August 28, 2013

ಶ್ರೀ ಕೃಷ್ಣ ಜನ್ಮಾಷ್ಟಮಿಗೊಂದು ಸ್ಪೆಷಲ್ ರೆಸಿಪಿ: 'ವಸ್ತಾದ್’ ರೊಟ್ಟಿ

ಇವತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ. ನಾವು ಇಡೀ ದಿನ ಉಪವಾಸ. ರಾತ್ರಿ ಅವಲಕ್ಕಿ ಉಸ್ಲಿ, ಕಡಲೆ ಉಸ್ಲಿ, ಕಡಲೆ ಬೇಳೆ ಪಂಚಕಜ್ಜಾಯ, ಸಿಹಿ ಅವಲಕ್ಕಿ, ಎಳ್ಳಿನ ಉಂಡೆ ಮತ್ತು ಪಂಚಾಮೃತ ನೈವೈದ್ಯ ಶ್ರೀ ಕೃಷ್ಣನಿಗೆ. ಹೆಚ್ಚಾಗಿ ಮನೆಯ ಯಜಮಾನ ಅಥವಾ ಮಗ ರಾತ್ರಿಯ ಪೂಜೆ ಮಾಡಬೇಕು. ಅಂತದರಲ್ಲಿ ಶ್ರೀಕಾಂತ ಪರ ಊರಲ್ಲಿ ಇರುವುದೇ ಹೆಚ್ಚು. ಈ ದಿನ ಇಲ್ಲೇ ಇದ್ದಾರೆ. ಆದರೆ ಕೈ ಬೆರಳು ಫ್ರಾಕ್ಚರ್ ಮಾಡಿಕೊಂಡು ಈ ವರ್ಷದ ಪೂಜೆಯೂ ನನ್ನ ಪಾಲಿಗೆ. ಇಗೋ ಇಲ್ಲಿದೆ ನಮ್ಮ ದೇವರ ಮನೆ.
Krishnaaaaaaaaaaaaaaaaa...ಎನಬಾರದೆ??


ಈವಾಗ್ ಈವಾಗ ಯಾರಿಗೆ ನೋಡಿದರೂ ಎಸಿಡಿಟಿ ಪ್ರಾಬ್ಲಮ್. ಆದ್ದರಿಂದ ಉಪವಾಸ ಇರಕ್ಕಾಗಲ್ಲ. ನಾವು ಮಧ್ಯಾಹ್ನ್ ಚಪಾತಿ ಮಾಡುತ್ತೇವೆ. ಅದಕ್ಕೆ ಮಿಶ್ರ ತರಕಾರಿಗಳ ಹುಳಿ- ಕೊಂಕಣಿಯಲ್ಲಿ ಗಜಬಜೋ ಅನ್ನುತ್ತೇವೆ. ಅದನ್ನೇ ಮಾಡಿದೆ. ಮತ್ತು ಕೆಸುವಿನ ಎಲೆ + ಆಮ್ಟೆ ಕಾಯಿಯ ಆಳ್ವತಿ. ಇಲ್ಲಿದೆ ಅದರ ಚಿತ್ರ.
the stuffs we Konkanis eat!! :-) mmmm love this though. eating colocasia leaves once in a while cleanses the stomach of stray hair and stuffs that we consume unknowingly :-(

ಮತ್ತೆ ಎಲ್ಲರೂ ತಮ್ಮ ಮಕ್ಕಳು ಚಿಕ್ಕವರಿರುವಾಗ ಒಂದಲ್ಲ ಒಂದು ಸಲ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿಕೊಂಡು ಫೋಟೊ ತೆಗೆಸಿರಬೇಕು. ನಾನು ಮಾಡಿಲ್ಲ. ಮಾಲವಿಕಳ ಉದ್ದ ಕೂದಲಿಗೆ ಮೊಗ್ಗಿನ ಜಡೆ ಬಿಟ್ಟರೆ ನನಗೆ ಅಂತದ್ದರಲ್ಲಿ ಇಂಟರೆಸ್ಟ್ ಏ ಇಲ್ಲ. ಮಕ್ಕಳ ಬಳಿ ಮಾತನಾಡುವಾಗ did you miss such stuffs (ಹೌದು ಎಲ್ಲದ್ದಕ್ಕೂ stuff ಅಂತ ಹೇಳಿ ಹೇಳಿ ಈಗಾಗಲೇ ಹಲವಾರು ಬಾರಿ ರಾಯರಿಂದ ಬೈಸಿಕೊಂಡಾಯ್ತು :-) ) ಅಂತ ಕೇಳಿದ್ರೆ. Not really..its too boring ಅಂದ್ರು. ಮನಸ್ಸಿಗೆ ಸಮಾಧಾನ ಆಯ್ತು. ಮಾಲವಿಕಾ ಇದನ್ನೂ ಸೇರಿಸಿದ್ಲು then i don't count you among normal people ಅಂತ. whatever that means..ನಾ ತಲೆ ಕೆಡಿಸ್ಕೊಳ್ಳಕ್ಕೆ ಹೋಗಲ್ಲಪ್ಪಾ..:-)

ಸೋ ಹಬ್ಬಕ್ಕೆ ಸ್ಪೆಷಲ್ ಆಗಿ ಒಂದು ರೆಸಿಪಿ. ನಿಹಾ and freinds ರ ಲಂಚ್ ಬಾಕ್ಸ್ ಗೆ ಮಾಡಿ ಕೊಟ್ಟಿದ್ದೆ

ನನ್ನ ಅಜ್ಜ  ಇಂಜಿನಿಯರ್ ಅಂತ ಹಳೆ ಪೋಸ್ಟ್ ಗಳಲ್ಲಿ ನಿಮ್ಮ ಜತೆ ಹಂಚಿಕೊಂಡಿದ್ದೇನಲ್ಲವೇ? ಹಾಗೆ ಅವರು great foodie ಕೂಡ ಆಗಿದ್ದರು. ಭಾರತದ ಉದ್ದಗಲ ಅವರ ಕೆಲಸದ ನಿಮಿತ್ತ ತಿರುಗಾಟದಲ್ಲಿ ಅವರು ತಿಂದ ತಿಂಡಿಗಳಲ್ಲೇ ನನಗೆ ವಿಶಿಷ್ಟ ಅನಿಸಿದ್ದು ಈ ’ವಸ್ತಾದ್/ವಸ್ತಾದಿ ರೊಟ್ಟಿ. ತಿಂಡಿಯನ್ನು ಎಂಜಾಯ್ ಮಾಡುವುದು ಮಾತ್ರವಲ್ಲ ಅದನ್ನು ತಯಾರಿಸುವ ವಿಧಾನ ಕೂಡ ಕಲಿತು ರಾಜೀವಿಯಿಂದ ಮಾಡಿಸಿಕೊಳ್ಳುತ್ತಿದ್ದರು. ಅವರ ಮೂಲಕ ನಮ್ಮ ಅಮ್ಮ ಕಲಿತು ನಮ್ಮ ಮೇಲೆ ಪ್ರಯೋಗ ಮಾಡುತ್ತಿದ್ದಳು. mom is a great cook. But then all moms are!! :-)

ಇಲ್ಲಿದೆ ವಸ್ತಾದ್ ರೊಟ್ಟಿ ಮಾಡುವ ವಿಧಾನ

ಒಂದು ಕಪ್ ಮೈದಾ, ಎರಡು ದೊಡ್ಡ ಚಮಚೆ ಮೊಸರು, ಅರ್ಧ ಟೀ ಸ್ಪೂನ್ ಅಡಿಗೆ ಸೋಡಾ, ಒಂದು ಟೀ ಸ್ಪೂನ್ ಜೀರಿಗೆ, ಮಿಕ್ಸಿಯಲ್ಲಿ ಹಾಕಿದ ಎರಡು ಹಸಿ ಮೆಣಸು, ಉಪ್ಪು , ಚಿಟಿಕೆ ಸಕ್ಕರೆ
ಮೊದಲಿಗೆ ಮೊಸರಿನಲ್ಲಿ ಉಪ್ಪು ಸಕ್ಕರೆ ಮತ್ತು ಸೋಡಾ ಪುಡಿ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಅದು ಬುರುಗು ಬರುತ್ತೆ. ಇದಕ್ಕೆ ಹಸಿಮೆಣಸಿನಕಾಯಿಯ ಪೇಸ್ಟ್ ಬೆರೆಸಿ, ಆಮೇಲೆ ಜೀರಿಗೆ, ಕೊನೆಯಲ್ಲಿ ಮೈದಾ ಬೆರೆಸಿ, ನೀರು ಹಾಕಿ ತುಂಬಾ ಅಂದ್ರೆ ತುಂಬಾsssss ಮೆತ್ತಗಿನ ಕಣಕ (dough)ತಯಾರಿಸಿ. 6 ಗಂಟೆಗಳ ಕಾಲ ಇದನ್ನು ಹುದುಗಲು ಬಿಡಿ. ನಾನು ರಾತ್ರಿ ಹಿಟ್ಟು ತಯಾರಿಸಿ ಬೆಳಗ್ಗೆ ಈ ರೊಟ್ಟಿಯನ್ನು ತಯಾರಿಸುವುದು.


