January 26, 2018

ಗಣರಾಜ್ಯೋತ್ಸವ 2018

ಎಲ್ಲರಿಗೂ ಗಣರಾಜ್ಯೋತ್ಸವದ.ಶುಭಾಶಯಗಳು

ಮೊನ್ನೆ ಬ್ರಿಟಿಷ್ ಲೈಬ್ರರಯಿಂದ ಬಸ್ ನಲ್ಲಿ .ವಾಪಸ್ ಮನೆಗೆ ಬರಬೇಕಾದರೆ ಕಂಡಕ್ಟರ್ ' ಟಿಕೆಟ್ ಕೇಳಿಸ್ಕೊಳ್ಳಿ, ಟಿಕೆಟ್  ಕೇಳಿಸ್ಕೊಳ್ಳಿ ' ಅನ್ನುತ್ತಿದ್ದ. 
ಅರ್ಥ ಆಗಲಿ ಕ್ಕೆ  ಸಮಯ ಹಿಡಿಯಿತು.
'ಚೆಕಿಂಗ್ ಬರ್ತಾರೆ ಟಿಕೆಟ್ ಕೇಳಿಸ್ಕೊಳ್ಳಿ '
ಕೇಳಿಸ್ಕೊಳ್ಳಿ =ಕೇಳಿ + ಇಸ್ಕೊಳ್ಳಿ
☺☺☺
ನಮ್ಮ ಮನೆಯ ಇವತ್ತು ಪೊಂಗಲ್ ಹೀಗೆ ಸಜ್ಜಾಯಿತು
ಕೊನೆಗೆ ಫೊಟೊ ಮೊಬೈಲ್ ನಿಂದ ಬ್ಲಾಗ್ ಗೆ ರವಾನಿಸಿವುದನ್ನು ಕಲಿತೆ. ಹಾಗಾಗಿ ಈ ಪುಟ್ಟ ಬರಹ 


January 22, 2018

Goodbye to Sri Prakash Rao maam

He was a great fan of Malavika's Biscoot Factory and encouraged such enterprise. Charismatic and charming he was our mentor our father figure when we began our Organisation 17 years ago. With a heavy heart i say goodbye to  a gentle, humble and knowlegdeable soul

ನಮ್ಮ ಸಂಸ್ಥೆಯ ಅಧ್ಯಕ್ಷರು ಶ್ರೀ ಕೆ.ಎಸ್. ಪ್ರಕಾಶ್ ರಾವ್ ಇಂದು ಬೆಳಿಗ್ಗೆ ದೈವಾಧಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.

ಅವರು ಸಿಂಡಿಕೇಟ್ ಬ್ಯಾಂಕಿನ ಅತಿ ಹೆಚ್ಚು ಪ್ರೀತಿಯ ಜನಾನುರಾಗಿ ಮಹಾ ಪ್ರಭಂದಕರಾಗಿದ್ದರು. ಅವರ ತಂದೆ ಶ್ರೀ ಸಂಜೀವರಾವ್ ಸ್ವಾತಂತ್ರ ಹೋರಾಟಗಾರರಾಗಿದ್ದರು. ಅವರ ಸ್ಮಾರಕಾರ್ಥ  ತಮ್ಮ ಹುಟ್ಟೂರು ಕುಂದಾಪುರದ ಕಂಭದಕೋಣೆಯಲ್ಲಿ 'ಸಂದೀಪನ' ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಸಮುದಾಯಕ್ಕೆ ಗುಣ ಮಟ್ಟದ ಶೈಕ್ಷಣಿಕ ಸೇವೆ ನೀಡುತ್ತಿದ್ದರು.

ಬೆಂಗಳೂರಿನ ಬಿ.ಟಿ.ಎಮ್. ಪ್ರದೇಶದಲ್ಲಿ ಬ್ಯಾಂಕ್ ಆಫಿಸರ್ಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿ. ಸ್ಥಾಪಿಸಿ ಬ್ಯಾಂಕ ಸಿಬ್ಬಂದಿಗಳಿಗೆ ನೆಲೆ ನಿಲ್ಲುವಂತಹ ಅವಕಾಶವನ್ನು ಇತರೇ ಮಿತ್ರರೊಂದಿಗೆ ರೂಪಿಸಿದ್ದರು.


ಒಂ ಶಾಂತಿ.


With deep regrets we inform you that Sri K.S. Prakash Rao, Chairman of the Board of Trustees of IDF left us today. May his soul rest in peace.

