November 30, 2009

ನಾಯಿ ಇಸ್ಸಿ/ಇಶ್ಶಿ

ಇತ್ತೀಚಿಗೆ ರಸ್ತೆ ಅಗಲೀಕರಣ/ನವೀಕರಣ ಅಂತ ರಸ್ತೆ ಪಕ್ಕದಲ್ಲಿ ಒಂದು ಚೂರು ಜಾಗ ಬಿಡದೆ ಡಾಂಬರ್ ಹಾಕಿಟ್ಟಿದ್ದಾರೆ. ಮಳೆ ಬಂದಾಗ ಮೊದಲು ಮಣ್ಣಿನ ಪರಿಮಳ ಬರುತ್ತಿತ್ತು ಈಗ ಬರೀ ನಾಯಿ ಇಸ್ಸಿ (dog crap, poop, shit..whatever!!) ವಾಸನೆ. ನಾವು ನೆಟ್ಟಿದ ಬೇವಿನ ಮರ ಹಾಗೂ ಹೊಂಗೆ ಮರ ಸಹ ತೆಗೆದು ಬಿಟ್ಟಿದ್ದರು. ಹೊಸ technology ಅಂತೆ ಬೆಳಿಗ್ಗೆ ಶುರು ಮಾಡಿ ಸಂಜೆ ಒಳಗೆ ರಸ್ತೆ ರೆಡಿ. ಮರುದಿನ ಬಳಕೆಗೂ ರಡಿ.

ಆದರೆ ನಾಯಿ ಇದ್ದ ಮನೆಯವರು ಅವರ ಮನೆ ಬಿಟ್ಟು ಬೇರೆಯವರ ಮನೆಯ...ಅದೂ ಗೇಟ್ ಎದುರುಗಡೆ ಇಸ್ಸಿ ಮಾಡಿಸುವುದು ಯಾಕೇಂತ ಗೊತ್ತಾಗಲಿಲ್ಲಪ್ಪ. ಎಷ್ಟೆ ಹೇಳಿದರೂ ಕೆಲವರು ಕೋಳೊಲ್ಲ. ನಮ್ಮ ಮನೆಯ ಗೇಟ್ ಎದುರು ಈ ತರಹ ಸುಮಾರು ಸಲ ಆಯಿತು. ಅವರು ಯಾರಂತಲೂ ನನಗೊತ್ತಿತ್ತು. ಬೆಳಿಗ್ಗೆ 4 ಗಂಟೆಗೆ ನಾನು ಝೂಲಾ ಮೇಲೆ ಚಹಾ ಕುಡಿಯುತ್ತ ಇರುವಾಗ ಅಲ್ಲಿ ಇಸ್ಸಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗಂತೂ ಬೆಳಿಗ್ಗೆ ಬೆಳಿಗ್ಗೆ ಯಾರ ಜತೆನೂ ವಾದ ಮಾಡಲಿಕ್ಕೆ ಇಷ್ಟ ಆಗಲ್ಲ.

ಅದಕ್ಕೆ ಶ್ರೀಕಾಂತ್ ಒಂದು ದಿನ ಬೇಗನೆ ಎದ್ದು ಕಾಯುತ್ತ ಇದ್ದರು. ಅವರು ನಮ್ಮ ಮನೆ ಬಳಿ ಬಂದ ಕೂಡಲೆ..’ಹಲ್ಲೋ, ನಿಮ್ಮ ನಾಯಿ ಮುದ್ದಾಗಿದೆ, ಏನು ಹೆಸರು?’ ಅದಕ್ಕೆ ಅವರು ಮಹಾ ಜಂಬದಿಂದ ಅದರ ಬ್ರೀಡ್(ಲ್ಯಾಬ್ರಾಡೋರ್), ಮತ್ತೆ ನಾಯಿಯ ಹೆಸರು ’ರೋವರ” ಅಂತ ಹೇಳಿದರು. ಶ್ರಿಕಾಂತ್ ಉವಾಚ್- ನಿಮಗೆ ನಾಯಿ ಅಷ್ಟು ಪ್ರೀತಿಯಾದರೆ ಅದರ ಇಸ್ಸಿಯನ್ನು ಪ್ಯಾಕ್ ಮಾಡಿಕೊಂಡು ಫ್ರಿಡ್ಜ್ ನಲ್ಲಿಡಬಹುದಲ್ಲವಾ ಅಂದರು ಕೂಲಾಗಿ. ಅವರು ಕಕ್ಕಾಬಿಕ್ಕಿ. ಮುಖ ನೋಡಬೇಕಿತ್ತು. ಅಷ್ಟರೊಳಗೆ ನಾಯಿ ಒಂದು ಗುಡ್ಡೇ ಇಸ್ಸಿ ಮಾಡಿಯಾಗಿತ್ತು.

ಅಮೇರಿಕೆಯಲ್ಲಿರುವ ನನ್ನ ತಂಗಿ 5 ವರ್ಷ ಆದಮೇಲೆ ನನ್ನ ಮನೆಗೆ -ಬೆಂಗಳೂರಿಗೆ ಬಂದಿದ್ದಳು. ಅವರು ಬರುವ ಹೊತ್ತಿನಲ್ಲಿ ನಾನು ಅಡಿಗೆ ಮನೆಯಲ್ಲಿದ್ದೆ. ಗಾಡಿ ಬಂದ ಸದ್ದಾಗಿ ಗ್ಯಾಸ್ ಆಫ್ ಮಾಡಿ ಬರುವಷ್ಟರಲ್ಲಿ ನನ್ನ ತಂಗಿ ಗಟ್ಟಿ ದನಿಯಲ್ಲಿ ’ಏನೇ ಇದು? ಐದು ವರ್ಷ ಆದ ಮೇಲೆ ಬರ್ತಾ ಇದ್ದೇನೆ. ಪೂರ್ಣ ಕುಂಭ ಸ್ವಾಗತ ಇರ್ಲಿ, ತುಪ್ಪದ ಆರತಿ ಬಿಟ್ಟು. ಹೀಗಾ ಸ್ವಾಗತಿಸುವುದು? ಎನಪ್ಪ ಇವಳ ಗಲಾಟೆ ಅಂತ ಹೋಗಿ ನೋಡಿದ್ರೆ, ಗಾಡಿಯ ಬಾಗಿಲ ತೆಗೆದ ಕೂಡಲೇ, ಗೇಟ್ ಎದುರಿಗೇನೆ ಅವಳಿಗೆ ಕಂಡಿದ್ದು -dog crap- ಹಿ ಹಿ ಹಿ. ಮತ್ತೆ ಗಾಡಿ ಸ್ವಲ್ಪ ಮುಂದೆ ಮಾಡಿ ಅವಳ ದೊಡ್ಡ ದೊಡ್ಡ suitcase ಗಳನ್ನು ಒಳಗೆ ಸಾಗಿಸ ಬೇಕಾದರೆ ಶ್ರೀಕಾಂತ್ ಮತ್ತು ನನ್ನ ತಮ್ಮನಿಗೆ ಬೆವರು...ಯಕೆಂದರೆ ನಾವು ಹೊರಗೆ ನಿಂತು---ಇಸ್ಸಿ ಮೇಲೆ ಕಾಲು, ಬ್ಯಾಗ್ ತಾಗದ ಹಾಗೆ watch it watch it ಅಂತ ಕೂಗಾಡ್ತಾ ಇದ್ವಿ.ಶ್ರೀಕಾಂತ ’ಥೂ ನಾಯಿ’ ಅನ್ನಬೇಕಾದರೆ ನಾನು ಹೇಳಿದೆ..ನಾಯಿಗಳನ್ನು ಬೈ ಬೇಡಿ. ಅವಕ್ಕೇನು ಗೊತ್ತಾಗುತ್ತೆ, ನಾಯಿ ಮಾಲಿಕರಿಗೆ ಫೈನ್ ಹಾಕಿಸ ಬೇಕು ಅಂತ’ ಸಧ್ಯ ನನ್ನ ಮಕ್ಕಳಿಬ್ಬರು ಸ್ಕೂಲು-ಕಾಲೀಜಿಗೆ ಹೋಗಿದ್ರು. ಇಲ್ಲದಿದ್ದರೆ ಇನ್ನಷ್ಟು ಗಮ್ಮತ್ತು. ತಂಗಿಯ ಪುಟಾಣಿ ಮಕ್ಕಳಿಗೆ ಅಂತೂ ಇದು ಮೋಜಿನ ವಿಷಯವಾಗಿತ್ತು.