6 ಗಂಟೆಗಳ ನಂತರ ಹಿಟ್ಟು ಉಬ್ಬಿ ಎರಡರಷ್ಟಾಗುತ್ತದೆ. ಹಿಟ್ಟಿನ ದೊಡ್ಡ ಗಾತ್ರದ ಉಂಡೆ ಮಾಡಿ. ಸ್ವಲ್ಪವೆ ತಟ್ಟಿ ಕಾವಲಿಯ ಮೇಲೆ ಚಪಾತಿ ತರಹ ಬೇಯಿಸಿ. ಮೊದಲಿಗೆ ಸ್ವಲ್ಪ ಹೊತ್ತು ಮುಚ್ಚಿ ಬೇಯಿಸಿ, ರೊಟ್ಟಿ ಚೆನ್ನಾಗಿ ಉಬ್ಬುತ್ತೆ. ಆಮೇಲೆ ಎಣ್ಣೆ ಹಾಕಿ ಕವುಚಿ ಹಾಕಿ. ಎರಡು ಬದಿ ಕೆಂಪಾಗುವವರೆಗೆ ಬೇಯಿಸಿ. ಒಳಗಡೆ ಸಾಫ್ಟ್ ಬನ್ ತರಹ ಆಗುತ್ತೆ

ಇದನ್ನು ಬಿಸಿ ಬಿಸಿ ಇದ್ದಾಗ ಬೆಣ್ಣೆ ಮೆತ್ತಿ ತಿನ್ನ ಬಹುದು ಅಥವಾ ಮಾಲವಿಕಾಳ fav ದಾಲ್ ತೊವ್ವೆ ಜತೆ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ ಆಗಿದೆ. ನೀವು ಮಾಡಿ ನೋಡಿ. ಹೇಗೂ ರಜೆಗಳ ಸಾಲು. ನೀರುಳ್ಳಿಗೂ ರೇಟ್ ಏರಿದೆ. ಹಾಗಾಗಿ ಬ್ರೇಕ್ ಫಾಸ್ಟ್ ಗೆ  ರೂಟಿನ್ ದೋಸೆ, ಉಪ್ಪಿಟ್ಟು, ಪೂರಿ-ಪಲ್ಯ ದಿಂದ ಚೆಂಜ್ ಇರುತ್ತೆ. ಇದನ್ಯಾಕೆ ಟ್ರೈ ಮಾಡಬಾರದು?

ತಿಂದಾದ ಮೇಲೆ ’ಅರೇ ಹುಜುರ್ ವಾಹ್ ಉಸ್ತಾದ್ ನಹೀಂ ವಾಹ್ ’ವಸ್ತಾದ್’ ಬೊಲಿಯೇ ಅನ್ನಲು  ಹರಕತ್ ಇಲ್ಲ..:-) :-)
ನೀವು ಇದನ್ನು ಟ್ರೈ ಮಾಡಿ ನೋಡಿ, ನಾವು ಒಂದು ರೌಂಡ್ ಊರಿಗೆ ಹೋಗಿ ಬರುತ್ತೇವೆ..ಆಗಬಹುದಾ??

see you when i see you, bye

ನಿಹಾ ಕ್ಲಿಕ್ಕಿಸಿದ ಕೃಷ್ಣಾವತಾರಗಳು ಕೇವಲ ನಿಮಗೋಸ್ಕರ...:-) enjoy. Happy Krishnasthami. ಕಿಟಕಿ, ಬಾಗಿಲು, ಧೂಪ ದೀಪ ಎಲ್ಲೆಂದರಲ್ಲಿ ಕೃಷ್ಣ.......










come back and save the world: my favorite by Harharan and Leslie Lewis: ಕೃಷ್ಣಾ ನಿ ಬೇಗನೆ ಬಾರೋ...

Krishna nee begane baro
:-)

August 26, 2013

Malathi is missing :-)

My brother just left for work , and his baby is asleep so i thought i will quickly upload some pictures. My brother is not letting me access the net.Sorry to all of you who have sent me mails/sms and some have even called but i have not answered anyone except one or two. Just checked my gmail inbox and it is overflowing with mails. i am not in the mood to read them as yet! i really do not know when the day begins and the day ends my hands are quite full looking after baby Vidisha- yes we named the baby Vidisha , She is 18 days old today.( the moment we are born we start growing old naa? one day OLD, 10 days OLD, 100 years OLD etc)and my ill father who also has to be cared for like a baby. Father is on the slow road to recovery so i must say i am happy spending time with my family and loved ones, though i miss my Srikanth and daughters sometimes-yes. sometimes. Malavika is holding the fort at home.:-) :-)
Me and amma wake up at 4 am and first finish all the cooking . After that our whole universe revolves round the baby. I enjoy gazing at her lovely countenance making a myriad of  facial expressions in her deep slumber and can gaze at her for hours at an end. Malathi is totally immersed in her deep dimpled cheeks.
sweet baby photo by Niha
her hands and mine and i prophesied that she is going to be an artist as well as a dancer.
Mihika with her long hair. Need at least half an hour to comb and plait her hair. so therapeutic. love this job of styling her hair and she loves me doing it. She says 'Malathi akka you do my hair so nicely and painlessly 



hmmm photo is not clear. should have put on the flash it was too cloudy and dark inside the sitting room
sweetie pie aka Samidha Pai who answers to my sammy/samsung...:-) isn't she pretty as a picture in pink. To distract her from disturbing the baby i have to constantly device new ways of keeping her engaged during the weekends. On weekdays she is off to school from 8.15 am to 11.50 am.

Sammy's art : can easily give Van Gogh, Matisse etc a run for their money LOL




My favorite



An Hibiscus in My mommee's balcony garden


Me getting loban ( an aromatic resin)ready for the baby after her bath

i use coconut kernels for the 'loban'

Naming ceremony: Vidisha, Sreelaxmi, Swara (name chosen by Niha) Ahana (name chosen by Sammy), Trisha (name chosen by Mihika) the five names accorded during the cradle ceremony
ajjee giving her the oil massage. She speaks marathi. So enjoy chitchatting with her. She visits four households a day to give oil massage to babies and their mother. 
i said smile please and she gives me this beatific lopsided smile

She enjoys the warmth emanating from the smoke in this chilly /rainy weather
me and Vidisha. So Malathi is fine and happy and not gone missing. She is enjoying the company of the latest addition to her brother Pandu's family, that's all. This post is for the benefit of all of  u that missed me :-) :-)

Also my good friends Divya and Sandeep Kamath are now the proud parents of a baby girl.  Congrats guys. love you
(most of the pictures are by me which you might have already guessed )

August 14, 2013

Movie- The Fall

One of the best movies ever.  Just watched it a second time.There is adventure and there is fantasy.  A stunning visualistic narrative that you should not miss.Imagination runs rife in this movie directed by Tarsem Singh. u all will like the cute little girl Alexandria- a great dramebaaz (its a hindi word ,meaning melodrama) i am sure you will enjoy this movie. Whenever me and Niha watch a good movie she tells me 'mommee one day i want to make a good movie and i say you should ....:-)
I am taking a break of 15 days. by the time i return watch this movie and tell me how you like it. click on the you tube link below.

Movie -The fall

Happy watching...(movie was suggested to me by friend Raghu Apara...)
:-)

August 10, 2013

ಜೀವನ - ಇದು ಚಲಿಸುವ ಬಂಡಿ

ನಾನು ಮಕ್ಕಳು ಮುಂಬೈ ನ ದಾದರ್ ಸ್ಟೇಷನ್ ನಲ್ಲಿ ಬೆಂಗಳೂರಿನ ಟ್ರೈನ್ ಹಿಡಿಯಲು ನಿಂತಿದ್ದೆವು. ಅಷ್ಟರಲ್ಲಿ ಯಾರೋ ನನ್ನ ಎಡ ಭುಜ ತಟ್ಟಿದ ಹಾಗಾಯ್ತು ಅಂತ ಕುತ್ತಿಗೆಯನ್ನು ಎಡಕ್ಕೆ ತಿರುಗಿಸಿದರೆ ನನ್ನ ಬಲ ಕಿವಿಯ ಬಳಿ 'ಪೆಹಚಾನ್ ಮುಝೆ' ಅನ್ನುವ ದನಿ ಕೇಳಿಸಿ ಬಲಕ್ಕೆ ತಿರುಗಿದೆ. ನನ್ನ ಎದುರಿಗೆ ನಿಂತವಳನ್ನು ಬಿಟ್ಟ ಕಣ್ಣಿಂದ ನೋಡ್ತಾ ಇದ್ದೆ. ಜೇನ್ಸ್, ಚೆಂದ ದ ಟಾಪ್, ದೊಡ್ಡದೊಂದು ತುರುಬು, ಮುಂದಲೆಯಿಂದ ಸ್ಟೈಲ್ ಆಗಿ ಗಿಡ್ಡಕ್ಕೆ ಕತ್ತರಿಸಿದ ಕೂದಲು ಗಲ್ಲದ ಮೇಲೆ ಕ್ಯೂಟ್ ಆಗಿ ಇಳಿ ಬಿದ್ದಿತ್ತು. ಕಿವಿಯ ಲೋಲಾಕು ಭುಜದವರೆಗೆ ಇಳಿಬಿದ್ದು ತೂಗಾಡುತ್ತಿತ್ತು. ಸನ್ ಗ್ಲಾಸಸ್ ಹಾಕ್ಕೊಂಡಿದ್ದಳು. ನಿಧಾನಕ್ಕೆ ನಕ್ಕಳು. ಈ ನಗು ಪರಿಚಿತ ಅನಿಸಿತು. ಆ ಮೇಲೆ ಸ್ಟೈಲ್ ಆಗಿ ಕನ್ನಡಕ ತೆಗೆದಳು. 'ನಿಮ್ಮೂ' ಅಂತ ಕೂಗಿ ತಬ್ಬಿ ಕೊಂಡೆ.

