August 22, 2014

ಶ್ರೀಯುತ ಅನಂತಮೂರ್ತಿ- Not A Documentary But A Hypothesis

ಜನವರಿ 25 ರಂದು The Times Literary Carnival ನಲ್ಲಿ ಗಿರೀಶ ಕಾಸರವಳ್ಳಿಯವರು ಶ್ರೀ ಯು.ಆರ್. ಅನಂತಮೂರ್ತಿಯವರ ಜೀವನದ ಬಗ್ಗೆ  ಡಾಕ್ಯೂಮೆಂಟರಿ Ananthamurthy -- Not A Documentary But A Hypothesis- ಹಮ್ಮಿಕೊಂಡಿದ್ದರು. ನಾನು ಹೋಗಲು ಮೂರು ಕಾರಣಗಳಿದ್ದವು, 
ಒಂದು ಅದರ ಶೂಟೀಂಗ್ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದಾಗ ಅದರ ಬಗ್ಗೆ ಲೈವ್ ಅಪ್ಡೇಟ್ ಮಿತ್ರ ನೀಲೇಶ ಜವಳಿ ನಿಡುತ್ತಿದ್ದದ್ದು, ಹಾಗಾಗಿ ತೀರ್ಥಹಳ್ಳಿಯನ್ನು ನೋಡಲು. ಅವರು ಅಪ್ಡೇಟ್ ನೀಡಲು ಕಾರಣ ಅದರಲ್ಲಿ ಒಂದು ಚಿಕ್ಕ ಪಾತ್ರ ಅವರೂ ಮಾಡಿದ್ದು. ಇನ್ನೊಂದು ಅದರಲ್ಲಿ ನಿಹಾಳ ಮನು ಸರ್ ಕೂಡ ಮಾತಾಡಿದ್ದು. ನಿಹಾಳ ಇಷ್ಟದ ಲೆಕ್ಚರರ್ ಅಂದ್ರೆ ಸುಮ್ಮನೇನಾ ಮತ್ತೆ? ಇನ್ನೊಂದು ಕಾರಣ ಹೊಸದಾಗಿ ಪರಿಚಯ ಆದ ಜರ್ನಲಿಸ್ಟ್ ಮಿತ್ರರು, ಮತ್ತೊಂದು ಕಾರಣ ಅಷ್ಟು ದೊಡ್ಡ ಬರಹಗಾರರ ಬಗ್ಗೆ ತಿಳಿಯುವ ಕೌತುಕ. (ಮೂರಕ್ಕಿಂತ ಜಾಸ್ತಿ ಕಾರಣಗಳಾದುವಾ??) :-) ನಾನು ಅವರ ಬರಹಗಳನ್ನು ಓದಲು ಶುರು ಮಾಡಿ ಎರಡು ವರ್ಷಗಳಾಗಿವೆ ಅಷ್ಟೆ. ಹಲವಾರು ಪುಸ್ತಕಗಳಿವೆ ನನ್ನ ಬಳಿ. ಸಂಸ್ಕಾರ ಅಂತೂ ಅಬ್ಬಬ್ಬಾ ಎಂತಹ ಕಾದಂಬರಿ?? ನಿಹಾ ಅದನ್ನು ಮೊದಲು ಇಂಗ್ಲಿಶ್ ಆ ಮೇಲೆ ಕನ್ನಡ ದಲ್ಲಿ ಓದಿದಳು.  ಅದಾದ ನಂತರ ಭಾರತೀಪುರ ಓದಿದೆ. ಈ ಎರಡು ಪುಸ್ತಕಗಳ ಪಂಚ ಅವರ ಭವ, ದಿವ್ಯ, ಅವಸ್ಥೆ ಕಾದಂಬರಿಗಳಲ್ಲಿ ಸಿಗಲಿಲ್ಲ. ಪಚ್ಚೆ ರಿಸೋರ್ಟ್ ಅರ್ಧ ಓದಿ ಕೈ ಬಿಟ್ಟೆ. ಇನ್ನೂ ಹಲವಾರು ಪುಸ್ತಕಗಳಿವೆ ಅವರ ಬಗ್ಗೆ ಅದನ್ನು ಇನ್ನೂ ಓದಬೇಕು. ನನ್ನ ಬಳಿ ಸಮಯ ಸಾಕಷ್ಟಿದೆ. :-) ಅವರು ತೀರ್ಥಹಳ್ಳಿಯವರು ಅಂತ ಅವರ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ನನಗೆ.  

