February 7, 2011

ಹತ್ತರೊಳಗೆ ಹನ್ನೊಂದು, ಕನ್ನಡ ಸಮ್ಮೇಳನದ ಚಿತ್ರಗಳು ನಮ್ಮದೂ ಕೆಲವೊಂದು

ನಾನಂತು ಆರಾಮಾಗಿ sunday special ಬಿಸಿ ಬೆಳೆ ಭಾತ ತಿಂದು, ತಲೆಗೆ ಕಾಲು ಲೀಟರ್ ಎಣ್ಣೆಯಿಟ್ಟುಕೊಂಡು ಸುಮ್ಮನೆ ಪೇಪರ್ ಓದ್ತಾ ಇದ್ದೆ. ಶ್ರೀಕಾಂತ ಬೇಗ ಬೇಗ ರೆಡಿ ಯಾಗಿ ಹೋಗುವಾ ಅಂದ್ರು. ನಾನು ಎಲ್ಲಿಗೆ ಅಂತ ಕೇಳಿದೆ. ಮತ್ತೆ?? ನಮ್ಮೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೀತಾ ಇದೆ. ನಾವು ಹೋಗದಿದ್ರೆ ಹೇಗೆ ಅಂದ್ರು.
’ಹೇ ವಿಜಯಕರ್ನಾಟಕ, ಅವಧಿ ಯಲ್ಲೆಲ್ಲ ಚಿತ್ರ-ವರದಿ ಬರ್ತಾ ಇದೆ. ಅಷ್ಟೊಂದು ಜನರಿರ್ತಾರೆ ನಾನಂತೂ ಬರಲ್ಲ, ನೀವು ಮೂರು ಜನ ಹೋಗಿ” ಅಂದ್ರೆ...’ಹೋಗಿ ನೋಡುವ, ತುಂಬ ರಶ್ ಇದ್ರೆ ನಾವು ವಾಪಸ್ ಬರುವಾ’ ಅಂತ ಹೇಳಿ,ಮೂರು ಜನರು ಪೂಸಿ ಹೊಡ್ದು, ಕರಕ್ಕೊಂಡು ಹೋದ್ರು. ನಾವು ತಲುಪುವಾಗ್ಲೆ 12.00 ಸ್ವಲ್ಪ ಹೊತ್ತು ಸನ್ಮಾನ ಸಮಾರಂಭವನ್ನು ನೋಡಿದ್ವಿ.



ಆಮೇಲೆ ಪುಸ್ತಕ ಮಳಿಗೆ ಕಡೆ ಹೋದ್ವಿ. ಅಲ್ಲಿ free ಯಾಗಿ ಯಾರೋ newspaper ಹಂಚುತ್ತ ಇದ್ರು. ಅದನ್ನು ತೆಗೆದುಕೊಳ್ಳಲು ನೂಕು ನುಗ್ಗಲು. ತೀರ entrance ನಲ್ಲಿ ಅವರು ಹಾಗೆ ಮಾಡಬಾರದಿತ್ತು. ಹಾಗೂ ಧೂಳು ಮೇಲೇರಬಾರದೆಂದು ಅವರು ಹಾಕಿದ ನೆಲಹಾಸು ಅಲ್ಲಲ್ಲಿ ತೂತು ಬಿದ್ದು, ಮುಗ್ಗರಿಸಿ ಯಾರಾದ್ರೂ ಬಿದ್ದಿದ್ರೆ, ಏಳಲು ಸಾಧ್ಯವಿಲ್ಲದಷ್ಟು ರಶ್ ಅಂದ್ರೆ ರಶ್. ನಾನು ಬಿಡಿಸಿಕೊಂಡು ವಾಪಸ್ ಬಂದೆ ಒಂದು ಸಲ.

ಬುಲ್ಲೆಟ್ ಹೋಳಿಗೆ ನೋಡಿದ್ರಾ??!!
ಶ್ರೀಕಾಂತ ಸ್ವಲ್ಪ ಕೋಸಂಬರಿ ಮತ್ತು ಬೇಯಿಸಿದ ಚನಾ ಉಸ್ಲಿ ತಿಂದ್ರು, ಮಕ್ಕಳು ಕುರುಂ ಕುರುಂ ಮಂಡಕ್ಕಿ!!

ಇಷ್ಟು ದೂರ ಬಂದು ಪುಸ್ತಕ ಮಳಿಗೆಗೆ ಹೋಗದಿದ್ರೆ ಹೇಗೆ ಅಂತ ಹೇಳಿದ್ರು ಶ್ರೀಕಾಂತ, ಪುನ: ಹೋದ್ವಿ. ಸುಮ್ಮನೆ ಹೋಗಿ ನಿಂತಿದಷ್ಟೆ ಗೊತ್ತು, ಹಿಂದೆ ಇದ್ದವರು ದೂಡುವಿಕೆಯಿಂದ ಅಂತು ಯಾವುದೋ ಒಂದು ಪುಸ್ತಕ ಮಳಿಗೆ ತಲುಪಿದ್ವಿ. ಉಸ್ಸಪ್ಪ ಅಂತ ನೋಡಿದ್ರೆ ಅದು ಅಭಿನವ ಪುಸ್ತಕ ಮಳಿಗೆ.