He was one of the few very popular General Manager of Syndicate Bank for his humane approach in administration. In memory of his father Sri Sanjeev Rao, who was a freedom fighter, he had established and nurtured ‘Sandeepan’ educational institution at Kambadakone village in Kundapur taluk giving access to quality education to rural community.

He took the lead in establishing housing layout to bank staff and is President of Bank Officers Cooperative Housing Society Ltd without which the common bank staff would not have the opportunity to find a roof in an unaffordable Bangalore.

We miss you Sir.
Om Shanthi

( copy pasted the condolence message from Srikanth Shenoy)


January 10, 2018

ಮರವಾಯಿ/ಖುಬ್ಬೊ/clams ಸುಕ್ಕಾ

ಮಗಳು ಮರವಾಯಿ/ಖುಬ್ಬೊ/clams ಸುಕ್ಕಾ ತಯಾರಿಸುವ ವಿಡೀಯೊ. ಆಶ್ಚರ್ಯ ಅಂದರೆ ಅವಳು ಮೀನು ಮಾಂಸ ತಿನ್ನಲ್ಲ.  ಆದರೂ ಈ ಅಡುಗೆ ಮಾಡಿದ್ದಾಳೆ. ನಾವೆಲ್ಲ ತಿಂದ್ವಿ . ರುಚಿಯಾಗಿತ್ತು.

ಖುಬ್ಬೊ ಮರವಾಯಿ.shellfish ಸುಕ್ಕಾ

January 4, 2018

ರಂಗಶಂಕರದಲ್ಲಿ ನಿನ್ನೆ


ನಿನ್ನೆ ಆಫಿಸ್ ಸ್ಟಾಫ್ ಎಲ್ಲಾ ಜೆ ಪಿ ನಗರದಲ್ಲಿರುವ 24th Main ರೆಸ್ಟಾರಂಟ್ ಗೆ ಹೊಸ ವರ್ಷದ ಪಾರ್ಟಿ ಅಂತ ಹೋಗಿದ್ದರು. ಅಲ್ಲಿಂದ ಬರ್ತಾ ಶ್ರೀಕಾಂತ ಮತ್ತು ಸಾಲಿಮಠರು ರಂಗಶಂಕರಕ್ಕೆ ಹೋಗಿದ್ದರು. ಹೋಗಿ ಅಲ್ಲಿಂದ ನನಗೆ ಫೋನ್ ಮಾಡಿ 'ಇವತ್ತು ಸಂಜೆ ೭,೩೦ ಗೆ 'ಸಾಹೇಬರು ಬರುತ್ತಾರೆ ' ನಾಟಕ ಇದೆ. ಚೆನ್ನಾಗಿದೆಯಂತೆ ಟಿಕೆಟ್ ಬುಕ್ ಮಾಡಲಾ ' ಅಂತ ಫೋನ್ ಮಾಡಿದರು. ನನಗೆ ಕಳೆದ ಎರಡು ರಂಗಶಂಕರದ ನಾಟಕಗಳು ತುಂಬಾ ನೀರಸ ಎನ್ನಿಸಿದಿದೆ. ನಾನು ಮಿನ ಮೇಷ ಏಣಿಸ್ತಿರಬೇಕಾದ್ರೆ. ಹೋಗುವ ಟಿಕೆಟ್ ಬುಕ್ ಮಾಡ್ತೇನೆ , ಮೊದಲು ಒಂದು ಸಲ ನೋಡಿದ್ದೇನೆ ಕಾಮೆಡಿ ಅಂದ್ರು. ನಾನು ಸರಿ ಎಂದೇ. 
ನಾನು ೬.೪೫ ಗೆ ಅಲ್ಲಿ ತಲುಪಿದೆ. ಇವರು ಇನ್ನು ಸೌತ್ ಎಂಡ್ ನಲ್ಲಿರೋ ನಮ್ಮ ಆಫಿಸ್ ನಿಂದ ಹೊರಟಿರಲಿಲ್ಲ. ಮತ್ತು ಹಸಿವೆಯಾಗಿದೆ ಏನಾದ್ರೂ ತಿನ್ನುಕೊಂಡು ಬರ್ತೇವೆ ಅಂದ್ರು. 'ಬೇಗ ಬನ್ನಿ ಲೇಟ ಆದ್ರೆ ನಿಮಗೆ ಎಂಟ್ರಿ ಇಲ್ಲ ' ಅಂದೆ. (ಆದ್ರೆ ರಂಗಶಂಕರಾದವರು ನಾಟಕ ಶುರು ಮಾಡುವಲ್ಲಿ ಸ್ವಲ್ಪಾಲೆಟ್ ಮಾಡುವುದು ಕಳೆದ ಹಲವಾರು ಬಾರಿ ಗಮನಿಸಿದ್ದೇನೆ . ಒಂದು ಸಲ ಅಂತೂ ಪ್ರೇಕ್ಷಕರಿಂದ 'ಟೈಮ್ ಆಯ್ತು ಶುರು ಮಾಡಿ 'ಅಂತ ಕೂಗಿದ್ದು ಇದೆ. 

