June 20, 2014

out of this world- 1

ಹಿಂದಿನ ವರ್ಷ ಜೂನ್ ನಲ್ಲಿ ನಡೆದದ್ದು. ಸಣ್ಣಕ್ಕೆ ಮಳೆ ಹನೀತಾ ಇತ್ತು. ಶ್ರಿಕಾಂತ 'ಇವತ್ತು ವಾಕ್ ಹೋಗಿದ್ದ್ಯೇನೆ?' ಅಂತ ಕೇಳಿದರು. ನಾನು ಹೋಗಿರಲಿಲ್ಲ. ಅದಕ್ಕ ಪ್ರಶ್ನೆ ನನಗಲ್ಲವೆಂಬಂತೆ ಇಗ್ನೋರ್ ಮಾಡಿದೆ. ನಾನು ಉತ್ತರ ಹೇಳಿಲ್ಲವಾದ್ದರಿಂದ ರಾಯರಿಗೂ ಗೊತ್ತಾಯ್ತು ನಾ ವಾಕ್ ಹೋಗಿಲ್ಲವೆಂದು. 'ಸೋಂಬೇರಿ , ನಡಿ  ನಡಿ ಮನೆಯಲ್ಲಿ ಫ್ರೂಟ್ಸ್ ಇಲ್ಲ, ಹಣ್ಣಿನ ಅಂಗಡಿಗೆ ಹೋಗಿ ತೆಗೊಂಡು ಬರುವ' ಅಂದರು. ನಾನು ಹ್ಯಾಪ್ ಮೋರೆ ಮಾಡ್ಕೊಂಡು ರೆಡಿಯಾದೆ. ಮಳೆ ನಿಂತಿತ್ತು. ವಾತಾವರಣ ಕೂಲ್ ಆಗಿತ್ತು. ಮೇನ್ ರಸ್ತೆಯಲ್ಲಿ ರಸ್ತೆ ಅಲ್ಲಲ್ಲಿ ಅಗೆದು ಹಾಕಿದ್ದರಿಂದ ಮಳೆ ನೀರಿನಿಂದ ಸೇರಿ ಕೊಚ್ಚೆಯಾಗಿತ್ತು. ನಿಧಾನವಾಗಿ ನಡೆಯದಿದ್ದರೆ ಜಾರುವುದು ಗ್ಯಾರಂಟಿ. ಡಾಕ್ಟರ್ ನನಗೆ ಬೋನ  ತುಂಬಾ ವೀಕ್ ಆಗಿದೆ ಅಂತ ಹೇಳಿದ ಸಮಯದಿಂದ ನಾನು ಜಾರಿ ಬೀಳದಂತೆ ತುಂಬ ಸಾವಧಾನವಾಗಿ ನಡೆಯುವುದು ಕಲಿತಿದ್ದೇನೆ. ಶ್ರೀಕಾಂತಗೆ ಕೆಲವೊಮ್ಮೆ ಕಿರಿಕಿರಿಯಾಗುವಷ್ಟು. :-) 

