಮಕ್ಕಳು ದೊಡ್ಡವರು ನಮ್ಮ ಸ್ಟಾಲ್ ಗೆ ಲಗ್ಗೆ ಇಟ್ಟರು...ನಿಹಾಗೆ ಬರಲಿಕ್ಕೆ ಆಗಲಿಲ್ಲ, ಶ್ರೀಕಾಂತ್ ಆಫಿಸ್ ನಲ್ಲಿನ ಯಾವುದೋ crises ಬಗ್ಗೆ ಗಮನ ಇದ್ರಿಂದ ನಂಗೆ ಸ್ಟಾಲ್ ನಿಭಾಯಿಸಲು ಸ್ವಲ್ಪ ಕಷ್ಟ ಆಯ್ತು. ಇದರ ಮಧ್ಯೆ ನನ್ನ ಮೊಬೈಲ್ ಕಾಣದೆ ಸ್ವಲ್ಪ ಹೈರಾಣಾದೆ  .ಕೊನೆಗೆ ಅದು ಮನೆಯಲ್ಲೇ ಇತ್ತು. ಅಕ್ಕ ಕೆಲ ಕಪ್ ಕೇಕ್ ಮೇಲೆ ಚೆಂದದ ಚಿಟ್ಟೆ ಅಂಟಿಸಿದ್ದಳು. ಅವೆಲ್ಲ ಖರ್ಚಾದ ಮೇಲೆ ಇಬ್ಬರು ಮಕ್ಕಳಿಗೆ ಚಿಟ್ಟೆ ಇದ್ದ ಕೇಕ್ ಬೇಕೆಂದು ತುಂಬಾ ರಂಪ ಮಾಡಿ ಅಳಲಿಕ್ಕೆ ಶುರು ಮಾಡಿದರು. ಅಕ್ಕನ ಆಟದ ಸ್ಟಾಲ್ ಚಿತ್ರ ತೆಗೆಲಿಕ್ಕೂ ಪುರುಸೊತ್ತಾಗಲಿಲ್ಲ. ತುಂಬಾ ಅಡ್ಡಿಕ್ಟಿವ್ ಆಗಿತ್ತು. 

ಅಕ್ಕನ ಮೆಕ್ಸಿಕನ್ ರೈಸ್ ಕೂಡ ರುಚಿಯಾಗಿದೆ ಅಂತ ಪುನಃ ಪುನಃ ಬಂದು ತಿಂದವರು ಹೆಚ್ಚು. ಹೊಸ ರುಚಿ ಈ ಸಲದ್ದು ಮಿಲ್ಲೆಟ್ ಮಂಡಕ್ಕಿ ಬಾರ್...ತುಪ್ಪ ಎಣ್ಣೆ/ಜಿಡ್ಡು ಹಾಕದ ಬಾರ್ ತುಂಬಾ ರುಚಿ ಅನಿಸ್ತು ನನಗೆ. ಉಳಿದದ್ದನ್ನು ಸ್ಯಾಂಪಲ್ ಆಗಿ ಆಫಿಸ್ ಗೆ ಕಳಿಸಿದೆ. ಎಲ್ಲರೂ ರುಚಿಯಾಗಿದೆ ಅಂದ್ರು ಅಂತ ಶ್ರೀಕಾಂತ್ ತಿಳಿಸಿದರು. 🙏❤️

ಕೇಕ್ ಗಳನ್ನು ಕೆಳಗಿನ ಲಿಂಕ್ ನಲ್ಲಿ ಕಾಣಬಹುದು 🙏🙏❤️

https://youtube.com/shorts/mze3SimLZME?si=i8RoobiqrqGx3u5R

pc : anagha Bhat

February 6, 2025

ಛೋಟಿ ಬಚ್ಚಿ ಹೋ ಕ್ಯಾ?

 ಹೌದು ಚಾಕಲೇಟ್ ವಿಷಯದಲ್ಲಿ ನಾನು ಛೋಟಿ ಬಚ್ಚಿ ಅಂದ್ರೆ ಪುಟ್ಟ ಮಗು ನೆ ನಾನು

ಇವತ್ತು ಬೆಳಿಗ್ಗೆ ನಮ್ಮ ಮನೆಗೆ ನಮ್ಮ ಆಫಿಸ್ ನ ಹಿರಿಯರೊಬ್ಬರು ಬಂದಿದ್ದರು. ಅವರು ಟಿ, ಕಾಫಿ ಬಿಡಿ ಅನ್ಯರ ಮನೆಯಲ್ಲಿ ನೀರು ಸಹ ಕುಡಿಯಲ್ಲ. ನಾನು ಇವೆತ್ತು ಕುಚ್ಚಲಕ್ಕಿ ಗಂಜಿ ಮತ್ತು ಬೆಳ್ಳುಳ್ಳಿ ಚಟ್ನಿ ಮಾಡಿದ್ದೆ...ಊಟ ಮುಗಿಸಿದ್ದಷ್ಟೆ. 