ಹೇಗಿದ್ದಿಯಾ, ಏನು ಕತೆ ಅಂತ ಇಬ್ಬರೂ ಒಟ್ಟಿಗೆ ಉಚ್ಚರಿಸಿದೆವು. ನನ್ನ ಮಕ್ಕಳನ್ನು ಪರಿಚಯಿಸಿದೆ. 'ಅಬ್ಬ ಆಗಲೇ ಇಷ್ಟು ದೊಡ್ಡವರಾಗಿ ಬಿಟ್ರಾ? ಮೋಟಿ ಹೋಗಯಿ ತೂ (ದಪ್ಪ ಆಗಿದ್ದೀಯಾ) ಅದು ಬಿಟ್ಟರೆ  ನಿನ್ನಲ್ಲಿ ಮಾತ್ರ ಹೇಳಿಕೊಳ್ಳುವ ಮಹಾ ಯಾವ ಬದಲಾವಣೆ ಆಗಿಲ್ಲ ಅಂದಳು. ಗೊತ್ತ ಮಕ್ಕಳೆ?, ಈಗ ನೀವಿಬ್ಬರೂ ನಿಂತ ಹಾಗೆ ನಾನು ಮತ್ತು ರೇವತಿ ಇವಳಿಗೆ ಬಾಡಿಗಾರ್ಡ್ ಆಗಿದ್ದೆವು ಸ್ಕೂಲ್ ನಲ್ಲಿ. ಹುಡುಗರಿಂದ ಅವಳನ್ನು ರಕ್ಷಿಸುತ್ತಿದ್ದೆವು ಅಂತ ನಕ್ಕಾಗ ನಾನು ಕೆಂಪು ಕೆಂಪು ಆಗಿದ್ದನ್ನು 'ನೋಡಿ ನೋಡಿ ನಾವು ಛೆಡಿಸಿದಾಗ, ಕೀಟಲೆ ಮಾಡಿದಾಗಲೆಲ್ಲ ಹೀಗೆ ಗಲ್ಲ ಕಿವಿ ಎಲ್ಲ ಕೆಂಪು ಆಗುತ್ತಿತ್ತು. ಈಗಲೂ ಬದಲಾವಣೆ ಇಲ್ಲ' ಅಂತ ಇನ್ನಷ್ಟು ನಕ್ಕಳು. ಇನ್ನು ಏನೇನೋ ಹೇಳಿ ನನನ್ನು ಮುಜುಗರಕ್ಕೆ ಒಳಪಡಿಸುವುದು ಬೇಡ ಅಂತ ಅವಳ ಬಗ್ಗೆ ಕೇಳಿದೆ..
'ನೆನಪಿದೆಯ 11 ನೇ ಕ್ಲಾಸ್ ನಲ್ಲಿ ನಡೆದಿದ್ದು? ಅಂತ ಕೇಳಿದಾಗ ನನ್ನ ಮನಸ್ಸು ಹಿಂದಕ್ಕೆ ಓಡಿತು

ನಾನು ಆಗ ಆ ಶಾಲೆಗೆ ಹೊಸದಾಗಿ ಸೇರಿದ್ದೆ. ಅವಳು ಅದೇ ಶಾಲೆಯಿಂದ ಪಾಸ್ ಆಗಿ 11 ನೇ ತರಗತಿಗೆ ಬಂದಿದ್ದಳು. ಅಲ್ಲಿ ಹತ್ತನೆ ತರಗತಿ ಮುಗಿದ ನಂತರ ನಾವು ಕಾಲೇಜು ಸೇರಬಹುದಿತ್ತು ಅಥವಾ 11 ಮತ್ತು 12 ನೇ ತರಗತಿ (ಕರ್ನಾಟದಲ್ಲಿ ಪಿ. ಯು. ಸಿ ಅನ್ನುತ್ತರಲ್ಲವಾ?) ಮುಗಿಸಿ ಗ್ರಾಜುಯೇಷನ್ ಕೋರ್ಸ್ ಗೆ ಬೇರೆ ಕಾಲೇಜ್ ಗೆ ಹೋಗಬಹುದಿತ್ತು. ಕೆಲ ಶಾಲೆಯಲ್ಲಿ ಮಾತ್ರ 11 ಮತ್ತು 12 ತರಗತಿಗೆ ಅವಕಾಶ ಇತ್ತು.  ಅಂತಹ ಸ್ಕೂಲ್ ಗೆ ನಾನು ಸೇರಿದ್ದೆ. ನಾವು ಆಯ್ಕೆ ಮಾಡಿದ ವಿಷಯ ವಿಜ್ಞಾನ. ಮೊದಲ್ನೆ ದಿನಾ ನೆ ಪರಿಚಯ ಆದವಳು 'ನಿಮ್ಮು' ಓದುವುದರಲ್ಲಿ, ಸ್ಪೋರ್ಟ್ಸ್, ರಂಗವಲ್ಲಿ, ನಾಟಕ ಮುಂತಾದವುಗಳಲ್ಲು ಯಾವತ್ತೂ ಮುಂದೆ. ಅವಳಿಗೆ ಬೇರೊಂದು ಕಾಲೇಜಿನಲ್ಲಿ ಓದುವ ಅವಳಿ  (twin)ಇದ್ದ. ನಂತರ ಇನ್ನಿಬ್ಬರು ತಂಗಿಯಂದಿರು.  ಹುಡುಗರು ನನ್ನ ಶಾಂತ ಸ್ವಭಾವದ ಕಾರಣ ಯಾವತ್ತೂ ನನಗೆ ಚುಡಾಯಿಸುತ್ತಿದ್ದರಿಂದ ಅವಳು ಮತ್ತು ರೇವತಿ ಯಾವಾಗಲೂ ನನಗೆ ಬಾಡಿಗಾರ್ಡ್. ಹುಡುಗರು ಅವರನ್ನು 'ಬಾಡಿಗಾರ್ಡ್ಸ್' ಅಂತ ನಿಕ್ ನೇಮ್ ಇಟ್ಟಿದ್ದರು. ನಾನು ಪೀಚಲು ಕಡ್ಡಿ ತರಹ ಇದ್ದರೆ ಆದರೆ ಅವರಿಬ್ಬರೂ ಮೈ ಕೈ ತುಂಬಿಕೊಂಡು ಧಾಂಡಿಗರಂತೆ ಕಾಣುತ್ತಿದ್ದರು. ಅದರಲ್ಲೂ ರೇವತಿ ಕರಾಟೆಯೆಲ್ಲ ಕಲಿತು ಒಳ್ಳೆ ದೇಹಧಾರ್ಡ್ಯ ಹೊಂದಿದ್ದಳು. ಅದೇ ನಾಗಿತ್ತು ಅಂದರೆ, ಹತ್ತನೆಯ ತರಗತಿ ತನಕ ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿತ ನನಗೆ, ಹುಡುಗರನ್ನು ಕಂಡು ಒಂದು ತರಹ ಕಸಿವಿಸಿ. ಮನೆಯಲ್ಲಿ ನನ್ನ ತಮ್ಮಂದಿರ ಬಳಿ ಕೂಡ ಸರಿಯಾಗಿ ಮಾತನಾಡುತ್ತಿರಲಿಲ್ಲ ನಾನು. ಅಂತದ್ದರಲ್ಲಿ ಮೊದಲನೇ ದಿನಾನೇ ಹುಡುಗರು ಏನೋ ಅಂದಿದ್ದಕ್ಕೆ ನಾನು ಅಳಲಿಕ್ಕೆ ಶುರು ಮಾಡಿದ್ದೆ. ಆ ದಿನ ನೇ ಅವರಿಬ್ಬರು ನನಗೆ ಬಾಡಿಗಾರ್ಡ್ ಆಗಿದ್ದರು. :-)