ಕಾರ್ಯಕ್ರಮ  ಇದ್ದದ್ದು ಬೆಳಿಗ್ಗೆ 9.30 ಗಂಟೆಗೆ . ಡಾಕ್ಯೂಮೆಂಟರಿ ಆದ ನಂತರ ಪ್ರಕಾಶ ಬೆಳವಡಿ ಶ್ರೀ ಅನಂತಮೂರ್ತಿಯವರ ಜತೆ ಮಾತುಕತೆ ನಡೆಸುವವರಿದ್ದರು. ಆದ್ರೂ ನಿಹಾ - ಮಾಲು ಗೆ ಅಂದೆ’ ಅಷ್ಟು ಬೆಳಿಗ್ಗೆ ಯಾರು ಬರ್ತಾರೆ’ ಅಂತ . ನಾವೇನೋ ಸರಿಯಾದ ಸಮಯಕ್ಕೆ ತಲುಪಿದ್ವಿ. ಕನ್ಫೂಶನ್ ಆಗಿ  ರಿಕ್ಷಾದಲ್ಲಿ ಸ್ವಲ್ಪ  ಹುಡುಕಿಕೊಂಡು ಹೋಗಬೇಕಾಯ್ತು. ಅದು ಇದ್ದದ್ದು ಜಯಮಹಲ್ ಪ್ಯಾಲೆಸ್ ನಲ್ಲಿ. ನಾನು ಅಂದುಕೊಂಡ ಹಾಗಾಯ್ತು. ನಾವು ಇದ್ದದ್ದೆ 9 ಮಂದಿ. ಕಾರ್ಯಕ್ರಮದ ಸಂಚಾಲಕರು ’ಯಾರೂ ಬಂದಿಲ್ಲ ಆದ್ದರಿಂದ ಕಾರ್ಯಕ್ರಮ ಸ್ವಲ್ಪ ವಿಳಂಬವಾಗಿ ಶುರುಮಾಡುವ ಬಗ್ಗೆ ಎನೌಂನ್ಸ್ ಮಾಡಿದರು. ನಾವು ಅಲ್ಲೆ ಪಕ್ಕದಲ್ಲೇ exhibit ಮಾಡಿದ paul Fernandez ಅವರ bangalore in the 60's ಕಾರ್ಟೂನ್ಸ್ ಗಳನ್ನು ನೋಡಲಿಕ್ಕೆ ಹೊರಟೆವು. ನಿಜಕ್ಕೂ ನಗು ಬರುವಂತಹ ಕಾರ್ಟೂನ್ ಗಳು. 

ಆಮೇಲೂ ಯಾರು ಜನ ಸೇರಿರಲಿಲ್ಲ. ನಾನು ಮಕ್ಕಳ ಬಳಿ ಪಿರಿಪಿರಿ ಮಾಡ್ತಿದ್ದೆ. ಜನರಿಗೆ ಒಂದು ಭಾನುವಾರ ಬೇಗ ಎದ್ದು ಬರಲು ಏನು ಧಾಡಿ ಅಂದ್ರೆ ಮಾಲವಿಕಾ ’ನಿನ್ನದೊಳ್ಳೆ ಕತೆ. first of all the Documentary is in English, ಆಮೇಲೆ ನಿನ್ನ ಫ್ರೆಂಡ್ ಇದ್ದಾನೆ ಅಂತ ನೀನು ಇಲ್ಲಿಗೆ ಬಂದಿದ್ದೀಯಾ, ಸುಮ್ನೆ ಡೈಲೋಗ್ ಹೊಡಿಬೇಡ ಅಂದಾಗ ಅವಳಿಗೊಂದು ಗುರ್ ಹೇಳಿದೆ.ಆದರೆ ಅವಳು ಅಂದಿದ್ದು ನಿಜ. ಸಂಡೆ ಅಂದರೆ ನಮ್ಮ ಮನೆಯಲ್ಲಿ ಎಲ್ಲ ಕೆಲಸಗಳು - ತಿನ್ನುವುದು ಬಿಟ್ಟರೆ- ವಿಳಂಬ. 