                                     
ರಂಗಶಂಕರದ ಪುಸ್ತಕ  ಒಂದುರೌಂಡ್ ಹಾಕಿದೆ. ಮನೆಯಲ್ಲಿ ಪುಸ್ತಕದ ಕಪಾಟು ಭರ್ತಿಯಾಗಿದೆ.  ಅದಕೆ ಪುಸ್ತಕ ನೋಡಿದ್ದು ಮಾತ್ರ. ಖರೀದಿಸಲಿಲ್ಲ. ಇತ್ತೀಚಿಗೆ ವಸುಧೇಂದ್ರ ರ ವಿಷಮ ಭಿನ್ನ ರಾಶಿ ಪುಸ್ತಕ ಕೊಂಡಿದ್ದು ಬಿಟ್ಟರೆ ನಾನು ಪುಸ್ತಕದ ಅಂಗಡಿ ಕಡೆ ತಲೇನೆ ಹಾಕಿಲ್ಲ. ವಸುಧೇಂದ್ರರ ಪುಸ್ತಕ ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದಿದ್ದೇನೆ. ಇನ್ನು ಓದಿಲ್ಲ. 

೭ ಗಂಟೆಗೆ ಜನರೆಲ್ಲಾ ಸರತಿ ಸಾಲಿನಲ್ಲಿ ನಿಲ್ಲಲ್ಲು ಆರಂಭಿಸಿದರು. ಶ್ರೀಕಾಂತ ಮತ್ತು ಸಾಲಿಮಠರು ೭. ೫ ಗೆ ತಲುಪಿದರು. ಸುಮ್ಮನೆ ಬರಲಿಲ್ಲ ನನಗೆ ಅಂತ ಮಿರ್ಚಿ ಬೊಂಡ  ತಂದಿದ್ದರು. ಅದು ಒಂದುಪೇಪರ್ ಪ್ಲೇಟ್ ನಲ್ಲಿ ಸುತ್ತಿ. ಸಾಲಿನಲ್ಲಿ ನಿಂತು ನಾನು ತಿನ್ನುವುದಾ? ಆಗಲೇ ಜನರನ್ನು ಒಳಗೆ ಬಿಡಲು ಆರಂಭಿದ್ದರು. ಒಳ್ಳೆ ಸೈಟ ಸಿಗಲ್ಲ ಅಂತ ನಾವು ಬೇಗ ಬೇಗ ಮೆಟ್ಟಿಲು ಹತ್ತಿ ಒಳಗೆ ಹೋದೆವು.  ನನ್ನ ಬಳಿ ಕವರ್ ಇರಲಿಲ್ಲ. ಅದಕ್ಕೆ ಒಂದು ಟೀಶ್ಯು  ಪೇಪರ್ನಲ್ಲಿ ಬೊಂಡಾಗಳನ್ನು ಸುತ್ತಿ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಹಾಕ್ಕೊಂಡೆ . ಮಧ್ಯದ ಮೂರನೇ ಸಾಲಿನಲ್ಲಿ ಕೆಲವು ಸೀಟ್ ಖಾಲಿ ಇದ್ದವು , ಅಲ್ಲೇ ಹೋಗಿ ತುರುಕಿಕೊಂಡೆವು. ನಮ್ಮ ಸೈಜ್ ಸ್ವಲ್ಪ ಜಾಸ್ತಿ ಆಗಿದೆ.  ಅದಕೆ ತುರುಕಿಕೊಂಡಿದ್ದು. :-(  ಜ್ಯಾಮ್ ಪ್ಯಾಕ್ ಅಂತಾರಲ್ಲವಾ ಹಾಗೆ. 