ತರಗತಿಯ ಪಾಠ, ತಂಟೆ, ತಕರಾರು, ಟೂರ್ ಮುಂತಾದ್ದೆಲ್ಲ ನಡೆದು 11 ನೆಕ್ಲಾಸ್ ಯಾವಾಗ ಮುಗಿಯಿತು ಅಂತ ತಿಳಿಯಲೇ ಇಲ್ಲ. 11 ನೇ ತರಗತಿಯ ಪರೀಕ್ಷೆ ಮುಗಿಸಿ 15 ದಿನಕ್ಕೇ ನಮ್ಮ ರಿಸಲ್ಟ್. ಶಾಲೆ ಎಂಟರ್ ಆಗುವ ಮುಂಚೆಯೆ ಬೋರ್ಡ್ ಮೇಲೆ ಮೊದಲ ಐದು rank ನ ಪಟ್ಟಿ ಹಾಕಿಟ್ಟಿದ್ದರು. ಮೊದಲನೆ ಹೆಸರು ನಿಮ್ಮುದು, ನನ್ನದು ಐದನೆದು. ನನಗೆ ಇಂಗ್ಲಿಷ್ ನಲ್ಲಿ ತೀರಾ ಕಡಿಮೆ ಅಂಕ ಬಂದಿತ್ತು. ಅವಳಿಗೆ ಅಭಿನಂದಿಸಲು ಅವಳನ್ನು ಹುಡುಕ್ತಾ ಇದ್ದಾಗ ನನಗೆ ರೇವತಿ ಸಿಕ್ಕಿದಳು. ಅವಳು ನನ್ನನ್ನು ಪಕ್ಕಕ್ಕೆ ಒಯ್ದು 'ವಿಷಯ ಗೊತ್ತಾಯ್ತಾ?' ಅಂತ ಕೇಳಿದಳು. ನಾನು 'ಇಲ್ಲ' ಅಂದೆ.

ನಿಮ್ಮುಳ ಅಣ್ಣ (ಅವಳಿ ಜ್ಅವಳಿಯಾದರೂ ಅವನು ಐದು ನಿಮಿಷ ಬೇಗ ಹುಟ್ಟಿದ್ದ) ತನ್ನ ಕೊನೆಯ ಪರೀಕ್ಷೆ ಮುಗಿಸಿ ಟ್ರೈನ್ ನಲ್ಲಿ ವಾಪಸ್ ಆಗ್ತಾ, ಟ್ರೈನ್ ನ ಬಾಗಿಲ ಬಳಿ ನೇತಾಡ್ತಾ ಇದ್ದನಂತೆ. ಜೋಲಿ ತಪ್ಪಿ ಪಟರಿ ಮೇಲೆ ಬಿದ್ದು ತೀರಿಕೊಂಡಿದ್ದ. ನನಗೆ ಕೇಳಿ ತುಂಬ ಬೇಜಾರಾಯಿತು. ಆ ಮೇಲೆ ಸ್ಕೂಲ್ ಪುನ: ಪ್ರಾರಂಭ ಆದಾಗ ನನಗೆ ಸಿಕ್ಕಿದ್ದು ಮಂಕು ಬಡಿದ ನಿಮ್ಮು. ತುಂಬ ಚಟುವಟಿಕೆಯಿಂದ ಇರುತ್ತಿದ್ದ ನಿಮ್ಮು ಮಂಕಾಗಿದ್ದಳು. ಯಾವಾಗಲೂ ತರಗತಿಗೆ ಬೆಲ್ ಹೊಡೆದ ಮೇಲೆ ಬರುತ್ತಿದ್ದಳು. ಟೀಚರ್ ಕೇಳಿದರೆ ಮನೆ ಕೆಲಸ ಎಲ್ಲ ಮುಗಿಸಿ ಬರಲು ಲೇಟ್ ಆಗುತ್ತದೆ ಅಂದಿದ್ದಳು. ನಾವು ಸುಮ್ಮನೆ ಅವಳ ಜತೆ ಇರುತ್ತಿದ್ದೆವು. ಇಡೀ ಕ್ಲಾಸ್ ಒಂದು ತರಹ ತಣ್ಣಗಾಗಿತ್ತು. ಇದೆಲ್ಲದರ ಮಧ್ಯೆ ಅವಳ ಚಿಕ್ಕ ತಂಗಿ ಇನ್ನೋರ್ವ ಸ್ನೇಹಿತೆ ಜತೆ ಸೇರಿ ಮನೆಯಿಂದ ಓಡಿ ಹೋಗಿ, ಪೋಲಿಸರು ಆಕೆಯನ್ನು ಶೋಲಾಪುರ್ ದಿಂದ ಕರೆದುಕೊಂಡು ಮುಂಬೈಗೆ ತಲುಪಿಸಿದರು. ಆ ಕಾರಣದಿಂದಾಗಿ ಅವಳಿಗೆ ಶಲೆಯಿಂದ ತೆಗೆಯಲಾಯಿತು. :-(

ಅವಳ ತಂದೆಗೆ ಸರಕಾರಿ ನೌಕರಿ. ಅಮ್ಮ ಗೃಹಿಣಿ. ಮಗನಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಅಮ್ಮ ಅವನ ಸಾವಿನಿಂದ ಡಿಪ್ರೆಷನ್ ಗೆ ಹೋಗಿದ್ದಳು. ನಮ್ಮ ಮುದಿ ವಯಸ್ಸಿನಲ್ಲಿ ನಮ್ಮನ್ನು ಸಾಕುವವನು ಹೋಗೆ ಬಿಟ್ಟ ಅಂತ ಆಗಾಗ ಅಳೋದು, ಹುಡಿಗಿಯರಿಗೆ ಬಾಯಿಗೆ ಬಂದದ್ದು ಬೈಯುವುದು, ಅಡಿಗೆಗೆ ಒಲೆ ಮೇಲೆ ಏನಾದರೂ ಇಟ್ಟರೆ ಅದು ಹಾಗೆ ಇದ್ದು ಸೀದು ಹೋಗುವುದು ಮುಂತಾದೆಲ್ಲ ನಡೆದು ಆಕೆ ಔಷಧಿ ಮೇಲೆ ಅವಲಂಬಿತಳಾಗಿದ್ದಳು. ಎಲ್ಲ ಕೆಲಸದ ಭಾರ ನಿಮ್ಮು ಮೇಲೆ. ಇಷ್ಟರಲ್ಲಿ ಅವಳ ತಂದೆಗೆ ಬೇರೆ ಕಡೆ ವರ್ಗ ಆಗಿ ಅವರು ಒಬ್ಬರೆ ಬೇರೆ ಇರುತ್ತಿದ್ದರು. ತಿಂಗಳಿಗೆ ಒಮ್ಮೆ ಮನೆಗೆ ಹೋಗಿ ಬರುವುದು ಮಾಡುತ್ತಿದ್ದರು. ಈಗ ಸಂಪೂರ್ಣ ಜವಬ್ದಾರಿ ನಿಮ್ಮು ಮೇಲೆ. ಓದಿ ಡಾಕ್ಟರ್ ಆಗ ಬೇಕೆಂದು ಅಂದು ಕೊಂಡಿದ್ದಳು ನಿಮ್ಮು. ಆದರೆ ಆಸ್ಪತ್ರೆ ಔಷಧಿ ಅಂತ ತುಂಬ ಖರ್ಚಾಗಿದ್ದು ಮಾತ್ರವಲ್ಲ, ಈಗೀಗ ನಿಮ್ಮುಗೆ ಕಡಿಮೆ ಅಂಕಗಳು ಬರಲು ಶುರು ಆಗಿತ್ತು. ಮೆಡಿಕಲ್ ಓದೋದಾದ್ರೆ ಮೆರಿಟ್ ಮೇಲೆ ಮಾತ್ರ ಅಂತ ಅವಳ ಅಮ್ಮ ಅವಳಿಗೆ ಅವಳ ಅಮ್ಮ ನಿಮ್ಮು ಎಂಟನೆ ತರಗತಿ ಓದಾಬೇಕಾದ್ರೆ ಹೇಳಿಟ್ಟಿದ್ದರಂತೆ. ಆ ಮೇಲೆ ಹನ್ನೆರಡನೆ ಪರೀಕ್ಷೆ ಆದ ಮೇಲೆ ನನ್ನ ಮದುವೆ ಆಗಿ, ಇಷ್ಟು ವರ್ಷಗಳ ಮೇಲೆ ಅವಳು ಸಿಕ್ಕಿದ್ದಳು.