ಗಿರೀಶ ಕಾಸರವಳ್ಳಿಯವರು ಬಂದಿದ್ದರು. ಕಾರ್ಯಕ್ರಮ ಶುರು ಆದ ಅರ್ಧ ಗಂಟೆ ಆದಮೇಲೆ ಕರಂಟ್ ಪೋಯಿ. ಪುನ: ಅರ್ಧಕ್ಕೆ ಬಿಟ್ಟ ಕಾರ್ಟೂನ್ ವೀಕ್ಷಣೆ. ಅಷ್ಟರಲ್ಲಿ ಶ್ರೀ  ಯು ಆರ್ ಅನಂತಮೂರ್ತಿಯವರು ಎಸ್ತರ್ ಅವರೂ ಬಂದರು. ಈ ಇಳಿವಯಸ್ಸಿಗೆ ಅವರ ಲವಲವಿಕೆ, ಅವರ ವಿಚಾರ ಶಕ್ತಿ, ಅವರ ನೆನಪಿನ ಶಕ್ತಿ , ಮಾತನಾಡುವ ವೈಖರಿ ನಿಜಕ್ಕೂ ಪ್ರಶಂಸನೀಯ. (ನಮ್ಮ ಮಾನಸ ಟೀಮ್ ನ ಸದಸ್ಯರೊಬ್ಬರು ಅವರಿಗೆ ಪುಸ್ತಕ ನೀಅಲು ಹೋದಾಗ ತುಂಬಾ ಪ್ರೋತ್ಸಾಹಕರ ಮಾತನ್ನಾಡಿದ್ದಲ್ಲದೆ, ನಿಮಗೇನಾದರೂ ಬರೆದುಕೊಡಬೇಕಾದಲ್ಲ್ ಹೇಳಿ ನಾನು ಬರೆಯುತ್ತೇನೆ ಅಂದು, ಮತ್ತು ಸ್ವಳಪ್ ಹೊತ್ತು ಬಿಟ್ಟು, ನಾನು ಹೇಳುತ್ತೇನೆ ನೀವು ಬರೆದುಕೊಳ ಬಹುದು ಅಂದಿದ್ದರಂತೆ, ನಿಹಾ ಹೇಳುವ ಪ್ರಕಾರ aaw thaths cho chweet of him' :-)

ಕಾರ್ಯಕ್ರಮದ ಬಗ್ಗೆ ಶೂಟ್ ಮಾಡುವವರ ಕಿರಿಕಿರಿ ಮಧ್ಯ ಫೋಟೊ ತೆಗೆಯುವವರ ಕಿರಿಕಿರಿ ಅದರ ಫ್ಲಾಶ್ ಸೀದಾ ಮುಖದ ಮೇಲೆ.  ಕೊನೆಕೊನೆಗೆ ಆ ಫೋಟೊದವನಿಗೆ ಸನ್ನೆ ಮಾಡಿ ನಮಗೆ irritate ಆಗ್ತಾ ಇದೆ ಅಂತಂದೆ. 

ಶ್ರೀ ಅನಂತಮೂರ್ತಿಯವರ ಬರಹ ಕಾಸರವಳ್ಳಿಯವರ ಮೇಲೆ ತುಂಬಾ ಪ್ರಭಾವ ಬಿರಿದೆ ಅನ್ನುವ ಮಾತಿನಿಂದ ಈ ಸಾಕ್ಷಚಿತ್ರ ಪ್ರಾರಂಭವಾಗುತ್ತದೆ. ಶ್ರೀ ಅನಂತಮೂರ್ತಿಯವರ ಜತೆ ಒಡನಾಡಿದ, ಅವರನ್ನು ಹತ್ತಿರದಿಂದ  ನೋಡಿರುವ ಸಾಹಿತಿಗಳ  ಸಂದರ್ಶನ, ಅಭಿಪ್ರಾಯ, ಅನಿಸಿಕೆಗಳ (bit long winded) ಮೂಲಕ , ಅವರ ಗಾಂಧೀವಾದಿ, ಸಮಾಜವಾದಿ ಚಿಂತನೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಬರವಣಿಗೆಯ (both fiction and non-fiction)  ಮೂಲಕ  ಶ್ರೀ ಅನಂತಮೂರ್ತಿಯವರ  ಜೀವನ ಚಿತ್ರಣವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಇದು ಹೊಸತನದಿಂದ ಕೂಡಿ ಇಂಟೆರೆಸ್ಟಿಂಗ್ ವೇ ಆಫ್ ಇನ್ಟ್ರೋಡ್ಯೂಸಿಂಗ್ ಎ ಪರ್ಸೋನಾ ಅನ್ನಿಸ್ತು.