ಈಗ ನಾವು ಬೇರೆ ಮನೆಯಲ್ಲಿರುವುದು. ಇಲ್ಲಿ ಹತ್ತಿರದಲ್ಲಿ ಯಾರ ಮನೆಯಲ್ಲೂ ನಾಯಿಗಳನ್ನು ಸಾಕಿಲ್ಲ. ಆದರೆ 7 ಬೀದಿ ನಾಯಿಗಳಿದ್ದಾವೆ. ತುಂಬ ಒಳ್ಳೆಯವು. ಹೊಸಬರನ್ನು ಕಂಡರೆ ತುಂಬಾ ಬೊಗಳುತ್ತವೆ...ನಾವು ’ಸುಮ್ಮನಿರಿ. ಇವರು ನಮ್ಮವರು’ ಅನ್ನುವ ತನಕ. ಆದರೆ ಯಾವತ್ತು ಯಾರ ಮನೆಯ ಎದುರಿಗೂ ಇಸ್ಸಿ ಮಾಡಿಲ್ಲ. ನಾನು ಅವರ ಜತೆ ಕೊಂಕಣಿಯಲ್ಲಿ ಸಂಬಾಷಿಸುತ್ತೇನೆ. ನಾನು ಎಲ್ಲಿಗಾದರೂ ಹೊರಟರೆ, ಬಾಲ ಅಲ್ಲಾಡಿಸಿ ನನಗೆ ಒಂದಷ್ಟು ದೂರ ಕಂಪನಿ ಕೊಟ್ಟು ವಾಪಸ್ ನಮ್ಮ ಬೀದಿಗೆ ಬಂದು ವಿರಮಿಸುತ್ತವೆ. ನಮ್ಮ ಮನೆಯ ಎದುರುಗಡೆ ಸಾಲಿನ ಮನೆಯವರು ಅವರ ಊಟ ತಿಂಡಿ ಬಗ್ಗೆ ನೋಡಿಕೊಳ್ಳುತ್ತಾರೆ. ಅವರು ಆಕಸ್ಮಾತ್ ಊರಲಿಲ್ಲ ಅಂದರೆ ಬೇರೆಯವರಿಗೆ ಹೇಳಿ ಹೋಗುತ್ತಾರೆ. ಯಾರಾದರೊಬ್ಬರು ಅದರ ದೇಖಿ ರೇಖಿ ಮಾಡಿತ್ತಾರೆ. ಎಲ್ಲರೂ ಊಟ ಹಾಕುವುದು, ಅಥವಾ ಉಳಿದಿದೆ ಅಂತ ಊಟ ಹಾಕುವುದು ಇದೆಲ್ಲ ನಾವ್ಯಾರೂ ಮಾಡುವುದಿಲ್ಲ.
ಮತ್ತೆ ಮುನಿಸಿಪಾಲಿಟಿಯವರು ನಾಯಿ ಹಿಡಿಯಲು ಬಂದರೆ ಅವಕ್ಕೆ ಗೊತ್ತಾಗಿ ಅವರು ಚಪ್ಪಡಿ ಇರುವ ಚರಂಡಿಯೊಳಗೆ ಅವಿತುಕೊಳ್ಳುತ್ತವೆ. ನಾವ್ಯಾರೂ ಅವರಿಗೆ ಹೇಳಲು ಹೋಗುವುದಿಲ್ಲ.
:-)

November 25, 2009

26/12 (ಉಗ್ರರ ದಾಳಿ)


ಅರೇ ಇದೇನಿದು? ಎಲ್ಲರೂ ನವೆಂಬರ್ 26 ರ ಬಗ್ಗೆ ಮಾತಾಡ್ತಾ ಇದ್ದರೆ, ಮಾಲತಿ ಡಿಸೆಂಬರ್ 26, 2008 ಅಂತ ಬರೆದಿದ್ದಾಳೆ ಅಂದುಕೊಂಡ್ರಾ?

ಮದುವೆಯಾದ ಮೊದಲ ಕೆಲವು ವರ್ಷ ನಾನು ಆಗಾಗ ಮುಂಬೈಗೆ ಹೋಗುತ್ತಿದೆ. ಹೊಸ ದೀಪಾವಳಿ, ಮೊದಲ ಯುಗಾದಿ, ಆಮೇಲೆ ನನ್ನ ಪರೀಕ್ಷೆಗಳು. ನಾನು university of Bombay -distance Education ಅಡಿ ನನ್ನ ಗ್ರಾಜ್ಯುವೇಷನ್ ಮಾಡಿದೆ. ಮತ್ತು ಇಬ್ಬರು ಮಕ್ಕಳು ಅಲ್ಲೇ ಹುಟ್ಟಿದ್ದು, ಅಮೇಲೆ ತಂಗಿ ತಮ್ಮಂದಿರ ಮದುವೆ ಹೀಗೆ. ಇತ್ತಿಚಿಗಿನ 10 ವರ್ಷದಲ್ಲಿ ನಾವು ನಾಲ್ಕೂ ಜನ ಕೂಡಿ ಮುಂಬೈಗೆ ಹೋಗಿದ್ದಿಲ್ಲ.