ಮಾಮ ಬ್ರೆಕ್ಫಾಸ್ಟ್ ಆಯ್ತಾ ಅಂತ ಕೇಳಿದೆ. ಅವರು ಒಂದರ್ಧ ಗ್ಲಾಸ್ ಕಾಫಿ ಮಾಡಿ ಕೊಡಿ ಮಾಯಿ ಅಂತ ಕೊಂಕಣಿಯಲ್ಲೇ ಹೇಳಿದರು. ಅವರು  ಮಾಧ್ವ ಭ್ರಾಹ್ಮಣರು...ಮನೆ ಮಾತು ಕನ್ನಡ ಆದರೆ ಹಲವಾರು ವರ್ಷ ಬ್ಯಾಂಕ್ ಕೆಲಸದ ನಿಮಿತ್ತ ಉಡುಪಿಯಲ್ಲಿದ್ದುದರಿಂದ ಒಳ್ಳೆಯ ಕೊಂಕಣಿ ಮಾತನಾಡುತ್ತಾರೆ. ಮಾಡಿ ಕೊಟ್ಟ ಕಾಫಿ ತುಂಬಾ ಚೆನ್ನಾಗಿದೆ ಎಂದು ಹೊಗಳಿದರು. ನನಗಂತೂ ಆಶ್ಚರ್ಯ...😁. ಅವರು ನನಗಿಂದು ಪಾರ್ಲ್ ಪೊಪ್ಪಿನ್ಸ್ ಕೊಟ್ಟರು. ನಾನಂತೂ ಖುಷಿಯಿಂದ ತೆಗೊಂಡೆ. ಅದಕ್ಕೆ ಅಕ್ಕ 'ಪುಟ್ಟ ಹುಡುಗಿ ತರಹ ಮುಖ ಎಷ್ಟು ಖುಷಿಯಿಂದ ಅರಳಿದೆ' ಎಂದಳು


ಹೀಗೆ ಹಲವಾರು ವರ್ಷಗಳ ಹಿಂದಿನ ಘಟನೆ ನೆನಪಾಯ್ತು. ತೀರ್ಥಹಳ್ಳಿಗೆ ಚೌತಿ ಯಂದು ಹಲವಾರು ನೆಂಟರು ನಮ್ಮಮನೆಗೆ ಊಟಕ್ಕೆ. ಅವರಲ್ಲೊಬ್ಬರು 'ಪತ್ರೊಡೆ ಬಿಟ್ಟು ಎಲ್ಲ ಅಡುಗೆಗಳನ್ನು ಬಡಿಸಬಹುದು ಅನ್ನೋವ್ರು.  ನನಗೆ ಮದುವೆಯಾಗಿ ತೀರ್ಥಹಳ್ಳಿಗೆ ಸೇರಿ ನಾಲ್ಕು ವರ್ಷವಾಗುವವರೆಗೆ ಇದೆ ಕತೆ ನಡೆಯಿತು. ಆಷ್ಟರೊಳಗೆ ಮುಂಬೈಯ ಪುಟ್ಟ ಕುಟುಂಬದಲ್ಲಿ ಬೆಳೆದ 21 ವರ್ಷದ  ನಾನು ಪೂಜೆಯ ಅಡುಗೆಯ ಸುಮಾರೆಲ್ಲ ಜವಾಬ್ದಾರಿ ನ ವಹಿಸಿಕೊಳ್ಳಲಾರಂಭಿಸಿದ್ದೆ..ಅಕ್ಕ (co sister) ಅವರ ಸರಿ ಸಮಾನ ಅಡುಗೆ ಕೆಲಸ ವಹಿಸುತ್ತ ಮೋದಕ, ಉಂಡಲಕಾಳು, ಸಿಹಿ ಅವಲಕ್ಕಿ, ಪತ್ರೊಡೆ,  ದಪ್ಪ ಮೆಣಸಿನ ಬೋಂಡ ಪೂರ್ತಿ ನನ್ನ ಜವಾಬ್ದಾರಿ. ಆ ವರ್ಷ ಎಲ್ಲರಿಗೂ ಪತ್ರೊಡೆ ಬಡಿಸುತ್ತ, ಅವರ ಬಳಿ ಬಂದಾಗ ಒಂದು ಚಿಕ್ಕ ತುಂಡು ಪತ್ರೊಡೆ ಬಡಿಸಲಾ ಎಂದಾಗ ಅವರು ಹೂ0 ಅಂದರು. ತಿಂದು ಮಲ್ಲಮ್ಮ ಚೆನ್ನಾಗಿದೆ ಪತ್ರೊಡೆ ಅಂದಾಗ, ನಾನೇ ಮಾಡಿದ್ದು ಅಂದೆ...ಅದಕ್ಕೆನನ್ನ ಅಕ್ಕ 'ಚಾನ್ಸ್ ನಿನ್ನದು...ಸೂರ್ಯ ಇವತ್ತು ಬೇರೆ ದಿಕ್ಕಿ ನಲ್ಲಿ ಉದಯಿಸಿರಬಹುದು ಎಂದು ತಮಾಷೆ ಮಾಡಿದ್ದು ನೆನಪಾಯ್ತು. 