ಅನಂತಮೂರ್ತಿಯವರ ವ್ಯಕ್ತಿತ್ವ ಮತ್ತು ಚಿಂತನೆಯನ್ನು ದೃಶ್ಯಾತ್ಮಕ ನೆಲೆಯಲ್ಲಿ ಕಟ್ಟಿಕೊಡುವ ನಿಜಕ್ಕೂ ಒಂದು ಪ್ರಶಂಸಾರ್ಹ ಪ್ರಯತ್ನ (ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು)  ಮಾಡಿದ್ದಾರೆ..  ಡಾಕ್ಯೂಮೆಂಟರಿ ಕೆಲವು ಕಡೆ ಸ್ವಲ್ಪ ಎಡಿಟಿಂಗ್ ಬಿಗಿ ಮಾಡಬೇಕಿತ್ತು ಅನ್ನಿಸ್ತು. background score ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಮಿತ್ರ ನಿಲೇಶ
ಜವಳಿ,  ’ಪಶ್ನೆ’ ಎನ್ನುವ  ಕತೆಯಲ್ಲಿ ಪಾತ್ರವಹಿಸಿದ್ದಾರೆ, ಮಾತ್ರವಲ್ಲ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸಿದ್ದಾರೆ.. ನನಗೆ ಸಂಭಾಷಣೆ ತುಂಬಾ ಚೆನ್ನಾಗಿದೆ ಅನ್ನಿಸಿ ಮರುದಿನ ಅವರ ’ಪ್ರಶ್ನೆ’ ಕತಾ ಸಂಕಲನ ತಂದು ಓದಿದೆ. 
ಮನೆಗೆ ಬಂದು ನಿಲೇಶ ಜವಳಿಗೆ ಎಸ್ ಎಮ್ ಎಸ್ ಮಾಡಿದೆ. ನಿನ್ನ ಪಾರ್ಟ್ ಚೆನ್ನಾಗಿ ಮೂಡಿದೆ, ಡಾಕ್ಯೂಮೆಂಟರಿಗೆ 5 ರಲ್ಲಿ 2.5 ಪಾಯಿಂಟ್ ಕೊಟ್ಟಿದ್ದೇನೆ ಅಂದಾಗ, ಅವಾರ್ಡ್ ಬರಬಹುದಾ?  ಅಂತ ಕೇಳಿದ. ಆಗ ನಾನು ಖಂಡಿತ award ಸಿಗುತ್ತೆ ಅಂದಿದ್ದೆ. ಬೇರೆ ನಿರ್ದೇಶಕರಿಗೆ ನನಗ್ಗೆ ಸಿನಿಮಾ ದಲ್ಲಿ  ಅವಕಾಶ ಕೊಡಲು ಹೇಳಬಹುದಾ ಅಂದಾಗ ಕೂಡ ' ಓಹೋ ಖಂಡಿತಾ' ಅಂದಿದ್ದೆ....ಒಳ್ಳೆ  ಕಣಿ ಹೇಳಿದಹಾಗೆ 
ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ಖುಶಿಯಾಗಿ ಅವನು ಎಸ ಎಂ ಎಸ ನಲ್ಲಿ  ’ yaahoo our documentary got a national award, i am soooo happy' ಅಂತ ಕಳುಹಿಸಿದ್ದ. ಹಾಗಾಗಿ ಈ ಪೋಸ್ಟ್ ನಿಮ್ಮ ಜತೆ ಶೇರಿಂಗ್. ನೀವು ಅವಕಾಶ ಆದಾಗ ಖಂಡಿತ ನೋಡಿ. (ಟಿ ವಿ ನಲ್ಲಿ ಹಾಕಬಹುದು)

malathi the 'common man' photo c/o Niha. :-)