ಅವಳು ಈಗ ಒಂದು ದೊಡ್ಡ ಕಂಪನಿಯ ಎಮ್ ಡಿ ಗೆ ಪರ್ಸನಲ್ ಸೆಕ್ರೆಟರಿ. ಮದುವೆ ಮಾಡಿಕೊಂಡಿಲ್ಲ. ಅಪ್ಪ ರಿಟೈರ್ ಆದ ಮೇಲೆ ಮುಂಬೈ ಹೊರವಲಯದಲ್ಲಿರುವ ತಮ್ಮ ಹಳ್ಳಿ ಮನೆಗೆ ಅಮ್ಮನ ಜತೆ ಇದ್ದಾರೆ. ಇಬ್ಬರೂ ತಂಗಿಯರಿಗೆ ಮದುವೆಯಾಗಿದೆ. ಅಪ್ಪ ಅಮ್ಮನ ಜವಾಬ್ದಾರಿ 'ನನ್ನದೇ' ಅಂತ ನಿಮ್ಮು ಮದುವೆ ಮಾಡಿಕೊಂಡಿಲ್ಲ. ಚಟಪಟ ಮಾತಾಡುತ್ತಿದ್ದರೂ ಕಣ್ಣಲ್ಲಿ ತುಂಬಿಕೊಂಡ ಅಗಾಧ ನೋವು 'ಅಣ್ಣನ ಸಾವಿನಿಂದ ಅಮ್ಮ ಚೇತರಿಸಿಕೊಳ್ಳಲೇ ಇಲ್ಲ'. ಒಂದಿನ ನಾನ್ನು ತಂಗಿ ಏನೋ ಮಾತನಾಡಿ ನಗುತ್ತಿರುವಾಗ 'ಅವನ ಬದಲು ನೀನು ಸಾಯಬೇಕಿತ್ತು' ಅಂದಾಗ ನನಗೆ ಆದ ಸಂಕಟ ಅಷ್ಟಿಷ್ಟಲ್ಲ. ಅಣ್ಣ ಮಾಡೋದನ್ನು ನಾನು ಮಾಡುತ್ತಿದ್ದರೂ ಆಕೆಗೆ ಸಮಾಧಾನ ಇಲ್ಲ' ಆ ಮಾತು ನನ್ನನ್ನು ಯಾವತ್ತೂ ಕಾಡುತ್ತೆ'.

ನಿಮ್ಮುಗೆ  ಸಮಾಧಾನ ಹೇಳುವ ಹಲವಾರು ಮಾತುಗಳಿದ್ದವು ಆದರೂ ಯಾಕೋ ನಾನು ಬಾಯಿ ಬಿಡಲೇ ಇಲ್ಲ. ಅಷ್ಟರಲ್ಲಿ ಧಡಧಡ ಅಂತ ನಮ್ಮ ಟ್ರೈನ್ ಬಂತು ಪುನ: ಒಬ್ಬರನ್ನೊಬ್ಬರು ತಬ್ಬಿ 'ಬೆಂಗಳೂರಿಗೆ' ಬಾ ಅಂತ ಹೇಳಿ ಬಂದೆ.
ಈ ಜೀವನ ಒಂದು ವಿಚಿತ್ರ ಅಲ್ಲವಾ??
:-(
(ಇದನ್ನೆಲ್ಲ ನಿಮ್ಮು ಮರಾಠಿ ಪತ್ರಿಕೆಯಲ್ಲಿ ಈಗಾಗಲೇ ಬರೆದಿದ್ದಾಳೆ ಆದ್ದರಿಂದ ಅವಳಿಗೆ ಕೇಳಿಯೇ ಬರೆದಿದ್ದೀನಿ)

ಇದು ಓದಿ ನಿಮಗೆ ಬೇಜಾರಾಗಿದ್ರೆ ಇಲ್ಲಿ ಕೇಳಿ ಒಂದು funny incident ಟ್ರೈನ್ ನಲ್ಲಿ ನಡೆದಿದ್ದು:
ನಮ್ಮ ಎದುರಿನ ಸೀಟ್ ನಲ್ಲಿ ಒಂದು ಪುಟಾಣಿ ಮಗು ಇತ್ತು. ಹೆಚ್ಚೆಂದರೆ ಒಂದುವರೆ ವರ್ಷ. ಅದರ ಅಮ್ಮನ ಫ್ರೆಂಡ್ ಒಬ್ಬರು ಬಂದು ಅವನ ಜತೆ ಮಾತನಾಡಲು ಶುರು ಮಾಡಿದರು. ತಮ್ಮ ಬಳಿಯಿದ್ದ ಜಾಗಕ್ಕೆ ಆ ಮಗುವನ್ನು ಕರೆಯುತ್ತ: 'ಪುಟ್ಟು ಇಲ್ಲಿ ಬಾ ಆಂಟಿ ಹತ್ತಿರ ಕೂಚಿ ಕೂಚಿ ಮಾಡು. ಬೆಂಗ್ಲೂಲಿಗೆ ಹೊಲಟಿದ್ದಿಯಾ?? ಚಾಕ್ಕಿ ತಿನ್ನುತ್ತೀಯಾ '...ಅಂತೆಲ್ಲ. ಮಗು ಆಕೆಯನ್ನು ಎವೆಇಕ್ಕದೆ ನೋಡುತ್ತಿತ್ತು. ಆಕೆ ಹೊರಟು ಹೋದ ಮೇಲೆ ಸ್ವಲ್ಪ ಹೊತ್ತಿಗೆ ತನ್ನ ಅಮ್ಮನ ಬಳಿ ಹೊರಳಿ 'ಪಾಪ ನಿನ್ನ ಫ್ರೆಂಡ್ ಗೆ ತೊದಲು ಅನ್ನಿಸುತ್ತೆ' ಅಂತ ಸ್ಪಷ್ಟವಾಗಿ ಕೇಳಿದಾಗ ನನಗಂತೂ ನಗು ತಡಿಲಿಕ್ಕೆ ಆಗಲಿಲ್ಲ. 'ಇನ್ನು ಮುಂದೆ ಮಕ್ಕಳ ಜತೆ ಮುದ್ದುಗರೆಯುತ್ತ ತೊದಲು ಮಾತಾಂಡಗಿಲ್ಲ ನೋಡಿ...
ನಿನ್ನೆ ನನ್ನ ತಮ್ಮನಿಗೆ ಮಗಳು ಹುಟ್ಟಿದ್ದಾಳೆ. ಅಲ್ಲಿಗೆ ಆಗಸ್ಟ್ ನಲ್ಲಿ ನಮ್ಮ ಕುಟುಂಬದಲ್ಲಿ 7 ಹುಟ್ಟಿದಹಬ್ಬಗಳು ಒಂದೆ ವಾರದಲ್ಲಿ. ಹೌ ನೈಸ್...ನಾ ಹೊರಟೆ ಅವಳನ್ನು ಮುದ್ದು ಮಾಡಲು...

ಅವಳ ಹುಟ್ಟಿದ ನಕ್ಷತ್ರದ ಪ್ರಕಾರ ಅವಳ ಹೆಸರು 'ಟ' ದಿಂದ ಶುರುವಾಗಬೇಕಂತೆ. ಸ್ಯಾಮಿ ಅವಳಿಗೆ 'ಟಾಟಾ ಪೈ' ಅಂತ ನಾಮಕರಣ ಮಾಡಿ ನಮನ್ನೆಲ್ಲ ಒಂದು ರೌಂಡ್ ನಗಿಸಿದಳು. ನಿಮಗ ಟ ದಿಂದ ಯಾವುದಾದರೂ ಹೆಸರು ಹೊಳೆದರು ಬರೀರಿ ಪ್ಲೀಸ್. :-)


August 8, 2013

ಬ್ರೆಡ್ ಉಪ್ಪಿಟ್ಟು

ಒಂದು ಪೌಂಡ್ whole wheat Atta ಬ್ರೆಡ್ ಅಥವಾ ಬ್ರೌನ್ ಬ್ರೆಡ್. ಅದನ್ನು ಮಿಕ್ಸಿಯಲ್ಲಿ ರವೆ ಗಾತ್ರಕ್ಕೆ ಪುಡಿ ಮಾಡಿಡಿ.

ಒಗ್ಗರಣೆಗೆ: ತುಪ್ಪ, ಸಾಸಿವೆ, ಕರಿಬೇವಿ, ಜೀರಿಗೆ, ಹಸಿಮೆಣಸಿನಕಾಯಿ, ತಾಜಾ ಶುಂಠಿ, ಈರುಳ್ಳಿ.

ತರಕಾರಿ : ಕ್ಯಾರೆಟ್, ಬಟಾಣಿ ಅಥವಾ ಬೇಯಿಸಿದ ಆಲೂಗಡ್ಡೆ.

ಸ್ವಲ್ಪ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ

ಬ್ರೆಡ್ ಅನ್ನು ಮಿಕ್ಸಿ ಅಲ್ಲಿ ಹಾಕಿದಾಗ ಹೀಗೆ ಕಾಣುತ್ತೆ.