ನನ್ನ ತಮ್ಮ ಕೆಲವು ವರ್ಷ ಕೆಲಸದ ನಿಮಿತ್ತ ಹೊರ ದೇಶಕ್ಕೆ ಹೋಗುವವನಿದ್ದ. ಅದಕ್ಕೆ ಅವನು ಫೋನ್ ಮಾಡಿ ’ಈ ಸಲ ಎಲ್ಲರೂ ಬಂದು ಬಿಡಿ. ಒಮ್ಮೆ ಹೊರ ದೇಶಕ್ಕೆ ಹೋದರೆ ಇನ್ನು 5-6 ವರ್ಷ ಬರುವುದಿಲ್ಲ. ನೀವು ನನ್ನ ಹೊಸ ಮನೆ ಇನ್ನೂ ನೋಡಿಲ್ಲ.’ ಹಾಗಾಗಿ ಹಿಂದಿನ ವರ್ಷ ಮಕ್ಕಳ christmas ರಜೆ ಗೆ ನಾವು ಮುಂಬೈಗೆ ಹೋದೆವು. 26 ರಂದು elephanta caves ಗೆ ಹೋಗುವುದು ನಿರ್ಧರಿಸಿದೆವು. ಉಗ್ರರ ದಾಳಿ 179 ಜನರನ್ನು ಬಲಿ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳು


ಗೇಟ್ ವೇ ಆಫ್ ಇಂಡಿಯಾ ಬಳಿ ನಾವು ಬೆಳಿಗ್ಗೆ 9.30 ಗೆ ತಲುಪಿದೆವು. ತುಂಬ gloomy ಆಗಿತ್ತು ಆ ದಿನ. ಆಗಲೇ ಮಿಡಿಯಾದವರು ತಮ್ಮ ವ್ಯಾನ್ ಹಾಗೂ ಸಟೆಲ್ಲೈಟ್ ರಿಸೀವರ್ಸ್ ಹಿಡ್ಕೊಂಡು ಸಜ್ಜಾಗಿದ್ದರು .ಸುತ್ತ ಮುತ್ತ ಪೋಲಿಸ್ ಪ್ರಹರೆ. ಸಾವು-ನೋವು ಸಂಭವಿಸಿದ ಮನೆಯವರು, ಮಿತ್ರ-ಬಾಂಧವರು ಕಣ್ಣೀರುಗರೆಯು
ತ್ತ ಮೋಂಬತ್ತಿ ಹೊತ್ತಿಸುತ್ತಿದ್ದರು


ಆ ದಿನ ಆತಂಕವಾದದ ವಿರುದ್ದ ಮೌನ ಮೆರವಣಿಗೆ (silent march) ಹಮ್ಮಿಕೊಳ್ಳಲಾಗಿತ್ತು. ಎಷ್ಟೆ ಗಂಭೀರವಾಗಿರಲು ಪ್ರಯತ್ನ ಪಟ್ಟರೂ ಕೆಲವರಿಗೆ ಬಿಕ್ಕು ಬರುತ್ತಿತ್ತು.. ಅಲ್ಲಿ ನಿಂತ ನಮ್ಮ ಕಣ್ಣಲ್ಲೂ ನೀರು. photography was strictly prohibited so as not to interfere in their moment of grief. ಹಾಗಾಗಿ mourners ಗೆ ತೊಂದರೆಯಾಗದಂತೆ ಮಿಡಿಯಾದವರು respectfully ಸ್ವಲ್ಪ ದೂರದಲ್ಲಿ ಇದ್ದರು.



ಬೆಂಕಿಯಲ್ಲಿ damage ಆಗಿದ್ದ ಹೋಟಲ್ ತಾಜ್ ಮಹಲ್ ರಿಪೇರಿ ಕೆಲಸದಲ್ಲಿ ತೊಡಗಿ ಕೊಂಡಿತ್ತು.


ಕೆಲವೇ ದಿನಗಳ ಹಿಂದೆ ಅಂದರೆ ಡಿಸೆಂಬರ್ 21 ಕ್ಕೆ ಪುನಃ ಅದು ಅತಿಥಿಗಳಿಗೆ ತೆರೆಯಲ್ಪಟ್ಟಿತ್ತು.ತಾಜ್ ಮಹಲ್ ಹೋಟೆಲ್ ಗೆ ೧೦೬ ವರ್ಷಗಳ ಇತಿಹಾಸವಿದೆ. ಪ್ರಥಮ ಮಹಾ ಯುದ್ದದ ವೇಳೆ ಇದೇ ಹೋಟಲನ್ನು 600 ಮಂಚಗಳಿರುವ ಆಸ್ಪತ್ರೆಯಾಗಿ convert ಮಾಡಲಾಗಿತ್ತು.


ಧೈರ್ಯ ತೋರಿಸಿದ ಎಲ್ಲ ಧೀರರಿಗೂ ನನ್ನ ಸಲಾಮ್. ಸಂದೀಪ ಉಣ್ಣಿಕೃಷ್ಣನ್ ನ ತಾಯಿಯನ್ನು ಕಂಡಾಗಲೆಲ್ಲ ಒಂದು ಅವ್ಯಕ್ತವಾದ ನೋವು ಎದೆಯೊಳಗೆ ಹಾದು ಹೋಗುತ್ತದೆ.ನೋವನಂತು ಮರೆಯಲು ಸಾಧ್ಯವಿಲ್ಲ, ಆದರೆ ಅದನ್ನು ಸಹಿಸುವ ಶಕ್ತಿ ಅವರಿಗೆ ಬರಲಿ ಎಂದು ಆಶೀಸೋಣ.


ಈಗ ಕೈಗೆತ್ತಿಕೊಂಡಿರುವ ,ಯಶವಂತ ಚಿತ್ತಾಲರು ಬರೆದ ಕಾದಂಬರಿ, ’ಕೇಂದ್ರ ವೃತ್ತಾಂತ’ ದಲ್ಲಿ memories are memorials! ಅಂತ ಉಲ್ಲೇಖಿಸಿದ್ದಾರೆ.ನೆನಪುಗಳು ಆಳದಲ್ಲಿ ಕಾಡಿದ ಭಾವನೆಗಳಿಗೆ ಎದ್ದು ನಿಂತ ಸ್ಮಾರಕಗಳು.ಎಷ್ಟು ಅರ್ಥಪೂರ್ಣ ಆಗಿದೆಯಲ್ಲವ ಈ phrase!!


ರಕ್ತಪಾತಕ್ಕೆಲ್ಲ ಅಂತ್ಯ ಯಾವಾಗ? ಏನಾಗ್ತಾ ಇದೆ ನಮ್ಮ ದೇಶದಲ್ಲಿ?
ಉಗ್ರರಯರ ದಾಳಿಯಲ್ಲಿ ತೀರಿಕೊಂಡವರ ಆತ್ಮಕ್ಕೆ ಶಾಂತಿ ಕೋರುವಾ.

ಆದರೂ ಮುಂಬೈ ಮೇರಿ ಜಾನ್. phoenix ಹಕ್ಕಿಯಂತೆ ಯಾವಾಗಲೂ ಮೇಲೇಳುತ್ತದೆ. ಮುಂಬೈ ನ spirit ಗೂ ಒಂದು ಸಲಾಮ್
marine Drive. ರಾತ್ರಿ ದೀಪದ ಸಾಲು ಹಾರವನ್ನು ನೆನೆಪಿಸುತ್ತದೆ ಅದಕ್ಕೆ Queens Necklace ಅಂತ ಹೇಳುತ್ತಾರೆ.