ಶ್ರೀ ಅನಂತಮೂರ್ತಿಯವರು  ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತ ...... :-(
(Draft ನಲ್ಲಿತ್ತು. ಕೆಲವು ವಾಕ್ಯ ಸೇರಿಸಿ  ಈಗ ಪಬ್ಲಿಶ್ ಮಾಡಿದೆ ಅಷ್ಟೆ)

August 18, 2014

ಹೀಗೆರಡು ನೆನಪುಗಳು

ನೆನಪು-1
ಮದುವೆಯಾಗಿ ಕೆಲ ತಿಂಗಳು ಕಳೆದಿತಷ್ಟೆ. ಅಕ್ಕನಿಗೆ ಅಡಿಗೆಗೆ ನನ್ನ ಪಾಲಿನ ಸಹಾಯ ಅಂದ್ರೆ ಕಾಯಿ ತುರಿದು ಕೊಡೋದು, ತರಕಾರಿ ಕಟ್ ಮಾಡಿ ಕೊಡೋದು ಮುಂತಾದ್ದು ಮುಗಿದ ಮೇಲೆ ನನ್ನ ಪದವಿ ಪರೀಕ್ಷೆಗೆ ಓದುತ್ತಾ, ಕಾಲು ಚಾಚಿ, ಅಡಿಗೆ ಮನೆಯ ಎದುರಿಗೆ ಇರುವ ಚಿಕ್ಕ ಅಂಗಳದಲ್ಲಿ ,ಅದು ಹಳೆಯ ಕಾಲ ಚೌಕದ ಮನೆ. ಮಧ್ಯದ ತುಳಸಿ ಕಟ್ಟೆಯ ಅಂಗಳದ ಸುತ್ತ ನಮ್ಮ ಮನೆಯ ಕೋಣೆಗಳು. ಹಿತವಾದ ಬಿಸಿಲು ಅಂಗಳದಲ್ಲಿ ಬೀಳುತಿತ್ತು. ವಿಜ್ಝಾನ ವಿಷಯವನ್ನು ಬಿಟ್ಟು ಆರ್ಟ್ ಸ್ ಸ್ಟ್ರೀಮ್ ಗೆ ಶಿಫ್ಟ್ ಆಗಿದ್ದನ್ನು ನಾನು ನಿಧಾನಕ್ಕೆ ಎಕ್ಸೆಪ್ಟ್ ಮಾಡಿದ್ದೆ ಅಲ್ಲದೇ ಸೋಶಿಯೋಲಾಜಿ ನನ್ನ ಇಷ್ಟದ ವಿಷಯವಾಗಿ ಪರಿಣಿಮಿಸಿತು. ನಾನು ಕಾಲು ಚಾಚಿಕೊಂಡು ತಲ್ಲೀನತೆಯಿಂದ khaasi-synteng ಬುಡಕಟ್ಟು ಜನಾಂಗದ charasteric feature ಬಗ್ಗೆ ಓದುತ್ತ ಇದ್ದೆ. ಕಾಲಿನ ಬುಡಕ್ಕೆ (ಪಾದಗಳಿಗೆ) ತಣ್ಣನೆಯ ಗಾಳಿಯೊಂದು ಬೀಸಿತು. ಓ ಚೆಂದದ ಗಾಳಿ ಕಾಲಿಗೆ ಮಾತ್ರ ಸೋಕುತ್ತಿದೆ ಅಂದು ಕೊಂಡು ಓದನ್ನು ಮುಂದುವರೆಸಿದೆ. ಕೆಲ ಸಮಯದ ನಂತರ ಪುಣ: ಪಾದಗಳ ಬಳಿ ಗಾಳಿ ಮಾತ್ರವಲ್ಲ ಫುಸ್ ಅನ್ನುವ ಸದ್ದು ಕೂಡ ಕೇಳಿಸಿಕೊಂಡಿತು. ತಲೆ ಎತ್ತಿ ನೋಡುತ್ತೇನೆ, ಕರಿ ನಾಗರವೊಂದು ಹೆಡೆ ಎತ್ತಿ ನಿಂತಿದೆ. ಆಗಿನ್ನು ತೀರ್ಥಹಳ್ಳಿಯಲ್ಲಿ ಟಿ ವಿ ಇರಲಿಲ್ಲ ಹಾಗಾಗಿ ನ್ಯಾಶನಲ್ ಜಿಯೋಗ್ರಾಫಿಕ್ ಚ್ಯಾನೆಲ್ ಕೂಡ ಇರಲಿಲ್ಲ. ನಾಗರ ಹಾವು ಎಂಬ ಜಂತುವನ್ನು, ಮುಂಬೈನಲ್ಲಿ ನಾಗರ ಪಂಚಮಿಯಂದು ಮನೆ ಮನೆಗೆ ಬುಟ್ಟಿಯಲ್ಲಿ ತಂದು, ನಾಗೋಬಾಲಾsssss