ಉಳಿದ ವಿಧಾನ ಉಪ್ಪಿಟ್ಟು ಮಾಡುವಂತೆ. ನೀರು ಹಾಕಲಿಕ್ಕಿಲ್ಲ ಅಷ್ಟೆ. ನಿಮಗೆ ಮೆತ್ತಗಿನ ಉಪ್ಪಿಟ್ಟು ಬೇಕಿದ್ದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಚಿಮುಕಿಸಿ. ಇದು ನಾನೇ ಕಂಡು ಕೊಂಡ ವಿಧಾನ. ನಿಹಾನ ಟಿಫಿನ್ ಬಾಕ್ಸ್ಗೆ ಹೊಸ ಹೊಸ ಉಪಾಯ. ಅವಳಿಗೆ ಅವಳ ಸ್ನೇಹಿತೆಯರಿಗೆ ಮಾತ್ರವಲ್ಲ ಅಕ್ಕನಿಗೂ ಇದು ತುಂಬ ಇಷ್ಟ ಆಯಿತಂತೆ. ನನಗೆ?? ನನಗೆ ಉಳಿಯಲಿಲ್ಲ. ನಾನು ಟ್ರಯಲ್ ಗೋಸ್ಕರ ಸ್ವಲ್ಪವೇ ತಯಾರಿಸಿದ್ದೆ. ಮಾತ್ರವಲ್ಲ ನಮಗೆ ದೋಸೆ part-2 ಇತ್ತು. :-)
ನೀವು ಮಾಡಿ ನೋಡಿ. ಸಂಜೆ ತಿಂಡಿಗೆ ಚೆನ್ನಾಗಿರುತ್ತೆ.

ಇರಲಿ ಡೀಟೈಲ್ ಆಗಿ ಹೇಗೆ ಮಾಡುವುದೆಂದು ಬರೆದೇ ಬಿಡುತ್ತೇನೆ:
ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಕೈಯಾಡಿಸಿ, ಬಳಿಕ ಸಣ್ಣಕ್ಕೆ ತುರಿದಿಟ್ಟ ಶುಂಠಿ ಬೆರೆಸಿ. ಕೊನೆಗೆ ಬ್ರೆಡ್ ಪುಡಿ, ಉಪ್ಪಿ, ಚಿಟಿಕೆ ಸಕ್ಕರೆ ಬೆರೆಸಿ ಮುಚ್ಚಿಡಿ. 5 ನಿಮಿಷ ಒಲೆಮೇಲಿರಲಿ. ಆಫ್ ಮಾಡಿ ಪಾತ್ರೆ ಕೆಳಗಿಟ್ಟ ಮೇಲೆ ಕಾಯಿತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ.

ನನ್ನ ಬಳಿ ಕ್ಯಾರೆಟ್ ಇರಲಿಲ್ಲ ಹಾಗಾಗಿ ಓನ್ಲಿ ಹಸಿ ಬಟಾಣಿ ಮಾತ್ರ ಸೇರಿಸಿದ್ದೇನೆ. ( ಹುಡುಕ್ತಾ ಕೂರಬೇಡಿ ಮತ್ತೆ. ಮತ್ತು ಫೋಟೊ ತೆಗೆದದ್ದು ನಾನು. ಸರಿ ಬಂದಿಲ್ಲ. ಬೇರೆ ಕ್ಯಾಮರಾದಿಂದ ತೆಗೆದಾಗ ಈ ಫೋಟೊ ರಿಪ್ಲೇಸ್ ಮಾಡ್ತೇನೆ.) ಮಕ್ಕಳ ಬಳಿ ನಾನು ತಮಾಷೆ ಮಾಡುವುದಿತ್ತು - ಕ್ಯಾರೆಟ್ ಬಟಾಣಿ ಎಲ್ಲ ಸೇರಿಸಿದ್ದೇನೆ. ಕ್ಯಾರೆಟ್ ಸಿಕ್ಕರೆ ಒಂದು ಗೋಲ್ಡ್ ಕಾಯ್ನ್ ಅಂತ ಈಗ ನನ್ನ ಮಕ್ಕಳು ದೊಡ್ಡವರಾಗಿದ್ದರೆ, ಅದಕ್ಕೆ ಈಗೀಗ ನನ್ನ ಕೆಟ್ಟ ಜೋಕ್ ಗಳ ಪ್ರಯೋಗ ನನ್ನ ತಂಗಿ ಮಕ್ಕಳ ಮೇಲೆ.ಸಧ್ಯಕ್ಕಂತು ಅವರು ಎಂಜಾಯ್ ಮಾಡ್ತಿದ್ದಾರೆ ಮುಂದಿನ ಸಲ ಬಂದಾಗ ದೊಡ್ಡಾಮ್ s please grow up ಅನ್ನುಬಹುದೇನೋ...ಹಾಗಾಗಿ ಅಲ್ಲಿ ತನಕ ನಾನು ಹೀಗೇsssssssssssssss.. :-)

@ ಗೀತಾ: ಇದನ್ನು ಬಾಣಲೆಯಲ್ಲಿ ಹಾಕಿ ಹುರಿದರೆ ಕಟ್ ಲೆಟ್ ಗೆ ಬ್ರೆಡ್ ಕ್ರಂಬ್ಸ್ ಮಾಡುವುದು ಇನ್ನೂ ಸುಲಭ. ನಾನು ಮೈಕ್ರೋವೇವ್ ನಲ್ಲಿ ಎರಡು ನಿಮಿಷ ಇಟ್ಟು ಕ್ರಂಬ್ಸ್ ಮಾಡಿಟ್ಟು ಕೊಂಡೆ

August 5, 2013

ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು- ಬ್ಲಾಗ್ ಲೋಕದಲ್ಲಿ 5 ನೇ ವರ್ಷಕ್ಕೆ