ಚಿತ್ರಗಳು - yours truly

November 23, 2009

ರವೆ ರೊಟ್ಟಿ

ಬನ್ಸಿ ರವಾ - 2 ಕಪ್
ಮೊಸರು - 1 ಕಪ್
ರುಚಿಗೆ ಉಪ್ಪು ಮತ್ತು ಚಿಟಿಕೆ ಸಕ್ಕರೆ
ಹಸಿ ಮೆಣಸಿನಕಾಯಿ ಮತ್ತು ಶುಂಠಿ ಸಣ್ಣಗೆ ಕತ್ತರಿಸಿ ಹಾಕಿ. 1 ಟೇಬಲ್ ಚಮಚ ತಾಜಾ ತೆಂಗಿನ ತುರಿ. ತುರಿದ ಕ್ಯಾರೆಟ್. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಸಾಸಿವೆ ಮತ್ತು ಕರಿಬೇವು.

ಸ್ವಲ್ಪ ನೀರು ಬಳಸಿ ಎಲ್ಲವನ್ನು ಮಿಕ್ಸ್ ಮಾಡಿ, ಹೀಗೆ



ಅದಕ್ಕೆ ಒಗ್ಗರಣೆ ಕೊಡಿ, ಹೀಗೆ...

ಒಗ್ಗರಣೆಯನ್ನು ಮಿಕ್ಸ್ ಮಾಡಿ. ಬಿಸಿ ಕಾವಲಿ ಮೇಲೆ ಹಾಕಿ (ಅಕ್ಕಿ ರೊಟ್ಟಿ ಮಾಡಿದ ಹಾಗೆ: ಹಳೆಯ ಪೋಸ್ಟ್) ಒದ್ದೆ ಬೆರಳಿನಿಂದ , ಎಷ್ಟು ತೆಳು ಬೇಕೋ ಅಷ್ಟು ತಟ್ಟಿ. ಎರಡು ಬದಿ ಕೆಂಪಾಗುವಂತೆ ಕಾಯಿಸಿ.



ಬಿಸಿ ಬಿಸಿ ಇದ್ದಾಗಲೇ, ತುಪ್ಪದೊಂದಿಗೆ ತಿನ್ನಿ :-) ಇತ್ತೀಚಿಗೆ ಅಮ್ಮ ನನ್ನಲ್ಲಿ ಬಂದಾಗ ನನಗೆ ಮಾಡಿ ಕೊಟ್ಟಿದ್ದರು. ನಮಗೆಲ್ಲ ತುಂಬ ಇಷ್ಟ ಆಯ್ತು. ನೀವು ಮಾಡಿ taste ಹೇಗಿತ್ತು ಅಂತ ಹೇಳಿ

:-)

November 18, 2009

ರಾಜೀವಿ ನಮ್ಮ ಮನೆಗೆ ಬಂದ ಪರಿ

ನನಗೆ ಎರಡು ವರ್ಷ ಆಗುವ ಮುನ್ನ ನನ್ನ ತಮ್ಮ ಏಳನೇ ತಿಂಗಳಿಗೆ ಹುಟ್ಟಿದ. ಅವನಿಗೆ ಇನ್ಕ್ಯೂಬೇಟರ್(incubator) ನಲ್ಲಿ ಹತ್ತಿಯಲ್ಲಿ ಸುತ್ತಿ ಇಟ್ಟಿದ್ದರು. ಇಬ್ಬರು ಪುಟ್ಟ ಮಕ್ಕಳನ್ನು ನೋಡಲು ತೊಂದರೆ ಆಗುತ್ತದೆ ಎಂದು, ನನ್ನ ಆಜೋಬಾ ನನ್ನನ್ನು ಅವರ ಬಳಿ ಇಟ್ಟು ಕೊಂಡರು.ಅಜ್ಜ ಸಿವಿಲ್ ಇಂಜಿನಿಯರ್ ಆಗಿ ಆಗ ರಸ್ತೆ (highways construction)ಕಾಮಗಾರಿಯಲ್ಲಿ ವ್ಯಸ್ತರಾಗಿ ಕೆಲಸದ ಮೇಲೆ ಊರೂರು ತಿರುಗಬೇಕಾಗುತ್ತಿತ್ತು. ನನ್ನ ನಾನಿಗೆ rheumatic arthritis ಕಾಯಿಲೆ ಇತ್ತು. ಇದರಿಂದ ಕೈ-ಕಾಲು ಗಂಟಿನಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ಮನೆಯಲ್ಲಿ ಇಬ್ಬರು ಕೆಲಸದವರಿದ್ದರು, ಕಮಲಾ ಮತ್ತು ಹೀರ. ಅವರು ಕೆಲಸ ಮುಗಿಸಿದ ಮೇಲೆ ನಾನು ಅವರ ಜತೆ ಅವರ ಝೋಪಡಿಗೆ ಹೋಗುತ್ತಿದ್ದೆ. ಮಾತೃ ಭಾಷೆ ಕೊಂಕಣಿಯಾದ್ರೂ ನಾನು ಅವರ ಜತೆಯಲ್ಲಿದ್ದು ಮರಾಠಿ ಮಾತನಾಡಲಾರಂಭಿಸಿದೆ. ಅವರ ತಂದೆ ಮುನಿಸಿಪಲ್ ಗಾರ್ಡನ್ ನ ಮಾಲಿಯಾಗಿದ್ದರು. ಆ ಗಾರ್ಡನ್ ನಲ್ಲಿ cageನಲ್ಲಿ ಒಂದು ನವಿಲು ಮತ್ತು ಇನ್ನೊಂದರಲ್ಲಿ ಮೊಲ ಸಾಕಿದ್ದರು.ಅವರಲ್ಲಿಗೆ ಹೋಗಲು ನನಗೆ ಇದೇ ಪ್ರಮುಖ ಆಕರ್ಷಣೆ.

