February 20, 2020

ಪಯನ್ನೂರು -kavvayyi backwaters - coconut beach



2020 ನಲ್ಲಿ ಪ್ರತಿ ತಿಂಗಳು ಎಲ್ಲಾದರೂ ಹೋಗಬೇಕೆಂದು ನಿರ್ಧರಿಸಿದ್ದೆ. ಮೊದಲ ತಿಂಗಳಲ್ಲೇ ಸುಮಾರು ಕಡೆ ಹೋಗಿ ಬಂದೆ. ಊಚನಹಳ್ಳಿ/ಗುಡಿಬಂಡೆ, ಚೆನ್ನೈ, ಮೈಸೂರು, ನಾಗರಹೊಳೆ, ಕಾರ್ಕಳ, ಕುಂದಾಪುರ, ಮತ್ತು ಫೆಬ್ರವರಿಯಲ್ಲಿ ಬೆಳಗಾವಿ, ಕೇರಳದ ಪಯನ್ನೂರು.
ನಾವು 6 ವರ್ಷ ಬೆಳ್ತಂಗಡಿ/ಉಜಿರೆಯಲ್ಲಿದ್ದಾಗ ಶೆಣೈ ಡಾಕ್ಟರ್ ನಮ್ಮ ಫ್ಯಾಮಿಲಿ ಡಾಕ್ಟರ್ ಮಾತ್ರವಲ್ಲ ಆಪ್ತ ಮಿತ್ರರು ಕೂಡ ಆಗಿದ್ದರು. ಅವರ ಮಕ್ಕಳು ಹೆಚ್ಚು ಕಡಿಮೆ ನನ್ನ ಮಕ್ಕಳ ವಯಸ್ದು, ಒಂದೇ ಶಾಲೆ...ಹಾಗೆ ಒಡನಾಟವಿತ್ತು. ಊರು ಬಿಟ್ಟ ಮೇಲೂ ಸಂಪರ್ಕದಲ್ಲಿ ದ್ದೆವು ಚಿಕ್ಕ ಮಗನ ಮದುವೆ ಪಯನ್ನೂರಿನಲ್ಲಿ ಹಮ್ಮಿಕೊಂಡಿದ್ದರು. ನಾನು ಅಕ್ಕ ಹೋಗುವುದೆಂದು ನಿರ್ಧರಿಸಿದೆವು. ಕೊನೆ ಕ್ಷಣದಲ್ಲಿ ನಿಹಾ ಕೂಡ ಬರುತ್ತೇನೆಂದಳು. ಹವಾಮಾನ ಚೆನ್ನಾಗಿತ್ತು. ಅಷ್ಟು ಸೆಕೆ ಅನ್ನಿಸಲಿಲ್ಲ
ಅಲ್ಲಿನ ಹಿನ್ನೀರು ದಾಟಿ ಸಮುದ್ರಕ್ಕೆ ಹೋಗಿದ್ದು ಮರೆಯಲಾಗದ ಅನುಭವ.
ಹೆಚ್ಚಿನ ಜನಕ್ಕೆ ಗೊತ್ತಿಲ್ಲದಿದ್ದರಿಂದುದಲೇನೋ ತುಂಬಾ ಸ್ವಚ್ಛ ಸಮುದ್ರದ ತಟ ನೋಡಲು ಸಿಕ್ಕಿತ್ತು. ಸೂರ್ಯಾಸ್ತಕ್ಕೆ ಸ್ವಲ್ಪ ಮುಂಚೆ ನಾವು ಒಂದು 10 ಜನರನ್ನು ದೋಣಿಯವ ಅಲ್ಲಿಗೆ ಬಿಟ್ಟ. ಸೂರ್ಯಾಸ್ತದ ನಂತರ ನಮನ್ನು ವಾಪಸ್ lake ಕಡೆ ತಂದು ಬಿಟ್ಟ.ಕೆಳಗಿವೆ ಕೆಲ ಚಿತ್ರಗಳು.








ನಿಹಾ ಸಮುದ್ರದ ನೀರು ಬಳಸಿ watercolour ಚಿತ್ರ ಬರೆದಳು ಅದರ ಲಿಂಕ್ ಮತ್ತು ಪುಟ್ಟ ಬರಹ ಕೆಳಗಿದೆ
https://niharikashenoy.blogspot.com/2020/02/footloose-in-payannur-part-i.html







 