ಸರಿ, ರಸ್ತೆ ಮೇಲೆ ವಾಹನಗಳ ನಿರಂತರ ಓಡಾಟ, ಪಾದಚಾರಿಗಳಿಗೆ ಓಡಾಡಲು ರಸ್ತೆ ಇರಲಿಲ್ಲ. ಕೊಚ್ಚೆ ರಾಶಿಯ ಮೇಲೆ ನಡೀಬೇಕಾಯ್ತು. ಪುನ: ಸಣ್ಣಕ್ಕೆ ಮಳೆ  ಹನಿಯಲು ಶುರು ಆಯ್ತು. ವಾಹನಗಳ ದೀಪದ ಬೆಳಕಿ ನಲ್ಲಿ ಮಳೆನೀರಿಗೆ ಬೆಂಕಿ ತಾಗಿದಂತೆ, ಬಂಗಾರದ ಮಣಿಗಳನ್ನು ಸರಿಗೆಗೆ ಹಾಗಿ ಪೋಣಿಸಿದಂತೆ ಕಾಣುವುದನ್ನು ನಾನು ಎಂಜಾಯ್ ಮಾಡ್ತಾ ಶ್ರೀಕಾಂತ ಕೈಗೆ ಜೋತು ಬಿದ್ದು  ನಡೀತಾ ಇದ್ದೆ. ಅಷ್ಟರಲ್ಲಿ ದೂರದಲ್ಲಿ  ನಾನು ಆ ಗಿಡ್ಡ ಆಕೃತಿಯನ್ನು ನೋಡಿದ್ದು. ಬೆನ್ನಿನ ಮೇಲೆ ಭಾರವಾದ ಚೀಲ ಇದ್ದುದರಿಂದ ಬಾಗಿದ ಬೆನ್ನು. ಕಾಲುಗಳ ಬಳಿ ಮಡಚಿದ ಬಿಳಿ ಪೈಜಾಮ, ಮೇಲೆ ಹರಕಲು ಕಪ್ಪು ಕೋಟು. ಶ್ರೀಕಾಂತ ಸಡನ್ ಆಗಿ 'malathi, what are you doing? ಯಾಕೆ ಹೀಗೆ ತಳ್ಲುತ್ತ  ಇದ್ದೀಯ? ಇನ್ನು ಚರಂಡಿಗೆ ಬಿಳೋದೊಂದು ಬಾಕಿ ' See that man...over there?? he is going to come and touch me' ಅಂದೆ. ಅರೇ ಆತ  ಅಷ್ಟು ದೂರ ಇದ್ದಾನೆ, ಈ ವಾಹನ ಗಳ ಓಡಾಟದಲ್ಲಿ ಸಧ್ಯಕ್ಕಂತು ಆ ಅಸಾಮಿ ಕ್ರಾಸ್ ಮಾಡಲು ಆಗುವುದಿಲ್ಲ. ಮತ್ತೆ ವೈ ವಿಲ್ ಹಿ ಟಚ್ ಯು? ಅಂದ್ರು ನಾನು I don't know ಅಂತ ತಲೆ ಎತ್ತಿದರೆ ಆ ಮನುಷ್ಯ ನನ್ನ ಮುಂದೆಯೇ. ಎರಡು ಕೈಗಳನ್ನು ಶ್ರೀಕಾಂತ ರಟ್ಟೆಗೆ ಜೋತು  ಬಿಟ್ಟಿದ್ದೆ ಅಂದನಲ್ಲ?ನನ್ನ ಉದ್ದ ತೋಳಿನ ಚೂಡೀದಾರ ನಿಂದ ನನ್ನ ಬಲಗೈಯ ಬೆರಳಿನ ಮೇಲಿನ  ಸ್ವಲ್ಪ ಭಾಗ ಹೊರಗೆ ಇಣುಕ್ತಾ ಇತ್ತು. ಆ ಮನುಷ್ಯ ಅವನ ಬಲಗೈ ಯಿನ ತೋರು ಬೆರಳಿನಿಂದ ಒಂದ್ಸಲ ಮುಟ್ಟಿ ಸಲ್ಯೂಟ್ ಹೊಡೆದು ಹೋದ. 
ಈಗ ಶಾಕ್ ಆಗುವ ಸರದಿ ಶ್ರೀಕಾಂತ ದು 'ವಾಟ್ ವಾಸ್ that'?  ಅಂತ ಎರಡು ನಿಮಿಷ ನಾವು ಸುಮ್ನೆ ಅಲ್ಲಿ ನಿಂತಿದ್ವಿ. ಆಮೇಲೆ ತಲೆ ಕೊಡವಿಕೊಂಡು ಹಣ್ಣು ಖರೀದಿಸಿ , ನನಗೆ ಇವೆಲ್ಲವನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳುವ ತವಕ. ಮರುದಿನ ಮಿತ್ರರೊಂದಿಗೆ ಇದನ್ನು ಶೇರ್ ಮಾಡಿದಾಗ ಅವರು 'ನಿನಗೇ  ಯಾಕೆ  ಯಾವಾಗಲು ಈ ತರದ್ದೆಲ್ಲ  ಆಗೋದು' ಅಂತ ಕೇಳಿದ್ರು. ಯಾಕೆಂದರೆ ಅವರ ಜತೆ ಇದ್ದಾಗ ಒಂದೆರಡು ಸಲ  ಈ ತರಹದು ಸಂಭವಿಸಿವೆ. :-)
ನಿನ್ನೆ ಫೇಸ್ ಬುಕ್ ನಲ್ಲಿ ಗಿರೀಶ ರಾವ್ ಹತ್ವಾರ್ (ಜೋಗಿ) ಅವರ ಸ್ಟೇಟಸ್ ಇದನ್ನು ನೆನಪಿಸಿತು.  ಅಷ್ಟೆ. ಹಾಗೆ ನಿಮ್ಮೊಂದಿಗೆ ಶೇರ್ ಮಾಡುವಾ ಅಂತ 

4 comments:

  1. Yea! What was that? Why did he do like that and how did you know it before hand? Mystery!

    ReplyDelete
  2. ಕೆಲವು ಬಾರಿ ನಮ್ಮ ಮನೋ ಚಿಂತನೆಗಳು ತಲುಪ ಬೇಕಾದ ವ್ಯಕ್ತಿಯನ್ನು ತರಂಗಾತರಗಳ ಮೂಲಕ ತಲುಪುತ್ತದೆ ಅನಿಸುತ್ತದೆ.

    ಪುಟ್ಟದಾದರೂ ಗಟ್ಟಿಯಾದ ಬರಹ.

    ತಮ್ಮ ಈ ಬರಹವನ್ನು ಫೇಸ್ ಬುಕ್ಕಿನ 3K ಗುಂಪಿನ - ಕಥನ ವಿಭಾಗದಲ್ಲಿ share ಮಾಡಿದ್ದೇನೆ:

    https://facebook.com/groups/191375717613653?view=permalink&id=435285689889320

    ReplyDelete
  3. ಅಚ್ಚರಿ ಎನಿಸಿತು

    ReplyDelete
  4. Premonition?

    Recently, there was a news item in Udayavani about a pet dog in Manipal which started to cry 3 days before his master died in North India.

    -- Kar

    ReplyDelete