ಅಜ್ಜನ ಬಳಿ ರಸ್ತೆ ರಿಪೇರಿ ಮಾಡುವ ಕೂಲಿ ಆಳಾಗಿ ಸೇರಿದ್ದು ಗಿರೀಶ್ ಎನ್ನುವ ಹುಡುಗ. ಅವನು ಮೊದಲು ಸಿನಿಮಾದಲ್ಲಿ ಸ್ಟಂಟ್ ನಲ್ಲಿ part ಮಾಡುತ್ತಿದ್ದ. ಸ್ಟಂಟ್ ನ ಸಂದರ್ಭದಲ್ಲಿ ಬೆನ್ನು ಮೂಳೆಗೆ ಏಟಾಗಿ ಮೂರು-ನಾಲ್ಕು ತಿಂಗಳು ಹಾಸಿಗೆ ಹಿಡಿದಿದ್ದ. ಆಗ ಅವನನ್ನು ನೋಡಿಕೊಳ್ಳಲು ಅವನ ತಾಯಿ ರಾಜೀವಿ ಬಂದಿದ್ದಳು.ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ರಾಜೀವಿಗೆ ನಾಲ್ಕು ಜನ ಮಕ್ಕಳು. ಎರಡು ಹೆಣ್ಣಿನ ನಂತರ ಹುಟ್ಟಿದವನು ಗಿರೀಶ್. ಇನ್ನೊಬ್ಬ ತಂಗಿ ಚಿಕ್ಕವಳು. ಹಿರಿಯ ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಆಗಿತ್ತು. ರಾಜೀವಿ ಗಂಡ, ತಾಳೆ ಮರದಿಂದ ಕಳ್ಳು ತೆಗೆಯುವವನಾಗಿದ್ದ. ಮರದ ಮೇಲಿನಿಂದ ಬಿದ್ದು ತೀರಿಕೊಂಡಿದ್ದ. ಗಿರೀಶ್ ನಿಗೆ ಪೆಟ್ಟಾಗುವ ತನಕ ಅವರು ದಕ್ಷಿಣ ಕನ್ನಡ ಒಂದು ಹಳ್ಳಿಯ ಕೊಂಕಣಿ ಪರಿವಾರದಲ್ಲಿ ಕೆಲಸಕ್ಕಿದ್ದವರು. ರಾಜೀವಿ ಊರಿನಿಂದ ಗಿಡ ಮೂಲಿಕೆಯ ಎಣ್ಣೆ ತಂದು ಗಿರೀಶನಿಗೆ ಹಚ್ಚಿದ್ದರಿಂದ,ಗಿರೀಶ್ ಗುಣಮುಖನಾಗಿದ್ದ. ಫಿಲ್ಮ್ ಲೈನ್ ಬಿಟ್ಟು ಹೀಗೆ ಕೂಲಿ ನಾಲಿ ಮಾಡುತ್ತಿದ್ದ.

ಮೊದಲು ಕಮಲ, ಆರು ತಿಂಗಳ ನಂತರ ಹೀರೆ ಹೀಗೆ ಅವರ ಮದುವೆ ನಡೆದು ಹೋಯಿತು. ಅಷ್ಟರಲ್ಲಿ ನಾನಿಗೆ ಔಷಧದ ದುಷ್ಪರಿಣಾಮವಾಗಿ ಒಂದು ರಾತ್ರಿ ಬೆಳಗಾಗುವಷ್ಟರಲ್ಲಿ ಕೈ ಕಾಲುಗಳು ವಕ್ರವಾಗಿದ್ದವು. ಆಗ ರಾಜೀವಿ ನಮ್ಮ ಮನೆಗೆ ಕೆಲಸಕ್ಕೆ ಬರಲು ಶುರು ಮಾಡಿದಳು. ರಾಜೀವಿಗೆ ಕೊಂಕಣಿ ಬರುತ್ತಿದ್ದರಿಂದ ನಾನು ಪುನಃ ಕೊಂಕಣಿ ಮಾತನಾಡಲಾರಂಭಿಸಿದೆ. ರಾಜೀವಿ ಬೆಳಿಗ್ಗೆ 8.00 ಗಂಟೆಗೆ ಬಂದು ಮಧ್ಯಾನ್ಹ 3.00 ಗಂಟೆಗೆ ಹೊರಟು ಬಿಡುತ್ತಿದ್ದಳು. ಅಡಿಗೆಗೆ ಕಟ್ಟೆಯ ಮೇಲೆ ಎಲ್ಲ ಅಣಿಮಾಡಿದರೆ final ಅಡಿಗೆ ನಾನಿಯದೇ.

ರಾಜೀವಿಯ ಎಲೆ ಅಡಿಕೆ ಸಂಚಿಯ ಬಗ್ಗೆ ಇಲ್ಲಿ ಓದಿ: ನನ್ನ ಮೊಟ್ಟ ಮೊದಲ blog post :-)

ರಾಜೀವಿ ತುಂಬ ನೀಟಾಗಿ ಕೆಲಸಕ್ಕೆ ಬರುತ್ತಿದ್ದಳು. ನನ್ನ ನಾನಿಗಿಂತ ಸ್ವಲ್ಪ ಚಿಕ್ಕ ವಯಸ್ಸೆ. ಅವರನ್ನು ನೋಡಿದರೆ head madam ತರಹ ಕಾಣುತ್ತಿದ್ದರು. ಬಿಳಿ -ಕಪ್ಪು ಮಿಶ್ರಿತ ತಲೆ ಕೊದಲು ನೀಟಾಗಿ ಬಾಚಿದ್ದು, ಒಂದು ಕೂದಲೂ ಆ ಕಡೆ ಈ ಕಡೆ ಇರುತ್ತಿರಲಿಲ್ಲ. ಅವೈ ಶಣ್ಮುಖಿ / ಚಾಚಿ 420 ನ ಕಮಲಹಾಸನ್ ಮೈಕಟ್ಟು ಇತ್ತು ರಾಜೀವಿಗೆ. ಎರಡು ಕೈಗಳಿಗೆ ಯಾವುದೋ ಮೆಟಲ್ ನ ಒಂದೊಂದು ಬಳೆ. ಅಲ್ಲಲ್ಲಿ ಚಪ್ಪಟೆಯಾಗಿತ್ತು. ಗಟ್ಟಿಯಾಳು. ಅವಳು ಊಟ ಮಾಡುವುದನ್ನು ನೋಡುವುದು ನನಗೆ ಮೋಜಿನ ವಿಷಯ. ನಾನಿ ನನಗೆ ಬೈಯುತ್ತಿದ್ದಳು. ರಾಜೀವಿಯ ಊಟದ ಹೊತ್ತಿಗೆ ನನಗೆ ಹೊರಗೆ ಕಳುಹಿಸುತ್ತಿದ್ದರು :-)
ಅಜ್ಜ ಊರಿನಲ್ಲಿಲ್ಲದಿದ್ದಾಗ ರಾತ್ರಿ ಹೊತ್ತು ರಾಜೀವಿ ನಮ್ಮ ಮನೆಯಲ್ಲೇ ಇರುತ್ತಿದ್ದಳು. ಆಗ ಅವರ ಊರಿನ ದೆವ್ವದ ಕತೆಗಳನ್ನೆಲ್ಲ ಹೇಳುತ್ತಿದ್ದಳು.