ದೂssssದ್(ನಾಗಪ್ಪನಿಗೆ ಹಾಲು) ಎನ್ನುತ್ತ ಹಾವಾಡಿಗರು ಮನೆಗೆ ತಂದು,ಮೆಟ್ಟಿಲ ಬಳಿ ನೆಲದ ಮೇಲಿಟ್ಟು  ಬುಟ್ಟಿ ಮುಚ್ಚಳ ತೆರೆದು ಅಫೀಮು ಕುಡಿದ ನೀರ್ಜೀವ  ಮಲಗಿದಂತ ಅದರ ತಲೆ ಮೇಲೆ ಕುಕ್ಕಿಯೋ, ಬಾಲ ಎಳೆದೋ ಅದು ಹೆಡೆ ಎತ್ತುವಂತೆ ಮಾಡುವುದು, ಅಮ್ಮ ಬಟ್ಟಲಲ್ಲಿ ಹಾಲು ತಂದು ಬುಟ್ಟಿಯ ಎದುರಿಗೆ ಇಡುವುದು, ಹಾವಾಡಿಗಳು ಹಾವಿನ ತಲೆಯನ್ನು ಹಾಲಲ್ಲಿ ಮುಳುಗಿಸಿ ತೆಗೆಯುವುದು, ಆಮೇಲೆ ಅಷ್ಟೆ ಜಬರದಸ್ತಿಯಿಂದ ಹಾವನ್ನು ಬುಟ್ಟಿಗೆ ಸೇರಿಸಿ, ಅಮ್ಮ ಕೊಟ್ಟ ಒಂದು ಶೇರು ಅಕ್ಕಿ, ಕೆಲವು ನಾಣ್ಯ ಪಡೆದುಕೊಂಡು ಹೋಗುವದನ್ನು ನೋಡುವುದಷ್ಟಕ್ಕೆ ಸೀಮಿತಗೊಂಡಿದ್ದು, ಈ ಹಾವು ಪೂತ್ಕರಿಸುವಾಗ ಅದರ ಗಲ್ಲ ನಡುಗುವುದು, ನಾಲಗೆ ಹೊರ ಒಳ ಚಾಚುವುದು, ಮಿರಿ ಮಿರಿ ಮಿಂಚುವ ಅದರ ಮೈ ಮೊದಲ ಬಾರಿಗೆ ಅಪ್ ಕ್ಲೋಸ್ ನೋಡಿದ್ದು. ತನ್ನಷ್ಟಕ್ಕೆ ನನ್ನ ಗಂಟಲಿನಿಂದ ’ಅಕ್ಕ’ ಎನ್ನುವು ಕೂಗು ಹೊರ ಹೊಮ್ಮಿತು. ಸಾಂಬರ್ ಮಾಡಲು ತೊಗರಿ ಬೆಳೆ ತರಲು ಒಳ ಹೋದ ಅಕ್ಕ ನನ್ನ ಕೂಗಿನಿಂದ ಅಂಗಳ ಬಳಿ ಬಂದರು. ಅವರು ’ಯಾಕೋ ನಾಗಪ್ಪ?? ಏನಾಯ್ತು? ಏನಾದರು ಮೈಲಿಗೆ ಆದರೆ ಕ್ಷಮಿಸಬೇಕು. ಇವತ್ತು ಮಧ್ಯಾಹ್ನದ ಪೂಜೆಗೆ ನಿನಗಾಗಿ ವಿಶೇಷ ಆರತಿ ಮತ್ತು ನಾಗನ ಕಲ್ಲಿಗೆ ಹಣ್ಣು ಕಾಯಿ, ಪಂಚಾಮೃತದ ಅಭೀಷೇಕ ಮಾಡಿಸುತ್ತೇವೆ. ಈಗ ನೀನು ಹೋಗು. ಹೀಗೆ ಮನುಷ್ಯರು ಓಡಾಡುವ ಜಾಗದಲ್ಲಿ ನೀನು ಬರಬಾರದು’ ಅಂದಾಗ ಮಹಾ ಹೇಳಿದ್ದು ಗೊತ್ತಾದ ಹಾಗೆ ಹೆಡೆಯನ್ನು ಒಂದು ಸಲ ಹಾಗೆ ಹೀಗೆ ವಾಲಿಸಿ, ಹೆಡೆ ಮುಚ್ಚಿ ಅಲ್ಲಿಂದ ನಿಧಾನಕ್ಕೆ ಹೊರಟು ಹೋಯಿತು. ನಾನು ಬಿಟ್ಟ ಬಾಯಿ (ಸಧ್ಯ ಬೇರೆ ಯಾವುದೇ ಜಂತು ನನ ಬಾಯಿಯೊಳಗೆ ಹೊಕ್ಕಲಿಲ್ಲ) ಬಿಟ್ಟ ಕಣ್ಣುಗಳಿಂದ ಅದರ ಚೂಪು ಬಾಲ ಮರೆಯಾಗುವ ತನಕ ನೋಡುತ್ತಲೆ ಇದ್ದೆ. ಕಾಲು ಮಡಚಲು ಆಗದಷ್ಟು ಮರಗಟ್ಟಿತ್ತು.