ನಾಟಕ ಶುರು ಆದ ಸ್ವಲ್ಪ ಹೊತ್ತಿನಲ್ಲೇ ನನ್ನ ಪಕ್ಕ ಕೂತ  ಹೆಂಗಸು ನನ್ನ ಕಡೆ ಓರೇ ಕಣ್ಣು ಮಾಡಿ ನೋಡಲು ಶುರು ಮಾಡಿದರು.  ಆಮೇಲೆ ನನ್ನ ಪರ್ಸ್ ನೋಡಿದರು .  ಮೊದಮೊದಲು ನನಗೆ ಅರಿವಾಗಲಿಲ್ಲ. ಆಮೇಲೆ ಅವರು ಅಕ್ಕ ಪಕ್ಕ, ತಾವು ಹಾಕಿಕೊಂಡ ಬಟ್ಟೆ ಹಾಗು ಮೆಲ್ಲಗೆ ನನ್ನ ಬಳಿ ಸರಿದು  ಮೂಸಲು ಆರಂಭಿಸಿದರು. ಅವರ ಇನ್ನೊಂದು ಪಕ್ಕ ಕೂತ  ಅವರ ಜತೆ ಬಂದ ಗಂಡಸಿಗೆ 'ಏನು ತಿಂದು ಬಂದ್ಯಾ? ಅಂತ ಕೂಡ ಕೇಳಿದರು .  ಮಾರಾಯ್ರೇ ಆಗ ನನ್ನ ಟ್ಯೂಬಲೈಟ್ ಹತ್ತಿಕೊಂಡಿದ್ದು. ನಮ್ಮ ರಾಯರ ಕರಾಮತೀಯ ಬೋ೦ಡಗಳು.  ತುಂಬಾ ಮುಜುಗರ ಆಯ್ತು. ನಾವು ನೀರಿನ ಬಾಟಲ್, ಮೊಬೈಲ್, ನನ್ನ ವಿಕ್ಸ್ ಕಿ ಗೋಲಿ, ಎಲ್ಲ ಕಾಗಿ ಪರ್ಸ್ ತಡಕಾಡುವಾಗಲೆಲ್ಲ  ಬೋ೦ಡಾದ ಒಂತರಹ ಪರಿಮಳ.  ಪಕ್ಕ ಕೂತವರು ಇನ್ನು ಹಿಂದೆ ಮುಂದೆ ಜರುಗುತ್ತಾ ಮೂಸುವುದನ್ನು  ಆರಂಭಿಸಿದಾಗ ನನಗೆ ಮುಜುಗರ ಕಡಿಮೆಯಾಗಿ ಮಜವೆನಿಸಲು ಆರಂಭವಾಯಿತು. ನನ್ನ ಪುಣ್ಯಕ್ಕೆ ಕಾಮಿಡಿ ನಾಟಕ ಆಗಿದ್ದು ಒಳ್ಳೆ ಆಯ್ತು ಎಲ್ಲರು ನಗುವಾಗ ನಾನು  ನನ್ನ ಪಕ್ಕದವರ   ಚಡಪಡಿಕೆ ನೋಡಿ ಟಾ೦ಯ್ ಅಂತ ಬೊಂಡ ಹೊರಗೆ ತೆಗೆದು ಅವರಿಗೆ ತೋರಿಸಿದರೆ ಅಂದುಕೊಂಡು   ಮುಸಿ ಮುಸಿ ನಗಲಾರಂಭಿಸಿದೆ . ಒಂದು ಸಲ ಸೈಲೆನ್ಸ್ ಇದ್ದಾಗ ಕಿಸಕ್ ಅಂತ ನಕ್ಕೆ. ಶ್ರೀಕಾಂತ್ ನನಗೆ 'ಯಾಕೆ ನಗ್ತಿದ್ದೀಯಾ ಅಂತ ಕೇಳಿದಾಗ ಏನಿಲ್ಲ ಅಂತ ತಲೆ ಅಲ್ಲಾಡಿಸಿದೆ. 
ನಾಟಕ ಸಾಧಾರಣವಾಗಿತ್ತು. ಕೆ.ವಿ. ಸುಬ್ಬಣ್ಣ ಹಾಗು ಕೆ.ವಿ ಅಕ್ಷರ ಅನುವಾದಿಸಿದ್ದ ನಿಕೊಲಾಯ್ ಗೊಗೊಲ್ ಬರೆದ  ರಷಿಯನ್ ನಾಟಕ ,Inspector General. ಅದನ್ನು ಆಧುನಿಕರಿಸಿ ನಾಟಕ ಮಾಡಿದ್ದಾರೆ. ಅದರಲ್ಲಿ ಮೋದಿ, ಪಪ್ಪು, ಇಟಲಿ , Nation wants to know ಎಲ್ಲ ಸಭಿಕರನ್ನು ನಗಿಸುವಲ್ಲಿ ಯಶಸ್ವಿಯಾದವು. 