ನಿಹರಿಕಾ ತೆಗೆದ ಪಟ
                    ಛಾಯಾಗ್ರಾಹಕರು ಹೀಗೆ ನಿಂತಲ್ಲಿ ನಾವು                         ಸಮಾರಂಭ ನೋಡುವುದು ಹೇಗೆ?
                     Marzipaan icecream
Kuch to gudbud hai
ನಾವು ಅಲ್ಲಿ rainbow ರೆಸಿಡೆನ್ಸಿ ನಲ್ಲಿ ಉಳಿದುಕೊಂಡಿದ್ದೆವು. ಅಲ್ಲಿಯ ಮ್ಯಾನೇಜರ್ ನಮ್ಮನ್ನು ತುಂಬಾ ಕಾಳಜಿಯಿಂದ ದೊಡ್ಡಣ್ಣನಂತೆ/ಅಪ್ಪನಂತೆ ನೋಡಿಕೊಂಡರು. ನಮಗೆ ತಿರುಗಾಟಕ್ಕೆ ಒಳ್ಳೆಯ ಜಾಗ ಮತ್ತು ವಾಹನವನ್ನೂ ಮಾಡಿಕೊಟ್ಟರು. ಅಲ್ಲಿಗೆ ಬರುವ ಹೆಚ್ಚಿನವರು ಮದುವೆ ಸಮಾರಂಭಕ್ಕೆ ಬರುತ್ತಾರೆ ವಿನಃ ಅದೂ ಟೂರಿಸ್ಟ್ spot ಅಲ್ಲ ಅಂತ ಹೇಳಿದರು.
ಅಲ್ಲಿಂದ ಮರಳಲು ನಮ್ಮ ಟ್ರೈನ್ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ಹಾಗಾಗಿ ಪಾಯನ್ನೂರಿನಿಂದ ಕಾಸರಗೋಡು, ಅಲ್ಲಿಂದ ಮಂಗಳೂರು. ಮಂಗಳೂರಿನಿಂದ ಎಸ್ ಆರ್ ಎಸ್ ಬಸ್. ಸ್ವಲ್ಪ ಸಮಯ ನಮ್ಮ ಕೈಯಲ್ಲಿರೋದರಿಂದ ನಾವು ತಾಜ್ಮಹಲ್ ಹೋಟಲ್ ಮತ್ತು ಐಡಿಎಲ್ ಐಸ್ಕ್ರೀಮ್ ಗೆ ಭೇಟಿ ನೀಡಿ ಬಂದ್ವಿ..

February 4, 2020

ಆಲೆಮನೆ

ಮೊನ್ನೆ ಕಾರ್ಕಳಕ್ಕೆ ನಮ್ಮ ಮೊಮ್ಮಗನ ಚೌಲ ಕ್ಕೆ ಹೋಗಿದ್ದೆವು. ದಾರಿಯಲ್ಲಿ ಶ್ರೀಕಾಂತ newspaper ತೆಗೊಂಡ್ರು. ಅದರಲ್ಲಿ ಕೇದೂರಿನ ಆಲೆಮನೆ ಬಗ್ಗೆ ಬರೆದಿತ್ತು. ಇಲ್ಲಿ ಹೇಗೂ ಬಂದಿದ್ದೇವಲ್ಲವ, ಒಂದು ಉಡುಪಿ ಕೈಮಗ್ಗ ಸೀರೆ ಹಾಗೂ ಆಲೆ ಮನೆ ನೋಡಿಬಿಡುವ ಅಂತ ಹೇಳಿದರು. ಹಾಗೆ ಆಲೆಮನೆಗೆ ಭೇಟಿ ಇತ್ತು, ಉಮೇಶ ಶೆಟ್ವರನ್ನು ಮಾತನಾಡಿಸಿ, ಬೆಲ್ಲ ಮಾಡುವ ಪ್ರಕ್ರಿಯೆಯ ಪ್ರಾತ್ಯಕ್ಷಿಕೆ ನೋಡಿ, ರಾಮಚಂದ್ರ ಭಟ್ಟರ ತೋಟಕ್ಕೂ ಭೇಟಿ ನೀಡಿದೆವು.
ಶ್ರೀಕಾಂತ್ ಎರಡೂ ಕಡೆ ಯ video ಮಾಡಿದ್ದಾರೆ. ಅದರ ಕೊಂಡಿ ನಂತರ ಹಾಕುವೆ. ಅಲ್ಲಿ ತನಕ ಚಿತ್ರ ನೋಡಿ. 😀😀
ಆಸಕ್ತರು ಸಂಪಾದಕೀಯ ಪುಟ 6 ತಾರೀಕು -ಶುಕ್ರವಾರ ಜನವರಿ 31, 2020 ನೋಡಿ

ಉಮೇಶ ಶೆಟ್ಟಿ, ರಾಮಚಂದ್ರ ಭಟ್ಟರ ಜೊತೆ ಶ್ರೀಕಾಂತ ಶೆಣೈ
ಕಬ್ಬಿನ ಹಾಲು ಸಂಗ್ರಹಣೆ
ಒಣಗಿದ ಕಬ್ಬಿನ ಜಲ್ಲೆಯೇ ಉರುವಲು


ಹತ್ತು ಹಲವು ಹಕ್ಕಿಗಳ ಕಲರವ
ತಾಜಾ ಕಬ್ಬಿನ ಹಾಲು

62ರ ಪ್ರಾಯದ ರಾಮಚಂದ್ರ ಭಟ್ಟರು ಚಕಚಕನೆ ಮರ ಏರಿ ನಾಲ್ಕು ಹಲಸಿನಕಾಯಿ ಉದುರಿಸಿದ ಪರಿ ಯೌವನಿಗರನ್ನು ನಾಚಿಸುವಂತಿತ್ತು 😊😊



ಚಿತ್ರದ ಮೇಲೆ ಕ್ಲಿಕ್ಕಿಸಿ ಓದಬಹುದು