ನನಗೂ ಉದ್ದ ಕೂದಲು. ಅದಕ್ಕೆ ಎಣ್ಣೆ ಹಾಕಿ ನೀಟಾಗಿ ಬಾಚುತ್ತಿದ್ದರು. ಬಾಚುತ್ತ ನನಗೆ ಕತೆ ಹೇಳುತ್ತಿದ್ದಳು. ಒಂದು ಸಲ ಜಡೆ ಹೆಣೆದರೆ ಮರುದಿನದ ತನಕ ಒಂದು ಕೂದಲು ಮಿಸುಕಾಡುತ್ತಿರಲಿಲ್ಲ. ಬಾಲವಾಡಿಗೆ ಹೋಗಲು ನನಗೆ ನೀಲು ಎನ್ನುವ ಹೆಂಗಸು ಐದು ಜನ ಇತರ ಮಕ್ಕಳೊಂದಿಗೆ ದರ ದರನೆ ಎಳೆದುಕೊಂಡು ಹೋಗುತ್ತಿದ್ದಳು. ನಾವು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಚೈನ್ (chain) ತರಹ ಮಾಡಿಕೊಂಡು ಹೋಗುತ್ತಿದ್ವಿ. ನಾನು ಪ್ರತೀ ಎರಡು ಹೆಜ್ಜೆಗೂ ಎಡವಿ ಬೀಳುತ್ತಿದ್ದೆ. ನನ್ನ ಕೈ ಹಿಡಿದುಕೊಂಡವರೂ ಬೀಳುತ್ತಿದ್ದರು. ನೀಲೂ ಕೆಟ್ಟದಾಗಿ ಬೈಯುತ್ತಿದ್ದಳು ’ಕಾಯ್ ಘರಿ ಖಾಯಾಲಾ ಘಾಲತ್ ನಾಹಿ ಕಾಯ್?’ (ಏನು ಮನೆಯಲ್ಲಿ ತಿನ್ನಕ್ಕೆ ಹಾಕಲ್ಲವೇನು?) ಒಂದೆರಡು ಸಲ ಪೆಟ್ಟು ಬಿದ್ದಿದಿದೆ. ಹೇಗೋ ಅಜ್ಜನಿಗೆ ಗೊತ್ತಾಯಿತು. ಆಮೇಲೆ ಅಜ್ಜನ ಕಾರಿನ ಡ್ರೈವರ್ ನನ್ನನ್ನು ಬಾಲವಾಡಿಗೆ ಬಿಟ್ಟು ಬರುತ್ತಿದ್ದ. ಎರಡು ವರ್ಷಗಳ ನಂತರ ತಿಳಿಯಿತು. ನನಗಿದ್ದದ್ದು knock-knees ಎನ್ನುವ ಪರಿಸ್ಥಿತಿ. ರಾಜೀವಿ ನನಗೆ ಶಾಲೆಯಿಂದ ಬಂದ ಕೂಡಲೇ ಅವಳ special ಗಿಡಮೂಲಿಕೆಗಳ ಎಣ್ಣೆಯಿಂದ ಕಾಲನ್ನು ಚೆನ್ನಾಗಿ ಮಾಲಿಶ್ ಮಾಡಿ ಬಿಸಿಲಿಗೆ ಕೂರಲು ಹೇಳುತ್ತಿದ್ದಳು. ಭಾನುವಾರದಂದು ಬೆಳಗ್ಗಿನ ಎಳೆ ಬಿಸಿಲಿಗೆ ಹೀಗೆ ಎಣ್ಣೆ ಹಚ್ಚಿ ನನ್ನನ್ನು ಕೂರಿಸುತ್ತಿದ್ದಳು. ಸಂಜೆ ಹೊತ್ತು ಅಜ್ಜನ ಜತೆ ಸಮುದ್ರದ ತಡಿಯಲ್ಲಿ barefooted (ಖಾಲಿ ಕಾಲು??) walk. ಕ್ರಮೇಣ ನನ್ನ ಕಾಲು ಸರಿಯಾಯಿತು.ಆ ಮೇಲೆ ಶಾಲೆ/ಹೈ ಸ್ಕೂಲ್/ ನಲ್ಲಿ ಓಟದ ಹಾಗೂ ಹೈ ಜಂಪ್ (highjump) ಸ್ಪರ್ಧೆಯಲ್ಲಿ ನಾನೇ ಮೊದಲಿಗಳು :-)

ಅವಳು ನಮ್ಮ ಮನೆ ಕೆಲಸ ಮುಗಿಸಿ, ಮನೆಗೆ ಹೋಗಿ ಗಿಡಮೂಲಿಕೆಗಳಿಂದ ನೋವಿನ / ತಲೆಗೆ ಉಪಯೋಗಿಸುವ ಎಣ್ಣೆಯನ್ನು ತಯಾರಿಸಿ ಮಾರುತ್ತಿದ್ದಳು. ಅಜ್ಜ ಜಾಸ್ತಿ ದುಡ್ಡು ಕೊಡುತ್ತಿದ್ದರಿಂದ ಅವಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಮನೆ ಸಮುದ್ರದ ಹತ್ತಿರ ಇದ್ದುದರಿಂದ ಕೆಲವೊಮ್ಮೆ ಜೋರಾಗಿ ಗಾಳಿ ಬೀಸುತ್ತಿತ್ತು. ಒಂದು ಸಲ ರಾತ್ರಿ ದೇವರ ದೀಪ ಗಾಳಿಯಲ್ಲಿ ಅಲುಗಿ ಅದರ ಬತ್ತಿ ನಾನಿ ಉಪಯೋಗಿಸುತ್ತಿದ ನೈಲಾನ್ ಸೊಳ್ಳೆ ಪರದೆಯ ಮೇಲೆ ಬಿದ್ದು, ಬೆಂಕಿ ತಗುಲಿಕೊಂಡು ಬಿಟ್ಟಿತು. ಅಜ್ಜನಿಗೆ high ಬಿ.ಪಿ. ಮಾತ್ರೆ ತೆಗೊಂಡು ಜೋರು ಮಂಪರಿನಲ್ಲಿದ್ದರು. ನಾನು ಅಜ್ಜನನ್ನು ಎಬ್ಬಿಸುವಷ್ಟರಲ್ಲಿ ನೆಟ್ ಒಳಗಡೆ ಮಲಗಿದ್ದ ನಾನಿಗೆ ಹಣೆ ಮತ್ತು ಒಂದು ಕೈಯಲ್ಲಿ ತುಂಬ ಸುಟ್ಟ ಗಾಯಗಳಾಗಿದ್ದವು. ಆಗ ರಾಜೀವಿ ಯಾವುದೋ ಗಬ್ಬು ವಾಸನೆಯ ಎಣ್ಣೆ ತಯಾರಿಸಿ, ಕಾಗೆಯ ಗರಿಯಿಂದ ಆ ಎಣ್ಣೆಯನ್ನು ಸುಟ್ಟ ಜಾಗಕ್ಕೆ ಹಚ್ಚುತ್ತಿದ್ದಳು. ಮೂರು ತಿಂಗಳಿಗೆ ನೋವು- ಕಲೆಯೆಲ್ಲ ಮಾಯ.