ನೆನಪು-2
ಆಗ ನಾವು ಬಸವೇಶ್ವರನಗರದಲ್ಲಿದ್ದೆವು. ಯಾವತ್ತಿನಂತೆ ಬೆಳಿಗ್ಗೆ ನಾಲ್ಕು ಗಂಟೆ ಅಡಿಗೆಮನೆಯಲ್ಲಿ ನಿಂತು ಚಹಾ ತಯಾರಿಸುತ್ತ ಇದ್ದೆ. ಅಡಿಗೆ ಮನೆ ಕಟ್ಟೆ ಎದುರಿಗೆ ದೊಡ್ಡ ಕಿಟಕಿ. ಒಂಚೂರು ಸದ್ದಿರಲಿಲ್ಲ. ಚಹಾಗೆ ನೀರು ಮರಳುತ್ತಿದ್ದ ಹಾಗೆ, ಮೂಂಜಾವಿನ ನೀರವತೆಯಲ್ಲಿ, ನಾನು ಬುಕ್ ಹಿಡಿದುಕೊಂಡು ಓದ್ತಾ ಇದ್ದೆ. ಸಡನ್ ಆಗಿ ಕಿಟಕಿ ಬಳಿಯಿಂದ ಅಕ್ಕೋಯ್ ಅನ್ನುವ ಕೂಗು ಕೇಳಿ ನಾಲ್ಕ್ ಇಂಚ್ ಮೇಲೆ ಹಾರಿದೆ. ’ಹೆದರಿ ಬಿಟ್ರಾ ಅಕ್ಕಾ, ನಾನು ನೈಟ್ ಬೀಟಿನ ಪೋಲಿಸಪ್ಪ. ಯಾರಾದರೂ ಏಳ್ತಾರಾ ಅಂತ ಕಾಯ್ತ ಇದ್ದೆ. ಇಲ್ಲಿ ಲೈಟ್ ಕಾಣಿಸಿ ಇಲ್ಲಿಗೆ ಬಂದೆ. ಏನಿಲ್ಲ, ನನ್ನ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಹೊಸ ಬೈಕ್ ಒಂದು ಕಣ್ಣಿಡಿ ಅಂತಷ್ಟೆ ಹೇಳೋದಿತ್ತು’ ಅಂದ. ನಾನು ಸರಿ ಅಂದೆ. ಅಡಿಗೆ ಮನೆಯ ಕಿಟಕಿಯ ಮುಂದಿನ ರಸ್ತೆಯ ಆಚೆ ಬದಿಯ ಲೈಟ್ ಕಂಬದ ಕೆಳಗೆ ಬೈಕ್ ನಿಲ್ಲಿಸಿದ್ದ. ನಿಜಕ್ಕೂ ಹೊಸ ಬೈಕ್, ಅದರ ಮೇಲೊಂದು ಕೆಂಪು ಬಣ್ನದಿಂದ ಬರೆದ ಹುಲಿಯ ಚಿತ್ರ ನಿಚ್ಚಳವಾಗಿ ಕಾಣುತ್ತಿತ್ತು. ಆಯ್ತಪ್ಪ ಅಂದೆ. ಅವನು ಹೋಗಿ ಬಿಟ್ಟ. ನನಗೆ ಆ ದಿನ ಆಫಿಸ್ ಗೆ ಹೋಗುವುದಿತ್ತು. ಪಕ್ಕದ ಮನೆಯ ರಾಮಮೂರ್ತಿಗೆ ಬೈಕ್ ಬಗ್ಗೆ ಹೇಳಿ ಹೋಗ ಬೇಕು ಅಂತ್ಂದುಕೊಂಡಿದ್ದೆ. ಆದರೆ ಅಡಿಗೆ ಕೆಲಸ ಮನೆ ಕೆಲಸ ಮುಗಿಸಿವುದರಲ್ಲಿ ನನಗೆ ಮರೆತೆ ಹೋಯ್ತು. ಸಂಜೆ ಮನೆಗೆ ಬರುವಾಗ ಎಂದಿಗಿಂತ ತಡವಾಗಿತ್ತು. ಆಗಲೇ ಸ್ಟ್ರೀಟ್ ಲೈಟ್ ಎಲ್ಲ ಹೊತ್ತಿಕೊಂಡಿತ್ತು. ಮನೆಯ ಆ ಕಡೆ ಏನೋ ಗೌಜು. ಅಡಿಗೆ ಮನೆಯೆ ಕಿಟಕಿಯಿಂದ ನೋಡಿದರೆ ಬೆಳಿಗ್ಗೆ ಪಾರ್ಕ್ ಮಾಡಿದ್ದ ಬೈಕ್ ಸುತ್ತಲೂ ಜನ, ಪೋಲಿಸ್ ನಾಯಿ ಹಿಡಕೊಂಡು ಬಂದ ಪೋಲಿಸರು. ಬೆಳಿಗ್ಗೆ ಬೈ ಕ್ ಪಾರ್ಕ್ ಮಾಡಿ ಹೋದ ಪೋಲಿಸಪ್ಪ ನೆನಪು ನನಗೆ ಆಗ ಆಗಿದ್ದು. ನಾನೇ ಅಲ್ಲಿ ಹೋದೆ. ಹೀಗೆ ಹೀಗೆ ಅಂದೆ. ಅಷ್ಟೊತ್ತಿಗೆ ಪೋಲಿಸಪ್ಪನ ಮಗ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಪೆಟ್ರೋಲ್ ಹಿಡುದು ಕೊಂಡು ಬಂದ.