ನೇಮಿಚಂದ್ರರ ಬರಹಗಳ ಬಗ್ಗೆ ಹಲವಾರು ಸ್ನೇಹಿತರಿಂದ ಕೇಳಿದ್ದೆ. ಶ್ರೀಕಾಂತ ಕೂಡ ವರ್ಷಗಳ ಹಿಂದೆ ಅವರ ಧಾರಾವಾಹಿಯೊಂದನ್ನು ಸುಧಾ ವಾರ ಪತ್ರಿಕೆಯಲ್ಲಿ ಓದಿದ್ದು, 'ನೀನು ಅವರ ಪುಸ್ತಕ ಓದಲೇ ಬೇಕು ತುಂಬಾ ಚೆನ್ನಾಗಿ ಬರೀತಾರೆ' ಅಂದಿದ್ದರು. ಆದರೂ ಪ್ರತಿ ಸಲ ಪುಸ್ತಕದಂಗಡಿಗೆ ಭೇಟಿ ಕೊಟ್ಟಾಗ ಅವರ ಪುಸ್ತಕದ ಬಗ್ಗೆ ಮರೆತು ಹೋಗುತ್ತಿತ್ತು.
ತಂಗಿ ಬಂದಾಗ ಹೊರಟಿದ್ದು ಅಂಕಿತಾಗೆ ಆದ್ರೆ ಮಳೆಯರಾನ ಕೃಪೆ, ಹೊಕ್ಕಿದ್ದು ಬೆಳೆಗೆರೆ ಬುಕ್ಸ್ ಎಂಡ್ coffee. ನನ್ನ ತಂಗಿಯ ಮಕ್ಕಳು 8 ಹಾಗೂ11 ವರ್ಷದವರು. ಅವರಿಬರಿಗೂ ಸಿಕ್ಕಾಪಟ್ಟೆ ಓದುವ ಹುಚ್ಚು. ಅಷ್ಟೆ ಅಲ್ಲ ಚಿಕ್ಕವಳು ಆಗಲೇ ಎರಡು ಪುಸ್ತಕ ಪಬ್ಲಿಷ್ ಮಾಡಿದ್ದಾಳೆ. ಅವರಿಗೆ ಕೆಲವು ಇಂಗ್ಲಿಷ್ ಪುಸ್ತಕ ತೆಗೆಸಿಕೊಡ್ತೇನೆ ಅಂದಿದ್ದೆ. ಅದಕ್ಕೆ ಆ ದಿನ ಪುಸ್ತಕ ಅಂಗಡಿಗೆ ಭೆಟ್ಟಿ ನೀಡಿದ್ದು.
so  BBC ಯಲ್ಲಿ ಸಿಕ್ಕಿತು ಚಂದದ ಮುಖಪುಟದ 'ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು’. ತೆಗೆದುಕೊಂಡು ಬಿಟ್ಟೆ. ಮತ್ತು ಅದನ್ನು ಹಾಗೆ ಕಪಾಟೊಳಗೆ ತುರುಕಿಸಿಟ್ಟೆ.
ಇತ್ತೀಚಿಗೆ ನಟರಾಜು (ಪಂಜು ಇ- magazine) ಫೋನ್ ಮಾಡಿದಾಗ 'mom 25 ನೇ ಸಂಚಿಕೆ ಹೊರ ಬರ್ತಾ ಇದೆ ಪ್ಲೀಸ್ ಏನಾದರೂ ಬರೆದುಕೊಡಿ ಅಂದಾಗ 'ನನಗೆ ಹಾಗೆಲ್ಲ ಬರೆಯಲಿಕ್ಕೆ ಬರಲ್ಲ ನನ್ನ ಬರಹ ಸ್ಲೋ. ನಾನು ಇಂಗ್ಲಿಷ್ ನಲ್ಲಿ ಆಲೋಚನೆ ಮಾಡಿ ಅದನ್ನು ಕನ್ನಡಕ್ಕಿಳಿಸಬೇಕು. ಆದರೆ ಏನಾದರೂ ಬರೆದ್ರೆ first preference ನಿಮ್ಮ ಪತ್ರಿಕೆಗೆ ಅಂತ ಹೇಳಿದ್ದೆ. ಅದೇ ಸಮಯ ನಾನು 'Women Writing in India-600 BC to the present' ಪುಸ್ತಕ ಓದುತ್ತ ಇದ್ದೆ. ಕ್ರಿಸ್ತ ಪೂರ್ವ 600 ನಿಂದ  ಇತ್ತೀಚಿನ ವರೆಗಿನ ಭಾರತದ ಎಲ್ಲೆಡೆಯಿಂದ ಕಲೆ ಹಾಕಿದ ಮಹಿಳಾ ಬರಹಗಳು- ಕವನಗಳು/ಕತೆಗಳು . ಅದರಲ್ಲಿ ನನಗೆ ಕಾಡಿಸಿದ ಎರಡು ಕತೆಗಳಲ್ಲಿ ಒಂದನ್ನು ತರ್ಜುಮೆ ಮಾಡಿ ಕಳುಹಿಸಿದೆ. ಅವರು ಪ್ರಕಟಿಸಿದ ಮೇಲೆ ಅದರ ಕೊಂಡಿಯನ್ನು ನನ್ನ ಬ್ಲಾಗ್ ನಲ್ಲಿ ಹಾಕ್ಕೊಂಡಿದ್ದೆ. ಆ ಬರಹಕ್ಕೆ ರವೀಂದ್ರ ವಳಗೆರೆ ಅವರ ಪ್ರತಿಕ್ರಿಯೆ ಹೀಗಿತ್ತು :
narration is good.ಒಂದು ರೀತಿಯಲ್ಲಿ ನೇಮಿಚಂದ್ರರ ಕಥೆ ಓದಿದ ಹಾಗಾಯಿತು
ಇದು ನನ್ನ ಕುತೂಹಲ ಕೆರಳಿಸಿತ್ತು. ಸರಿ ಪುಸ್ತಕ ಹುಡುಕಿಕೊಂಡು ಓದಿದೆ. ಪುಸ್ತಕ ಮುಗಿಯುವವರೆಗೆ ನಾನು ಅದನ್ನು ಕೆಳಗಿಡಲಿಲ್ಲ. ಅಷ್ಟು ಚೆಂದದ ಕತೆಗಳು. ಅವರ ಕತೆಗಳು ನನ್ನನ್ನು ತುಂಬ ಕಾಡಿದವು. ಬರಹ ಚಂದ ಇದ್ರೆ ಮಾತ್ರ ಸಾಕಾಗಲ್ಲ ಅದು ಚಿಂತನೆಗೂ ಹಚ್ಚಬೇಕು. ಅವರ ಕತೆಯ ಪಾತ್ರಧಾರಿ 'ಮಹಿಳೆ' ಯಾದರೂ ಅದನ್ನು ವೈಭವೀಕರಿಸಿಲ್ಲ. ಪರಿಸರಕ್ಕೆ ತಕ್ಕ ಹಾಗೆ ಅವಳ ಸಂಬಂಧ/ ಮನಸ್ಸನ್ನು ಎಳೆ ಎಳೆಯಾಗಿ, ಆಳವಾಗಿ ಸರಳವಾಗಿ ವಿಶ್ಲೇಷಿಸಿ ನಮ್ಮುಂದೆ ಇಡುವ ಕಲೆಗೆ ನಾನು dumbstruck. ನನಗೆ ತುಂಬಾsssss ಅಂದ್ರೆ ತುಂಬ ಇಷ್ಟವಾದ ಕತೆ 'ಓ ನನ್ನ ಪೀಯರಿ' 1990 ನಲ್ಲಿ ಬರೆದದ್ದಾದರೂ ಈಗಲೂ ಎಷ್ಟು ಪ್ರಸ್ತುತ ಎನಿಸಿತು. ಖಂಡಿತ ಓದದೆ ಇರುವವರು ಅವರ ಪುಸ್ತಕವನ್ನು ಓದಲೇ ಬೇಕು. ನಾನು ಮುಂದಿನ ಬಾರಿ ಅವರ ಎಲ್ಲ ಪುಸ್ತಕಗಳನ್ನು ಕೊಳ್ಳುವ ಪಣ ತೊಟ್ಟಿದ್ದೇನೆ. ಅದು ಹೇಗೆ ಅವರು ನನಗೆ ಮಿಸ್ ಆದರೂ ಗೊತ್ತಿಲ್ಲ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬುದು ನಿಜ. i am glad i came across her book. ನನ್ನಲೇನೋ ಬದಲಾವಣೆಯಾದ ಅನುಭವ. ಈಗ ನನಗಿಷ್ಟವಾದ ಬರಹಗಾರರಾದ ವಸುಧೇಂದ್ರ, ಯಶವಂತ ಚಿತ್ತಾಲ, ಶ್ರೀನಿವಾಸ ವೈದ್ಯ, ಯು. ಆರ್. ಅನಂತಮೂರ್ತಿ, ವೈದೇಹಿ, ವಿವೇಕ ಶಾನಭಾಗ ಇವರ ಪಟ್ಟಿಯಲ್ಲಿ ನೇಮಿಚಂದ್ರರೂ ಕೂಡ ಸೇರಿದ್ದಾರೆ.
ನಮ್ಮ ಸಂಸ್ಥೆಯ 10 ನೆ ವರ್ಷದ ಹುಟ್ಟುಹಬ್ಬದ ಸಂದರ್ಭಕ್ಕೆ ನೇಮಿಚಂದ್ರರನ್ನು chief guest ಆಗಿ ಕರೆಸುವ ಪ್ಲ್ಯಾನ್ ಹಾಕಿಕೊಂಡಿದ್ದೆವು. ಮಿತ್ರ ವಸುಧೇಂದ್ರ ಕೂಡ ಇದಕ್ಕೆ ಸಹಕರಿಸಿದ್ದರು. ಆದರೆ ಅವರು ಉತ್ತರ ಭಾರತಕ್ಕೆ ಯಾವುದೋ ಪ್ರಾಜೆಕ್ಟ್ ನಲ್ಲಿ ನಿರತರಾದ್ದರಿಂದ ಅವರಿಗೆ ಬರಲಾಗಲಿಲ್ಲ. ಆಗ ಏನಾದ್ರೂ ಅವರು ಬಂದಿದ್ದರೆ ಅವರ ಬಗ್ಗೆ ಏನೂ ಗೊತ್ತಿಲ್ಲ ಅಂತಲೇ ಹೇಳಬೇಕಾಗ್ತಿತ್ತು. ಈಗ ಸಿಕ್ಕಿದರೆ ಅವರ ಕೆಲವು ಕತೆಗಳನ್ನಾದ್ರೂ ಓದಿದರಿಂದ ಮಾತನಾಡಲೂ ಟಾಪಿಕ್ ಇದೆ ಅಂತ ನನ್ನಷ್ಟಕ್ಕೆ ನಾನು ಆಲೋಚಿಸ್ತಾ ಇದ್ದೆ. ಶ್ರೀಕಾಂತ ಗೆ ಬೆಳಿಗ್ಗೆ ಅವರ ಕತೆಗಳ ಬಗ್ಗೆ ಹೇಳಿದಾಗ ಅವರು 'ಅವರು ವರ್ಷಕ್ಕೆ ಒಂದೆ ಕತೆ ಬರೆಯೋದು' ಅದಕ್ಕೆ ಅಷ್ಟು ಆಳವಾದ ವಿಚಾರಗಳು ಅವರ ಕತೆಯಲ್ಲಿರುತ್ತದೇನೋ ಅಂದರು'  ನನಗೆ ಅವರ ಹಾಗೆಲ್ಲ ಬರೀಲಿಕ್ಕೆ ಸಾಧ್ಯಾನೇ ಇಲ್ಲ. ನನಗೆ ಮನುಷ್ಯರ psyche ಒಳಹೊಕ್ಕುವ ಕಲೆ ಇಲ್ಲ. ನಾ ಏನಾದರೂ ನನ್ನ ಬ್ಲಾಗ್ ನಲ್ಲಿ ನನಗೆ ಅನಿಸಿದ್ದನ್ನು ಚಿಕ್ಕ ಚಿಕ್ಕ ತುಣುಕುಗಳನ್ನಾಗಿ ಹಾಕಬಲ್ಲೆಯಷ್ಟೆ. ಆದರೂ ನನಗೆ ಆಶ್ಚರ್ಯ ನಾನೀಗ ಬ್ಲಾಗ್ ಲೋಕದಲಿ 5 ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಹಲವಾರು ಚೆನ್ನಾಗಿರುವ ಬ್ಲಾಗ್ ಗಳಲ್ಲಿ ಸುಮಾರು ಸಮಯದಿಂದ ಬರಹಗಳು ನಿಂತು ಹೋಗಿವೆ. ಹಲವಾರು ಕಾರಣಗಳಲ್ಲಿ ಫೇಸ್ ಬುಕ್ ಕೂಡ ಒಂದು ಅಂತ ನಾನು ಸಂಪರ್ಕಿಸಿದ ಕೆಲ ಬ್ಲಾಗ್ ಮಿತ್ರರು ಹಂಚಿಕೊಂಡಿದ್ದಾರೆ.  ನನ್ನ ತಂಗಿ ಬಂದ ಸಂದರ್ಭದಲ್ಲಿ ನಾನು ಫೇಸ್ ಬುಕ್ ಎಕೌಂಟ್ ಡಿ ಎಕ್ಟಿವೇಟ್ ಮಾಡಿದ್ದೀನಿ ನಿಜ. ಆದರೆ ನಾನು ಫೇಸ್ ಬುಕ್ ನಲ್ಲಿ ಅತ್ಯಂತ ಕ್ರಿಯಾಶೀಲೆಯಾಗಿದ್ರೂ (ಅಲ್ಲಿ ನನ್ನ ಬಗ್ಗೆ ನಾನೇ ಟಾಮ್ ಟಾಮ್ ಮಾಡ್ತಿದ್ದೆ ಈಗ ನಿಜಕ್ಕೂ ನಾಚಿಕೆಯಾಗ್ತಿದೆ. ಅದು ನನಗೆ ಚಟ ಆಗಿತ್ತು. ಬೆಳಿಗ್ಗೆ ಎದ್ದ ಕೂಡಲೆ ಫೇಸ್ ಬುಕ್ ಹಾಕಿಕೊಂಡಿರುತ್ತಿದ್ದೆ ) ಕೂಡ ನನ್ನ ಬ್ಲಾಗ್ ಬರಹ ಬಿಟ್ಟಿರಲಿಲ್ಲ. ನನಗೆ ತೋಚಿದ್ದನ್ನು ಗೀಚ್ತಾ ಹೋಗಿದ್ದೇನೆ. ಹಲವಾರು ಬಾರಿ ಶ್ರೀಕಾಂತ ನನಗೆ ಸುಮ್ಮ ಸುಮ್ಮನೆ ಏನೆನೋ ಬರಿತೀಯಾ ಅಂದಿದ್ದಾರೆ. ನನ್ನ ಬ್ಲಾಗ್ ಹೆಚ್ಚು ಕಡಿಮೆ ನನ್ನ extended Diary ಅಂತ್ಲೆ ಹೇಳಬಹುದು. ನನ್ನ ಟ್ರಾವೆಲ್, ನಾನು ಅಡಿಗೆ ಮನೆಯಲ್ಲಿ ಮಾಡುವ ತಿಂಡಿಗಳು, ನನಗೆ ಸಿಕ್ಕಿದಂತಹ ವ್ಯಕ್ತಿಗಳ ಬಗ್ಗೆ ನನಗನ್ನಿಸಿದ ಹಾಗೆ ಬರಹಗಳು. ಯಾರು ಓದುತ್ತಾರೆಂದರೂ ಕೂಡ ನನ್ನ ಬ್ಲಾಗ್ ಹಿಟ್ ಸಂಖ್ಯೆ 60000+ ದಾಟಿದೆ.85 ಜನ ನನ್ನ ಹಿಂಬಾಲಿಸುವವರೂ ಇದ್ದಾರೆ. ಯಾವ್ ಯಾವುದೋ ಹುಡುಕು ಪದ ಹಾಕಿಕೊಂಡು ಬರುವವರಿದ್ದಾರೆ. ಮೊದಲ ಪೋಸ್ಟ್ ನಿಂದ ಓದಿಕೊಂಡು ಬಂದು ಮೈಲ್ ಹಾಕುವವರಿದ್ದಾರೆ, sunnyvale, california ದಿಂದ ’ಬೀಹಾರ್ -ಕೆಲವು random ನೆನಪುಗಳು' ಜಾಡು ಹಿಡಿದುಕೊಂಡು ಓದುಗರೊಬ್ಬರು ದಿನಾ ಬಂದು ಹೋಗುತ್ತಾರೆ. ಅಥವಾ ಇಲ್ಲಿಗೆ ಬಂದು ನನ್ನ ಬ್ಲಾಗ್ ಲಿಸ್ಟ್ ನಲ್ಲಿ ಹಾಕಿದ ಇತರರ ಬ್ಲಾಗ್ ನ ಜಾಡು ಅರಸಿ ಹೊರಡುತ್ತಾರೆ. ಹೆಚ್ಚಿನ ಓದುಗರು 'ಅವರೆಕಾಳು ಸೀಸನ್' ಕೊಂಡಿಯನ್ನೂ, ಇನ್ನೂ ಕೆಲವರು 'tribute to Ravindranath Tagore' ಜಾಡನ್ನು ಹಿಡಿದು ಬರುತ್ತಾರೆ. ಎರಡೆ ದಿನಗಳಲ್ಲಿ 240 ಓದುಗರು 'ಹೇಳತೇವ ಕೇಳ ಓದಿದ ಮೇಲೆ' ಪೋಸ್ಟ್ ಅನ್ನು ಓದಿದ್ದು ಒಂದು ದಾಖಲೆ ದೇಶದ ಎಲ್ಲೆಡೆಯಿಂದ ಬಂದು ಓದುವವರನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ, ಅವರಿಂದ ಒಂದೆರಡು ಸಾಲುಗಳ ಮೈಲ್ ಬಂದಾಗಲೂ ಖುಶಿಪಟ್ಟಿದ್ದೇನೆ. ನನ್ನ ಇಷ್ಟದ ಬರಹಗಾರರು ಹೊಗಳಿ ಮೈಲ್ ಹಾಕಿದ್ದಾಗ ಒಂದೆರಡು ದಿನ ಗಾಳಿಯಲ್ಲಿ ಹಾರಾಡಿದ್ದೇನೆ. 
ಈ ತರಹದ ಬೆಂಬಲದ ಮೈಲ್ ಗಳೆ ನನ್ನ ಬ್ಲಾಗ್ ಬರಹಗಳಿಗೆ ಕಾರಣ:

":) Channagidey :) nimma baravaNigeyalli kaaNisikoLLuva lavalavike, jeewantike, mughdateya kuritu onderDu saalu irabekittu anta annistu. adu biTTre tumba channage parichayisiddare nimma blog-annu :) congrats :)" (ಇದು ಪುಣೆಯಿಂದ ಬಂದ ಮೈಲ್ ನ ಒಕ್ಕಣೆ ನನ್ನ ಬ್ಲಾಗ್ ಬಗ್ಗೆ ಪ್ರಜಾವಣಿಯಲ್ಲಿ ಬಂದಾಗ

"And you thought my praise was too much, too soon!

You know what, when you write something it is as though you are talking right here in front of us.

And your blogposts, your SMSes all come directly from your heart to go straight touching ours !

May your tribe increase! "(ಇದು ಮಂಗಳೂರಿನ ಬ್ಲಾಗ್ ಓದುಗರ ಮೈಲ್ ನ ತುಣುಕು)

ಆಪ್ತ ಮಿತ್ರರು ನನ್ನ ಕನ್ನಡ ಬಹಳಷ್ಟು ಸುಧಾರಿಸಿದೆ ಅಂದಾಗ ಖುಶಿಯಾಗಿದೆ.
ನಿಮ್ಮ ಅತ್ಯಮೂಲ್ಯ ಸಮಯದಲ್ಲಿ ನನ್ನ ಬ್ಲಾಗ್ ಪೋಸ್ಟ್ ಗಳಿಗೆ ಸ್ವಲ್ಪ ಸಮಯಕೊಡುವುದಲ್ಲದೇ ಕಮೆಂಟ್ ಕೂಡ ಮಾಡುತ್ತೀರಿ ಅದಕ್ಕೂ ಧನ್ಯವಾಗಳು.
ಪುನ: ರಘು ಅಪಾರ, ಶ್ರೀಕಾಂತ ರಾಯರು, ಶ್ಯಾಮ್- thatskannada, ಅವಧಿ ಮ್ಯಾಗ್, ಪ್ರಜಾವಾಣಿ, ವಿಜಯಕರ್ನಾಟಕ, ಓದುಗ ಮಿತ್ರರಾದ ನಿಮಗೆ ನನ್ನ ಹೃದಯಾಳದ ಕೃತಜ್ಞತೆಗಳು.
:-)
P.S: ಶನಿವಾರ exciting ದಿನವಾಗಿತ್ತು. ಮಾಲವಿಕಾ, ಅಮ್ಮ, ದೀಪಾ (ತಮ್ಮ ಕೃಷ್ಣನ ಹೆಂಡತಿ) ಪದ್ಮಾ (ತಮ್ಮ ಪಾಂಡುವಿನ ಹೆಂಡತಿ) ಇಷ್ಟು ಜನರ ಹುಟ್ಟುಹಬ್ಬ ಒಂದೇ ದಿನ ಮಾತ್ರವಲ್ಲ, PRCI (Press relations council of India) ದ ಭಾಗವಾದ Young Communicators Club (YCC) ವತಿಯಿಂದ ನಿಹಾರಿಕಾಗೆ Young Achievers Award 2013 ಪ್ರಶಸ್ತಿ ನೀಡಲಾಯಿತು.