ನನ್ನ ನಾನಿಗೆ ಆಮೇಲೆ ಕ್ಯಾನ್ಸರ್ ಕಾಯಿಲೆ ತಗುಲಿಕೊಂಡಿತು. ಆಗ ರಾಜೀವಿ ಜಾಸ್ತಿ ಹೊತ್ತು ನಮ್ಮಲ್ಲಿರುತ್ತಿದ್ದಳು. ನನ್ನ ನಾನಿಯ ಕೊನೆಯ ದಿನಗಳವರೆಗೂ ನಮ್ಮ ಜೊತೆಯಲ್ಲೇ ಇದ್ದಳು. ನನ್ನ ನಾನಿ ತೀರಿಕೊಂಡಾಗ ನನ್ನ ಅಜ್ಜ ಅಲ್ಲೇ ಇದ್ದ ರಾಜೀವಿಗೆ ನಾನಿಯ ಬಂಗಾರದ ಬಳೆ ಹಾಗೂ ಮೂಗಿನ ವಜ್ರದ ಬಟ್ಟು ಕೊಟ್ಟುಬಿಟ್ಟರು. ಜನರು ತಲೆಗೊಂದು ಮಾತನಾಡಿದರು.ಆಗ ನಾನು ಎಂಟನೆ ತರಗತಿಯಲ್ಲಿದ್ದೆ. ಅಷ್ಟರಲ್ಲಿ ಬ್ಯಾಂಕೊಂದರಲ್ಲಿ ಅಧಿಕಾರಿಯಾದ ತಂದೆಗೆ ಪುನ: ಮುಂಬಯಿಗೆ ವರ್ಗವಾಗಿತ್ತು. ಅ ಮೇಲೆ ನಾನು ಮತ್ತು ಅಜ್ಜ ಪುನಃ ನನ್ನ ತಂದೆಯ ಮನೆಗೇ ವಾಪಸ್ಸ್ ಆದೇವು. ಈಗ ನಾನು ಅಜ್ಜನ ಜತೆ ಇದ್ದ ಬಿಲ್ಡಿಂಗ್ ಜಾಗದಲ್ಲಿ high rise ಅಪಾರ್ಟ್ ಮೆಂಟ್ ಗಳು ಮೇಲೆ ಬಂದಿವೆ.

ಅಜ್ಜನೂ ತೀರಿಕೊಂಡು 15 ವರ್ಷಗಳೇ ಆಗಿವೆ.
ರಾಜೀವಿ ಕೆಲವು ವರ್ಷ ಮುಂಬಯಿನಲ್ಲಿ ಇದ್ದಳು. ನಮ್ಮಲ್ಲಿ ಆಗಾಗ ಬಂದು ಹೋಗುತ್ತಿದ್ದಳು. ಗಿರೀಶನ ಹೆಂಡತಿ ಮುಂಬೈನವಳು. ಅವಳಿಗೂ ರಾಜೀವಿಗೂ ಕೂಡಿ ಬರಲಿಲ್ಲ. ಚಿಕ್ಕ ಮಗಳಿಗೂ ಮದುವೆಯ ವಯಾಸ್ಸಾಗಿದ್ದರಿಂದ ಅವರು ವಾಪಸ್ಸ್ ಅವರ ಊರಿಗೆ ಹೋದರು. ರಾಜೀವಿ ಇತ್ತೀಚಿಗೆ ಅಂದರೆ ಐದು ವರ್ಷಗಳ ಹಿಂದೆ ತೀರಿಕೊಂಡಳು ಅಂತ ಸುದ್ದಿ. ಅವಳು ಊರಿಗೆ ಹೋದ ಮೇಲೆ ನಮ್ಮ ಸಂಪರ್ಕ ಕಡಿದು ಬಿತ್ತು. ಗಿರೀಶ ಡ್ರೈವರ್ ಆಗಿ ದುಬೈಗೆ ಹೋದ. ಅದರ ಮುಂಚೆ ಅವನ ಹೆಂಡತಿ ಅವನನ್ನು ಬಿಟ್ಟು ಓಡಿ ಹೋದಳು.

November 6, 2009

Touch

I usually walk to my workplace which is one and a half kilometer from my home. The brisk walk is refreshing.

once I saw a blind person waiting to cross to the other side of the busy road, nobody was feeling helpful I suppose that day. So just when I reached him the signal for pedestrian crossing was green. I gripped his hand and pulled him (literally manhandled) along with me to the other side. I asked him where he wanted to go and he named his destination and the bus number. The bus was in the stop about to leave when I waved frantically at the driver, who fortunately saw my kathakali actions and stalled the bus. I led him to the bus and somebody helped him to get into it. I forgot about the episode.


After a month or so I saw him again in the same spot. This time though there was quite sometime before we crossed but I had already held on to his hand. He turned to me and said “Thank you for that day. I was in a hurry and I could not thank you.” I laughed heartily and said how did you know it was me? He replied that he identified the touch and the perfume.

he told me his name was Prashanth and he worked for a wrist watch assembling unit. He said he also was an expert in making chairs and candles. It saddened me when he said that their watch making unit was under loss and will be shut down completely in a matter of days. I took his contact number. He had a cell phone with him and he identified the numbers by touch. He replied in the negative at my query, if it was a special handset for the visually impaired.He saved my number in his cell, of course I was impressed.

My best friend Ram has adopted a blind school in Shivamogga . Ram is a banker by profession and spends all his spare time and weekends in the school. He is supported by his wife in this noble activity. Probably he can find how best to employ Prashanth at the school.

November 1, 2009

ದಿಲ್ ಕಾ ರಿಷ್ತಾ

ಇಸವಿ 2001. ಬೆಂಗಳೂರಿಗೆ ಬಂದು ಕೆಲವು ತಿಂಗಳು ಆಗಿತ್ತಷ್ಟೆ. ಮೇ 13 ನೇ ತಾರೀಕು ಬೆಳಿಗ್ಗೆ ಅಮೇರಿಕ ದಿಂದ ನನ್ನ ಬ್ರದರ್-ಇನ್-ಲಾ ಫೋನ್ ಮಾಡಿದರು

"hello malathi, Sundeep here. can you take leave from office today..-ಅಂತ ಕೇಳಿದ. ನಾನು ಸಂದೀಪ್ ಯಾವಾಗಲೂ ಇಂಗ್ಲೀಷ್ ನಲ್ಲೇ ಸಂಭಾಷಿಸುವುದು. ಅದಕ್ಕೆ ಕಾರಣ ಮಾತ್ರ ಈಗಲೂ ಗೊತ್ತಿಲ್ಲ.
ನಾನು ಆಗಬಹುದು ಅಂತ ಹೇಳಿ ಕಾರಣ ಕೇಳಿದೆ.

Jyothi has gone into labour and she is scared. She wants to talk to you.