ಶ್ರೀಕಾಂತ ರಾಯರು

ನಾನು ಸುಮ್ಮನೆ ಪುಸ್ತಕ carrier
ಶ್ರೀಕಾಂತ ಸುಮಾರು ಪುಸ್ತಕಗಳನ್ನು ತೆಗೊಂಡ್ರು. ನವಕರ್ನಾಟಕ ಮಳಿಗೆಯಿಂದ ಇಗೋ ಕನ್ನಡ (ಮೂರು + 1) ನಿಘಂಟಿನ set ತೆಗೊಂಡ್ರು. ಮತ್ತು ಅವರ favorite ಮನೋಹರ ಗ್ರಂಥ ಮಾಲೆ ಮಳಿಗೆಯಲ್ಲಿ, ಸಮೀರ್ ಜೋಶಿವವರನ್ನು ಮಾತನಾಡಿಸಿ, ರಾಶಿ ಪುಸ್ತಕ ತಗೊಂಡ್ರು.ಕೆಲವೇ ಕೆಲವು ಮಳಿಗೆ ನೋಡಿದ್ವಿ. ಶ್ರೀಕಾಂತ ಗೆ ಸಂಜೆ ದೆಹಲಿಗೆ ಹೋಗಲು flight ಹಿಡೀ ಬೇಕಿತ್ತು. ನಾವು ಅಲ್ಲಿಂದ ವಾಪಸ್ ಹೊರಡುವಾಗ್ಲೂ ಸನ್ಮಾನ ಸಮಾರಂಭ ನಡಿತಾ ಇತ್ತು. ಚಪ್ಪಳೆ ತಟ್ಟುವವರೇ ಇರಲಿಲ್ಲ.
ಶ್ರೀಕಾಂತಗೆ ಕನ್ನಡ t-shirt ಸಿಗದೆ ಸ್ವಲ್ಪ ಬೇಜಾರಾಯಿತು.
ಹಸಿ ಚನಾ ತೆಗೊಂಡು, ರಿಕ್ಷಾದವನಿಗೆ ಒಂದುವರೆ ಕೋಡ್ತೀವಪ್ಪ ಮೀಟರ್ ಮೇಲೆ, ಬಸವನಗುಡಿ ಕರೆದುಕೊಂದು ಹೋಗು ಅಂದ್ರೆ, ರಿಕ್ಷಾದವನು ’ನಾಲ್ಕು ಜನ ಇದ್ದೀರಾ one and a half ಆಗುತ್ತೆ ಅಂದ. ಅದಕ್ಕೆ ಶ್ರೀಕಾಂತ, ’ಹತ್ತುವಾಗಲೇ ಕನ್ನಡದಲ್ಲಿ ಅದೇ ಅಲ್ಲವ ನಾನು ಹೇಳಿದ್ದು’ ಅಂದ್ರು. ರಿಕ್ಷಾ ಚಾಲಕ ನಕ್ಕಿದು ಒಳ್ಳೆ ಮಜಾ ಇತ್ತು.
ಹೋಟಲ್ ಅತಿಥೇಯದ ಬಳಿ ರಿಕ್ಷ ನಿಲ್ಸಿದ್ವಿ.ಜೋಳದ ರೊಟ್ಟಿ ಊಟ ಮಾಡುವ ಅಂತ, but ಅಲ್ಲಿ ಕೂಡ ರಶ್. ಅಲ್ಲೇ ಕೆಳಗಡೆ’ಗೋಲಿ’ ವಡಾ-ಪಾವ್ ಅಂಗಡಿ ಇತ್ತು. ನಾನಂತು ನನ್ನ ಇಷ್ಟದ ವಡಾ ಪಾವ್ ತಿಂದೆ. ಮುಂಬಯಿಯಷ್ಟು tasty ಆಗಿರಲಿಲ್ಲ ಖಂಡಿತ.
ಇಲ್ಲಿ ಇನ್ನೂ ಕೆಲವು ಚಿತ್ರಗಳು ನಿಹಾ ತೆಗೆದದ್ದು.








ಪುಸ್ತಕ ಪ್ರಿಯರು
ಮಕ್ಕಳ ಉತ್ಸಾಹ- ಛದ್ಮವೇಷ

ಪುಸ್ತಕ ಮಳಿಗೆ to the right

ಸುಂದರ ಕೈ ಬರಹದಲ್ಲಿ

ಧಿಕ್ಕಾರ: ಶ್ರೀ ಭಾರಧ್ವಾಜ್ ರ ಕನ್ನಡ ವಿರೋಧಿ ನಿಲುವಿಗೆ

ಬ್ಯಾಗ್ ತುಂಬ ಪುಸ್ತಕ
:-)

1 comment:

  1. ಶ್ರೀಕಾಂತFebruary 7, 2011 at 12:48 PM

    ’ಕ್ಯಾಪ್ಸಿಕಮ್ ತಗೊಂಡು ನೈಫ್‌ಲ್ಲಿ ಕಟ್ ಮಾಡಿ ಸ್ವಲ್ಪ ಸಾಲ್ಟ್ ಹಾಕಿದರೆ ಟೇಸ್ಟಿ ಆಗಿರುತ್ತದೆ’ ಎಂಬ ಭಾಷೆ ಬಳಕೆ ನಿಲ್ಲಬೇಕು.

    ಇದು ಮೊನ್ನೆ ಸಮ್ಮೇಳನದ ಅಧ್ಯಕ್ಷ ವೆಂಕಟಸುಬ್ಬಯ್ಯನವರು ಹೇಳಿದ ಮಾತು. ನಿಮಗೇ ಹೇಳಿದಂತಿದೆ. ಅರ್ಥ ಮಾಡಿಕೊಳ್ಳಿ :)

    ReplyDelete