😁😁

February 4, 2025

ಕಾರಂಜಿ ಕೆರೆ ದೋಣಿ ವಿಹಾರ ಮತ್ತು ಮೃಗಾಲಯ

 ಕೇವಲ ಫೋಟೋ ತೆಗಿಲಿಕ್ಕೆ ಅಂತ ಹೋಗಿದ್ದು. ಒಳ್ಳೆ ವಾಕ್ ಆಯಿತು.

              ಮೈಸೂರಿನ ಸುಂದರ ಬೆಳಗು
ಕಾರಂಜಿ ಕೆರೆ ದಡದಲ್ಲಿ ಪುಟ್ಟ ಸುಂದರ ನಂದಿ

ಅನಘಳ ಫೋಟೋ ಪೋಸ್

        ನಿಹಾಳ ದೂಡಲ್ ಅಕ್ಕ ಇನ್ ಸುಖಾಸನ

ಕಾರಂಜಿಯಿಂದ ನೀರು ಬಿದ್ದ ರಭಸಕ್ಕೆ ಮೂಡಿದ ಕಾಮನಬಿಲ್ಲು. ನಾವು ಒಂದು ದೋಣಿ  ವಿಹಾರ ಮಾಡಿದೆವು








ಮೃಗಾಲಯ












ಭಾನುವಾರವಾದ್ದರಿಂದ  ಸಿಕ್ಕಾಪಟ್ಟೆ ಜನಸಂಧಣಿ. ಶಾಂತವಾಗಿರಿ ಅನ್ನುವ ಬೋರ್ಡ್ ಇದ್ದರು ಕಿರುಚಾಡಿ ಪ್ರಾಣಿಗಳಿಗೆ ತೊಂದರೆ ಕೊಡುವ ದೊಡ್ಡವರೆನಿಸಿಕೊಂಡವರು ಕೂಡ, ಮಕ್ಕಳಿಗೆ ಏನೇ ಹೇಳಿ ಪ್ರಯೋಜನವಿಲ್ಲ. ಸೆಖೆ ಇರುವುದಕ್ಕೆ ಏನೋ ಹೆಚ್ಚಿನ ಪ್ರಾಣಿ ಮಲಗಿದ್ದವು, ಮಂಗ ಮತ್ತು ಹಕ್ಕಿಗಳನ್ನು ಬಿಟ್ಟು.

February 2, 2025

ಕುಕ್ಕರಹಳ್ಳಿ ಕೆರೆ walk

 3 ದಿನ ಮೈಸೂರಲ್ಲಿ ನಿಹಾ ಮನೆಯಲ್ಲಿ ನಮ್ಮ ಠಿಕಾಣಿ. ಬಾ ಅಮ್ಮ ಸುಮಾರು ಸಮಯ ಆಯ್ತು ನೀವೆಲ್ಲ ಬರದೆ, ಮಜಾ ಕರೆಂಗೆಅಂದ್ಲು. ಶ್ರೀಕಾಂತ್ ಕೊನೆ ಕ್ಷಣ ಕೈ ಕೊಟ್ಟರು..ಇಲ್ಲದಿದ್ದರೆ ಗಾಡಿಯಲ್ಲಿ ಬರೋದು ನಮ್ಮ ಪ್ಲ್ಯಾನ್. 🙂. ಮಾಲವಿಕಾ ಳ ಸ್ನೇಹಿತೆ ಅನಘಾ ನಮಗೆ ಜೊತೆ ಆದ್ಲು. ಬಸ್ ನಲ್ಲಿ ಮಾತಾಡ್ತಾ ಬಂದ್ವಿ...ಮೈಸೂರು ತಲುಪಿದ್ದೆ ಗೊತ್ತಾಗಲಿಲ್ಲ.

ಇವತ್ತು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆ ಕಫ ವಾಕ್ ಹೋದ್ವಿ. ಬೆಂಗ್ಳೂರಿಗಿಂತ ಮೈಸೂರೆ ಸೆಕೆ...

ಕೆಲವು ಚಿತ್ರಗಳು












Anagha is an artist and professional photographer specializing in candid photography. Do follow her on facebook and instagram, to know more...👍🙂❤️




ಇವತ್ತು ಕಾರಂಜಿ ಕೆರೆ ಮತ್ತು mysore zoo...ಅನಘ ಳಿಗೆ ಫೋಟೋ ತೆಗೆಯಬೇಕಂತೆ..