ಅವನ ಇನ್ಸ್ಟ್ರಕ್ಷ್ ನ್ ಫಾಲೋ ಮಾಡ್ತಾ ಸ್ಕೈಪೀ ಎನ್ನುವ ವಿಡೀಯೋ-ಆಡಿಯೋ ಸಾಫ್ಟ್ ವೇರ್ ನ್ನು Install ಮಾಡಿದೆ. ಅವನು ಅದಕ್ಕೆ ಕ್ಯಾಮ್ ಕಾರ್ಡರ್ ಫಿಕ್ಸ್ ಮಾಡಿದ. ನಮ್ಮಲ್ಲಿ ವೆಬ್ ಕ್ಯಾಮರಾ ಇರಲಿಲ್ಲ. ಆದರೆ ನಾನು ನನ್ನ ತಂಗಿಯನ್ನು ನೋಡಬಹುದಿತ್ತು. ಅವಳಿಗೆ ನನ್ನ ದನಿ ಕೇಳಿಸ್ತಾ ಇತ್ತು. ಅವರೂ ಅಮೇರಿಕೆಗೆ , ಆಸ್ಟ್ರೇಲಿಯಾ ದಿಂದ ಬಂದಿದ್ದರಷ್ಟೆ. ನಮ್ಮ ತಾಯಿ ಹಾಗು ಸಂದೀಪ್ ತಾಯಿ ಒಂದು ತಿಂಗಳು ಬಿಟ್ಟು ಅಮೇರಿಕೆಗೆ ಹೋಗುವುದು ನಕ್ಕಿಯಾಗಿತ್ತು. ಅಲ್ಲಿರುವ ಭಾರತೀಯ ಮಿತ್ರರು ಭಾರತಕ್ಕೆ ಬಂದಿದ್ದರು. ಅದುದರಿಂದ ನಮ್ಮವರು ಅಂತ ಯಾರೂ ಇರದೇ ಇರುವುದರಿಂದ ಅವರಿಬ್ಬರಿಗೂ ಸ್ವಲ್ಪ ಆತಂಕವಾಗಿದ್ದಿರಬಹುದು.

ಸರಿ ಅವಳನ್ನು ನೋಡ್ತಾ ಇದ್ದ ಹಾಗೆ ಅವಳು ನೋವಿನಿಂದ ನರಳುತ್ತ ಇದ್ದರೂ ಅರೇ Jyothi, that is my dress you are wearing ಅಂತ ಉದ್ಗರಿಸಿದೆ. ಮುಂಬೈಯಲ್ಲಿ ತಾಯಿ ಮನೆಯಲ್ಲಿ ಕೆಲವು ಬಟ್ಟೆಗಳನ್ನು ನಾನು ಬಿಟ್ಟು ಬಂದಿದೆ.

ಅದಕ್ಕೆ ಅವಳು ಹೌದು, ನಾನು ಒಂದು ದಿನ ಮಳೆಯಲ್ಲಿ ನೆನೆದು ಬಂದಾಗ, ಒದ್ದೆ ಬಟ್ಟೆ ಬಿಚ್ಚಿ, ಹತ್ತಿರ ಸಿಕ್ಕಿದ ನಿನ್ನ ಬಟ್ಟೆ ಹಾಕಿಕೊಂಡೆ. ಯಾಕೋ ತುಂಬಾ ಸಮಾಧಾನ ಅನ್ನಿಸಿತು. ಅದಕ್ಕೆ ನಿನಗೆ ಕೇಳದೆ ನಾನು ಅದನ್ನು Australia ಗೆ ಎತ್ಕೊಂಡು ಹೋದೆ. ಅಮ್ಮನಿಗೂ ಗೊತ್ತಿಲ್ಲ. ನಾನು emotionally down ಆದಾಗ, ನಿಮ್ಮೆಲ್ಲರ ನೆನಪು ಬಂದಾಗ ಅದನ್ನು ಹಾಕಿಕೊಂಡಾಗ ಸಮಾಧಾನ ಅನ್ನಿಸುತ್ತಿತ್ತು. ನೀನು ಯಾವಾಗಲು ಶಾಂತಿ ಸಮಾಧಾನದಿಂದ ಇರುತ್ತಿದ್ದದ್ದು ನೆನಪು ಬರತಿತ್ತು ಅಂದಳು. miss you akka. ತುಂಬಾ emotional ಆದಾಗ ಅವಳು ಅಕ್ಕ ಎನ್ನುವುದು ಉಂಟು.

ನನಗೊತ್ತಿಲ್ಲದೇ ನನ್ನ ಕಣ್ಣಿರು ಗಲ್ಲದಿಂದ ಇಳಿದು ಬಿಸಿಯಾಗಿ ಎದೆ ತೋಯಿಸಿದಾಗ ನಾನು ಅಳುತ್ತಿರುವ ಅನುಭವ ನನಗೆ ಆಗಿದ್ದು. ಸಧ್ಯ ತಂಗಿಗೆ ತನ್ನ brave ಅಕ್ಕ ಅಳುವುದು ಅವಳಿಗೆ ಕಾಣಿಸಲಿಲ್ಲ.
Iam nervous ಅಕ್ಕ ಅಂದಾಗ. ಹೆದರಬೇಡ ಜ್ಯೋತಂಬೆ (ಅವಳಿಗೆ ನಾನಿಟ್ಟ pet-name). Deep breathತೆಗೋ, ನಿಧಾನವಾಗಿ ಉಸಿರು ಹೊರಗೆ ಬಿಡು. ನೋವು ಬಂದಾಗಲೆಲ್ಲ ಹಾಗೇ ಮಾಡು. ಇನ್ನು ಸ್ವಲ್ಪ ಹೊತ್ತು. Dont worry ಅಂದೆ. ಅದರ ಮಧ್ಯ ಅವಳನ್ನು Attend ಮಾಡ್ತಿದ್ದ ಲೇಡಿ ಡಾಕ್ಟರ್ ಗೆ ’ಹಾಯ್ ಅಂದೆ. ಅವಳಿಗೆ ಮಾಲತಿ ಉಚ್ಚಾರ ಮಾಡಲಿಕ್ಕೆ ಬರದೇ, ಹೆಲ್ಲೋ ಮಲಾಶಿ ಅಂದಾಗ ನಗು control ಮಾಡಿದೆ. ಬಹುಶಃ ಜರ್ಮನ್ ಮೂಲದವರಿರಬೇಕು!

ಲೇಬರ್ ವಾರ್ಡ್ ನಲ್ಲಿ ಕ್ಯಾಮೆರ ನಿಷಿದ್ದವಾಗಿದ್ದರಿಂದ, ಸ್ವಲ್ಪ ಹೊತ್ತು ನಾನು -ಸಂದೀಪ ಸುಮ್ಮನೆ ಅರ್ಥವಿಲ್ಲದ ಹರಟೆ, ನನ್ನ ಮಕ್ಕಳ ಕೀಟಲೆ ಎಲ್ಲ ಮಾತಾಡಿ ಕೊಂಡ್ವಿ. ಸಂಜೆ (ಭಾರತೀಯ ಸಮಯ) ೪.೦೦ ರ ಸಮಯ ನಿವೇದಿತಾ; ಹುಟ್ಟಿದಳು. ಕ್ಯಾಮರಾ ಅವಳ ಬಳಿ ತೆಗೆದು ಕೊಂಡು ಹೋದಾಗ ನಾನು :Nivu baby- ಪಳೆ ತುಗೆಲೆ ಮ್ಹಾವ(ನೋಡು ನಿನ್ನ ದೊಡ್ಡಮ್ಮ) ಅಂದಾಗ ಅವಳು ಒಂದು ಕ್ಷಣ ಕಣ್ಣು ಬಿಟ್ಟು, ಹುಬ್ಬು ಗಂಟಕ್ಕಿದ್ದಳು.

ನಿವೇದಿತಾ ಗೆ ನನ್ನ ಹಾಗೇ ಓದುವ ಗೀಳು. Love you Nivedita. :-)