ದೊಡ್ಡ ಹುದ್ದೆಯಲ್ಲಿರುವ ಆಫಿಸರ್ ಒಬ್ಬರು ಬರುತ್ತಾರೆಂದು ತಯಾರಾಗುವ ಸರಕಾರೀ ಕಾರಕೂನರು, ಮೇಯರ್ ಅವರ ನೇತೃತ್ವದಲ್ಲಿ ಬೇರೊಬ್ಬ ಸಾಧಾರಣ ಮನುಷ್ಯನನ್ನು ದೊಡ್ಡ  ಆಫಿಸರ್ ಎಂದು ಭಾವಿಸಿ ಅವನನ್ನು ಮಸ್ಕಾ ಹೊಡೆದು. , ಆ ವ್ಯಕ್ತಿ ಕೂಡ ಇವರನ್ನು ಮಂಕುಬೂದಿ ಎರಚುತ್ತಾ , ಎಲ್ಲರು ಕೊನೆಗೆ ಇಂಗು ತಿಂದ ಮಂಗನಂತಾಗಿ ಒಬ್ಬರನ್ನೊಬ್ಬರು ಆರೋಪಿಸುತ್ತ,ಅವರವರ ಕಪಟ ಮುಖವಾಡಗಳನ್ನು ತೆರೆಯುತ್ತಾ,  ನಾಟಕ ಕೊನೆಗೊಳ್ಳುತ್ತದೆ 
ಹಲವಾರು ವರ್ಷಗಳ ಹಿಂದೆ ನಾವು ಕಾಲಜಿನಲ್ಲಿ ಈ ನಾಟಕ ಮಾಡಿದ್ದ ನೆನಪು. ಅದು ಇದ್ದಕ್ಕಿಂತ ಚೆನ್ನಾಗಿತ್ತು ಅನ್ನಿಸ್ತು. ನಿನ್ನೆಯ ನಾಟಕ ಸೆಪ್ಪೆಯಾಗಿತ್ತು.

ಮನೆಗೆ ಬಂದು ಮೈಕ್ರೋವೇವ್ ನಲ್ಲಿ ಬೋ೦ದಗಳನ್ನು ಬಿಸಿಮಾಡಿ, ನಾಟಕದಲ್ಲಿ ನಮ್ಮ ಕಾಮೆಡಿ ಬಗ್ಗೆ ಮಕ್ಕಳೊಂದಿಗೆ ಶೇರ್ ಮಾಡ್ತಾ  ಗುಳುಂ  ಮಾಡಿದ್ವಿ. 

January 1, 2018

The year that was

ಹಿಂದಿನ ವರ್ಷ ತುಂಬ ಪ್ರಯಾಣ ಕೈಗೊಂಡೆ. ದೆಹಲಿ, ಮುಂಬಯಿ, ಮಧ್ಯಪ್ರದೇಶ, ಗದಗ, ಕೇರಳ, ಉಡುಪಿ, ತೀರ್ಥಹಳ್ಳಿ,. ಕೊಪ್ಪ, pune etc.... ಈ ವರ್ಷ ನನ್ನ ಸೊಸೆಯರೊಂದಿಗೆ ಕೆಲವು ಟೂರ್ ಹಮ್ಮಿಕೊಂಡಿದ್ದೇನೆ. ನೋಡುವಾ ಹೇಗಾಗುತ್ತೇ ಅಂತ
ಒಂದು ಬೇಜಾರಿನ ಸಂಗತಿ ಎಂದರೆ ನಮ್ಮ ಬಿಲ್ಡಿಂಗ್ ಎದುರಿಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ. ಸಿಕ್ಕಾಪಟ್ಟೆ ಧೂಳು.
ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ☺☺
I have enjoyed my balcony viewing the sun rise , the sun set, the huge low hanging moons, star bursts , fireworks and some really breathtaking rainbows and lghtnings.  The earth as we all know rotates on its axis but at the same time i feel it is tilting dangerously. I am no scientist but i know something is not right up there!!! This derivation from the fact that i have been observing sun rise and sun set for the past three years!
Well i have argued less , watched a lot of movies in Amazon Prime and read a lot. It was a good year. Looking forward to the new year.