ಆದದಿಷ್ಟೆ: ರಾಮಮೂರ್ತಿ (ಇದ್ದ ಕೆಲಸ ಬಿಟ್ಟು ಇನ್ನೊಂದನ್ನು ಹುಡುಕುತ್ತಿದ್ದ , ಮನೆಯಲ್ಲೇ ಇದ್ದ ಅವರು), ಬೆಳಿಗ್ಗೆ ಇಂದ ಅಲ್ಲಿ ಪಾರ್ಕ್ ಆಗಿದ್ದ ಹೊಚ್ಚ ಹೊಸ ಬೈಕ್ ಸಂಜೆ ತನಕ ಅಲ್ಲೇ ಇದ್ದದ್ದು ನೋಡಿ ಬಾಂಬ್ /ಅಥವಾ ಕಳ್ಳತನದಲ್ಲಿ ಇನ್ವಾಲ್ವ್ ಆಗಿದೆ ಬೈಕ್ ಅಂದುಕೊಂಡು ಪೋಲಿಸರಿಗೆ ಕರೆ ಮಾಡಿದಾರೆ. ಪೋಲಿಸರು ಎಲ್ಲರ ಹೇಳಿಕೆಯನ್ನು ಆಲಿಸುತ್ತ ಇದ್ದರು. ನಾನು ಹೋಗಿ ಬೆಳಿಗ್ಗೆ ಏನಾಯಿತು ಅಂತ ವಿವರಿಸಿದೆ. ಮುಂದಿನದನ್ನು ಪೋಲಿಸಪ್ಪನ ಮಗ ವಿವರಿಸಿದ: ಅಪ್ಪ ಎರಡು ದಿನದಿಂದ ನೈಟ್ ಡ್ಯೂಟಿ, ನಿನ್ನೆ ಬೆಳಿಗ್ಗೆ ಹತ್ತಿರದ ಸಂಬಂಧಿಯೊಬ್ಬರ ಸಾವು, ಮತ್ತು ಪುನ: ನೈಟ್ ಶಿಫ್ಟ್, ಅದ್ದರಿಂದ ಸರಿ ನಿದ್ದೆಯಾಗಿರಲಿಲ್ಲ. ಬೆಳಿಗ್ಗೆ ನನ್ನನ್ನು ಎಬ್ಬಿಸಿ ಬೈಕ್ ಎಲ್ಲಿ ಪಾರ್ಕ್ ಮಾಡಿದ್ದೇನೆ, ಪೆಟ್ರೋಲ್ ತುಂಬಿಸಬೇಕೆಂದು ಹೇಳಿ ಮಲಗಿದರು. ನನಗೆ ಬೇರೆ ತುರ್ತು ಕೆಲಸಗಳ ಒತ್ತಡದಿಂದ ಈಗಷ್ಟೆ ಇತ್ತಕಡೆ ಬರಲಾಯಿತು ಎಂದು ಹೇಳಿದ

ಮೇಲೇನ ಎರಡು ನೆನಪಿಗೆ ಕಾರಣ ಯಶವಂತ ಚಿತ್ತಾಲರ ’ನಾಗರ ಪಂಚಮಿ’ ಮತ್ತು ’ಬೆಳಗು ಜಾವದ ಕನಸು’ ಕತೆಗಳು
:-)